ನಗರದಲ್ಲಿ ಕಾಡಾನೆ

0
32

ಚಿಕ್ಕಮಗಳೂರು: ಕಾಡಾನೆಯೊಂದು ನಗರದ ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.

ಗುರುವಾರ ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುತ್ತಿದ್ದ ಜನರಿಗೆ ಆನೆ ಎದುರಾಗಿದೆ. ಕೂಡಲೇ ಎಲ್ಲರೂ ಮನೆ ಸೇರಿಕೊಂಡು ಆನೆ ಓಡಾಡುವ ವಿಡಿಯೊ ಮಾಡಿಕೊಂಡಿದ್ದಾರೆ.

ಅರಣ್ಯ ಇಲಾಖೆ ನಗರದಿಂದ ಆನೆಯನ್ನು ಹೊರವಲಯಕ್ಕೆ ಓಡಿಸಲು ಪ್ರಯತ್ನಿಸಿದ್ದು ಸಮೀಪದ ಮೊಳಲೂರು ಗ್ರಾಮದಲ್ಲಿ ಆನೆ ಬೀಡು ಬಿಟ್ಟಿದೆ.

Previous articleಕೆಎಸ್‌ಆರ್‌ಟಿಸಿ ಬಸ್ ಪಲ್ಟಿ
Next articleಪರೀಕ್ಷೆಯಲ್ಲಿ ಅನುತ್ತೀರ್ಣ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ