ರಾಜ್ಯದಲ್ಲಿ ಆರೋಗ್ಯ ಇಲಾಖೆ ಕೋಮಾ ಸ್ಥಿತಿಗೆ
ಬೆಂಗಳೂರು: ವೈದ್ಯರು ಮೊಬೈಲ್ ಟಾರ್ಚ್ ಹಿಡಿದುಕೊಂಡು ಚಿಕಿತ್ಸೆ ನೀಡುವಂತಹ ಪರಿಸ್ಥಿತಿಯನ್ನು ಈ ಬೇಜವಾಬ್ದಾರಿ ಸರ್ಕಾರ ತಂದಿಟ್ಟಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆಯನ್ನು ಪಡೆಯಬೆಕೆಂದು ಮುಖ್ಯಮಂತ್ರಿಗಳಿಗೆ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ KWIN City, ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆ, ಗ್ಲೋಬಲ್ ಹಬ್, #ಪ್ರಗತಿಯಮರುಕಲ್ಪನೆ ಎಂದು ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಬೊಬ್ಬೆ ಹೊಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಉತ್ತರ ಕರ್ನಾಟಕದ ಆಸ್ಪತ್ರೆಗಳ ದುಸ್ಥಿತಿ ಇದು!
ಈಗಾಗಲೇ ನೂರಾರು ಬಾಣಂತಿಯರು ಇದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೂ, ಇನ್ನೂ ಎಚ್ಚೆತ್ತಿಲ್ಲದಿರವುದು ನಮ್ಮ ಉತ್ತರ ಕರ್ನಾಟಕದೆಡೆಗಿನ ಈ ನಿರ್ಲಜ್ಜ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಸಡ್ಡೆಯನ್ನು ಎತ್ತಿ ತೋರಿಸಿದೆ ಈ ಘಟನೆ!
ಬಳ್ಳಾರಿಯ BMC&R ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿನಲ್ಲಿ ವೈದ್ಯರು ಮೊಬೈಲ್ ಟಾರ್ಚ್ ಹಿಡಿದುಕೊಂಡು ಚಿಕಿತ್ಸೆ ನೀಡುವಂತಹ ಪರಿಸ್ಥಿತಿಯನ್ನು ಈ ಬೇಜವಾಬ್ದಾರಿ ಸರ್ಕಾರ ತಂದಿಟ್ಟಿದೆ. ಈ ಕೂಡಲೇ ರಾಜ್ಯ ಸರ್ಕಾರ, ಇತ್ತ ಗಮನಹರಿಸಿ ಬಡಜೀವಗಳ ಉಳಿಸಬೇಕೆಂದು ಕೈಮುಗಿದು ವಿನಂತಿಸುತ್ತೇನೆ.
ರಾಜ್ಯದಲ್ಲಿ ಆರೋಗ್ಯ ಇಲಾಖೆಯನ್ನೇ ಕೋಮಾ ಸ್ಥಿತಿಗೆ ತಂದಿಟ್ಟು, ಈ ಎಲ್ಲಾ ಅವಾಂತರಗಳಿಗೆ ಕಾರಣರಾದ, ಆರೋಗ್ಯ ಸಚಿವರಾದ ದಿನೇಶ ಗುಂಡುರಾವ ಅವರ ರಾಜೀನಾಮೆಯನ್ನು ಈ ಕೂಡಲೇ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಡೆಯಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.