Home Advertisement
Home ಸಿನಿ ಮಿಲ್ಸ್ ಕನ್ನಡ ನನ್ನ ಹೃದಯದಲ್ಲಿ”: ಒಂದೇ ಟ್ವೀಟ್‌ನಲ್ಲಿ ಟೀಕಾಕಾರರಿಗೆ ಯಶ್ ಖಡಕ್ ಉತ್ತರ!

ಕನ್ನಡ ನನ್ನ ಹೃದಯದಲ್ಲಿ”: ಒಂದೇ ಟ್ವೀಟ್‌ನಲ್ಲಿ ಟೀಕಾಕಾರರಿಗೆ ಯಶ್ ಖಡಕ್ ಉತ್ತರ!

1
305

ಕನ್ನಡ: ‘ಕೆಜಿಎಫ್’ ಚಿತ್ರದ ಮೂಲಕ ವಿಶ್ವದಾದ್ಯಂತ ಕನ್ನಡಿಗರ ಕೀರ್ತಿ ಪತಾಕೆಯನ್ನು ಹಾರಿಸಿದ ‘ರಾಕಿಂಗ್ ಸ್ಟಾರ್’ ಯಶ್, ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡವನ್ನು ಮರೆಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಮಾಡಿದ ಒಂದೇ ಒಂದು ಟ್ವೀಟ್, “ಯಶ್ ಕನ್ನಡವನ್ನು ಮರೆತಿದ್ದಾರೆ” ಎನ್ನುವ ಟೀಕಾಕಾರರ ಬಾಯಿಗೆ ಬೀಗ ಜಡಿದಿದೆ.

ಪ್ಯಾನ್-ಇಂಡಿಯಾ ಸ್ಟಾರ್ ಆದ ನಂತರ ಯಶ್ ಕರ್ನಾಟಕದ ಸ್ಥಳೀಯ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂಬ ಬೇಸರ ಕೆಲವರಲ್ಲಿತ್ತು. ಆದರೆ, ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ತಮ್ಮದೇ ಶೈಲಿಯಲ್ಲಿ ಅದಕ್ಕೆಲ್ಲ ಉತ್ತರ ನೀಡಿದ್ದಾರೆ.

“ಎದೆ ತಟ್ಟಿ ಹೇಳು ನಾ ಭಾರತೀಯನೆಂದು,

ಗರ್ವದಿಂದ ಬಾಳು ನಾ ಕನ್ನಡಿಗನೆಂದು.

ಸಾವಿರ ಭಾಷೆ ನಾಲಿಗೆಯಲ್ಲಿರಲಿ,

ಕನ್ನಡ ಭಾಷೆ ಹೃದಯದಲ್ಲಿರಲಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ”

ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆಯುವ ಮೂಲಕ, ಯಶ್ ತಮ್ಮ ಕನ್ನಡದ ಮೇಲಿನ ಅಚಲ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಿದ್ದಾರೆ. ಈ ಸಾಲುಗಳು ಕೇವಲ ಶುಭಾಶಯವಾಗಿರದೆ, ಅವರ ಬದ್ಧತೆಯ ದ್ಯೋತಕವಾಗಿ ಅಭಿಮಾನಿಗಳ ಮನಗೆದ್ದಿದೆ.

‘ಟಾಕ್ಸಿಕ್’ ಸಿನಿಮಾ ವದಂತಿಗಳಿಗೆ ನಿರ್ಮಾಪಕರಿಂದ ತೆರೆ: ಯಶ್ ಈ ಕನ್ನಡ ಪ್ರೀತಿಯ ನಡುವೆಯೇ, ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಗ್ಗೆ ಹಬ್ಬಿದ್ದ ವದಂತಿಗಳಿಗೂ ತೆರೆ ಬಿದ್ದಿದೆ. ಯಶ್ ಮತ್ತು ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಡುವೆ ಸೃಜನಾತ್ಮಕ ಭಿನ್ನಾಭಿಪ್ರಾಯಗಳು ಮೂಡಿವೆ ಮತ್ತು ಚಿತ್ರೀಕರಣದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿತ್ತು.

ಆದರೆ, ಈ ಎಲ್ಲಾ ಊಹಾಪೋಹಗಳನ್ನು ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸ್ಪಷ್ಟವಾಗಿ ತಳ್ಳಿಹಾಕಿದೆ. “ಇವೆಲ್ಲವೂ ಆಧಾರರಹಿತ ವದಂತಿಗಳು, ಸಿನಿಮಾ ಅಂದುಕೊಂಡಂತೆಯೇ ಸಾಗುತ್ತಿದೆ,” ಎಂದು ಸ್ಪಷ್ಟನೆ ನೀಡುವ ಮೂಲಕ ಅಭಿಮಾನಿಗಳ ಆತಂಕವನ್ನು ದೂರ ಮಾಡಿದೆ. ‘ಟಾಕ್ಸಿಕ್’ ಸಿನಿಮಾವು ಮುಂದಿನ ವರ್ಷ ಯುಗಾದಿ ಹಬ್ಬದ ಪ್ರಯುಕ್ತ, ಮಾರ್ಚ್ 19 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.

1 COMMENT

LEAVE A REPLY

Please enter your comment!
Please enter your name here