ಪೊಲೀಸರು ಎಲ್ಲವನ್ನು ಪತ್ತೆ ಹಚ್ಚಲಿದ್ದಾರೆ

0
29

ಯಾರು ಭಾಗಿಯಾಗಿದ್ದಾರೆ ? ಹಿಂದಿರುವವರು ಯಾರು ?

ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಹ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸ್ತೇನೆ, ಅತೀ ಶೀಘ್ರದಲ್ಲೇ ಪೊಲೀಸರು ಈ ದರೋಡೆ ಪ್ರಕರಣವನ್ನು ಭೇದಿಸಿದ್ದಾರೆ ಇಂತಹ ಸಮಾಜಘಾತುಕ ಶಕ್ತಿಗಳನ್ನ ನಿಯಂತ್ರಿಸುವುದು ಇಂತಹ ಪ್ರಕರಣಗಳನ್ನ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸೋದು ಸರ್ಕಾರದ ಕರ್ತವ್ಯ, ಈ ಪ್ರಕರಣವನ್ನ ಕೇವಲ ನಾಲ್ಕು ದಿನದಲ್ಲಿ ಭೇದಿಸಿ ಎಲ್ಲಾ‌ ಚಿನ್ನಾಭರಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು, ಸುರಕ್ಷತೆಯ ಬಗ್ಗೆ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಸುರಕ್ಷತೆಯ ಮಾರ್ಗಸೂಚಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ, ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ? ಹಿಂದಿರುವವರು ಯಾರು ?ಎಲ್ಲವನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದರು.

ಮಸಾಜ್ ಪಾರ್ಲರ್ ಪ್ರಕರಣ : ಮಸಾಜ್ ಪಾರ್ಲರ್ ಮೇಲೆ‌ ರಾಮ ಸೇನೆ ಕಾರ್ಯಕರ್ತರ ದಾಳಿಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಸಚಿವರು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಏನಾದ್ರು‌ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು, ಈ ರೀತಿ ಗೂಂಡಾಗಿರಿ ಮಾಡಿ‌ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರೋದು ಸರಿಯಲ್ಲ, ಈ ರೀತಿಯ ಘಟನೆಗಳು ನಡೆದಾಗ ಬಂಡವಾಳ ಹೂಡಿಕೆ, ಧಾರ್ಮಿಕ ಕ್ಷೇತ್ರಗಳಿಗೆ ಬರುವವರ ಮೇಲೆ ಪರಿಣಾಮ ಬೀಳಿತ್ತದೆ, ಬಂಡವಾಳ ಹೂಡುವವರು ಇಲ್ಲಿ ಸುರಕ್ಷತೆ ಇದೆಯಾ ? ಎಂದು ಕೇಳುತ್ತಾರೆ, ಇತ್ತೀಚೆಗೆ ಬೆಂಗಳೂರಿಗೆ ಬಂದ ಬಂಡವಾಳ ಹೂಡಿಕೆದಾರರು ಕೇಳಿದ್ದ ಒಂದೇ ಪ್ರಶ್ನೆ ಇಲ್ಲಿ ಸುರಕ್ಷತೆ ಇದೆಯಾ? ಎಂದು, ರಾಮ್ ಸೇನೆ ಇರಲಿ ಶ್ರೀರಾಮ ಸೇನೆ ಇರಲಿ ಈ ರೀತಿ ಮಾಡೋದು ಖಂಡಿತ ಸರಿಯಲ್ಲ, ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ಆಗುತ್ತೆ, ಇಂತವರ ವಿರುದ್ಧ ಎಲ್ಲರೂ ಧ್ವನಿ‌ ಎತ್ತುವ ಅವಶ್ಯಕತೆ ಇದೆ, ಕೆಲವರು ಈ ಘಟನೆಯನ್ನು ಇನ್ನೂ ಖಂಡಿಸಿಲ್ಲ ಎಂದರು.

ಸಿಎಂ ಬದಲಾವಣೆ: ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತಂತೆ ಮಾತನಾಡಿ ಇದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ, ಒಬ್ಬರು ಸಿಎಂ ಇರುವಾಗ ಇನ್ನೊಬ್ಬರು ಸಿಎಂ ಆಗುವ ಪ್ರಶ್ನೆ ಬರೋದಿಲ್ಲ, ಈ ಬಗ್ಗೆ ಏನೇ ಇದ್ರೂ ವರಿಷ್ಠರು ತೀರ್ಮಾನ ತಗೋತಾರೆ, ಸಿದ್ದರಾಮಯ್ಯ ಎಲ್ಲರಿಗೂ 100% ಪರ್ಸೆಂಟ್ ವಿಶ್ವಾಸ ಇರೋ ನಾಯಕ ಎಂದರು.

ದೇಶದಲ್ಲಿ ಯಾವುದೇ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ, ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡು ನಾಲ್ಕೇ ತಿಂಗಳಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಿದೆ, ಎಷ್ಟೇ ಜನ ಟೀಕೆಗಳು ಮಾಡಿದ್ರೂ,ನಾವು ನಮ್ಮ ಬದ್ಧತೆಯನ್ನ ತೋರಿಸಿದ್ದೇವೆ, ಹೇಗ್ರಿ ಈ ಗ್ಯಾರಂಟಿಗಳನ್ನ ಅಷ್ಟು ಬೇಗ ಜಾರಿಗೆ ತಂದ್ರಿ ಎಂದು ಕೇಂದ್ರ ಸರ್ಕಾರದವರೇ ಕೇಳಿದ್ದಾರೆ ಎಂದರು.

Previous articleಪದ್ಮಶ್ರೀ ಪ್ರಶಸ್ತಿಗೆ ಬಾಜನರಾದ ಭೀಮಮ್ಮಗೆ ಗೌರವ ಸನ್ಮಾನ
Next articleಎರಡನೇ ಸ್ವಾತಂತ್ರ್ಯ ಹೋರಾಟ 75 ರಲ್ಲೇ ಆಗಿದೆ, ಸಿದ್ದರಾಮಯ್ಯ ಜಾಣ ಮರೆವು ಪ್ರದರ್ಶನ