‘ವಿಕ್ರಾಂತ್ ರೋಣʼ ಆಸ್ಕರ್‌ಗೆ ನಾಮನಿರ್ದೇಶನ

0
13
ವಿಕ್ರಾಂತ ರೋಣ

95ನೇ ಆಸ್ಕರ್ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ಸಿನೆಮಾ ನಾಮನಿರ್ದೇಶನಗೊಂಡಿದೆ.
ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದ್ದು, ಕಾಂತಾರ ಮತ್ತು ವಿಕ್ರಾಂತ್ ರೋಣ ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಜಾಕ್ ಮಂಜು ಇದಕ್ಕೆ ಬಂಡವಾಳ ಹಾಕಿದ್ದರು. 2016ರಲ್ಲಿ ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರ ಕೂಡ ಆಸ್ಕರ್ ಕದ ತಟ್ಟಿ ಬಂದಿತ್ತು.

Previous articleಆಸ್ಕರ್‌ಗೆ ‘ಕಾಂತಾರ’
Next articleಹುಬ್ಬಳ್ಳಿಗರ ನಿದ್ದೆಗೆಡಿಸಿದ ಚಾಲಾಕಿ ಕಳ್ಳ