<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>NEET scam Archives - Samyukta Karnataka</title>
	<atom:link href="https://samyuktakarnataka.in/tag/neet-scam/feed/" rel="self" type="application/rss+xml" />
	<link>https://samyuktakarnataka.in/tag/neet-scam/</link>
	<description>News that connects you to Karnataka since 1921</description>
	<lastBuildDate>Mon, 22 Jun 2026 07:09:11 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>NEET scam Archives - Samyukta Karnataka</title>
	<link>https://samyuktakarnataka.in/tag/neet-scam/</link>
	<width>32</width>
	<height>32</height>
</image> 
	<item>
		<title>NEET(UG) ಪರೀಕ್ಷೆ : ತೇಜಸ್ವಿ Vs ಖರ್ಗೆ ನಡುವೆ ವಾಕ್ಸಮರ</title>
		<link>https://samyuktakarnataka.in/news/karnataka/neet-exam-day-kpcc-president-oath-ceremony-sparks-political-row/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 22 Jun 2026 07:09:07 +0000</pubDate>
				<category><![CDATA[ರಾಜ್ಯ]]></category>
		<category><![CDATA[#education]]></category>
		<category><![CDATA[#HigherEducationIndia]]></category>
		<category><![CDATA[#KarnatakaEducation]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<guid isPermaLink="false">https://samyuktakarnataka.in/?p=101202</guid>

					<description><![CDATA[<p>ಬೆಂಗಳೂರು: ನೀಟ್-ಯುಜಿ ಪರೀಕ್ಷೆ ನಡೆದ ದಿನವೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ವಾಗ್ವಾದಕ್ಕೆ ಕಾರಣವಾಗಿದೆ. ಇದೇ ದಿನ ದೇಶಾದ್ಯಂತ ನೀಟ್ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಬೃಹತ್ ಕಾರ್ಯಕ್ರಮದಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕಾರ್ಯಕ್ರಮವನ್ನು ಮತ್ತೊಂದು ದಿನಕ್ಕೆ ಮುಂದೂಡಬಹುದಾಗಿತ್ತು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? [&#8230;]</p>
<p>The post <a href="https://samyuktakarnataka.in/news/karnataka/neet-exam-day-kpcc-president-oath-ceremony-sparks-political-row/">NEET(UG) ಪರೀಕ್ಷೆ : ತೇಜಸ್ವಿ Vs ಖರ್ಗೆ ನಡುವೆ ವಾಕ್ಸಮರ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಬೆಂಗಳೂರು: ನೀಟ್-ಯುಜಿ ಪರೀಕ್ಷೆ ನಡೆದ ದಿನವೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ವಾಗ್ವಾದಕ್ಕೆ ಕಾರಣವಾಗಿದೆ. </p>



<p class="wp-block-paragraph">ಇದೇ ದಿನ ದೇಶಾದ್ಯಂತ ನೀಟ್ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ನ ಬೃಹತ್ ಕಾರ್ಯಕ್ರಮದಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕಾರ್ಯಕ್ರಮವನ್ನು ಮತ್ತೊಂದು ದಿನಕ್ಕೆ ಮುಂದೂಡಬಹುದಾಗಿತ್ತು ಎಂದು ಟೀಕಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/neet-ug-2026-fake-paper-leak-video-nta-clarification/">NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? Viral Video ನಕಲಿ: NTA ಸ್ಪಷ್ಟನೆ</a></strong></p>



<p class="wp-block-paragraph">ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗದಂತೆ ಸರ್ಕಾರ ಸ್ಪಷ್ಟ ನಿಯಮ ರೂಪಿಸಬೇಕು ಹಾಗೂ ವಿಐಪಿ ಸಂಸ್ಕೃತಿಯಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ರಾಜ್ಯದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಮೊದಲು ನೀಟ್ ಪರೀಕ್ಷೆಯಲ್ಲಿನ ಅವ್ಯವಹಾರಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/cbse-class-12-revaluation-verification-results-released-2026/">CBSE 12ನೇ ತರಗತಿ ಮರುಮೌಲ್ಯಮಾಪನ ಫಲಿತಾಂಶ ಬಿಡುಗಡೆ</a></strong></p>



<p class="wp-block-paragraph"><strong>ಸಂಚಾರಿ ಸಹಾಯವಾಣಿ ಇದೆ :</strong> ಬೆಂಗಳೂರಿನಲ್ಲಿ ಒಟ್ಟು ಮೂರು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಗೈರಾಗಿದ್ದು, ಅವರಲ್ಲಿ ಒಬ್ಬರು ಹಳೆಯ ಹಾಲ್ ಟಿಕೆಟ್ ತಂದಿದ್ದರೆ, ಉಳಿದವರು ತಡವಾಗಿ ಆಗಮಿಸಿದ್ದರು ಎಂದು ಅವರು ಸ್ಪಷ್ಟಪಡಿಸಿದರು. ಕರ್ನಾಟಕ ಸರ್ಕಾರ ಮುಂಚಿತವಾಗಿಯೇ ಟ್ರಾಫಿಕ್ ಸಲಹೆ ಮತ್ತು ಸಹಾಯವಾಣಿ ವ್ಯವಸ್ಥೆ ಕಲ್ಪಿಸಿತ್ತು. ಸಾವಿರಾರು ವಿದ್ಯಾರ್ಥಿಗಳು ಯಾವುದೇ ತೊಂದರೆಯಿಲ್ಲದೆ ಪರೀಕ್ಷೆ ಬರೆದಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆ ದುರದೃಷ್ಟಕರ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="n5tgoT9aAH"><a href="https://samyuktakarnataka.in/sports/india-win-fih-womens-nations-cup-2026-beat-new-zealand-final/">ನ್ಯೂಜಿಲೆಂಡ್‌ನ್ನು ಮಣಿಸಿದ ಭಾರತ: FIH ಪ್ರೊ ಲೀಗ್‌ಗೆ ಬಡ್ತಿ ಖಚಿತ</a></blockquote><iframe class="wp-embedded-content" sandbox="allow-scripts" security="restricted"  title="“ನ್ಯೂಜಿಲೆಂಡ್‌ನ್ನು ಮಣಿಸಿದ ಭಾರತ: FIH ಪ್ರೊ ಲೀಗ್‌ಗೆ ಬಡ್ತಿ ಖಚಿತ” — Samyukta Karnataka" src="https://samyuktakarnataka.in/sports/india-win-fih-womens-nations-cup-2026-beat-new-zealand-final/embed/#?secret=MbBJrryana#?secret=n5tgoT9aAH" data-secret="n5tgoT9aAH" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/karnataka/neet-exam-day-kpcc-president-oath-ceremony-sparks-political-row/">NEET(UG) ಪರೀಕ್ಷೆ : ತೇಜಸ್ವಿ Vs ಖರ್ಗೆ ನಡುವೆ ವಾಕ್ಸಮರ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? Viral Video ನಕಲಿ: NTA ಸ್ಪಷ್ಟನೆ</title>
		<link>https://samyuktakarnataka.in/news/india/neet-ug-2026-fake-paper-leak-video-nta-clarification/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 22 Jun 2026 04:43:27 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#Exam]]></category>
		<category><![CDATA[#HigherEducationIndia]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<category><![CDATA[NEET-UG exams]]></category>
		<guid isPermaLink="false">https://samyuktakarnataka.in/?p=101186</guid>

					<description><![CDATA[<p>NEET (UG) ಮರುಪರೀಕ್ಷೆ ಕುರಿತು ತಪ್ಪು ಮಾಹಿತಿ ಹರಡಿದರೆ ಕ್ರಮ: ಎನ್‌ಟಿಎ ಎಚ್ಚರಿಕೆ ನವದೆಹಲಿ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಸಂಪೂರ್ಣ ನಕಲಿ ಮತ್ತು ದಾರಿತಪ್ಪಿಸುವಂತದ್ದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಸ್ಪಷ್ಟಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಎನ್‌ಟಿಎ, ನೀಟ್-ಯುಜಿ 2026ರ ಮರುಪರೀಕ್ಷೆಯನ್ನು ದೇಶಾದ್ಯಂತ ಕಟ್ಟುನಿಟ್ಟಿನ ಭದ್ರತೆ ಮತ್ತು ನಿಗಾವ್ಯವಸ್ಥೆಯ ಮಧ್ಯೆ ಯಶಸ್ವಿಯಾಗಿ [&#8230;]</p>
<p>The post <a href="https://samyuktakarnataka.in/news/india/neet-ug-2026-fake-paper-leak-video-nta-clarification/">NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? Viral Video ನಕಲಿ: NTA ಸ್ಪಷ್ಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>NEET (UG) ಮರುಪರೀಕ್ಷೆ ಕುರಿತು ತಪ್ಪು ಮಾಹಿತಿ ಹರಡಿದರೆ ಕ್ರಮ: ಎನ್‌ಟಿಎ ಎಚ್ಚರಿಕೆ</strong></p>



<p class="wp-block-paragraph"><strong>ನವದೆಹಲಿ: </strong>ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಸಂಪೂರ್ಣ ನಕಲಿ ಮತ್ತು ದಾರಿತಪ್ಪಿಸುವಂತದ್ದು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಸ್ಪಷ್ಟಪಡಿಸಿದೆ.</p>



<p class="wp-block-paragraph">ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಎನ್‌ಟಿಎ, ನೀಟ್-ಯುಜಿ 2026ರ ಮರುಪರೀಕ್ಷೆಯನ್ನು ದೇಶಾದ್ಯಂತ ಕಟ್ಟುನಿಟ್ಟಿನ ಭದ್ರತೆ ಮತ್ತು ನಿಗಾವ್ಯವಸ್ಥೆಯ ಮಧ್ಯೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದೆ. ಪರೀಕ್ಷೆ ನಡೆದ ಬಳಿಕ ಕೆಲವು ವ್ಯಕ್ತಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಆರೋಪಗಳೊಂದಿಗೆ ತಿರುಚಿದ ಹಾಗೂ ಕಪೋಲಕಲ್ಪಿತ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ ಎಂದು ಎನ್‌ಟಿಎ ಹೇಳಿದೆ.</p>



<p class="wp-block-paragraph">&#8220;2026ರ ನೀಟ್ (ಯುಜಿ) ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೊ ನಕಲಿ. ಅದರಲ್ಲಿ ಮಾಡಲಾಗಿರುವ ಎಲ್ಲಾ ಹೇಳಿಕೆಗಳು ಸುಳ್ಳಾಗಿದ್ದು, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇಂತಹ ಸುಳ್ಳು ಮಾಹಿತಿಯನ್ನು ಸೃಷ್ಟಿಸಿ ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಲಾಗುತ್ತಿದೆ. ಇದು ಗಂಭೀರ ಅಪರಾಧವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು&#8221; ಎಂದು ಎನ್‌ಟಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>



<p class="wp-block-paragraph">ಇಂತಹ ಸುಳ್ಳು ಮತ್ತು ಗೊಂದಲ ಸೃಷ್ಟಿಸುವ ಮಾಹಿತಿಗಳಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿರುವ ಎನ್‌ಟಿಎ, ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣ ಖಾತೆಗಳನ್ನು ಮಾತ್ರ ಅವಲಂಬಿಸುವಂತೆ ಸೂಚಿಸಿದೆ.</p>



<p class="wp-block-paragraph">ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ದೇಶಾದ್ಯಂತ ಪರೀಕ್ಷಾ ಸಿಬ್ಬಂದಿ, ಮೇಲ್ವಿಚಾರಕರು, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರನ್ನು ಒಳಗೊಂಡಂತೆ ಏಳು ಲಕ್ಷಕ್ಕೂ ಅಧಿಕ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಕೇವಲ 37 ದಿನಗಳ ಅವಧಿಯಲ್ಲಿ ಮರುಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.</p>



<p class="wp-block-paragraph">ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಉದ್ದೇಶದಿಂದ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾನುವಾರ (ಜೂನ್ 21) ನಡೆದ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗಿದ್ದರು. ದೇಶದಾದ್ಯಂತ 5,440 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ವಿದೇಶಗಳ 14 ಕೇಂದ್ರಗಳಲ್ಲಿಯೂ ಪರೀಕ್ಷೆ ನಡೆದಿರುವುದಾಗಿ ಸಂಸ್ಥೆ ಮಾಹಿತಿ ನೀಡಿದೆ.</p>



<p class="wp-block-paragraph">ಅಲ್ಲದೆ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ವೈರಲ್ ವಿಡಿಯೊ ಸೃಷ್ಟಿಸಿ ಪ್ರಸಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.</p>



<p class="wp-block-paragraph"></p>
<p>The post <a href="https://samyuktakarnataka.in/news/india/neet-ug-2026-fake-paper-leak-video-nta-clarification/">NEET (UG) ಪ್ರಶ್ನೆ ಪತ್ರಿಕೆ ಸೋರಿಕೆ? Viral Video ನಕಲಿ: NTA ಸ್ಪಷ್ಟನೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>NEET : ಅಬುಧಾಬಿ ಕೇಂದ್ರ ವಿವಾದಕ್ಕೆ Digital ಸಾಕ್ಷ್ಯ ಮುಂದಿಟ್ಟ NTA</title>
		<link>https://samyuktakarnataka.in/news/india/nta-clarifies-abu-dhabi-neet-centre-selection-was-made-from-student-login/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 20 Jun 2026 12:53:00 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#Exam]]></category>
		<category><![CDATA[#HigherEducationIndia]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<guid isPermaLink="false">https://samyuktakarnataka.in/?p=101101</guid>

					<description><![CDATA[<p>ನಾಗಪುರ ವಿದ್ಯಾರ್ಥಿಗೆ ನೀಟ್ ಮರುಪರೀಕ್ಷೆಗೆ ಅಬುಧಾಬಿ ಕೇಂದ್ರ ಹಂಚಿಕೆಯಾದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಟಿಎ ಸ್ಪಷ್ಟನೆ ನೀಡಿದೆ. ವಿದ್ಯಾರ್ಥಿಯ ಲಾಗಿನ್ ಐಡಿಯಿಂದಲೇ ಅಬುಧಾಬಿ ಕೇಂದ್ರ ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಿರುವ ಎನ್‌ಟಿಎ, ವಿದ್ಯಾರ್ಥಿಯ ಹಿತದೃಷ್ಟಿಯಿಂದ ಬಳಿಕ ಕೇಂದ್ರವನ್ನು ನಾಗಪುರಕ್ಕೆ ಬದಲಾಯಿಸಿದೆ. ನವದೆಹಲಿ: ನಾಗಪುರದ ವಿದ್ಯಾರ್ಥಿಯೊಬ್ಬನಿಗೆ ನೀಟ್-ಯುಜಿ (NEET-UG) ಮರುಪರೀಕ್ಷೆಗೆ ಭಾರತದ ಬದಲು ಯುಎಇಯ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿದೆ ಎಂಬ ವಿವಾದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಸ್ಪಷ್ಟನೆ ನೀಡಿದೆ. ಈ ಆಯ್ಕೆ ತಾಂತ್ರಿಕ ದೋಷದಿಂದ ಆಗಿಲ್ಲ, [&#8230;]</p>
<p>The post <a href="https://samyuktakarnataka.in/news/india/nta-clarifies-abu-dhabi-neet-centre-selection-was-made-from-student-login/">NEET : ಅಬುಧಾಬಿ ಕೇಂದ್ರ ವಿವಾದಕ್ಕೆ Digital ಸಾಕ್ಷ್ಯ ಮುಂದಿಟ್ಟ NTA</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ನಾಗಪುರ ವಿದ್ಯಾರ್ಥಿಗೆ ನೀಟ್ ಮರುಪರೀಕ್ಷೆಗೆ ಅಬುಧಾಬಿ ಕೇಂದ್ರ ಹಂಚಿಕೆಯಾದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಟಿಎ ಸ್ಪಷ್ಟನೆ ನೀಡಿದೆ. ವಿದ್ಯಾರ್ಥಿಯ ಲಾಗಿನ್ ಐಡಿಯಿಂದಲೇ ಅಬುಧಾಬಿ ಕೇಂದ್ರ ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಿರುವ ಎನ್‌ಟಿಎ, ವಿದ್ಯಾರ್ಥಿಯ ಹಿತದೃಷ್ಟಿಯಿಂದ ಬಳಿಕ ಕೇಂದ್ರವನ್ನು ನಾಗಪುರಕ್ಕೆ ಬದಲಾಯಿಸಿದೆ.</strong></p>



<p class="wp-block-paragraph">ನವದೆಹಲಿ: ನಾಗಪುರದ ವಿದ್ಯಾರ್ಥಿಯೊಬ್ಬನಿಗೆ ನೀಟ್-ಯುಜಿ (NEET-UG) ಮರುಪರೀಕ್ಷೆಗೆ ಭಾರತದ ಬದಲು ಯುಎಇಯ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆಯಾಗಿದೆ ಎಂಬ ವಿವಾದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಸ್ಪಷ್ಟನೆ ನೀಡಿದೆ. ಈ ಆಯ್ಕೆ ತಾಂತ್ರಿಕ ದೋಷದಿಂದ ಆಗಿಲ್ಲ, ಬದಲಾಗಿ ವಿದ್ಯಾರ್ಥಿಯ ಲಾಗಿನ್ ಐಡಿಯಿಂದಲೇ ಅಬುಧಾಬಿ ಕೇಂದ್ರವನ್ನು ಆಯ್ಕೆ ಮಾಡಲಾಗಿತ್ತು ಎಂದು ಎನ್‌ಟಿಎ ತಿಳಿಸಿದೆ.</p>



<p class="wp-block-paragraph">ವಿವಾದದ ನಂತರ ಡಿಜಿಟಲ್ ದಾಖಲೆಗಳು ಮತ್ತು ಲಾಗಿನ್ ಮಾಹಿತಿಯನ್ನು ಪರಿಶೀಲಿಸಿದ ಎನ್‌ಟಿಎ, ಕೇಂದ್ರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪರೀಕ್ಷಾ ಕೇಂದ್ರವನ್ನು ಮರಳಿ ನಾಗಪುರಕ್ಕೆ ಬದಲಾಯಿಸಿರುವುದಾಗಿ ತಿಳಿಸಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="neet-ug: %E0%B2%A8%E0%B2%BE%E0%B2%97%E0%B3%8D%E0%B2%AA%E0%B3%81%E0%B2%B0 %E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B3%86 %E0%B2%85%E0%B2%AC%E0%B3%81%E0%B2%A7%E0%B2%BE%E0%B2%AC%E0%B2%BF %E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B2%BE %E0%B2%95%E0%B3%87%E0%B2%82%E0%B2%A6%E0%B3%8D%E0%B2%B0 %E0%B2%B9%E0%B2%82%E0%B2%9A%E0%B2%BF%E0%B2%95%E0%B3%86">NEET-UG: ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆ</a></strong></p>



<p class="wp-block-paragraph"><strong>ಹೇಗೆ ಆರಂಭವಾಯಿತು ವಿವಾದ? :</strong> ನಾಗಪುರದ ವಿದ್ಯಾರ್ಥಿ ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಅವರು ಮೇ 3ರಂದು ನಡೆದಿದ್ದ ಮೂಲ ನೀಟ್ ಪರೀಕ್ಷೆಯನ್ನು ನಾಗಪುರದಲ್ಲೇ ಬರೆದಿದ್ದರು. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಮರುಪರೀಕ್ಷೆ ಘೋಷಣೆಯಾದ ನಂತರ ಹೊಸ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದಾಗ ಪರೀಕ್ಷಾ ಕೇಂದ್ರವಾಗಿ ಅಬುಧಾಬಿ ಇಂಡಿಯನ್ ಸ್ಕೂಲ್, ಯುಎಇ ನಮೂದಾಗಿರುವುದು ಕಂಡುಬಂದಿತ್ತು. ಇದರಿಂದ ವಿದ್ಯಾರ್ಥಿಯ ಕುಟುಂಬ ತೀವ್ರ ಆತಂಕಕ್ಕೊಳಗಾಗಿತ್ತು. ಪರೀಕ್ಷೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ವಿದೇಶದ ಕೇಂದ್ರ ನೀಡಿರುವುದು ಅಚ್ಚರಿ ಮೂಡಿಸಿತ್ತು.</p>



<p class="wp-block-paragraph"><strong>ಪೋಷಕರ ಅಳಲು : </strong>ವಿದ್ಯಾರ್ಥಿಯ ತಂದೆ ಮೊಹಮ್ಮದ್ ತಾಲಿಬ್ ಮಾಧ್ಯಮಗಳೊಂದಿಗೆ ಮಾತನಾಡಿ, ತಾವು ಅರ್ಜಿ ಸಲ್ಲಿಸುವಾಗ ನಾಗಪುರ, ವಾರ್ಧಾ ಮತ್ತು ಭಂಡಾರಾ ಕೇಂದ್ರಗಳನ್ನು ಮಾತ್ರ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದರು. “ನಮ್ಮ ಮಗನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ. ಪರೀಕ್ಷೆಗೆ ಕೇವಲ 36 ಗಂಟೆ ಬಾಕಿ ಇರುವಾಗ ವಿದೇಶದ ಕೇಂದ್ರ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ವಿದೇಶಕ್ಕೆ ತೆರಳುವುದು ಹೇಗೆ ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದರು.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/karnataka-government-to-launch-praja-sevaka-department-for-public-grievances/">ರಾಜ್ಯದಲ್ಲಿ ‘ಪ್ರಜಾ ಸೇವಕ ಇಲಾಖೆ’ ಸ್ಥಾಪನೆಗೆ ನಿರ್ಧಾರ: ಡಿಕೆಶಿ ಮಾಹಿತಿ</a></strong></p>



<p class="wp-block-paragraph">ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಎನ್‌ಟಿಎ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಕೇಳಿಬಂದಿದ್ದವು.</p>



<p class="wp-block-paragraph"><strong>NTA ಏನು ಹೇಳಿದೆ? : </strong>ವಿವಾದ ತೀವ್ರಗೊಳ್ಳುತ್ತಿದ್ದಂತೆ ಎನ್‌ಟಿಎ ಸಂಪೂರ್ಣ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿಯ ಲಾಗಿನ್ ಖಾತೆಯಲ್ಲಿಯೇ ಅಬುಧಾಬಿ ಪರೀಕ್ಷಾ ಕೇಂದ್ರದ ಆಯ್ಕೆ ದಾಖಲಾಗಿರುವುದನ್ನು ಪತ್ತೆಹಚ್ಚಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ &#8220;ತಾಂತ್ರಿಕ ದೋಷ&#8221; ಅಥವಾ &#8220;ಸಿಸ್ಟಂ ತಪ್ಪು&#8221; ಎಂಬ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಡಿಜಿಟಲ್ ಪುರಾವೆಗಳೂ ತಮ್ಮ ಬಳಿ ಲಭ್ಯವಿವೆ ಎಂದು ಹೇಳಿದೆ.</p>



<p class="wp-block-paragraph"><strong>ವಿದ್ಯಾರ್ಥಿಯ ಹಿತದೃಷ್ಟಿಯಿಂದ ಕೇಂದ್ರ ಬದಲಾವಣೆ :</strong> ಆದಾಗ್ಯೂ, ಪರೀಕ್ಷೆಯ ಸಮಯ ಸನ್ನಿಹಿತವಾಗಿರುವುದನ್ನು ಹಾಗೂ ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಎನ್‌ಟಿಎ ವಿಶೇಷ ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗೆ ಇದೀಗ ನಾಗಪುರದಲ್ಲೇ ಪರೀಕ್ಷಾ ಕೇಂದ್ರವನ್ನು ಮರುಹಂಚಿಕೆ ಮಾಡಲಾಗಿದೆ. ಇದರಿಂದ ಕುಟುಂಬದ ಆತಂಕ ದೂರವಾಗಿದ್ದು, ವಿದ್ಯಾರ್ಥಿ ತನ್ನ ಸ್ವಂತ ನಗರದಲ್ಲೇ ಪರೀಕ್ಷೆಗೆ ಹಾಜರಾಗುವ ಅವಕಾಶ ಪಡೆದಿದ್ದಾನೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/kea-extends-application-deadline-for-ao-and-aao-posts-till-june-25/">AO-AAO ನೇಮಕಾತಿ ಪ್ರಕ್ರಿಯೆಗೆ ಹೊಸ ವೇಳಾಪಟ್ಟಿ ಪ್ರಕಟಿಸಿದ KEA</a></strong></p>



<p class="wp-block-paragraph"><strong>ಪರೀಕ್ಷಾ ವ್ಯವಸ್ಥೆಗಳ ಮೇಲೆ ಮತ್ತೆ ಚರ್ಚೆ : </strong>ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ನಿರ್ವಹಣೆ ಕುರಿತು ಪ್ರಶ್ನೆಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಈ ಘಟನೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಕೇಂದ್ರ ಹಂಚಿಕೆ ಹಾಗೂ ಪರೀಕ್ಷಾ ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳು ಈಗಾಗಲೇ ಎನ್‌ಟಿಎ ಮೇಲೆ ಒತ್ತಡ ಹೆಚ್ಚಿಸಿವೆ. ಆದರೆ ಈ ಪ್ರಕರಣದಲ್ಲಿ ತಾಂತ್ರಿಕ ದೋಷವಿಲ್ಲ ಎಂದು ಸಂಸ್ಥೆ ಸ್ಪಷ್ಟನೆ ನೀಡಿರುವುದು ವಿವಾದಕ್ಕೆ ಹೊಸ ಆಯಾಮ ನೀಡಿದೆ.</p>



<p class="wp-block-paragraph"><strong>ಮರುಪರೀಕ್ಷೆಗೆ ಸಕಲ ಸಿದ್ಧತೆ :</strong> ಜೂನ್ 21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ದೇಶಾದ್ಯಂತ ವ್ಯಾಪಕ ಭದ್ರತಾ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಾರತ ಸೇರಿದಂತೆ ವಿದೇಶಗಳ ಹಲವು ನಗರಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷಾ ಪ್ರಕ್ರಿಯೆ ಪಾರದರ್ಶಕ ಹಾಗೂ ಸುಗಮವಾಗಿ ನಡೆಯುವಂತೆ ಎನ್‌ಟಿಎ ಕ್ರಮ ಕೈಗೊಂಡಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/bengaluru/bengaluru-metro-to-start-services-at-5-am-on-international-yoga-day-2026/">ಜೂನ್ 21ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ಬದಲಾವಣೆ</a></strong></p>



<p class="wp-block-paragraph">ನಾಗಪುರ ವಿದ್ಯಾರ್ಥಿಯ ಪ್ರಕರಣದಲ್ಲಿ ಕೇಂದ್ರ ಬದಲಾವಣೆ ಮೂಲಕ ಸಮಸ್ಯೆಗೆ ಪರಿಹಾರ ದೊರೆತಿದ್ದರೂ, ಪರೀಕ್ಷಾ ಕೇಂದ್ರ ಆಯ್ಕೆ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಮುಂದುವರಿದಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="bSEOECLcVu"><a href="https://samyuktakarnataka.in/news/karnataka/prajaakeeya-org-goes-open-source-invites-developers-and-tech-community/">ತಂತ್ರಜ್ಞಾನ, ಪ್ರಜಾಪ್ರಭುತ್ವದ ಸಂಗಮ:Open Source ಆದ ಪ್ರಜಾಕೀಯ</a></blockquote><iframe class="wp-embedded-content" sandbox="allow-scripts" security="restricted"  title="“ತಂತ್ರಜ್ಞಾನ, ಪ್ರಜಾಪ್ರಭುತ್ವದ ಸಂಗಮ:Open Source ಆದ ಪ್ರಜಾಕೀಯ” — Samyukta Karnataka" src="https://samyuktakarnataka.in/news/karnataka/prajaakeeya-org-goes-open-source-invites-developers-and-tech-community/embed/#?secret=hDhN6SkLH3#?secret=bSEOECLcVu" data-secret="bSEOECLcVu" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/nta-clarifies-abu-dhabi-neet-centre-selection-was-made-from-student-login/">NEET : ಅಬುಧಾಬಿ ಕೇಂದ್ರ ವಿವಾದಕ್ಕೆ Digital ಸಾಕ್ಷ್ಯ ಮುಂದಿಟ್ಟ NTA</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>NEET-UG: ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆ</title>
		<link>https://samyuktakarnataka.in/news/india/neet-ug-retest-candidate-assigned-abu-dhabi-centre-instead-of-nagpur-nta-corrects-error/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 20 Jun 2026 05:22:33 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#HigherEducationIndia]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<category><![CDATA[NEET-UG]]></category>
		<guid isPermaLink="false">https://samyuktakarnataka.in/?p=101055</guid>

					<description><![CDATA[<p>ನೀಟ್-ಯುಜಿ ಮರುಪರೀಕ್ಷೆಗೆ ನಾಗ್ಪುರ ಮೂಲದ ವಿದ್ಯಾರ್ಥಿಯೊಬ್ಬರಿಗೆ ಅಬುಧಾಬಿಯ ಪರೀಕ್ಷಾ ಕೇಂದ್ರ ತಪ್ಪಾಗಿ ಹಂಚಿಕೆಯಾಗಿದ್ದ ಘಟನೆ ಆತಂಕ ಸೃಷ್ಟಿಸಿತ್ತು. ಕುಟುಂಬದ ದೂರಿನ ಬಳಿಕ ಎನ್‌ಟಿಎ ದೋಷವನ್ನು ಸರಿಪಡಿಸಿ ನಾಗ್ಪುರದಲ್ಲೇ ಹೊಸ ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡಿದೆ. ನಾಗ್ಪುರ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ (NEET-UG) ಮರುಪರೀಕ್ಷೆಗೆ ಹಾಜರಾಗಲಿದ್ದ ಮಹಾರಾಷ್ಟ್ರದ ನಾಗ್ಪುರ ಮೂಲದ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷಾ ಕೇಂದ್ರವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅಬುಧಾಬಿಯ ಶಾಲೆಯನ್ನು ಹಂಚಿಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ [&#8230;]</p>
<p>The post <a href="https://samyuktakarnataka.in/news/india/neet-ug-retest-candidate-assigned-abu-dhabi-centre-instead-of-nagpur-nta-corrects-error/">NEET-UG: ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ನೀಟ್-ಯುಜಿ ಮರುಪರೀಕ್ಷೆಗೆ ನಾಗ್ಪುರ ಮೂಲದ ವಿದ್ಯಾರ್ಥಿಯೊಬ್ಬರಿಗೆ ಅಬುಧಾಬಿಯ ಪರೀಕ್ಷಾ ಕೇಂದ್ರ ತಪ್ಪಾಗಿ ಹಂಚಿಕೆಯಾಗಿದ್ದ ಘಟನೆ ಆತಂಕ ಸೃಷ್ಟಿಸಿತ್ತು. ಕುಟುಂಬದ ದೂರಿನ ಬಳಿಕ ಎನ್‌ಟಿಎ ದೋಷವನ್ನು ಸರಿಪಡಿಸಿ ನಾಗ್ಪುರದಲ್ಲೇ ಹೊಸ ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡಿದೆ.</strong></p>



<p class="wp-block-paragraph">ನಾಗ್ಪುರ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ (NEET-UG) ಮರುಪರೀಕ್ಷೆಗೆ ಹಾಜರಾಗಲಿದ್ದ ಮಹಾರಾಷ್ಟ್ರದ ನಾಗ್ಪುರ ಮೂಲದ ವಿದ್ಯಾರ್ಥಿಯೊಬ್ಬರಿಗೆ ಪರೀಕ್ಷಾ ಕೇಂದ್ರವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಅಬುಧಾಬಿಯ ಶಾಲೆಯನ್ನು ಹಂಚಿಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಪ್ರಕರಣ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಎನ್‌ಟಿಎ ದೋಷವನ್ನು ಸರಿಪಡಿಸಿ ವಿದ್ಯಾರ್ಥಿಗೆ ನಾಗ್ಪುರದಲ್ಲೇ ಹೊಸ ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡಿದೆ.</p>



<p class="wp-block-paragraph">ಅಬ್ದುಲ್ಲಾ ಮೊಹಮ್ಮದ್ ತಾಲಿಬ್ ಎಂಬ ವಿದ್ಯಾರ್ಥಿಯ ಕುಟುಂಬವು ಶುಕ್ರವಾರ ಸಂಜೆ ಮರುಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡಾಗ ಈ ಅಚ್ಚರಿಯ ಬೆಳವಣಿಗೆ ಗಮನಕ್ಕೆ ಬಂದಿದೆ. ವಿದ್ಯಾರ್ಥಿಯು ಅರ್ಜಿ ಸಲ್ಲಿಸುವ ವೇಳೆ ನಾಗ್ಪುರವನ್ನು ಮೊದಲ ಆಯ್ಕೆಯಾಗಿ, ವಾರ್ಧಾ ಹಾಗೂ ಭಂಡಾರವನ್ನು ನಂತರದ ಆಯ್ಕೆಗಳಾಗಿ ನಮೂದಿಸಿದ್ದರೂ, ಪ್ರವೇಶ ಪತ್ರದಲ್ಲಿ ಅಬುಧಾಬಿಯ ಇಂಡಿಯನ್ ಸ್ಕೂಲ್ ಪರೀಕ್ಷಾ ಕೇಂದ್ರವಾಗಿ ಕಾಣಿಸಿಕೊಂಡಿತ್ತು.</p>



<p class="wp-block-paragraph">ಈ ಕುರಿತು ವಿದ್ಯಾರ್ಥಿಯ ತಂದೆ ಮೊಹಮ್ಮದ್ ತಾಲಿಬ್ ತಕ್ಷಣ ಎನ್‌ಟಿಎ ಸಹಾಯವಾಣಿಯನ್ನು ಸಂಪರ್ಕಿಸಿ ದೂರು ದಾಖಲಿಸಿದರು. ಬಳಿಕ ಇ-ಮೇಲ್ ಮೂಲಕವೂ ಸಮಸ್ಯೆಯನ್ನು ತಿಳಿಸಲಾಗಿದ್ದು, ಪರಿಶೀಲನೆಯ ನಂತರ ಹೊಸ ಪ್ರವೇಶ ಪತ್ರ ನೀಡುವುದಾಗಿ ಸಂಸ್ಥೆ ಭರವಸೆ ನೀಡಿದೆ ಎಂದು ಕುಟುಂಬ ತಿಳಿಸಿದೆ.</p>



<p class="wp-block-paragraph"><strong>ಕುಟುಂಬದಲ್ಲಿ ಆತಂಕ : </strong>ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ವಿದೇಶದ ಪರೀಕ್ಷಾ ಕೇಂದ್ರ ಹಂಚಿಕೆಯಾಗಿರುವುದು ಕುಟುಂಬವನ್ನು ತೀವ್ರ ಆತಂಕಕ್ಕೆ ದೂಡಿತ್ತು. &#8220;ನಮ್ಮ ಮಗನ ಬಳಿ ಪಾಸ್‌ಪೋರ್ಟ್ ಕೂಡ ಇಲ್ಲ. ಇಂತಹ ಕಡಿಮೆ ಸಮಯದಲ್ಲಿ ವಿದೇಶ ಪ್ರಯಾಣದ ವ್ಯವಸ್ಥೆ ಮಾಡುವುದು ಅಸಾಧ್ಯ. ನಾವು ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದೆವು&#8221; ಎಂದು ಮೊಹಮ್ಮದ್ ತಾಲಿಬ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.</p>



<p class="wp-block-paragraph">ವಿದ್ಯಾರ್ಥಿಗೆ ಮೊದಲು ನಾಗ್ಪುರದ ಸರಸ್ವತಿ ವಿದ್ಯಾಲಯದಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಲು ನಿರ್ಧರಿಸಿದ ನಂತರ ಹೊಸ ಪ್ರವೇಶ ಪತ್ರದಲ್ಲಿ ಅಬುಧಾಬಿ ಕೇಂದ್ರ ಕಾಣಿಸಿಕೊಂಡಿತ್ತು.</p>



<p class="wp-block-paragraph"><strong>NTA ಸ್ಪಷ್ಟನೆ :</strong> ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಹಾನಿರ್ದೇಶಕ ಅಭಿಷೇಕ್ ಸಿಂಗ್, ಸಮಸ್ಯೆಯನ್ನು ತಕ್ಷಣ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ. &#8220;ಅಭ್ಯರ್ಥಿಯ ಪರೀಕ್ಷಾ ಕೇಂದ್ರ ಹಂಚಿಕೆಯಲ್ಲಿ ಉಂಟಾಗಿದ್ದ ವ್ಯತ್ಯಾಸವನ್ನು ಸರಿಪಡಿಸಲಾಗಿದೆ. ವಿದ್ಯಾರ್ಥಿಗೆ ಈಗ ನಾಗ್ಪುರದಲ್ಲಿಯೇ ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡಲಾಗಿದೆ&#8221; ಎಂದು ಅವರು ಸ್ಪಷ್ಟಪಡಿಸಿದ್ದಾರೆ.</p>



<p class="wp-block-paragraph">ಈ ಹೇಳಿಕೆಯಿಂದ ವಿದ್ಯಾರ್ಥಿ ಹಾಗೂ ಕುಟುಂಬದ ಆತಂಕ ದೂರವಾಗಿದ್ದು, ಮರುಪರೀಕ್ಷೆಗೆ ಯಾವುದೇ ಅಡ್ಡಿಯಿಲ್ಲದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.</p>



<p class="wp-block-paragraph"><strong>ಎನ್‌ಟಿಎ ವಿರುದ್ಧ ಟೀಕೆ : </strong>ಈ ಘಟನೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮಾಜಿ ಶಿಕ್ಷಣ ಸಚಿವ ಡಾ. ಅನೀಸ್ ಅಹ್ಮದ್, ಇದು ಪರೀಕ್ಷಾ ಸಂಸ್ಥೆಯ ಗಂಭೀರ ಲೋಪ ಎಂದು ಟೀಕಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಇಂತಹ ತಪ್ಪುಗಳು ನಡೆಯಬಾರದು ಎಂದು ಅವರು ಹೇಳಿದ್ದಾರೆ.</p>



<p class="wp-block-paragraph">ಪರೀಕ್ಷಾ ನಿರ್ವಹಣೆಗೆ ಸಂಬಂಧಿಸಿದ ಹಲವು ವಿವಾದಗಳ ನಡುವೆ ಈ ಘಟನೆ ಎನ್‌ಟಿಎ ಕಾರ್ಯನಿರ್ವಹಣೆಯ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಎಬ್ಬಿಸಿದೆ. ಇತ್ತೀಚಿನ ವರ್ಷಗಳಲ್ಲಿ ನೀಟ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆ, ಭದ್ರತೆ ಹಾಗೂ ನಿರ್ವಹಣಾ ದೋಷಗಳ ಕುರಿತು ಹಲವು ಚರ್ಚೆಗಳು ನಡೆದಿವೆ.</p>



<p class="wp-block-paragraph"><strong>22.79 ಲಕ್ಷ ಅಭ್ಯರ್ಥಿಗಳ ಮರುಪರೀಕ್ಷೆ : </strong>ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ದೇಶದ 551 ನಗರಗಳು ಹಾಗೂ ವಿದೇಶಗಳ 14 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 22.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷೆಯನ್ನು ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಎರಡು ಲಕ್ಷಕ್ಕೂ ಅಧಿಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.</p>



<p class="wp-block-paragraph">ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಿರುವ ಸಂಸ್ಥೆ, ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಅಥವಾ ಲೋಪ ಸಂಭವಿಸದಂತೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಆದರೆ ನಾಗ್ಪುರ ವಿದ್ಯಾರ್ಥಿಯ ಪ್ರಕರಣವು ಪರೀಕ್ಷಾ ನಿರ್ವಹಣೆಯಲ್ಲಿನ ಸಣ್ಣ ಎಡವಟ್ಟುಗಳೂ ವಿದ್ಯಾರ್ಥಿಗಳಲ್ಲಿ ಎಷ್ಟು ದೊಡ್ಡ ಆತಂಕ ಉಂಟುಮಾಡಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="C4NgmRh0wh"><a href="https://samyuktakarnataka.in/districts/belagavi/mes-leaders-stopped-at-hattargi-toll-while-heading-to-meet-amit-shah/">ಅಮಿತ್ ಶಾ ಭೇಟಿಗೆ ತೆರಳುತ್ತಿದ್ದ MES ಮುಖಂಡರಿಗೆ ಪೊಲೀಸರ ತಡೆ</a></blockquote><iframe class="wp-embedded-content" sandbox="allow-scripts" security="restricted"  title="“ಅಮಿತ್ ಶಾ ಭೇಟಿಗೆ ತೆರಳುತ್ತಿದ್ದ MES ಮುಖಂಡರಿಗೆ ಪೊಲೀಸರ ತಡೆ” — Samyukta Karnataka" src="https://samyuktakarnataka.in/districts/belagavi/mes-leaders-stopped-at-hattargi-toll-while-heading-to-meet-amit-shah/embed/#?secret=zWvvhph3az#?secret=C4NgmRh0wh" data-secret="C4NgmRh0wh" width="600" height="338" frameborder="0" marginwidth="0" marginheight="0" scrolling="no"></iframe>
</div></figure>



<p class="wp-block-paragraph"></p>
<p>The post <a href="https://samyuktakarnataka.in/news/india/neet-ug-retest-candidate-assigned-abu-dhabi-centre-instead-of-nagpur-nta-corrects-error/">NEET-UG: ನಾಗ್ಪುರ ವಿದ್ಯಾರ್ಥಿಗೆ ಅಬುಧಾಬಿ ಪರೀಕ್ಷಾ ಕೇಂದ್ರ ಹಂಚಿಕೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>Telegramಗೆ ಹೈಕೋರ್ಟ್ ಶಾಕ್: NEET ಪರೀಕ್ಷೆ ಮುಗಿಯುವವರೆಗೆ ಬ್ಯಾನ್!</title>
		<link>https://samyuktakarnataka.in/news/india/delhi-high-court-upholds-telegram-ban-ahead-of-neet-ug-2026-retest/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 19 Jun 2026 05:53:25 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#Exam]]></category>
		<category><![CDATA[#HigherEducationIndia]]></category>
		<category><![CDATA[india]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<category><![CDATA[NEET-UG]]></category>
		<guid isPermaLink="false">https://samyuktakarnataka.in/?p=100960</guid>

					<description><![CDATA[<p>NEET-UG ಮರುಪರೀಕ್ಷೆಗೂ ಮುನ್ನ ಟೆಲಿಗ್ರಾಮ್‌ಗೆ ಬ್ರೇಕ್; ಕೇಂದ್ರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಮನ್ನಣೆ ನವದೆಹಲಿ: ದೇಶದ ಲಕ್ಷಾಂತರ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಭವಿಷ್ಯಕ್ಕೆ ಸಂಬಂಧಿಸಿದಿರುವ NEET-UG 2026 ಮರುಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ಕ್ರಮಕ್ಕೆ ದೆಹಲಿ ಹೈಕೋರ್ಟ್ ಬೆಂಬಲ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಮಾಹಿತಿಯ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಜೂನ್ 22 ರವರೆಗೆ ದೇಶದಲ್ಲಿ ಜನಪ್ರಿಯ ಮೆಸೇಜಿಂಗ್ ವೇದಿಕೆ ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ. ಟೆಲಿಗ್ರಾಮ್ [&#8230;]</p>
<p>The post <a href="https://samyuktakarnataka.in/news/india/delhi-high-court-upholds-telegram-ban-ahead-of-neet-ug-2026-retest/">Telegramಗೆ ಹೈಕೋರ್ಟ್ ಶಾಕ್: NEET ಪರೀಕ್ಷೆ ಮುಗಿಯುವವರೆಗೆ ಬ್ಯಾನ್!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>NEET-UG ಮರುಪರೀಕ್ಷೆಗೂ ಮುನ್ನ ಟೆಲಿಗ್ರಾಮ್‌ಗೆ ಬ್ರೇಕ್; ಕೇಂದ್ರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ಮನ್ನಣೆ</strong></p>



<p class="wp-block-paragraph">ನವದೆಹಲಿ: ದೇಶದ ಲಕ್ಷಾಂತರ ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಭವಿಷ್ಯಕ್ಕೆ ಸಂಬಂಧಿಸಿದಿರುವ NEET-UG 2026 ಮರುಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವದ ಕ್ರಮಕ್ಕೆ ದೆಹಲಿ ಹೈಕೋರ್ಟ್ ಬೆಂಬಲ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಮಾಹಿತಿಯ ದುರುಪಯೋಗ ತಡೆಗಟ್ಟುವ ಉದ್ದೇಶದಿಂದ ಜೂನ್ 22 ರವರೆಗೆ ದೇಶದಲ್ಲಿ ಜನಪ್ರಿಯ ಮೆಸೇಜಿಂಗ್ ವೇದಿಕೆ ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ.</p>



<p class="wp-block-paragraph">ಟೆಲಿಗ್ರಾಮ್ ಸಂಸ್ಥೆ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ, ಸಾರ್ವಜನಿಕ ಹಿತಾಸಕ್ತಿ ಮತ್ತು ಪರೀಕ್ಷಾ ಭದ್ರತೆಗೆ ಆದ್ಯತೆ ನೀಡಿದ ಹೈಕೋರ್ಟ್ ಸಂಸ್ಥೆಯ ಅರ್ಜಿಯನ್ನು ವಜಾಗೊಳಿಸಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/mysuru/hd-kumaraswamy-reacts-cross-voting-jds-legislative-council-election-defeat/" type="link" id="https://samyuktakarnataka.in/districts/mysuru/hd-kumaraswamy-reacts-cross-voting-jds-legislative-council-election-defeat/">ಬಂಡಾಯಗಾರರಿಗೆ ಶಾಕ್ ಕೊಟ್ಟ HDK : JDSನಲ್ಲಿ ‘Gen Z’ ಯುಗ</a></strong></p>



<p class="wp-block-paragraph"><strong>ಪರೀಕ್ಷಾ ಭದ್ರತೆ ಪ್ರಮುಖ &#8211; ಹೈಕೋರ್ಟ್: </strong>ವಿಚಾರಣೆ ವೇಳೆ ಕೇಂದ್ರ ಸರ್ಕಾರ, ಕಳೆದ ಕೆಲವು ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳ ದುರುಪಯೋಗ ಹೆಚ್ಚುತ್ತಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಿತು.</p>



<p class="wp-block-paragraph">ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ಪರೀಕ್ಷೆ ನಡೆಯುವ ಅವಧಿಯಲ್ಲಿ ಯಾವುದೇ ರೀತಿಯ ಪ್ರಶ್ನೆಪತ್ರಿಕೆ, ಉತ್ತರ ಕೀ ಅಥವಾ ಪರೀಕ್ಷಾ ಸಾಮಗ್ರಿಗಳ ಅನಧಿಕೃತ ಪ್ರಸಾರವನ್ನು ತಡೆಯುವುದು ಸರ್ಕಾರದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿತು. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮ ಸಮಂಜಸವಾಗಿದೆ ಎಂದು ನ್ಯಾಯಾಲಯ ಹೇಳಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/pm-modi-wishes-rahul-gandhi-on-56th-birthday-congress-leaders-join-greetings/" type="link" id="https://samyuktakarnataka.in/news/india/pm-modi-wishes-rahul-gandhi-on-56th-birthday-congress-leaders-join-greetings/">ರಾಹುಲ್‌ಗೆ ಮೋದಿ ಶುಭಾಶಯ: ಜಾಲತಾಣದಲ್ಲಿ ಪೋಸ್ಟ್ ವೈರಲ್!</a></strong></p>



<p class="wp-block-paragraph"><strong>ಜೂನ್ 22ರವರೆಗೆ ನಿರ್ಬಂಧ ಮುಂದುವರಿಕೆ :</strong> ಜೂನ್ 21 ರಂದು ನಡೆಯಲಿರುವ NEET-UG ಮರುಪರೀಕ್ಷೆ ಪೂರ್ಣಗೊಳ್ಳುವವರೆಗೆ, ಅಂದರೆ ಜೂನ್ 22ರವರೆಗೆ ಟೆಲಿಗ್ರಾಮ್ ಸೇವೆಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಈ ಅವಧಿಯಲ್ಲಿ ಯಾವುದೇ ಪರೀಕ್ಷಾ ಸಂಬಂಧಿತ ವಿಷಯಗಳು ಸೋರಿಕೆಯಾಗದಂತೆ ನೋಡಿಕೊಳ್ಳುವುದು ಹಾಗೂ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.</p>



<p class="wp-block-paragraph">ಕಳೆದ ವರ್ಷ NEET ಪರೀಕ್ಷಾ ಅಕ್ರಮಗಳ ಕುರಿತು ದೇಶವ್ಯಾಪಿ ವಿವಾದ ಸೃಷ್ಟಿಯಾಗಿದ್ದ ಹಿನ್ನೆಲೆ, ಈ ಬಾರಿ ಯಾವುದೇ ರೀತಿಯ ಲೋಪವಾಗದಂತೆ ಅಧಿಕಾರಿಗಳು ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.</p>



<p class="wp-block-paragraph"><strong>ಅಭ್ಯರ್ಥಿಗಳಿಗೆ WhatsApp ಮೂಲಕ NTA ಮಾಹಿತಿ : </strong>ಇದೇ ವೇಳೆ, National Testing Agency ಅಭ್ಯರ್ಥಿಗಳಿಗೆ ಅಧಿಕೃತ ಮಾಹಿತಿಯನ್ನು ತಲುಪಿಸಲು ಹೊಸ ವ್ಯವಸ್ಥೆ ಜಾರಿಗೆ ತಂದಿದೆ. NTA ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಪ್ರಕಟಣೆ ಹೊರಡಿಸಿ, NEET-UG 2026 ಮರುಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ WhatsApp ಚಾನೆಲ್ ಮೂಲಕ ಕಳುಹಿಸಲಾಗುವುದು ಎಂದು ತಿಳಿಸಿದೆ.</p>



<p class="wp-block-paragraph">ಅಧಿಕೃತ ಖಾತೆಯ ಗುರುತಿಗಾಗಿ ಪರಿಶೀಲಿತ (Verified) ಚಿಹ್ನೆ ಮತ್ತು &#8220;National Testing Agency&#8221; ಹೆಸರನ್ನು ಗಮನಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.</p>



<p class="wp-block-paragraph"><strong>ವಂಚಕರ ಬಗ್ಗೆ ಎಚ್ಚರಿಕೆ :</strong> NTA ಅಭ್ಯರ್ಥಿಗಳಿಗೆ ಮಹತ್ವದ ಎಚ್ಚರಿಕೆಯನ್ನೂ ನೀಡಿದೆ. ಯಾವುದೇ OTP, ವೈಯಕ್ತಿಕ ಮಾಹಿತಿ ಅಥವಾ ಹಣ ಪಾವತಿಸಲು NTA ಎಂದಿಗೂ ಕೇಳುವುದಿಲ್ಲ. ಪ್ರಶ್ನೆಪತ್ರಿಕೆ, ಉತ್ತರ ಕೀ ಅಥವಾ &#8220;ಲೀಕ್ ಆದ&#8221; ವಸ್ತುಗಳನ್ನು ಸಂಸ್ಥೆ ಕಳುಹಿಸುವುದಿಲ್ಲ.<br>ನೀಲಿ ಪರಿಶೀಲನಾ ಚಿಹ್ನೆ ಇಲ್ಲದ ಖಾತೆಗಳನ್ನು ನಂಬಬಾರದು. ಅನುಮಾನಾಸ್ಪದ ಸಂದೇಶಗಳು ಕಂಡುಬಂದರೆ ಸೈಬರ್ ಕ್ರೈಂ ಪೋರ್ಟಲ್ ಅಥವಾ ಸಹಾಯವಾಣಿ ಮೂಲಕ ದೂರು ನೀಡಬೇಕು ಎಂದು ತಿಳಿಸಿದೆ.</p>



<p class="wp-block-paragraph"><strong>ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ:</strong> NEET-UG ದೇಶದ ಅತ್ಯಂತ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಪರೀಕ್ಷೆ ಬರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಲು ಸರ್ಕಾರ ಹಾಗೂ ಪರೀಕ್ಷಾ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳು ಮಹತ್ವ ಪಡೆದಿವೆ. ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧಕ್ಕೂ ಇದೀಗ ನ್ಯಾಯಾಂಗದ ಬೆಂಬಲ ದೊರೆತಿರುವುದರಿಂದ, ಪರೀಕ್ಷೆಯನ್ನು ಯಾವುದೇ ಅಡಚಣೆಯಿಲ್ಲದೆ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.</p>



<p class="wp-block-paragraph"></p>
<p>The post <a href="https://samyuktakarnataka.in/news/india/delhi-high-court-upholds-telegram-ban-ahead-of-neet-ug-2026-retest/">Telegramಗೆ ಹೈಕೋರ್ಟ್ ಶಾಕ್: NEET ಪರೀಕ್ಷೆ ಮುಗಿಯುವವರೆಗೆ ಬ್ಯಾನ್!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>NEP ವಿರುದ್ಧ ಗುಡುಗು: ತ್ರಿಭಾಷಾ ನೀತಿ ಒಪ್ಪಲ್ಲ ಎಂದ ರಾಜ್ಯಪಾಲ</title>
		<link>https://samyuktakarnataka.in/news/india/https-samyuktakarnataka-in-news-india-neet-aspirant-suicide-in-coimbatore-sparks-fresh-debate-on-exam-system/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 18 Jun 2026 07:17:22 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#TamilNadu]]></category>
		<category><![CDATA[#TamilNaduCM]]></category>
		<category><![CDATA[#TamilNaduPolitics]]></category>
		<category><![CDATA[NEET scam]]></category>
		<guid isPermaLink="false">https://samyuktakarnataka.in/?p=100874</guid>

					<description><![CDATA[<p>ಕೇಂದ್ರದ ಶಿಕ್ಷಣ ನೀತಿ ವಿರುದ್ಧ ತಮಿಳುನಾಡಿನ ಸಮರ ಮುಂದುವರಿಕೆ, ₹3,458 ಕೋಟಿ ಅನುದಾನ ತಡೆ ಪ್ರಶ್ನೆ: ಕೇಂದ್ರದ ವಿರುದ್ಧ ತಮಿಳುನಾಡು ಸರ್ಕಾರದ ಆಕ್ರೋಶ. ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಶಾಶ್ವತ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರದ ಒತ್ತಾಯ ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020, ತ್ರಿಭಾಷಾ ಸೂತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರದ ಹಸ್ತಕ್ಷೇಪದ ವಿರುದ್ಧ ತಮಿಳುನಾಡು ಸರ್ಕಾರ ಮತ್ತೊಮ್ಮೆ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. 17ನೇ ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಅವರು [&#8230;]</p>
<p>The post <a href="https://samyuktakarnataka.in/news/india/https-samyuktakarnataka-in-news-india-neet-aspirant-suicide-in-coimbatore-sparks-fresh-debate-on-exam-system/">NEP ವಿರುದ್ಧ ಗುಡುಗು: ತ್ರಿಭಾಷಾ ನೀತಿ ಒಪ್ಪಲ್ಲ ಎಂದ ರಾಜ್ಯಪಾಲ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಕೇಂದ್ರದ ಶಿಕ್ಷಣ ನೀತಿ ವಿರುದ್ಧ ತಮಿಳುನಾಡಿನ ಸಮರ ಮುಂದುವರಿಕೆ, ₹3,458 ಕೋಟಿ ಅನುದಾನ ತಡೆ ಪ್ರಶ್ನೆ: ಕೇಂದ್ರದ ವಿರುದ್ಧ ತಮಿಳುನಾಡು ಸರ್ಕಾರದ ಆಕ್ರೋಶ. ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಶಾಶ್ವತ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರದ ಒತ್ತಾಯ</strong></p>



<p class="wp-block-paragraph">ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020, ತ್ರಿಭಾಷಾ ಸೂತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರದ ಹಸ್ತಕ್ಷೇಪದ ವಿರುದ್ಧ ತಮಿಳುನಾಡು ಸರ್ಕಾರ ಮತ್ತೊಮ್ಮೆ ತನ್ನ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. 17ನೇ ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಅವರು ಮಾಡಿದ ಭಾಷಣದಲ್ಲಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ತಮಿಳು ಮತ್ತು ಇಂಗ್ಲಿಷ್ ಒಳಗೊಂಡಿರುವ ದ್ವಿಭಾಷಾ ನೀತಿಯನ್ನು ಮುಂದುವರಿಸಲಿದೆ ಎಂದು ಘೋಷಿಸಿದರು.</p>



<p class="wp-block-paragraph">ರಾಜ್ಯದ ಭಾಷಾ ಮತ್ತು ಶಿಕ್ಷಣ ನೀತಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸಂದೇಶವನ್ನು ಸರ್ಕಾರ ಈ ಮೂಲಕ ನೀಡಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/neet-aspirant-suicide-in-coimbatore-sparks-fresh-debate-on-exam-system/" type="link" id="https://samyuktakarnataka.in/news/india/neet-aspirant-suicide-in-coimbatore-sparks-fresh-debate-on-exam-system/">NEET ಆಕಾಂಕ್ಷಿ ಆತ್ಮಹತ್ಯೆ: ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ</a></strong></p>



<p class="wp-block-paragraph"><strong>ದ್ವಿಭಾಷಾ ನೀತಿಯೇ ತಮಿಳುನಾಡಿನ ಅಧಿಕೃತ ನಿಲುವು: </strong>ರಾಜ್ಯಪಾಲರು ತಮ್ಮ ಭಾಷಣದಲ್ಲಿ 1968ರಲ್ಲಿ ಅಂದಿನ ಮುಖ್ಯಮಂತ್ರಿ ಪೆರರಿಗ್ನರ್ ಅಣ್ಣಾ ನೇತೃತ್ವದ ಸರ್ಕಾರ ಅಂಗೀಕರಿಸಿದ್ದ ನಿರ್ಣಯವನ್ನು ಉಲ್ಲೇಖಿಸಿದರು. ಆ ನಿರ್ಣಯದಂತೆ ತ್ರಿಭಾಷಾ ಸೂತ್ರವನ್ನು ಕೈಬಿಟ್ಟು ತಮಿಳು ಮತ್ತು ಇಂಗ್ಲಿಷ್ ಮಾತ್ರ ಕಲಿಸುವ ದ್ವಿಭಾಷಾ ನೀತಿಯನ್ನು ತಮಿಳುನಾಡು ಅಳವಡಿಸಿಕೊಂಡಿತ್ತು. ಆ ನೀತಿಯನ್ನು ಜನತೆ ಸ್ವೀಕರಿಸಿರುವ ಕಾರಣ ಇಂದಿಗೂ ಅದನ್ನೇ ಮುಂದುವರಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.</p>



<p class="wp-block-paragraph"><strong>NEP 2020ಗೆ ತೀವ್ರ ವಿರೋಧ : </strong>ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ತಮಿಳುನಾಡು ಸರ್ಕಾರ ಬಲವಾಗಿ ವಿರೋಧಿಸುತ್ತಿದ್ದು, ಅದರಲ್ಲಿರುವ ತ್ರಿಭಾಷಾ ಸೂತ್ರ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಸಮಗ್ರ ಶಿಕ್ಷಾ ಅಭಿಯಾನದಡಿ ರಾಜ್ಯಕ್ಕೆ ಬಾಕಿ ಇರುವ ₹3,458 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ತ್ರಿಭಾಷಾ ಸೂತ್ರ ಜಾರಿಗೆ ಷರತ್ತು ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸಿದೆ. ರಾಜ್ಯಪಾಲರ ಪ್ರಕಾರ, ಶಿಕ್ಷಣ ಕ್ಷೇತ್ರದ ಅನುದಾನವನ್ನು ಭಾಷಾ ನೀತಿಯೊಂದಿಗೆ ಜೋಡಿಸುವುದು ಸ್ವೀಕಾರಾರ್ಹವಲ್ಲ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/karnataka-legislative-council-election-seventh-seat-congress-jds-battle/">ವಿಧಾನ ಪರಿಷತ್ ಚುನಾವಣೆ: 7ನೇ ಸ್ಥಾನಕ್ಕೆ ಕಾಂಗ್ರೆಸ್-JDS ನಡುವೆ ತೀವ್ರ ಪೈಪೋಟಿ</a></strong></p>



<p class="wp-block-paragraph"><strong>ಕೇಂದ್ರದ ವಿರುದ್ಧ ಅನುದಾನ ತಡೆ ಆರೋಪ :</strong> ತಮಿಳುನಾಡು ಸರ್ಕಾರದ ವಾದದಂತೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಒತ್ತಡ ಹೇರುವ ಉದ್ದೇಶದಿಂದ ಸಮಗ್ರ ಶಿಕ್ಷಾ ಅಭಿಯಾನದ ನಿಧಿಯನ್ನು ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಿ ರಾಜ್ಯಕ್ಕೆ ಬಾಕಿ ಇರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸರ್ಕಾರ ಒತ್ತಾಯಿಸಿದೆ.</p>



<p class="wp-block-paragraph"><strong>ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸಲು ಆಗ್ರಹ :</strong> ರಾಜ್ಯಪಾಲರು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಬೇಡಿಕೆಯೊಂದನ್ನು ಮುಂದಿಟ್ಟರು. ಶಿಕ್ಷಣ ವಿಷಯವು ಸಂವಿಧಾನದ ಸಮವರ್ತಿ (Concurrent) ಪಟ್ಟಿಯಲ್ಲಿರುವುದರಿಂದಲೇ ನೀಟ್, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ಸೂತ್ರದಂತಹ ವಿವಾದಗಳು ಉದ್ಭವಿಸುತ್ತಿವೆ ಎಂದು ಅವರು ಹೇಳಿದರು. ಹೀಗಾಗಿ ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ ತೆಗೆದು ರಾಜ್ಯ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/karnataka-legislative-council-election-34-percent-voting-till-11am/">7ನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡುವೆ 77 ಶಾಸಕರು ಮತ ಚಲಾವಣೆ</a></strong></p>



<p class="wp-block-paragraph"><strong>ತಮಿಳು ಭಾಷೆ ಸಂರಕ್ಷಣೆಗೆ ಆದ್ಯತೆ :</strong> ತಮಿಳು ಭಾಷೆಯ ರಕ್ಷಣೆ ಮತ್ತು ಅಭಿವೃದ್ಧಿಯನ್ನು ಸರ್ಕಾರದ ‘ವೆಟ್ರಿ ತಮಿಳಗಂ’ ದೃಷ್ಟಿಪತ್ರದ ಪ್ರಮುಖ ಅಂಶವೆಂದು ರಾಜ್ಯಪಾಲರು ವಿವರಿಸಿದರು. ತಮಿಳು ಭಾಷೆಯ ಸ್ಥಾನಮಾನ, ಬಳಕೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.</p>



<p class="wp-block-paragraph"><strong>ನ್ಯಾಯಾಂಗ ಕ್ಷೇತ್ರಕ್ಕೂ ಬೇಡಿಕೆ :</strong> ಕೇಂದ್ರ ಸರ್ಕಾರದ ಮುಂದೆ ತಮಿಳುನಾಡು ಸರ್ಕಾರ ಎರಡು ಪ್ರಮುಖ ನ್ಯಾಯಾಂಗ ಸಂಬಂಧಿತ ಬೇಡಿಕೆಗಳನ್ನು ಇಟ್ಟಿದೆ. ಮದ್ರಾಸ್ ಹೈಕೋರ್ಟ್ ಹಾಗೂ ಮಧುರೈ ಪೀಠದಲ್ಲಿ ತಮಿಳು ಭಾಷೆಯನ್ನು ವಾದ ಭಾಷೆಯಾಗಿ ಅನುಮತಿಸುವುದು.<br>ದಕ್ಷಿಣ ಭಾರತದ ಜನರಿಗೆ ಸುಲಭ ನ್ಯಾಯಾಂಗ ಪ್ರವೇಶ ಕಲ್ಪಿಸಲು ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ನ ಶಾಶ್ವತ ಪೀಠ ಸ್ಥಾಪಿಸುವುದು. ಈ ಬೇಡಿಕೆಗಳು ದೀರ್ಘಕಾಲದಿಂದ ಕೇಳಿಬರುತ್ತಿದ್ದು, ಮತ್ತೆ ಸರ್ಕಾರದ ಅಧಿಕೃತ ನಿಲುವಾಗಿ ಪ್ರಸ್ತಾಪಗೊಂಡಿವೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/iit-delhi-tops-india-in-qs-world-university-rankings-2027/">QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ</a></strong></p>



<p class="wp-block-paragraph"><strong>ಆರ್ಥಿಕ ಶ್ವೇತಪತ್ರದ ಮೇಲೂ ರಾಜಕೀಯ ವಾಗ್ವಾದ :</strong> ಇದರ ನಡುವೆ ತಮಿಳುನಾಡಿನ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಬಿಡುಗಡೆಗೊಂಡಿರುವ ಶ್ವೇತಪತ್ರವೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್, ಶ್ವೇತಪತ್ರ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದು, ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಮರ್ಪಕ ಹಣಕಾಸು ನೆರವು ನೀಡದಿರುವ ವಿಷಯವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಟೀಕಿಸಿದ್ದಾರೆ.</p>



<p class="wp-block-paragraph">ಮತ್ತೊಂದೆಡೆ ಹಣಕಾಸು ಸಚಿವೆ ಮೇರಿ ವಿಲ್ಸನ್, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು &#8220;ಮಾನವ ನಿರ್ಮಿತ ವಿಪತ್ತು&#8221; ಎಂದು ಬಣ್ಣಿಸಿದ್ದು, ಹಿಂದಿನ ಆಡಳಿತದ ವೈಫಲ್ಯ ಮತ್ತು ಭ್ರಷ್ಟಾಚಾರದಿಂದ ಸಮಸ್ಯೆಗಳು ಉಂಟಾಗಿವೆ ಎಂದು ಆರೋಪಿಸಿದ್ದಾರೆ. ಆದರೆ ಪ್ರಸ್ತುತ ಸರ್ಕಾರದ ಜನಪರ ಯೋಜನೆಗಳು ಮುಂದುವರಿಯಲಿವೆ ಎಂದು ಭರವಸೆ ನೀಡಿದ್ದಾರೆ.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/column/samyukta-karnataka-paper-june-17th-column-by-mohan-hegde/">ಅಂಕಣ ಬರಹ: ಲಂಚ ನಿರ್ಮೂಲನೆ ‘…ಬಾಯಲ್ಲಿ’ನ ಮಾತಾಗದಿರಲಿ!</a></strong></strong></p>



<p class="wp-block-paragraph"><strong>ರಾಜಕೀಯ ಮಹತ್ವ ಪಡೆದ ಶಿಕ್ಷಣ ನೀತಿ : </strong>ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ, ನೀಟ್ ಹಾಗೂ ತ್ರಿಭಾಷಾ ಸೂತ್ರದ ವಿಚಾರಗಳು ಕೇವಲ ಶಿಕ್ಷಣದ ವಿಷಯಗಳಾಗಿಯೇ ಉಳಿಯದೆ, ಭಾಷಾ ಅಸ್ಮಿತೆ ಮತ್ತು ರಾಜ್ಯ ಹಕ್ಕುಗಳ ಪ್ರಶ್ನೆಯಾಗಿಯೂ ರೂಪುಗೊಂಡಿವೆ. ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ ವ್ಯಕ್ತವಾದ ಈ ನಿಲುವು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಶಿಕ್ಷಣ ನೀತಿ ಕುರಿತ ಚರ್ಚೆಯನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="PbGjYpfxfN"><a href="https://samyuktakarnataka.in/news/india/neet-aspirant-suicide-in-coimbatore-sparks-fresh-debate-on-exam-system/">NEET ಆಕಾಂಕ್ಷಿ ಆತ್ಮಹತ್ಯೆ: ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“NEET ಆಕಾಂಕ್ಷಿ ಆತ್ಮಹತ್ಯೆ: ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ” — Samyukta Karnataka" src="https://samyuktakarnataka.in/news/india/neet-aspirant-suicide-in-coimbatore-sparks-fresh-debate-on-exam-system/embed/#?secret=FqxPK0xhb4#?secret=PbGjYpfxfN" data-secret="PbGjYpfxfN" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/https-samyuktakarnataka-in-news-india-neet-aspirant-suicide-in-coimbatore-sparks-fresh-debate-on-exam-system/">NEP ವಿರುದ್ಧ ಗುಡುಗು: ತ್ರಿಭಾಷಾ ನೀತಿ ಒಪ್ಪಲ್ಲ ಎಂದ ರಾಜ್ಯಪಾಲ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>NEET ಆಕಾಂಕ್ಷಿ ಆತ್ಮಹತ್ಯೆ: ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ</title>
		<link>https://samyuktakarnataka.in/news/india/neet-aspirant-suicide-in-coimbatore-sparks-fresh-debate-on-exam-system/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 18 Jun 2026 06:53:06 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#HigherEducationIndia]]></category>
		<category><![CDATA[#TamilNadu]]></category>
		<category><![CDATA[NEET]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<guid isPermaLink="false">https://samyuktakarnataka.in/?p=100871</guid>

					<description><![CDATA[<p>ಕೊಯಮತ್ತೂರಿನಲ್ಲಿ ನೀಟ್ ಅಭ್ಯರ್ಥಿಯ ದಾರುಣ ಅಂತ್ಯ; ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ 19 ವರ್ಷದ ನೀಟ್ (NEET) ಆಕಾಂಕ್ಷಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ವಿರುದ್ಧದ ಚರ್ಚೆ ಮತ್ತೊಮ್ಮೆ ತೀವ್ರಗೊಂಡಿದ್ದು, ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಮೃತ ವಿದ್ಯಾರ್ಥಿನಿಯನ್ನು ಅನುಕೀರ್ತನಾ (19) ಎಂದು ಗುರುತಿಸಲಾಗಿದೆ. ವೈದ್ಯಕೀಯ ಶಿಕ್ಷಣ ಪ್ರವೇಶದ ಕನಸನ್ನು ಹೊತ್ತಿದ್ದ ಅನುಕೀರ್ತನಾ ಈಗಾಗಲೇ [&#8230;]</p>
<p>The post <a href="https://samyuktakarnataka.in/news/india/neet-aspirant-suicide-in-coimbatore-sparks-fresh-debate-on-exam-system/">NEET ಆಕಾಂಕ್ಷಿ ಆತ್ಮಹತ್ಯೆ: ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಕೊಯಮತ್ತೂರಿನಲ್ಲಿ ನೀಟ್ ಅಭ್ಯರ್ಥಿಯ ದಾರುಣ ಅಂತ್ಯ; ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ</strong></p>



<p class="wp-block-paragraph">ಚೆನ್ನೈ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ 19 ವರ್ಷದ ನೀಟ್ (NEET) ಆಕಾಂಕ್ಷಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ವಿರುದ್ಧದ ಚರ್ಚೆ ಮತ್ತೊಮ್ಮೆ ತೀವ್ರಗೊಂಡಿದ್ದು, ಪರೀಕ್ಷಾ ವ್ಯವಸ್ಥೆಯನ್ನು ರದ್ದುಗೊಳಿಸಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.</p>



<p class="wp-block-paragraph">ಮೃತ ವಿದ್ಯಾರ್ಥಿನಿಯನ್ನು ಅನುಕೀರ್ತನಾ (19) ಎಂದು ಗುರುತಿಸಲಾಗಿದೆ. ವೈದ್ಯಕೀಯ ಶಿಕ್ಷಣ ಪ್ರವೇಶದ ಕನಸನ್ನು ಹೊತ್ತಿದ್ದ ಅನುಕೀರ್ತನಾ ಈಗಾಗಲೇ ಎರಡು ಬಾರಿ ನೀಟ್ ಪರೀಕ್ಷೆ ಬರೆದಿದ್ದಳು. ಈ ಬಾರಿ ಮತ್ತೊಮ್ಮೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/karnataka-legislative-council-election-seventh-seat-congress-jds-battle/">ವಿಧಾನ ಪರಿಷತ್ ಚುನಾವಣೆ: 7ನೇ ಸ್ಥಾನಕ್ಕೆ ಕಾಂಗ್ರೆಸ್-JDS ನಡುವೆ ತೀವ್ರ ಪೈಪೋಟಿ</a></strong></p>



<p class="wp-block-paragraph"><strong>ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮಾನಸಿಕ ಒತ್ತಡ? :</strong> ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇತ್ತೀಚೆಗೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಅನುಕೀರ್ತನಾ ಮಾನಸಿಕವಾಗಿ ತೀವ್ರ ಕುಗ್ಗಿದ್ದಳು ಎನ್ನಲಾಗಿದೆ. ಆದರೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ತರಬೇತಿ ಕೇಂದ್ರದವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.</p>



<p class="wp-block-paragraph"><strong>ಪ್ರತಿಭಟನೆಗೆ ಕಾರಣವಾದ ಘಟನೆ : </strong>ಅನುಕೀರ್ತನಾ ಸಾವಿನ ಸುದ್ದಿ ಹೊರಬಿದ್ದ ತಕ್ಷಣ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಹಲವು ಕಡೆ ಪ್ರತಿಭಟನೆಗಳು ನಡೆದಿದ್ದು, ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ತಮಿಳುನಾಡಿನಲ್ಲಿ ನೀಟ್ ವಿರುದ್ಧ ಈಗಾಗಲೇ ಬಲವಾದ ರಾಜಕೀಯ ಮತ್ತು ಸಾಮಾಜಿಕ ವಿರೋಧವಿರುವ ಹಿನ್ನೆಲೆಯಲ್ಲಿ ಈ ಘಟನೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/karnataka-legislative-council-election-34-percent-voting-till-11am/" type="link" id="https://samyuktakarnataka.in/news/karnataka/karnataka-legislative-council-election-34-percent-voting-till-11am/">7ನೇ ಸ್ಥಾನಕ್ಕೆ ತೀವ್ರ ಪೈಪೋಟಿ ನಡುವೆ 77 ಶಾಸಕರು ಮತ ಚಲಾವಣೆ</a></strong></p>



<p class="wp-block-paragraph"><strong>ಡಿಎಂಕೆಯ ಪುನರಾಗ್ರಹ : </strong>ವಿದ್ಯಾರ್ಥಿನಿಯ ಸಾವಿನ ಹಿನ್ನೆಲೆಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷ ಮತ್ತೆ ನೀಟ್ ವಿರುದ್ಧ ಧ್ವನಿ ಎತ್ತಿದೆ. ತಮಿಳುನಾಡಿಗೆ ನೀಟ್‌ನಿಂದ ಶಾಶ್ವತ ವಿನಾಯಿತಿ ನೀಡಬೇಕು ಎಂದು ಪಕ್ಷ ಪುನರುಚ್ಚರಿಸಿದೆ. ರಾಜ್ಯ ಸರ್ಕಾರ ಈ ಹಿಂದೆ ನೀಟ್ ವಿನಾಯಿತಿಗೆ ಸಂಬಂಧಿಸಿದ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತ್ತು. ಆದರೆ ಆ ಮಸೂದೆ ರಾಷ್ಟ್ರಪತಿಯ ಅನುಮೋದನೆ ಪಡೆಯದ ಕಾರಣ ಜಾರಿಗೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಡಿಎಂಕೆ ಘೋಷಿಸಿದೆ.</p>



<p class="wp-block-paragraph"><strong>ನೀಟ್ ವಿರುದ್ಧ ತಮಿಳುನಾಡಿನ ವಾದವೇನು? :</strong> ತಮಿಳುನಾಡು ನೀಟ್ ಪರೀಕ್ಷೆ ಜಾರಿಯಾದ ದಿನದಿಂದಲೇ ಅದನ್ನು ವಿರೋಧಿಸುತ್ತಾ ಬಂದಿದೆ. ರಾಜ್ಯ ಸರ್ಕಾರ ಮತ್ತು ಡಿಎಂಕೆ ಸೇರಿದಂತೆ ಹಲವು ಸಂಘಟನೆಗಳ ಅಭಿಪ್ರಾಯದ ಪ್ರಕಾರ, ದುಬಾರಿ ಖಾಸಗಿ ತರಬೇತಿ ಪಡೆಯಲು ಆರ್ಥಿಕವಾಗಿ ಸಬಲ ವಿದ್ಯಾರ್ಥಿಗಳಿಗೆ ಮಾತ್ರ ಹೆಚ್ಚಿನ ಅವಕಾಶ ಸಿಗುತ್ತದೆ. ಗ್ರಾಮೀಣ ಪ್ರದೇಶಗಳು ಮತ್ತು ಬಡ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಣದಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೂ ನೀಟ್ ಪರೀಕ್ಷೆಯಲ್ಲಿ ಸ್ಪರ್ಧಿಸಲು ಕಷ್ಟಪಡುತ್ತಿದ್ದಾರೆ ಎಂಬುದು ಅವರ ವಾದವಾಗಿದೆ. ಹನ್ನೆರಡನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ನೀಡುತ್ತಿದ್ದ ಹಳೆಯ ವ್ಯವಸ್ಥೆಯೇ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಅನುಕೂಲಕರವಾಗಿತ್ತು ಎಂದು ತಮಿಳುನಾಡು ನಿರಂತರವಾಗಿ ಪ್ರತಿಪಾದಿಸುತ್ತಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/iit-delhi-tops-india-in-qs-world-university-rankings-2027/">QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ</a></strong></p>



<p class="wp-block-paragraph"><strong>ನೀಟ್ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ :</strong> ಇತ್ತೀಚಿನ ವರ್ಷಗಳಲ್ಲಿ ನೀಟ್ ಪರೀಕ್ಷೆ ಪಾರದರ್ಶಕತೆ, ಪ್ರಶ್ನೆಪತ್ರಿಕೆ ಸೋರಿಕೆ, ಕೋಚಿಂಗ್ ಕೇಂದ್ರಗಳ ಪ್ರಭಾವ ಹಾಗೂ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡದಂತಹ ವಿಷಯಗಳಿಂದ ಹಲವು ಬಾರಿ ವಿವಾದಕ್ಕೆ ಒಳಗಾಗಿದೆ. ಒಂದೆಡೆ ದೇಶಾದ್ಯಂತ ವೈದ್ಯಕೀಯ ಪ್ರವೇಶಕ್ಕೆ ಏಕೀಕೃತ ಮಾನದಂಡ ಅಗತ್ಯ ಎಂದು ಕೇಂದ್ರ ಸರ್ಕಾರ ಮತ್ತು ಬೆಂಬಲಿಗರು ವಾದಿಸುತ್ತಿದ್ದರೆ, ಮತ್ತೊಂದೆಡೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಇದು ಹೆಚ್ಚಿಸುತ್ತದೆ ಎಂದು ವಿರೋಧಿಗಳು ಆರೋಪಿಸುತ್ತಿದ್ದಾರೆ.</p>



<p class="wp-block-paragraph"><strong>ರಾಜ್ಯ ರಾಜಕೀಯದಲ್ಲಿ ಮತ್ತೆ ನೀಟ್ ಚರ್ಚೆ : </strong>ಈ ಘಟನೆ ಕೇವಲ ಒಂದು ದುರಂತ ಘಟನೆಯಾಗಿ ಉಳಿಯದೆ, ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ಕುರಿತ ರಾಜಕೀಯ ಮತ್ತು ಸಾಮಾಜಿಕ ಚರ್ಚೆಯನ್ನು ಮತ್ತೆ ಕೇಂದ್ರಬಿಂದುವಿಗೆ ತಂದಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳ ಹೋರಾಟದಿಂದ ನೀಟ್ ವಿಚಾರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/column/samyukta-karnataka-paper-june-17th-column-by-mohan-hegde/">ಅಂಕಣ ಬರಹ: ಲಂಚ ನಿರ್ಮೂಲನೆ ‘…ಬಾಯಲ್ಲಿ’ನ ಮಾತಾಗದಿರಲಿ!</a></strong></strong></p>



<p class="wp-block-paragraph"><strong>ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.</strong></p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="7WCjk7h2Jz"><a href="https://samyuktakarnataka.in/news/india/iit-delhi-tops-india-in-qs-world-university-rankings-2027/">QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“QS Rankings: ಭಾರತದ ನಂ.1 ವಿಶ್ವವಿದ್ಯಾಲಯವಾಗಿ IIT-ದೆಹಲಿ” — Samyukta Karnataka" src="https://samyuktakarnataka.in/news/india/iit-delhi-tops-india-in-qs-world-university-rankings-2027/embed/#?secret=Y88BZU1gw7#?secret=7WCjk7h2Jz" data-secret="7WCjk7h2Jz" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/neet-aspirant-suicide-in-coimbatore-sparks-fresh-debate-on-exam-system/">NEET ಆಕಾಂಕ್ಷಿ ಆತ್ಮಹತ್ಯೆ: ಪರೀಕ್ಷಾ ವ್ಯವಸ್ಥೆ ವಿರುದ್ಧ ಆಕ್ರೋಶ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ</title>
		<link>https://samyuktakarnataka.in/news/india/rahul-gandhi-launches-chatron-ki-goonj-campaign-against-neet-paper-leak-kota/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 17 Jun 2026 11:35:26 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#RahulGandhi]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<guid isPermaLink="false">https://samyuktakarnataka.in/?p=100824</guid>

					<description><![CDATA[<p>ಪರೀಕ್ಷಾ ಅಕ್ರಮಗಳ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ; ಕೋಟಾದಿಂದ ರಾಹುಲ್ ರ‍್ಯಾಲಿ ಕೋಟಾ (ರಾಜಸ್ಥಾನ): ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟಕ್ಕೆ ಚಾಲನೆ ನೀಡಿದೆ. ಈ ಅಭಿಯಾನದ ಭಾಗವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ರಾಜಸ್ಥಾನದ ಕೋಟಾದಲ್ಲಿ ‘ಛಾತ್ರೋನ್ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಹೆಸರಿನ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ದೇಶದ ಪ್ರಮುಖ ಕೋಚಿಂಗ್ [&#8230;]</p>
<p>The post <a href="https://samyuktakarnataka.in/news/india/rahul-gandhi-launches-chatron-ki-goonj-campaign-against-neet-paper-leak-kota/">ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಪರೀಕ್ಷಾ ಅಕ್ರಮಗಳ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ; ಕೋಟಾದಿಂದ ರಾಹುಲ್ ರ‍್ಯಾಲಿ</strong></p>



<p class="wp-block-paragraph">ಕೋಟಾ (ರಾಜಸ್ಥಾನ): ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟಕ್ಕೆ ಚಾಲನೆ ನೀಡಿದೆ. ಈ ಅಭಿಯಾನದ ಭಾಗವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ರಾಜಸ್ಥಾನದ ಕೋಟಾದಲ್ಲಿ ‘ಛಾತ್ರೋನ್ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಹೆಸರಿನ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.</p>



<p class="wp-block-paragraph">ದೇಶದ ಪ್ರಮುಖ ಕೋಚಿಂಗ್ ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಂಡಿರುವ ಕೋಟಾದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ನೀಟ್-ಯುಜಿ ಪರೀಕ್ಷೆ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ಮರುಪರೀಕ್ಷೆ ವಿವಾದ ಹಾಗೂ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಕೇಂದ್ರಬಿಂದುವಾಗಿಸಿಕೊಂಡಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ತಜ್ಞರ ಆತಂಕಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಸ್ತಾಪಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/tahsildar-grade-2-officers-promoted-to-grade-1-karnataka-government/" type="link" id="https://samyuktakarnataka.in/news/karnataka/tahsildar-grade-2-officers-promoted-to-grade-1-karnataka-government/">232 ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳಿಗೆ ಮುಂಬಡ್ತಿ</a></strong></p>



<p class="wp-block-paragraph"><strong>‘ಉಮೇಶ್ ಮತ್ತು ರಿಯಾ’ ನೆನೆದ ರಾಹುಲ್ : </strong>ರ‍್ಯಾಲಿಗೆ ತೆರಳುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ರಾಹುಲ್ ಗಾಂಧಿ, “ನಾನು ಕೋಟಾಕ್ಕೆ ತೆರಳುತ್ತಿದ್ದೇನೆ. ಆದರೆ ನನ್ನ ಹೃದಯದಲ್ಲಿ ಎರಡು ಹೆಸರುಗಳು ಗುಂಜಿಸುತ್ತಿವೆ — ಉಮೇಶ್ ಮತ್ತು ರಿಯಾ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.</p>



<p class="wp-block-paragraph">ಅವರ ಪ್ರಕಾರ, ಸೀಕರ್‌ನ ಉಮೇಶ್ ಮತ್ತು ದೇಹ್ರಾಡೂನ್‌ನ ರಿಯಾ ಎಂಬ ಇಬ್ಬರು ಯುವಕರು ಮರು ನೀಟ್ (Re-NEET) ಪರೀಕ್ಷೆಯ ಒತ್ತಡದ ನಡುವೆ ಸಾವನ್ನಪ್ಪಿದ್ದಾರೆ. 22 ಮತ್ತು 23 ವರ್ಷದ ಈ ವಿದ್ಯಾರ್ಥಿಗಳು ತಮ್ಮ ಕನಸುಗಳ ಭವಿಷ್ಯವನ್ನು ಕಟ್ಟಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಶಿಕ್ಷಣ ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/neet-aspirant-riya-kumari-suicide-dehradun-exam-pressure-paper-leak-controversy/">NEET ಮರುಪರೀಕ್ಷೆಗೂ ಮುನ್ನ ಅಭ್ಯರ್ಥಿ ರಿಯಾ ಕುಮಾರಿ ಆತ್ಮಹತ್ಯೆ</a></strong></strong></p>



<p class="wp-block-paragraph">ರಾಹುಲ್ ಗಾಂಧಿ, “ಈ ಸಾವುಗಳು ಕೇವಲ ವೈಯಕ್ತಿಕ ದುರಂತಗಳಲ್ಲ. ಇದು ಒಡೆದುಹೋಗಿರುವ ಮತ್ತು ಭ್ರಷ್ಟಾಚಾರದಿಂದ ಕೂಡಿದ ಶಿಕ್ಷಣ ವ್ಯವಸ್ಥೆಯ ಪರಿಣಾಮವಾಗಿದೆ” ಎಂದು ಹೇಳಿದ್ದಾರೆ.</p>



<p class="wp-block-paragraph"><strong>ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ :</strong> ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.</p>



<p class="wp-block-paragraph">“ವಿದ್ಯಾರ್ಥಿಗಳನ್ನು ರಕ್ಷಿಸುವ ಬದಲು, ನಿರಂತರವಾಗಿ ನಡೆಯುತ್ತಿರುವ ಪೇಪರ್ ಲೀಕ್‌ಗಳು, ಪರೀಕ್ಷಾ ಅವ್ಯವಸ್ಥೆ ಮತ್ತು ಭವಿಷ್ಯ ಹಾಳು ಮಾಡುವ ವ್ಯವಸ್ಥೆಗೆ ಸರ್ಕಾರ ಆಶ್ರಯ ನೀಡುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.</p>



<p class="wp-block-paragraph"><strong>ನೀಟ್ ವಿವಾದ ಮತ್ತೆ ಚರ್ಚೆಗೆ : </strong>ಕಾಂಗ್ರೆಸ್ ಪ್ರಕಾರ, ನೀಟ್-ಯುಜಿ 2026 ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದಿದ್ದು, ಸೋರಿಕೆಯಾದ ಪ್ರಶ್ನೆಗಳು ನೂರಕ್ಕೂ ಹೆಚ್ಚು ಪ್ರಶ್ನೆಗಳೊಂದಿಗೆ ಹೊಂದಿಕೆಯಾಗಿದ್ದವು ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಮರುಪರೀಕ್ಷೆ, ಬಂಧನಗಳು ಹಾಗೂ ತನಿಖೆಗಳ ವಿಚಾರ ದೇಶದಾದ್ಯಂತ ಚರ್ಚೆಗೆ ಕಾರಣವಾಗಿತ್ತು.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/international/modi-meloni-melodi-moment-g7-summit-paris-social-media-buzz/">G7 ಸಭೆಯಲ್ಲಿ ಮೆಲೋಡಿ ಜೋಡಿ: ಮೋದಿ–ಮೆಲೋನಿ ಭೇಟಿಯ Video ವೈರಲ್</a></strong></p>



<p class="wp-block-paragraph">ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ಹಲವು ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಭದ್ರತೆ ಕುರಿತು ಪ್ರಶ್ನೆಗಳು ಮೂಡಿದ್ದವು. ಇದೇ ವಿಚಾರವನ್ನು ಕಾಂಗ್ರೆಸ್ ತನ್ನ ಅಭಿಯಾನದ ಪ್ರಮುಖ ಅಂಶವಾಗಿ ಮುಂದಿಟ್ಟಿದೆ.</p>



<p class="wp-block-paragraph"><strong>ಕೋಟಾದ ವಿದ್ಯಾರ್ಥಿಗಳ ಸಂಕಷ್ಟ : </strong>ಕೋಟಾ ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಕೇಂದ್ರವಾಗಿದ್ದು, ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಭಾರೀ ಆರ್ಥಿಕ ಹೊರೆ ಹೊರುತ್ತಿದ್ದಾರೆ.</p>



<p class="wp-block-paragraph">ಕಾಂಗ್ರೆಸ್ ನಾಯಕರು ಹೇಳುವಂತೆ, ಕೆಲವು ಕುಟುಂಬಗಳು ತಮ್ಮ ಆದಾಯದ ಗಣನೀಯ ಭಾಗವನ್ನು ಕೋಚಿಂಗ್ ಶುಲ್ಕಕ್ಕಾಗಿ ವೆಚ್ಚ ಮಾಡುತ್ತಿದ್ದು, ಪರೀಕ್ಷಾ ಅಕ್ರಮಗಳು ಮತ್ತು ವ್ಯವಸ್ಥೆಯ ಮೇಲಿನ ವಿಶ್ವಾಸದ ಕೊರತೆ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/davanagere/ss-mallikarjun-confidence-on-congress-mlc-election-victory-davanagere/">ಪರಿಷತ್ ಚುನಾವಣೆಗೆ ಕಾಂಗ್ರೆಸ್ ಸಜ್ಜು: 5 ಸ್ಥಾನಗಳಲ್ಲಿ ಗೆಲುವ ವಿಶ್ವಾಸ</a></strong></p>



<p class="wp-block-paragraph"><strong>ರಾಷ್ಟ್ರವ್ಯಾಪಿ ಹೋರಾಟದ ಘೋಷಣೆ :</strong> ‘ಛಾತ್ರೋನ್ ಕಿ ಗೂಂಜ್’ ಅಭಿಯಾನದ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಷ್ಟ್ರೀಯ ಚರ್ಚೆಯ ವಿಷಯವನ್ನಾಗಿಸಲು ಕಾಂಗ್ರೆಸ್ ಮುಂದಾಗಿದೆ. ಯಾವುದೇ ವಿದ್ಯಾರ್ಥಿಯ ಕನಸು ಪರೀಕ್ಷಾ ಅಕ್ರಮಗಳಿಂದ ನಾಶವಾಗಬಾರದು ಮತ್ತು ಯಾವುದೇ ಕುಟುಂಬವು ಇಂತಹ ನೋವನ್ನು ಅನುಭವಿಸಬಾರದು ಎಂಬ ಸಂದೇಶದೊಂದಿಗೆ ಈ ಹೋರಾಟ ಆರಂಭವಾಗಿದೆ.</p>



<p class="wp-block-paragraph">ಕೋಟಾದಿಂದ ಆರಂಭವಾಗಿರುವ ಈ ಅಭಿಯಾನ ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರತೆ ಒದಗಿಸುವುದು ಕಾಂಗ್ರೆಸ್‌ನ ಪ್ರಮುಖ ಬೇಡಿಕೆಗಳಾಗಿವೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="XriRl6aFum"><a href="https://samyuktakarnataka.in/districts/kalburgi/kalaburagi-psi-basavaraj-herur-found-dead-ganganagar-police-investigation/">ಮನೆಯಲ್ಲಿ ನೇಣು‌ ಬಿಗಿದುಕೊಂಡು PSI ಬಸವರಾಜ್ ಆತ್ಮಹತ್ಯೆ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“ಮನೆಯಲ್ಲಿ ನೇಣು‌ ಬಿಗಿದುಕೊಂಡು PSI ಬಸವರಾಜ್ ಆತ್ಮಹತ್ಯೆ” — Samyukta Karnataka" src="https://samyuktakarnataka.in/districts/kalburgi/kalaburagi-psi-basavaraj-herur-found-dead-ganganagar-police-investigation/embed/#?secret=uV0SujYLNh#?secret=XriRl6aFum" data-secret="XriRl6aFum" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/rahul-gandhi-launches-chatron-ki-goonj-campaign-against-neet-paper-leak-kota/">ನೀಟ್ ಪೇಪರ್ ಲೀಕ್ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಚಾಲನೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>NEET ಮರುಪರೀಕ್ಷೆಗೂ ಮುನ್ನ ಅಭ್ಯರ್ಥಿ ರಿಯಾ ಕುಮಾರಿ ಆತ್ಮಹತ್ಯೆ</title>
		<link>https://samyuktakarnataka.in/news/india/neet-aspirant-riya-kumari-suicide-dehradun-exam-pressure-paper-leak-controversy/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 17 Jun 2026 07:21:40 +0000</pubDate>
				<category><![CDATA[ದೇಶ]]></category>
		<category><![CDATA[#Death]]></category>
		<category><![CDATA[#education]]></category>
		<category><![CDATA[#HigherEducationIndia]]></category>
		<category><![CDATA[india]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<guid isPermaLink="false">https://samyuktakarnataka.in/?p=100795</guid>

					<description><![CDATA[<p>2026ರಲ್ಲಿ ನೀಟ್‌ಗೆ ಸಂಬಂಧಿಸಿದ ಆತ್ಮಹತ್ಯೆಗಳ ಸಂಖ್ಯೆ ಏರಿಕೆ; ಮತ್ತೊಬ್ಬ ವಿದ್ಯಾರ್ಥಿನಿ ಬಲಿ ಡೆಹ್ರಾಡೂನ್: ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿದ್ದ ನೀಟ್ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ವರದಿಯಾಗಿದೆ. ಹಲವು ವರ್ಷಗಳಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಗಾಗಿ ತಯಾರಿ ನಡೆಸುತ್ತಿದ್ದ ರಿಯಾ ಕುಮಾರಿ ಎಂಬ ವಿದ್ಯಾರ್ಥಿನಿ ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ [&#8230;]</p>
<p>The post <a href="https://samyuktakarnataka.in/news/india/neet-aspirant-riya-kumari-suicide-dehradun-exam-pressure-paper-leak-controversy/">NEET ಮರುಪರೀಕ್ಷೆಗೂ ಮುನ್ನ ಅಭ್ಯರ್ಥಿ ರಿಯಾ ಕುಮಾರಿ ಆತ್ಮಹತ್ಯೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>2026ರಲ್ಲಿ ನೀಟ್‌ಗೆ ಸಂಬಂಧಿಸಿದ ಆತ್ಮಹತ್ಯೆಗಳ ಸಂಖ್ಯೆ ಏರಿಕೆ; ಮತ್ತೊಬ್ಬ ವಿದ್ಯಾರ್ಥಿನಿ ಬಲಿ</strong></p>



<p class="wp-block-paragraph">ಡೆಹ್ರಾಡೂನ್: ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿದ್ದ ನೀಟ್ ಅಭ್ಯರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ವರದಿಯಾಗಿದೆ. ಹಲವು ವರ್ಷಗಳಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET)ಗಾಗಿ ತಯಾರಿ ನಡೆಸುತ್ತಿದ್ದ ರಿಯಾ ಕುಮಾರಿ ಎಂಬ ವಿದ್ಯಾರ್ಥಿನಿ ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕುರಿತು ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.</p>



<p class="wp-block-paragraph">ಕುಟುಂಬದ ಸದಸ್ಯರ ಮಾಹಿತಿ ಪ್ರಕಾರ, ಮಂಗಳವಾರ ಬೆಳಿಗ್ಗೆ ಸುಮಾರು 11.30ರ ವೇಳೆಗೆ ರಿಯಾ ಕುಮಾರಿಯ ಮೃತದೇಹವನ್ನು ಮನೆಯಲ್ಲೇ ಪತ್ತೆಹಚ್ಚಲಾಯಿತು. ಬಳಿಕ ಕುಟುಂಬಸ್ಥರು ಅದೇ ದಿನ ಅಂತ್ಯಸಂಸ್ಕಾರ ನೆರವೇರಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/shiv-sena-ubt-split-speculation-six-mps-likely-to-meet-speaker-om-birla-operation-tiger/" type="link" id="https://samyuktakarnataka.in/news/india/shiv-sena-ubt-split-speculation-six-mps-likely-to-meet-speaker-om-birla-operation-tiger/">‘ಆಪರೇಷನ್ ಟೈಗರ್’ ಚರ್ಚೆ: ಪಕ್ಷದಲ್ಲಿ ಬಂಡಾಯದ ಸುಳಿವು</a></strong></p>



<p class="wp-block-paragraph"><strong>ಹಲವು ವರ್ಷಗಳ ತಯಾರಿ </strong>: ರಿಯಾ ಕುಮಾರಿ ಹಲವು ವರ್ಷಗಳಿಂದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಉದ್ದೇಶದಿಂದ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನೀಟ್ ಪರೀಕ್ಷೆಯನ್ನು ಸುತ್ತುವರಿದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು, ಮರುಪರೀಕ್ಷೆಗಳ ಚರ್ಚೆಗಳು ಹಾಗೂ ತೀವ್ರ ಸ್ಪರ್ಧಾತ್ಮಕ ವಾತಾವರಣವು ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಮಾನಸಿಕ ಒತ್ತಡ ಉಂಟುಮಾಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.</p>



<p class="wp-block-paragraph">ಈ ವರ್ಷದ ಪರೀಕ್ಷೆಗೆ ಸಂಬಂಧಿಸಿದ ವಿವಾದಗಳ ಹಿನ್ನೆಲೆಯಲ್ಲಿ ಜೂನ್ 21ರಂದು ಮರುಪರೀಕ್ಷೆ ನಡೆಸುವ ನಿರ್ಧಾರವೂ ಕೆಲ ಅಭ್ಯರ್ಥಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/bengaluru/bidadi-township-ai-city-land-acquisition-protest-bjp-jds-poster-war-farmers-letter-to-rahul-gandhi/">ಬಿಡದಿ ವಿವಾದ: ರೈತರ ಆಕ್ರೋಶದ ನಡುವೆ ಪೋಸ್ಟರ್ ರಾಜಕೀಯ</a></strong></p>



<p class="wp-block-paragraph"><strong>ತನಿಖೆ ಆರಂಭ :</strong> ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದು, ಸಾವಿನ ಹಿಂದಿನ ಕಾರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಕುಟುಂಬದವರು, ಸ್ನೇಹಿತರು ಹಾಗೂ ಪರಿಚಿತರ ಹೇಳಿಕೆಗಳನ್ನು ದಾಖಲಿಸುವ ಸಾಧ್ಯತೆ ಇದೆ.</p>



<p class="wp-block-paragraph"><strong>ಹೆಚ್ಚುತ್ತಿರುವ ಆತಂಕ : </strong>ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದೇಶಾದ್ಯಂತ ಕಳವಳಕ್ಕೆ ಕಾರಣವಾಗುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳು, ಅತಿಯಾದ ನಿರೀಕ್ಷೆಗಳು, ನಿರಂತರ ಅಧ್ಯಯನದ ಒತ್ತಡ ಮತ್ತು ಭವಿಷ್ಯದ ಅನಿಶ್ಚಿತತೆಗಳು ಅನೇಕ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/sports/lionel-messi-world-cup-hat-trick-equals-miroslav-klose-record-argentina-vs-algeria-2026/">ವಿಶ್ವಕಪ್‌ನಲ್ಲಿ ಹೊಸ ಅಧ್ಯಾಯ: Messi ಐತಿಹಾಸಿಕ ಹ್ಯಾಟ್ರಿಕ್ ಗೋಲು</a></strong></p>



<p class="wp-block-paragraph">ವರದಿಗಳ ಪ್ರಕಾರ, 2026ರಲ್ಲಿ ಮಾತ್ರ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಲ್ಲಿ ಕನಿಷ್ಠ 14 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಈ ಅಂಕಿ-ಅಂಶಗಳು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಬೆಂಬಲ ವ್ಯವಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳುತ್ತಿವೆ.</p>



<p class="wp-block-paragraph"><strong>ಮಾನಸಿಕ ಆರೋಗ್ಯಕ್ಕೆ ಒತ್ತು ನೀಡುವಂತೆ ಕರೆ :</strong> ಶಿಕ್ಷಣ ತಜ್ಞರು, ಮನೋವೈದ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡ ಹೇರುವ ಬದಲು ಅವರಿಗೆ ಸೂಕ್ತ ಮಾರ್ಗದರ್ಶನ, ಭಾವನಾತ್ಮಕ ಬೆಂಬಲ ಮತ್ತು ಸಮಾಲೋಚನಾ ಸೇವೆಗಳನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ. ಪರೀಕ್ಷೆಯ ಫಲಿತಾಂಶವೇ ಜೀವನದ ಅಂತಿಮ ಗುರಿಯಲ್ಲ ಎಂಬ ಅರಿವು ಮೂಡಿಸುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/news/india/india-defence-production-hits-rs-1-78-lakh-crore-fy2025-26-rajnath-singh/">ಆತ್ಮನಿರ್ಭರ ಬಲ: ಭಾರತದ ರಕ್ಷಣಾ ಉತ್ಪಾದನೆ ₹1.78 ಲಕ್ಷ ಕೋಟಿಗೆ</a></strong></p>



<p class="wp-block-paragraph">ರಿಯಾ ಕುಮಾರಿಯ ಸಾವಿನ ಘಟನೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕುರಿತು ಸಮಾಜ, ಶಿಕ್ಷಣ ಸಂಸ್ಥೆಗಳು ಮತ್ತು ಆಡಳಿತ ವ್ಯವಸ್ಥೆ ಮತ್ತಷ್ಟು ಗಂಭೀರವಾಗಿ ಚಿಂತಿಸುವ ಅಗತ್ಯವನ್ನು ಮತ್ತೆ ನೆನಪಿಸಿದೆ.</p>



<p class="wp-block-paragraph"><strong>ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.</strong></p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="b2xqhZbtAW"><a href="https://samyuktakarnataka.in/districts/davanagere/famous-bodybuilder-dies-of-heart-attack/">ಹೃದಯಾಘಾತದಿಂದ ಖ್ಯಾತ ಬಾಡಿ ಬಿಲ್ಡರ್ ಸಾವು</a></blockquote><iframe loading="lazy" class="wp-embedded-content" sandbox="allow-scripts" security="restricted"  title="“ಹೃದಯಾಘಾತದಿಂದ ಖ್ಯಾತ ಬಾಡಿ ಬಿಲ್ಡರ್ ಸಾವು” — Samyukta Karnataka" src="https://samyuktakarnataka.in/districts/davanagere/famous-bodybuilder-dies-of-heart-attack/embed/#?secret=S7iNHp6XI6#?secret=b2xqhZbtAW" data-secret="b2xqhZbtAW" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/neet-aspirant-riya-kumari-suicide-dehradun-exam-pressure-paper-leak-controversy/">NEET ಮರುಪರೀಕ್ಷೆಗೂ ಮುನ್ನ ಅಭ್ಯರ್ಥಿ ರಿಯಾ ಕುಮಾರಿ ಆತ್ಮಹತ್ಯೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>NTA ಶಿಫಾರಸಿನ ಮೇರೆಗೆ Telegram ಸೇವೆಗೆ ತಾತ್ಕಾಲಿಕ ನಿರ್ಬಂಧ</title>
		<link>https://samyuktakarnataka.in/news/india/india-temporarily-blocks-telegram-ahead-of-neet-ug-2026-re-exam/</link>
		
		<dc:creator><![CDATA[Samyukta Karnataka]]></dc:creator>
		<pubDate>Tue, 16 Jun 2026 06:10:55 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[NEET]]></category>
		<category><![CDATA[NEET re-exam]]></category>
		<category><![CDATA[NEET scam]]></category>
		<category><![CDATA[NEET-UG exams]]></category>
		<guid isPermaLink="false">https://samyuktakarnataka.in/?p=100711</guid>

					<description><![CDATA[<p>ರಾಷ್ಟ್ರೀಯ ಪರೀಕ್ಷೆಗಳ ಪಾರದರ್ಶಕತೆಗಾಗಿ ಟೆಲಿಗ್ರಾಮ್ ಮೇಲೆ ಕೇಂದ್ರ ಸರ್ಕಾರದ ಕಠಿಣ ನಿರ್ಧಾರ: ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಬ್ಲಾಕ್ &#8211; NTA ಕ್ರಮಕ್ಕೆ ಬೆಂಬಲ ನವದೆಹಲಿ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆಯ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಭಾರತ ಸರ್ಕಾರ ಟೆಲಿಗ್ರಾಮ್ ಮೆಸೇಜಿಂಗ್ ವೇದಿಕೆಯ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ [&#8230;]</p>
<p>The post <a href="https://samyuktakarnataka.in/news/india/india-temporarily-blocks-telegram-ahead-of-neet-ug-2026-re-exam/">NTA ಶಿಫಾರಸಿನ ಮೇರೆಗೆ Telegram ಸೇವೆಗೆ ತಾತ್ಕಾಲಿಕ ನಿರ್ಬಂಧ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ರಾಷ್ಟ್ರೀಯ ಪರೀಕ್ಷೆಗಳ ಪಾರದರ್ಶಕತೆಗಾಗಿ ಟೆಲಿಗ್ರಾಮ್ ಮೇಲೆ ಕೇಂದ್ರ ಸರ್ಕಾರದ ಕಠಿಣ ನಿರ್ಧಾರ: ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಬ್ಲಾಕ್ &#8211; NTA ಕ್ರಮಕ್ಕೆ ಬೆಂಬಲ</strong></p>



<p class="wp-block-paragraph">ನವದೆಹಲಿ: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET-UG) 2026ರ ಮರುಪರೀಕ್ಷೆಯ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಭಾರತ ಸರ್ಕಾರ ಟೆಲಿಗ್ರಾಮ್ ಮೆಸೇಜಿಂಗ್ ವೇದಿಕೆಯ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>



<p class="wp-block-paragraph">ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 69A ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಜೂನ್ 22, 2026ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಜೂನ್ 21ರಂದು ನಡೆಯಲಿರುವ NEET-UG ಮರುಪರೀಕ್ಷೆ ಮತ್ತು ಅದರ ತಕ್ಷಣದ ಪರಿಣಾಮಗಳ ಅವಧಿಯೂ ಒಳಗೊಂಡಿದೆ.</p>



<p class="wp-block-paragraph"><strong>ಇದನ್ನೂ ಓದಿ:</strong> <strong><a href="https://samyuktakarnataka.in/districts/kalburgi/lokayukta-raids-retired-panchayat-raj-superintendent-disproportionate-assets-kalaburagi/">ನಿವೃತ್ತಿಯ ಬೆನ್ನಲ್ಲೇ ಲೋಕಾಯುಕ್ತ ಶಾಕ್: ಮಾಜಿ ಕಚೇರಿ ಅಧೀಕ್ಷಕ ಮನೆ ಸೇರಿ 5 ಕಡೆ ದಾಳಿ</a></strong></p>



<p class="wp-block-paragraph">NTA ಪ್ರಕಾರ, ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ಸಂಬಂಧಿಸಿದಂತೆ &#8220;ಪೇಪರ್ ಲೀಕ್&#8221; ಎಂಬ ಸುಳ್ಳು ಅಥವಾ ಕೃತಕ ಪುರಾವೆಗಳನ್ನು ಸೃಷ್ಟಿಸಲು ಟೆಲಿಗ್ರಾಮ್‌ನ ಕೆಲವು ವೈಶಿಷ್ಟ್ಯಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು. ವಿಶೇಷವಾಗಿ ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ನಂತರ ಸಂಪಾದಿಸುವ (Message Edit) ವ್ಯವಸ್ಥೆಯನ್ನು ಬಳಸಿಕೊಂಡು ಹಳೆಯ ಸಂದೇಶಗಳನ್ನು ಬದಲಾಯಿಸಿ ಪ್ರಶ್ನೆಪತ್ರಿಕೆ ಮೊದಲೇ ಸೋರಿಕೆಯಾಗಿತ್ತು ಎಂಬ ಭ್ರಮೆ ಮೂಡಿಸುವ ಪ್ರಯತ್ನಗಳು ನಡೆದಿದ್ದವು ಎನ್ನಲಾಗಿದೆ.</p>



<p class="wp-block-paragraph">ಈ ಹಿನ್ನೆಲೆಯಲ್ಲಿ ಭಾರತದಲ್ಲಿನ ಬಳಕೆದಾರರಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟಿಸಲಾದ ಸಂದೇಶಗಳನ್ನು ಸಂಪಾದಿಸುವ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವಂತೆ ಟೆಲಿಗ್ರಾಮ್‌ಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.</p>



<p class="wp-block-paragraph"><strong>ಇದನ್ನೂ ಓದಿ:</strong> <strong><a href="https://samyuktakarnataka.in/news/karnataka/lokayukta-raids-three-government-officials-properties-davanagere-karnataka/">ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯನಗರದಲ್ಲಿ ಲೋಕಾಯುಕ್ತ ದಾಳಿ</a></strong></p>



<p class="wp-block-paragraph">ಇತ್ತೀಚಿನ ವಾರಗಳಲ್ಲಿ ಟೆಲಿಗ್ರಾಮ್‌ನಲ್ಲಿ NEET ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಮಾರಾಟವಾಗುತ್ತಿವೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದವು. ಈ ಕುರಿತು ಬಂದ ದೂರುಗಳನ್ನು NTA ಸೈಬರ್ ಕ್ರೈಂ ಅಧಿಕಾರಿಗಳಿಗೆ ಪರಿಶೀಲನೆಗಾಗಿ ರವಾನಿಸಿತ್ತು. ಆದರೆ ಇದುವರೆಗೆ ಅಧಿಕೃತವಾಗಿ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬುದಕ್ಕೆ ದೃಢೀಕರಣ ಲಭ್ಯವಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.</p>



<p class="wp-block-paragraph">NEET-UG 2026 ಮರುಪರೀಕ್ಷೆ ಜೂನ್ 21ರಂದು ನಡೆಯಲಿದ್ದು, ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಮತ್ತು NTA ಹಲವು ಕ್ರಮಗಳನ್ನು ಕೈಗೊಂಡಿವೆ. ಅನುಮಾನಾಸ್ಪದ ಪೇಪರ್ ಲೀಕ್ ದಾವೆಗಳು ಹಾಗೂ ವದಂತಿಗಳ ಬಗ್ಗೆ ಮಾಹಿತಿ ನೀಡಲು ವಿಶೇಷ ಪೋರ್ಟಲ್‌ನ್ನೂ ಆರಂಭಿಸಲಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ:</strong> <strong><a href="https://samyuktakarnataka.in/districts/chikkamagaluru/lokayukta-raid-acf-mohan-house-disproportionate-assets-chikkamagaluru/" type="link" id="https://samyuktakarnataka.in/districts/chikkamagaluru/lokayukta-raid-acf-mohan-house-disproportionate-assets-chikkamagaluru/">ಅರಣ್ಯಾಧಿಕಾರಿ ನಿವಾಸ ಸೇರಿ ಹಲವು ಕಡೆ ಲೋಕಾಯುಕ್ತ ದಾಳಿ</a></strong></p>



<p class="wp-block-paragraph">NTA ಈ ಕ್ರಮವನ್ನು ಸ್ವಾಗತಿಸಿದ್ದು, ಪರೀಕ್ಷಾ ಪ್ರಕ್ರಿಯೆಯ ನಿಷ್ಪಕ್ಷಪಾತತೆ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ಇದು ಅಗತ್ಯ ಕ್ರಮ ಎಂದು ಅಭಿಪ್ರಾಯಪಟ್ಟಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="ZFEYx015ET"><a href="https://samyuktakarnataka.in/news/india/mohan-bhagwat-responds-to-priyank-kharge-on-rss-registration-demand/">RSS ನೋಂದಣಿ ವಿಚಾರ: ಖರ್ಗೆ ಪ್ರಶ್ನೆಗೆ ಮೋಹನ್ ಭಾಗವತ್ ಪ್ರತಿಕ್ರಿಯೆ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“RSS ನೋಂದಣಿ ವಿಚಾರ: ಖರ್ಗೆ ಪ್ರಶ್ನೆಗೆ ಮೋಹನ್ ಭಾಗವತ್ ಪ್ರತಿಕ್ರಿಯೆ” — Samyukta Karnataka" src="https://samyuktakarnataka.in/news/india/mohan-bhagwat-responds-to-priyank-kharge-on-rss-registration-demand/embed/#?secret=k5r6BfpCIw#?secret=ZFEYx015ET" data-secret="ZFEYx015ET" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/india-temporarily-blocks-telegram-ahead-of-neet-ug-2026-re-exam/">NTA ಶಿಫಾರಸಿನ ಮೇರೆಗೆ Telegram ಸೇವೆಗೆ ತಾತ್ಕಾಲಿಕ ನಿರ್ಬಂಧ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
