<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ದಾವಣಗೆರೆ Archives - Samyukta Karnataka</title>
	<atom:link href="https://samyuktakarnataka.in/category/districts/davanagere/feed/" rel="self" type="application/rss+xml" />
	<link>https://samyuktakarnataka.in/category/districts/davanagere/</link>
	<description>News that connects you to Karnataka since 1921</description>
	<lastBuildDate>Tue, 01 Sep 2026 13:50:28 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>ದಾವಣಗೆರೆ Archives - Samyukta Karnataka</title>
	<link>https://samyuktakarnataka.in/category/districts/davanagere/</link>
	<width>32</width>
	<height>32</height>
</image> 
	<item>
		<title>ಮದ್ಯದ ನಶೆಯಲ್ಲಿ ಬಾರ್ ಸಪ್ಲೈಯರ್‌ಗೆ ಕುರ್ಚಿಯಿಂದ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ</title>
		<link>https://samyuktakarnataka.in/districts/davanagere/bar-supplier-attacked-with-a-chair-by-an-intoxicated-person/</link>
		
		<dc:creator><![CDATA[Samyukta Karnataka]]></dc:creator>
		<pubDate>Tue, 01 Sep 2026 13:50:23 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=106118</guid>

					<description><![CDATA[<p>ದಾವಣಗೆರೆ: ಮದ್ಯ ಸೇವಿಸಿದ್ದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಬಾರ್ ಸಪ್ಲೈಯರ್‌ ಮೇಲೆ ಏಕಾಏಕಿ ಕುರ್ಚಿ ಎತ್ತಿ ಹಾಕಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆಯ ಶಾಬನೂರು ರಸ್ತೆಯ ಪವನ್ ಬಾರ್‌ನಲ್ಲಿ ನಡೆದಿದೆ. ಬಾರ್‌ಗೆ ಮದ್ಯ ಸೇವಿಸಲು ಬಂದಿದ್ದ ವ್ಯಕ್ತಿ, ಅಲ್ಲಿ ಕೆಲಸ ಮಾಡುತ್ತಿದ್ದ ಸಪ್ಲೈಯರ್ ಸಿದ್ದೇಶ ಎಂಬುವವರೊಂದಿಗೆ ಏಕಾಏಕಿ ಜಗಳ ತೆಗೆದು, ಕುರ್ಚಿಯನ್ನು ಎತ್ತಿ ಅವರ ತಲೆಗೆ ಹಾಕಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಸಿದ್ದೇಶ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರವಾಗಿ ರಕ್ತಸ್ರಾವವಾಗಿದೆ. ತಕ್ಷಣ ಬಾರ್ ಮಾಲೀಕರು ಹಾಗೂ ಸಿಬ್ಬಂದಿ ಗಾಯಾಳು [&#8230;]</p>
<p>The post <a href="https://samyuktakarnataka.in/districts/davanagere/bar-supplier-attacked-with-a-chair-by-an-intoxicated-person/">ಮದ್ಯದ ನಶೆಯಲ್ಲಿ ಬಾರ್ ಸಪ್ಲೈಯರ್‌ಗೆ ಕುರ್ಚಿಯಿಂದ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಾವಣಗೆರೆ: </strong>ಮದ್ಯ ಸೇವಿಸಿದ್ದ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ಬಾರ್ ಸಪ್ಲೈಯರ್‌ ಮೇಲೆ ಏಕಾಏಕಿ ಕುರ್ಚಿ ಎತ್ತಿ ಹಾಕಿ ಹಲ್ಲೆ ನಡೆಸಿರುವ ಘಟನೆ ದಾವಣಗೆರೆಯ ಶಾಬನೂರು ರಸ್ತೆಯ ಪವನ್ ಬಾರ್‌ನಲ್ಲಿ ನಡೆದಿದೆ.</p>



<p class="wp-block-paragraph">ಬಾರ್‌ಗೆ ಮದ್ಯ ಸೇವಿಸಲು ಬಂದಿದ್ದ ವ್ಯಕ್ತಿ, ಅಲ್ಲಿ ಕೆಲಸ ಮಾಡುತ್ತಿದ್ದ ಸಪ್ಲೈಯರ್ ಸಿದ್ದೇಶ ಎಂಬುವವರೊಂದಿಗೆ ಏಕಾಏಕಿ ಜಗಳ ತೆಗೆದು, ಕುರ್ಚಿಯನ್ನು ಎತ್ತಿ ಅವರ ತಲೆಗೆ ಹಾಕಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ಸಿದ್ದೇಶ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರವಾಗಿ ರಕ್ತಸ್ರಾವವಾಗಿದೆ. ತಕ್ಷಣ ಬಾರ್ ಮಾಲೀಕರು ಹಾಗೂ ಸಿಬ್ಬಂದಿ ಗಾಯಾಳು ಸಿದ್ದೇಶ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.</p>



<p class="wp-block-paragraph">ಹಲ್ಲೆ ನಡೆಸಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮದ್ಯದ ಅಮಲಿನಲ್ಲಿ ಸಪ್ಲೈಯರ್ ಮೇಲೆ ಕುರ್ಚಿ ಎತ್ತಿ ಹಾಕಿ ಹಲ್ಲೆ ನಡೆಸುವುದು ಹಾಗೂ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಬಾರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.</p>



<p class="wp-block-paragraph">ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="OgtviZJudI"><a href="https://samyuktakarnataka.in/districts/dakshina-kannada/dissidence-erupts-in-congress-party-workers-clash-in-the-presence-of-mlas/">ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕರ ಎದುರೇ ಕಾರ್ಯಕರ್ತರ ಜಟಾಪಟಿ</a></blockquote><iframe class="wp-embedded-content" sandbox="allow-scripts" security="restricted"  title="“ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕರ ಎದುರೇ ಕಾರ್ಯಕರ್ತರ ಜಟಾಪಟಿ” — Samyukta Karnataka" src="https://samyuktakarnataka.in/districts/dakshina-kannada/dissidence-erupts-in-congress-party-workers-clash-in-the-presence-of-mlas/embed/#?secret=z6JJVALnJz#?secret=OgtviZJudI" data-secret="OgtviZJudI" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/davanagere/bar-supplier-attacked-with-a-chair-by-an-intoxicated-person/">ಮದ್ಯದ ನಶೆಯಲ್ಲಿ ಬಾರ್ ಸಪ್ಲೈಯರ್‌ಗೆ ಕುರ್ಚಿಯಿಂದ ಹಲ್ಲೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ದಾವಣಗೆರೆ: ಭದ್ರೆ ನೀರಿಗಾಗಿ ಬಂದ್ &#8211; ವ್ಯಾಪಾರಸ್ಥರಿಗೆ BJP ಮುಖಂಡರ ಮನವಿ</title>
		<link>https://samyuktakarnataka.in/districts/davanagere/davanagere-bandh-bhadra-upper-canal-water-bjp-appeal-traders/</link>
		
		<dc:creator><![CDATA[Samyukta Karnataka]]></dc:creator>
		<pubDate>Tue, 01 Sep 2026 06:10:35 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[bjp]]></category>
		<category><![CDATA[davangere]]></category>
		<category><![CDATA[protests]]></category>
		<guid isPermaLink="false">https://samyuktakarnataka.in/?p=106026</guid>

					<description><![CDATA[<p>ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ಅಡಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಸಹಕರಿಸುವಂತೆ ಬಿಜೆಪಿ ಮುಖಂಡರು ನಗರದ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಆಟೋ ಚಾಲಕರು ಹಾಗೂ ಬಸ್ ಮಾಲೀಕರಿಗೆ ಮನವಿ ಮಾಡಿದರು. ಮಂಗಳವಾರ ಬೆಳಗ್ಗೆ 11.26ರ ಸುಮಾರಿಗೆ ಮಾಜಿ ಸಚಿವ ಎಂ. ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ಮುಖಂಡರು ತಂಡಗಳಾಗಿ ನಗರದ ವಿವಿಧ ಬಡಾವಣೆಗಳು ಹಾಗೂ ಹಳೆಯ ಭಾಗದ ಮಾರುಕಟ್ಟೆ ಪ್ರದೇಶಗಳಲ್ಲಿ ತೆರೆದ [&#8230;]</p>
<p>The post <a href="https://samyuktakarnataka.in/districts/davanagere/davanagere-bandh-bhadra-upper-canal-water-bjp-appeal-traders/">ದಾವಣಗೆರೆ: ಭದ್ರೆ ನೀರಿಗಾಗಿ ಬಂದ್ &#8211; ವ್ಯಾಪಾರಸ್ಥರಿಗೆ BJP ಮುಖಂಡರ ಮನವಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ಅಡಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಸಹಕರಿಸುವಂತೆ ಬಿಜೆಪಿ ಮುಖಂಡರು ನಗರದ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ಆಟೋ ಚಾಲಕರು ಹಾಗೂ ಬಸ್ ಮಾಲೀಕರಿಗೆ ಮನವಿ ಮಾಡಿದರು.</p>



<p class="wp-block-paragraph">ಮಂಗಳವಾರ ಬೆಳಗ್ಗೆ 11.26ರ ಸುಮಾರಿಗೆ ಮಾಜಿ ಸಚಿವ ಎಂ. ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ಮುಖಂಡರು ತಂಡಗಳಾಗಿ ನಗರದ ವಿವಿಧ ಬಡಾವಣೆಗಳು ಹಾಗೂ ಹಳೆಯ ಭಾಗದ ಮಾರುಕಟ್ಟೆ ಪ್ರದೇಶಗಳಲ್ಲಿ ತೆರೆದ ವ್ಯಾನ್‌ಗಳಲ್ಲಿ ತೆರಳಿ, ಮೈಕ್ ಮೂಲಕ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.</p>



<p class="wp-block-paragraph">‘ಇದು ನೀರಿಗಾಗಿ ಮಾಡಿರುವ ಬಂದ್. ದಾವಣಗೆರೆ ಜನರ ಹಿತಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ತಾವು ಸ್ವಯಂಪ್ರೇರಿತರಾಗಿ ವ್ಯಾಪಾರ-ವಹಿವಾಟು ಬಂದ್ ಮಾಡುವ ಮೂಲಕ ಸಹಕರಿಸಬೇಕು’ ಎಂದು ಮುಖಂಡರು ಮನವಿ ಮಾಡಿದರು. ಈ ಸಂದರ್ಭದಲ್ಲಿ ತೆರೆದಿದ್ದ ರಿಲಯನ್ಸ್ ಸ್ಮಾರ್ಟ್ ಬಜಾರ್‌ಗೆ ಪ್ರತಿಭಟನಾಕಾರರು ತೆರಳಿ, ಮಳಿಗೆಯೊಳಗಿನ ಲೈಟ್‌ಗಳನ್ನು ಆಫ್ ಮಾಡಿಸಿ ಬಂದ್‌ಗೆ ಸಹಕರಿಸುವಂತೆ ಮಾಡಿದರು. ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೂ ತೆರಳಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು.</p>



<p class="wp-block-paragraph">ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವು ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರೆ, ಇನ್ನು ಕೆಲವರು ಅಂಗಡಿ ಬಾಗಿಲು ತೆರೆಯದೆ ಬಂದ್‌ಗೆ ಬೆಂಬಲ ನೀಡಿದರು. ನಗರದ ಕೆಲ ಹೋಟೆಲ್‌ಗಳು ಮುಚ್ಚಿದ್ದರೆ, ಇನ್ನು ಕೆಲವು ಹೋಟೆಲ್‌ಗಳು ಎಂದಿನಂತೆ ತೆರೆದಿದ್ದವು.</p>



<p class="wp-block-paragraph">ಆಟೋ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬರದೆ ಎಂದಿನಂತೆ ಸಾಗುತ್ತಿದ್ದರೆ, ನಗರ ಸಾರಿಗೆ ಬಸ್‌ಗಳ ಸಂಚಾರ ವಿರಳವಾಗಿತ್ತು. ನಗರದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ಬಂದ್‌ಗೆ ಸಹಕರಿಸುವಂತೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದರು.</p>



<p class="wp-block-paragraph"><strong>ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ</strong> 👉 <strong><a href="https://samyuktakarnataka.in/news/live-news-updates-in-samyukta-karnataka-2/" type="link" id="https://samyuktakarnataka.in/news/live-news-updates-in-samyukta-karnataka-2/">ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು &#8216;ಸಂಯುಕ್ತ ಕರ್ನಾಟಕ&#8217; ಜಾಲತಾಣದಲ್ಲಿ ನಿರಂತರವಾಗಿ ಓದಿರಿ.</a></strong></p>
<p>The post <a href="https://samyuktakarnataka.in/districts/davanagere/davanagere-bandh-bhadra-upper-canal-water-bjp-appeal-traders/">ದಾವಣಗೆರೆ: ಭದ್ರೆ ನೀರಿಗಾಗಿ ಬಂದ್ &#8211; ವ್ಯಾಪಾರಸ್ಥರಿಗೆ BJP ಮುಖಂಡರ ಮನವಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಭದ್ರಾ ಮೇಲ್ದಂಡೆ ಯೋಜನೆಗೆ ನೀರು, ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ಬಂದ್‌: ಬಸ್‌, ಆಟೋ ಸಂಚಾರ ವಿರಳ</title>
		<link>https://samyuktakarnataka.in/districts/davanagere/davanagere-bandh-bhadra-water-gutka-ban-mixed-response/</link>
		
		<dc:creator><![CDATA[Samyukta Karnataka]]></dc:creator>
		<pubDate>Tue, 01 Sep 2026 04:51:20 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=106009</guid>

					<description><![CDATA[<p>ದಾವಣಗೆರೆ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಮೂರು ಟಿಎಂಸಿ ಅಡಿ ನೀರು ಹರಿಸುವುದು ಹಾಗೂ ಗುಟ್ಕಾ ನಿಷೇಧವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಂಗಳವಾರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್‌ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದರಿಂದ ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳ ಸಂಚಾರ ಕಡಿಮೆಯಾಗಿತ್ತು. ನಗರ ಸಾರಿಗೆ ಬಸ್‌ಗಳು ಹಾಗೂ ಆಟೋಗಳ ಸಂಚಾರವೂ ವಿರಳವಾಗಿತ್ತು. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ನಗರದಿಂದ ಹೊರಭಾಗಕ್ಕೆ ಪ್ರಯಾಣಿಸುವವರು ಪ್ಯಾಸೆಂಜರ್‌ [&#8230;]</p>
<p>The post <a href="https://samyuktakarnataka.in/districts/davanagere/davanagere-bandh-bhadra-water-gutka-ban-mixed-response/">ಭದ್ರಾ ಮೇಲ್ದಂಡೆ ಯೋಜನೆಗೆ ನೀರು, ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ಬಂದ್‌: ಬಸ್‌, ಆಟೋ ಸಂಚಾರ ವಿರಳ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ದಾವಣಗೆರೆ: ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಮೂರು ಟಿಎಂಸಿ ಅಡಿ ನೀರು ಹರಿಸುವುದು ಹಾಗೂ ಗುಟ್ಕಾ ನಿಷೇಧವನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ ಮಂಗಳವಾರ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.</p>



<p class="wp-block-paragraph">ಬಂದ್‌ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದರಿಂದ ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳ ಸಂಚಾರ ಕಡಿಮೆಯಾಗಿತ್ತು. ನಗರ ಸಾರಿಗೆ ಬಸ್‌ಗಳು ಹಾಗೂ ಆಟೋಗಳ ಸಂಚಾರವೂ ವಿರಳವಾಗಿತ್ತು. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ನಗರದಿಂದ ಹೊರಭಾಗಕ್ಕೆ ಪ್ರಯಾಣಿಸುವವರು ಪ್ಯಾಸೆಂಜರ್‌ ಆಟೋಗಳ ಮೊರೆ ಹೋಗಿರುವುದು ಕಂಡುಬಂತು.</p>



<p class="wp-block-paragraph">ನಗರದ ಜಯದೇವ ವೃತ್ತದಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಬಸವರಾಜ ನಾಯ್ಕ್‌ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲು ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ಬೆಂಕಿ ನಂದಿಸಿ ಪರಿಸ್ಥಿತಿ ನಿಯಂತ್ರಿಸಿದರು.</p>



<p class="wp-block-paragraph">ವಿದ್ಯಾನಗರ, ಪಿ.ಜೆ. ಬಡಾವಣೆಯ ಚೇತನಾ ಹೋಟೆಲ್‌ ಬಳಿ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿಯೂ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.</p>



<p class="wp-block-paragraph"><strong>ರಜೆ ಬಗ್ಗೆ ಗೊಂದಲ: </strong>ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿರುವ ಕುರಿತು ಬೆಳಗ್ಗೆಯಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ರಜೆಗೆ ಸಂಬಂಧಿಸಿದ ಅಧಿಕೃತ ಆದೇಶ ಸ್ಪಷ್ಟವಾಗಿ ಲಭ್ಯವಾಗುವ ಮುನ್ನವೇ ದೃಶ್ಯ ಮಾಧ್ಯಮಗಳಲ್ಲಿ ಬಂದ್‌ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳದೆ ಮನೆಯಲ್ಲೇ ಉಳಿದರು.</p>



<p class="wp-block-paragraph">ಇನ್ನೊಂದೆಡೆ ರಜೆ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ತಿಳಿದುಕೊಂಡಿದ್ದ ಕೆಲ ವಿದ್ಯಾರ್ಥಿಗಳು ಎಂದಿನಂತೆ ಶಾಲಾ-ಕಾಲೇಜುಗಳಿಗೆ ತೆರಳುತ್ತಿರುವುದು ಕಂಡುಬಂತು. ಬಸ್‌ಗಳ ಸಂಚಾರ ವಿರಳವಾಗಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೊಂದರೆ ಅನುಭವಿಸಿದರು.</p>



<p class="wp-block-paragraph"><strong>ಬಿಗಿ ಪೊಲೀಸ್‌ ಬಂದೋಬಸ್ತ್‌: </strong>ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದ ಪ್ರಮುಖ ವೃತ್ತಗಳು, ಸೂಕ್ಷ್ಮ ಪ್ರದೇಶಗಳು ಹಾಗೂ ಪ್ರಮುಖ ರಸ್ತೆಗಳ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಪ್ರತಿಭಟನಾಕಾರರ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.</p>



<p class="wp-block-paragraph"><strong>ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ</strong> 👉 <strong><a href="https://samyuktakarnataka.in/news/live-news-updates-in-samyukta-karnataka-2/">ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.</a></strong></p>
<p>The post <a href="https://samyuktakarnataka.in/districts/davanagere/davanagere-bandh-bhadra-water-gutka-ban-mixed-response/">ಭದ್ರಾ ಮೇಲ್ದಂಡೆ ಯೋಜನೆಗೆ ನೀರು, ಗುಟ್ಕಾ ನಿಷೇಧ ವಿರೋಧಿಸಿ ದಾವಣಗೆರೆ ಬಂದ್‌: ಬಸ್‌, ಆಟೋ ಸಂಚಾರ ವಿರಳ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಪೆಟ್ರೋಲ್ ಹಾಕಿಸುವಾಗಲೇ ಏಕಾಏಕಿ ಕುಸಿದು ಬಿದ್ದು ವ್ಯಕ್ತಿ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ</title>
		<link>https://samyuktakarnataka.in/districts/davanagere/man-collapses-and-dies-while-refuelling-with-petrol/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 31 Aug 2026 12:43:12 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=105959</guid>

					<description><![CDATA[<p>ದಾವಣಗೆರೆ: ಬೈಕ್‌ಗೆ ಪೆಟ್ರೋಲ್ ಹಾಕಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಗರದ ಎಸ್.ಪಿ.ಎಸ್. ನಗರದ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ. ಮೃತರನ್ನು ಮೆಹಬೂಬ್ ನಗರದ ನಿವಾಸಿ ಮುನ್ನಾ (ಹೆಸರು) ಎಂದು ಗುರುತಿಸಲಾಗಿದೆ. ಅವರು ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಲಾರಿ ಓಡಿಸಿದ್ದ ಪೇಮೆಂಟ್ ಪಡೆದು ಹಣವನ್ನು ಪಡೆದುಕೊಂಡು ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪೆಟ್ರೋಲ್ ಬಂಕ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸುತ್ತಿದ್ದ ಸಂದರ್ಭದಲ್ಲಿ ಮುನ್ನಾ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. [&#8230;]</p>
<p>The post <a href="https://samyuktakarnataka.in/districts/davanagere/man-collapses-and-dies-while-refuelling-with-petrol/">ಪೆಟ್ರೋಲ್ ಹಾಕಿಸುವಾಗಲೇ ಏಕಾಏಕಿ ಕುಸಿದು ಬಿದ್ದು ವ್ಯಕ್ತಿ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಾವಣಗೆರೆ: </strong>ಬೈಕ್‌ಗೆ ಪೆಟ್ರೋಲ್ ಹಾಕಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಗರದ ಎಸ್.ಪಿ.ಎಸ್. ನಗರದ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.</p>



<p class="wp-block-paragraph">ಮೃತರನ್ನು ಮೆಹಬೂಬ್ ನಗರದ ನಿವಾಸಿ ಮುನ್ನಾ (ಹೆಸರು) ಎಂದು ಗುರುತಿಸಲಾಗಿದೆ. ಅವರು ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಲಾರಿ ಓಡಿಸಿದ್ದ ಪೇಮೆಂಟ್ ಪಡೆದು ಹಣವನ್ನು ಪಡೆದುಕೊಂಡು ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.</p>



<p class="wp-block-paragraph">ಪೆಟ್ರೋಲ್ ಬಂಕ್‌ನಲ್ಲಿ ಬೈಕ್‌ಗೆ ಪೆಟ್ರೋಲ್ ಹಾಕಿಸುತ್ತಿದ್ದ ಸಂದರ್ಭದಲ್ಲಿ ಮುನ್ನಾ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ದೃಶ್ಯ ಪೆಟ್ರೋಲ್ ಬಂಕ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.</p>



<p class="wp-block-paragraph">ಕುಸಿದು ಬಿದ್ದ ಮುನ್ನಾ ಅವರಿಗೆ ಸ್ಥಳೀಯರು ತಕ್ಷಣ ನೆರವು ನೀಡಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.</p>



<p class="wp-block-paragraph">ಮುನ್ನಾ ಅವರಿಗೆ ಈ ಹಿಂದೆ ಹೃದಯಾಘಾತವಾಗಿದ್ದು, ಸ್ಟೆಂಟ್ ಅಳವಡಿಸಲಾಗಿತ್ತು ಎಂದು ತಿಳಿದುಬಂದಿದೆ. ಇದೀಗ ಎರಡನೇ ಬಾರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="HVJfeElhZK"><a href="https://samyuktakarnataka.in/districts/davanagere/the-bjps-padayatra-is-not-for-arecanut-growers/">ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ</a></blockquote><iframe class="wp-embedded-content" sandbox="allow-scripts" security="restricted"  title="“ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ” — Samyukta Karnataka" src="https://samyuktakarnataka.in/districts/davanagere/the-bjps-padayatra-is-not-for-arecanut-growers/embed/#?secret=qJIBrgkJuX#?secret=HVJfeElhZK" data-secret="HVJfeElhZK" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/davanagere/man-collapses-and-dies-while-refuelling-with-petrol/">ಪೆಟ್ರೋಲ್ ಹಾಕಿಸುವಾಗಲೇ ಏಕಾಏಕಿ ಕುಸಿದು ಬಿದ್ದು ವ್ಯಕ್ತಿ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಜಗಳೂರಿಗೆ ಬರಪಟ್ಟಿ ಭಾಗ್ಯ: 2ನೇ ಹಂತದಲ್ಲಿ ಸೇರ್ಪಡೆ ಖಚಿತ</title>
		<link>https://samyuktakarnataka.in/districts/davanagere/drought-hit-status-for-jagalur-inclusion-in-second-phase-confirmed/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 31 Aug 2026 11:36:01 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=105933</guid>

					<description><![CDATA[<p>ದಾವಣಗೆರೆ: ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರನ್ನು ಕೈಬಿಟ್ಟಿರುವ ಬಗ್ಗೆ ಅಸಮಾಧಾನಗೊಂಡಿರುವ ಶಾಸಕ ಬಿ. ದೇವೇಂದ್ರಪ್ಪ ಅವರೊಂದಿಗೆ ಮಾತನಾಡಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೂ ಚರ್ಚಿಸಿದ್ದೇನೆ. ಎರಡನೇ ಹಂತದ ಬರಪೀಡಿತ ತಾಲೂಕುಗಳ ಘೋಷಣೆ ವೇಳೆ ಜಗಳೂರು ತಾಲೂಕನ್ನು ಸೇರ್ಪಡೆ ಮಾಡಲಾಗುವುದು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಭರವಸೆ ನೀಡಿದರು. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದಲೇ ಕರೆ ಮಾಡಿಸಿ ಮಾತನಾಡಿಸಲಾಗಿದೆ. ಎರಡನೇ [&#8230;]</p>
<p>The post <a href="https://samyuktakarnataka.in/districts/davanagere/drought-hit-status-for-jagalur-inclusion-in-second-phase-confirmed/">ಜಗಳೂರಿಗೆ ಬರಪಟ್ಟಿ ಭಾಗ್ಯ: 2ನೇ ಹಂತದಲ್ಲಿ ಸೇರ್ಪಡೆ ಖಚಿತ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಾವಣಗೆರೆ: </strong>ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಜಗಳೂರನ್ನು ಕೈಬಿಟ್ಟಿರುವ ಬಗ್ಗೆ ಅಸಮಾಧಾನಗೊಂಡಿರುವ ಶಾಸಕ ಬಿ. ದೇವೇಂದ್ರಪ್ಪ ಅವರೊಂದಿಗೆ ಮಾತನಾಡಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೂ ಚರ್ಚಿಸಿದ್ದೇನೆ. ಎರಡನೇ ಹಂತದ ಬರಪೀಡಿತ ತಾಲೂಕುಗಳ ಘೋಷಣೆ ವೇಳೆ ಜಗಳೂರು ತಾಲೂಕನ್ನು ಸೇರ್ಪಡೆ ಮಾಡಲಾಗುವುದು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಭರವಸೆ ನೀಡಿದರು.</p>



<p class="wp-block-paragraph">ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದಲೇ ಕರೆ ಮಾಡಿಸಿ ಮಾತನಾಡಿಸಲಾಗಿದೆ. ಎರಡನೇ ಹಂತದಲ್ಲಿ ಜಗಳೂರನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.</p>



<p class="wp-block-paragraph">ಕಲ್ಯಾಣ ಕರ್ನಾಟಕಕ್ಕೆ ಜಗಳೂರು ತಾಲೂಕನ್ನು ಸೇರಿಸಬೇಕೆಂಬ ಶಾಸಕ ದೇವೇಂದ್ರಪ್ಪ ಅವರ ಒತ್ತಾಯವನ್ನೂ ಗಮನಿಸಿದ್ದೇನೆ. ಸಹಜವಾಗಿಯೇ ಅತೀ ಹೆಚ್ಚು ಬರದ ಪರಿಸ್ಥಿತಿ ಎದುರಿಸುತ್ತಿರುವ ಜಗಳೂರನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ಅವರಿಗೆ ನೋವು ತಂದಿದೆ. ಅವರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದರು.</p>



<p class="wp-block-paragraph">“ಉದ್ದೇಶಪೂರ್ವಕವಾಗಿ ಜಗಳೂರನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿಲ್ಲ. ಇನ್ನೂ ಎರಡನೇ ಹಂತದ ಘೋಷಣೆಗೆ ಅವಕಾಶವಿದೆ. ಆ ಹಂತದಲ್ಲಿ ಜಗಳೂರು ಖಂಡಿತವಾಗಿಯೂ ಬರಪೀಡಿತ ತಾಲೂಕು ಎಂದು ಘೋಷಣೆಯಾಗಲಿದೆ. ಜಗಳೂರು ಜಿಲ್ಲೆಯಲ್ಲೇ ಅತೀ ಹೆಚ್ಚು ಬರಪೀಡಿತ ತಾಲೂಕು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ” ಎಂದು ತಿಳಿಸಿದರು.</p>



<p class="wp-block-paragraph">ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನಡೆಗೆ ಜಗಳೂರು ಶಾಸಕ ದೇವೇಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಇದು ಇಂದಿನ ಪರಿಸ್ಥಿತಿಯಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ ಎಂದರು.</p>



<p class="wp-block-paragraph">ಉಸ್ತುವಾರಿ ಸಚಿವರು ಯಾವಾಗ, ಯಾವ ತಾಲೂಕುಗಳಿಗೆ ಭೇಟಿ ನೀಡಿದ್ದಾರೆ ಎಂಬುದನ್ನು ಗಮನಿಸಬೇಕು. ಉಸ್ತುವಾರಿ ಸಚಿವರು ಮಾತ್ರವಲ್ಲ, ನಾವೂ ಜಗಳೂರು ಶಾಸಕರೊಂದಿಗೆ ಇದ್ದೇವೆ. ಮುಖ್ಯಮಂತ್ರಿಗಳೇ ದೇವೇಂದ್ರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಉಸ್ತುವಾರಿ ಸಚಿವರು ನಮ್ಮ ತಾಲೂಕಿಗೂ ಬಂದಿಲ್ಲ. ಇದು ತಲೆತಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಯಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರವಾಗುವ ವಿಚಾರವಾಗಿದೆ ಎಂದರು.</p>



<p class="wp-block-paragraph">“ನಾವು, ನೀವು ಮಾತನಾಡುವುದರಿಂದ ಏನೂ ಆಗುವುದಿಲ್ಲ. ಸುಮ್ಮನೆ ನನ್ನ ಹಾಗೂ ಸಚಿವರ ಮಧ್ಯೆ ವೈಮನಸ್ಸು ಇದೆ ಎಂಬಂತೆ ಆಗುತ್ತದೆ. ಏನಾದರೂ ಫಲಿತಾಂಶ ಬರುತ್ತದೆ ಎಂದಾದರೆ ಮಾತನಾಡೋಣ” ಎಂದು ಅವರು ಮಾರ್ಮಿಕವಾಗಿ ಹೇಳಿದರು.</p>



<p class="wp-block-paragraph">ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮಾತನಾಡುವ ಅಗತ್ಯವಿಲ್ಲ. ನಮ್ಮ ಪಕ್ಷದ ವಿಚಾರವನ್ನು ನಮ್ಮ ನಾಯಕರು ನೋಡಿಕೊಳ್ಳುತ್ತಾರೆ ಎಂದು ಬಸವರಾಜ ಶಿವಗಂಗಾ ಹೇಳಿದರು.</p>



<p class="wp-block-paragraph">ಹಿಂದೆ ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ತಾವು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಆಗ್ರಹಿಸಿದ್ದೆ. ಈ ವಿಚಾರ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್‌ಗೂ ತಿಳಿದಿದೆ. ಆದರೆ, ಈವರೆಗೂ ಯಾವುದೇ ಬದಲಾವಣೆ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="E5ND4lzrAy"><a href="https://samyuktakarnataka.in/districts/davanagere/the-bjps-padayatra-is-not-for-arecanut-growers/">ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ</a></blockquote><iframe class="wp-embedded-content" sandbox="allow-scripts" security="restricted"  title="“ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ” — Samyukta Karnataka" src="https://samyuktakarnataka.in/districts/davanagere/the-bjps-padayatra-is-not-for-arecanut-growers/embed/#?secret=vk20tN0WzS#?secret=E5ND4lzrAy" data-secret="E5ND4lzrAy" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/davanagere/drought-hit-status-for-jagalur-inclusion-in-second-phase-confirmed/">ಜಗಳೂರಿಗೆ ಬರಪಟ್ಟಿ ಭಾಗ್ಯ: 2ನೇ ಹಂತದಲ್ಲಿ ಸೇರ್ಪಡೆ ಖಚಿತ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ</title>
		<link>https://samyuktakarnataka.in/districts/davanagere/the-bjps-padayatra-is-not-for-arecanut-growers/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 31 Aug 2026 11:06:52 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=105921</guid>

					<description><![CDATA[<p>ದಾವಣಗೆರೆ: ಬಿಜೆಪಿ ಮುಖಂಡರು ನಡೆಸುತ್ತಿರುವ ಪಾದಯಾತ್ರೆಗೂ ಅಡಿಕೆ ಬೆಳೆಗಾರರ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಅದು ಕೇವಲ ಅವರ ಆರೋಗ್ಯ ಸುಧಾರಣೆಗಾಗಿ ನಡೆಸುತ್ತಿರುವ ವಾಕಿಂಗ್ ಅಷ್ಟೇ ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ವ್ಯಂಗ್ಯವಾಡಿದರು. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಡಿಕೆ ಬೆಳೆಗಾರರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ರೈತರ ಮತದಿಂದ ತಾವು ಶಾಸಕರಾಗಿದ್ದು, ಅಡಿಕೆ ಬೆಳೆಗಾರರಿಗೆ ಯಾವುದೇ ಅನ್ಯಾಯವಾದರೂ ಅವರ ಪರವಾಗಿ ಮೊದಲಿಗೆ ಧ್ವನಿ ಎತ್ತಲು ಸಿದ್ಧ ಎಂದು ಹೇಳಿದರು. ಗುಟ್ಕಾ ನಿಷೇಧ ಹೊಸ [&#8230;]</p>
<p>The post <a href="https://samyuktakarnataka.in/districts/davanagere/the-bjps-padayatra-is-not-for-arecanut-growers/">ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಾವಣಗೆರೆ: </strong>ಬಿಜೆಪಿ ಮುಖಂಡರು ನಡೆಸುತ್ತಿರುವ ಪಾದಯಾತ್ರೆಗೂ ಅಡಿಕೆ ಬೆಳೆಗಾರರ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಅದು ಕೇವಲ ಅವರ ಆರೋಗ್ಯ ಸುಧಾರಣೆಗಾಗಿ ನಡೆಸುತ್ತಿರುವ ವಾಕಿಂಗ್ ಅಷ್ಟೇ ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ವ್ಯಂಗ್ಯವಾಡಿದರು.</p>



<p class="wp-block-paragraph">ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಡಿಕೆ ಬೆಳೆಗಾರರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ರೈತರ ಮತದಿಂದ ತಾವು ಶಾಸಕರಾಗಿದ್ದು, ಅಡಿಕೆ ಬೆಳೆಗಾರರಿಗೆ ಯಾವುದೇ ಅನ್ಯಾಯವಾದರೂ ಅವರ ಪರವಾಗಿ ಮೊದಲಿಗೆ ಧ್ವನಿ ಎತ್ತಲು ಸಿದ್ಧ ಎಂದು ಹೇಳಿದರು.</p>



<p class="wp-block-paragraph">ಗುಟ್ಕಾ ನಿಷೇಧ ಹೊಸ ವಿಚಾರವಲ್ಲ. 2001ರಿಂದಲೇ ಗುಟ್ಕಾ ನಿಷೇಧ ಜಾರಿಯಲ್ಲಿದೆ. ಆದರೆ ಅಡಿಕೆ ನಿಷೇಧವಾಗಲಿದೆ ಎಂಬುದು ಸುಳ್ಳು ಸುದ್ದಿ. ನಿಜವಾಗಿಯೂ ಅಡಿಕೆ ನಿಷೇಧದ ಪರಿಸ್ಥಿತಿ ಎದುರಾದರೆ ಲಕ್ಷಾಂತರ ರೈತರನ್ನು ಒಗ್ಗೂಡಿಸಿ ತಾವೇ ಪಾದಯಾತ್ರೆ ನಡೆಸುವುದಾಗಿ ಬಸವರಾಜ ಶಿವಗಂಗಾ ಹೇಳಿದರು.</p>



<p class="wp-block-paragraph">ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ರೈತರ ಹಿತ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಅವರೊಂದಿಗೆ ನಿಲ್ಲುವುದಾಗಿ ಅವರು ಭರವಸೆ ನೀಡಿದರು.</p>



<p class="wp-block-paragraph">ಇದೇ ವೇಳೆ ರಾಜ್ಯದಲ್ಲಿನ ನೀರಿನ ಪರಿಸ್ಥಿತಿ ಕುರಿತು ಮಾತನಾಡಿದ ಶಾಸಕ ಶಿವಗಂಗಾ, ನೀರು ಹೇರಳವಾಗಿದ್ದಾಗ ಅದರ ಮಹತ್ವವನ್ನು ಅರಿಯದೆ ಪೋಲು ಮಾಡುತ್ತೇವೆ. ನೀರಿನ ಕೊರತೆ ಎದುರಾದಾಗ ಮಾತ್ರ ಅದರ ಬೆಲೆ ತಿಳಿಯುತ್ತದೆ ಎಂದರು.</p>



<p class="wp-block-paragraph">ನದಿ, ಜಲಾಶಯ ಹಾಗೂ ಲಭ್ಯವಿರುವ ನೀರಿನ ಸದ್ಬಳಕೆ ಮತ್ತು ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಭವಿಷ್ಯದ ನೀರಿನ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="cvqmJcJadd"><a href="https://samyuktakarnataka.in/entertainment/did-yash-hit-back-at-a-toxic-troll-this-line-in-his-instagram-bio-has-gone-viral/">‘ಟಾಕ್ಸಿಕ್’ ಟ್ರೋಲ್‌ಗೆ ಯಶ್‌ ಕೊಟ್ಟರಾ ತಿರುಗೇಟು?; ಇನ್‌ಸ್ಟಾ ಬಯೋದಲ್ಲಿನ ಈ ಸಾಲು ವೈರಲ್‌</a></blockquote><iframe loading="lazy" class="wp-embedded-content" sandbox="allow-scripts" security="restricted"  title="“‘ಟಾಕ್ಸಿಕ್’ ಟ್ರೋಲ್‌ಗೆ ಯಶ್‌ ಕೊಟ್ಟರಾ ತಿರುಗೇಟು?; ಇನ್‌ಸ್ಟಾ ಬಯೋದಲ್ಲಿನ ಈ ಸಾಲು ವೈರಲ್‌” — Samyukta Karnataka" src="https://samyuktakarnataka.in/entertainment/did-yash-hit-back-at-a-toxic-troll-this-line-in-his-instagram-bio-has-gone-viral/embed/#?secret=5D1HVM26YS#?secret=cvqmJcJadd" data-secret="cvqmJcJadd" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/davanagere/the-bjps-padayatra-is-not-for-arecanut-growers/">ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಬರ ಪಟ್ಟಿಯಿಂದ ಜಗಳೂರು ಹೊರಕ್ಕೆ, ಮರುಪರಿಶೀಲನೆಗೆ ಮನವಿ: ಸಚಿವ ಬಸವಂತಪ್ಪ</title>
		<link>https://samyuktakarnataka.in/districts/davanagere/jagalur-dropped-from-drought-list-request-made-for-re-evaluation/</link>
		
		<dc:creator><![CDATA[Samyukta Karnataka]]></dc:creator>
		<pubDate>Sun, 30 Aug 2026 10:54:49 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=105801</guid>

					<description><![CDATA[<p>ದಾವಣಗೆರೆ: ಜಿಲ್ಲೆಯ ಆರು ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯಾಗಿದ್ದರೂ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಜಗಳೂರು ತಾಲೂಕು ಹೆಸರು ಕೈಬಿಟ್ಟಿರುವುದು ಅಥವಾ ಪರಿಷ್ಕೃತ ಪಟ್ಟಿಯಲ್ಲಿ ಲೋಪದೋಷಗಳಿದ್ದರೆ, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಮರುಪರಿಶೀಲನೆಗೆ ಮನವಿ ಮಾಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು. ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪಟ್ಟಿಯಿಂದ ತಾಲೂಕು ಹೊರಗುಳಿದಿರುವ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. [&#8230;]</p>
<p>The post <a href="https://samyuktakarnataka.in/districts/davanagere/jagalur-dropped-from-drought-list-request-made-for-re-evaluation/">ಬರ ಪಟ್ಟಿಯಿಂದ ಜಗಳೂರು ಹೊರಕ್ಕೆ, ಮರುಪರಿಶೀಲನೆಗೆ ಮನವಿ: ಸಚಿವ ಬಸವಂತಪ್ಪ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಾವಣಗೆರೆ</strong>: ಜಿಲ್ಲೆಯ ಆರು ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯಾಗಿದ್ದರೂ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಜಗಳೂರು ತಾಲೂಕು ಹೆಸರು ಕೈಬಿಟ್ಟಿರುವುದು ಅಥವಾ ಪರಿಷ್ಕೃತ ಪಟ್ಟಿಯಲ್ಲಿ ಲೋಪದೋಷಗಳಿದ್ದರೆ, ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ಮರುಪರಿಶೀಲನೆಗೆ ಮನವಿ ಮಾಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.</p>



<p class="wp-block-paragraph">ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪಟ್ಟಿಯಿಂದ ತಾಲೂಕು ಹೊರಗುಳಿದಿರುವ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ಜಿಲ್ಲೆಯ ನೈಜ ಬರ ಪರಿಸ್ಥಿತಿಯನ್ನು ಅಧಿಕಾರಿಗಳ ಮೂಲಕ ಸಮರ್ಪಕವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದರು.</p>



<p class="wp-block-paragraph">ಜಿಲ್ಲಾ ಉಸ್ತುವಾರಿ ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ವರದಿ ನೀಡಿಲ್ಲ ಎಂಬ ಜಗಳೂರು ಶಾಸಕರ ಆಕ್ರೋಶದ ಕುರಿತು ಪ್ರತಿಕ್ರಿಯಿಸಿದ ಬಸವಂತಪ್ಪ, ಜಗಳೂರು ಶಾಸಕರೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು. ಜಿಲ್ಲೆಯ ಎಲ್ಲ ಶಾಸಕರನ್ನು ಒಗ್ಗೂಡಿಸಿ ಮುಖ್ಯಮಂತ್ರಿ ಅವರಿಗೆ ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು ಎಂದರು.</p>



<p class="wp-block-paragraph">ರೈತರಿಗೆ ಆಗಿರುವ ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಅಗತ್ಯ ಪರಿಹಾರ ಹಾಗೂ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.</p>



<p class="wp-block-paragraph">ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಬಸವಂತಪ್ಪ, ಅವರ ವಿರುದ್ಧ ಯಾವುದೇ ಚಾರ್ಜ್‌ಶೀಟ್ ಇಲ್ಲದಿದ್ದರೂ ವಿರೋಧ ಪಕ್ಷಗಳ ಹೋರಾಟಕ್ಕೆ ಮಣಿದು ಅವರು ರಾಜೀನಾಮೆ ನೀಡಿದ್ದಾರೆ ಎಂದರು.</p>



<p class="wp-block-paragraph">ಮುಂದಿನ ದಿನಗಳಲ್ಲಿ ಬಿ. ನಾಗೇಂದ್ರ ಅವರು ನಿರ್ದೋಷಿ ಎಂಬುದು ಸಾಬೀತಾಗಲಿದೆ. ತನಿಖೆ ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಸಮರ್ಥಿಸಿಕೊಂಡರು.</p>



<p class="wp-block-paragraph">ಒಳಮೀಸಲಾತಿ ಕುರಿತು ಉಂಟಾಗಿರುವ ಗೊಂದಲವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಬಗೆಹರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಎಲ್ಲ ಸಮುದಾಯಗಳ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ಚರ್ಚೆ ನಡೆಸಲಾಗುವುದು.</p>



<p class="wp-block-paragraph">ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಲೋಪದೋಷಗಳನ್ನು ಸರಿಪಡಿಸಿ, ಎಲ್ಲ ಸಮುದಾಯಗಳಿಗೂ ಸಮಾನ ನ್ಯಾಯ ದೊರೆಯುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್. ಬಸವಂತಪ್ಪ ಸ್ಪಷ್ಟಪಡಿಸಿದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="2g3zrppCe6"><a href="https://samyuktakarnataka.in/news/karnataka/are-you-a-gruha-lakshmi-beneficiary-if-so-read-this-news/">ನೀವು ʻಗೃಹಲಕ್ಷ್ಮಿʼ ಫಲಾನುಭವಿಗಳಾ? ಹಾಗಿದ್ರೆ ಈ ಸುದ್ದಿ ಓದಿ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“ನೀವು ʻಗೃಹಲಕ್ಷ್ಮಿʼ ಫಲಾನುಭವಿಗಳಾ? ಹಾಗಿದ್ರೆ ಈ ಸುದ್ದಿ ಓದಿ” — Samyukta Karnataka" src="https://samyuktakarnataka.in/news/karnataka/are-you-a-gruha-lakshmi-beneficiary-if-so-read-this-news/embed/#?secret=yZx5URNU2O#?secret=2g3zrppCe6" data-secret="2g3zrppCe6" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/davanagere/jagalur-dropped-from-drought-list-request-made-for-re-evaluation/">ಬರ ಪಟ್ಟಿಯಿಂದ ಜಗಳೂರು ಹೊರಕ್ಕೆ, ಮರುಪರಿಶೀಲನೆಗೆ ಮನವಿ: ಸಚಿವ ಬಸವಂತಪ್ಪ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ದಾವಣಗೆರೆ ಜಿಪಂಗೆ ಸಾಹಿತ್ಯ ನೂತನ ಸಿಇಒ</title>
		<link>https://samyuktakarnataka.in/districts/davanagere/sahitya-is-the-new-ceo-of-davangere-zilla-panchayat/</link>
		
		<dc:creator><![CDATA[Samyukta Karnataka]]></dc:creator>
		<pubDate>Sun, 30 Aug 2026 06:44:21 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=105764</guid>

					<description><![CDATA[<p>ದಾವಣಗೆರೆ: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ಸಾಹಿತ್ಯ ಎಂ. ಅಲದಕಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಸಾಹಿತ್ಯ ಎಂ. ಅಲದಕಟ್ಟಿ ಅವರು 2022ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದಾರೆ. 1993ರ ಮೇ 6ರಂದು ಜನಿಸಿರುವ ಅವರು, 33ನೇ ವಯಸ್ಸಿನಲ್ಲಿ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಸಿಇಒ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾಗಿ ಕಾರ್ಯನಿರ್ವಹಿಸುತ್ತಿದ್ದ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರನ್ನು ಬೀದರ್ ಜಿಲ್ಲಾ ಪಂಚಾಯತ್ [&#8230;]</p>
<p>The post <a href="https://samyuktakarnataka.in/districts/davanagere/sahitya-is-the-new-ceo-of-davangere-zilla-panchayat/">ದಾವಣಗೆರೆ ಜಿಪಂಗೆ ಸಾಹಿತ್ಯ ನೂತನ ಸಿಇಒ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಾವಣಗೆರೆ</strong>: ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ಸಾಹಿತ್ಯ ಎಂ. ಅಲದಕಟ್ಟಿ ಅವರನ್ನು ನೇಮಕ ಮಾಡಲಾಗಿದೆ.</p>



<p class="wp-block-paragraph">ಸಾಹಿತ್ಯ ಎಂ. ಅಲದಕಟ್ಟಿ ಅವರು 2022ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದಾರೆ. 1993ರ ಮೇ 6ರಂದು ಜನಿಸಿರುವ ಅವರು, 33ನೇ ವಯಸ್ಸಿನಲ್ಲಿ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಸಿಇಒ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.</p>



<p class="wp-block-paragraph">ಪ್ರಸ್ತುತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾಗಿ ಕಾರ್ಯನಿರ್ವಹಿಸುತ್ತಿದ್ದ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರನ್ನು ಬೀದರ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಸರ್ಕಾರ ವರ್ಗಾವಣೆಗೊಳಿಸಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="TISAJ0IlxG"><a href="https://samyuktakarnataka.in/news/karnataka/massive-transfers-in-the-state-police-department/">ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಭರ್ಜರಿ ವರ್ಗಾವಣೆ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿ ಹಲವು ಜಿಲ್ಲೆಗಳ ಆಯುಕ್ತರ ಬದಲಾವಣೆ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಭರ್ಜರಿ ವರ್ಗಾವಣೆ: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿ ಹಲವು ಜಿಲ್ಲೆಗಳ ಆಯುಕ್ತರ ಬದಲಾವಣೆ” — Samyukta Karnataka" src="https://samyuktakarnataka.in/news/karnataka/massive-transfers-in-the-state-police-department/embed/#?secret=eBLqm6g6hB#?secret=TISAJ0IlxG" data-secret="TISAJ0IlxG" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/davanagere/sahitya-is-the-new-ceo-of-davangere-zilla-panchayat/">ದಾವಣಗೆರೆ ಜಿಪಂಗೆ ಸಾಹಿತ್ಯ ನೂತನ ಸಿಇಒ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಅಪಘಾತದಲ್ಲಿ ಬಯಲಾದ ಪಡಿತರ ಅಕ್ಕಿ–ರಾಗಿಯ ಅಕ್ರಮ ಸಾಗಣೆ!</title>
		<link>https://samyuktakarnataka.in/districts/davanagere/davangere-ration-rice-ragi-illegal-transport-suspected/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 29 Aug 2026 12:40:56 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=105749</guid>

					<description><![CDATA[<p>ಅಪಘಾತದಿಂದ ಬಯಲಾಯಿತೇ ಪಡಿತರ ಧಾನ್ಯ ಅಕ್ರಮ ಸಾಗಣೆ? ಆಟೋ ವಶಕ್ಕೆ ದಾವಣಗೆರೆ: ಫಲಾನುಭವಿಗಳಿಗೆ ವಿತರಿಸಬೇಕಾಗಿದ್ದ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತೆಂಬ ಅನುಮಾನಕ್ಕೆ ಕಾರಣವಾದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಪಡಿತರ ಧಾನ್ಯಗಳನ್ನು ಸಾಗಿಸುತ್ತಿದ್ದ ಎನ್ನಲಾದ ಆಟೋವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಬಳಿಕ, ಅದರಲ್ಲಿದ್ದ ಅಕ್ಕಿ ಮತ್ತು ರಾಗಿ ಚೀಲಗಳು ಹರಿದು ಧಾನ್ಯಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಶನಿವಾರ ಮಧ್ಯಾಹ್ನ ನಗರದ ಬಿ.ಪಿ. ರಸ್ತೆಯ ಅಪೂರ್ವ ಹೋಟೆಲ್ ಸಮೀಪದ ರಾಮರಾಜ್ ಕಾಟನ್ ಬಟ್ಟೆ ಅಂಗಡಿ [&#8230;]</p>
<p>The post <a href="https://samyuktakarnataka.in/districts/davanagere/davangere-ration-rice-ragi-illegal-transport-suspected/">ಅಪಘಾತದಲ್ಲಿ ಬಯಲಾದ ಪಡಿತರ ಅಕ್ಕಿ–ರಾಗಿಯ ಅಕ್ರಮ ಸಾಗಣೆ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಅಪಘಾತದಿಂದ ಬಯಲಾಯಿತೇ ಪಡಿತರ ಧಾನ್ಯ ಅಕ್ರಮ ಸಾಗಣೆ? ಆಟೋ ವಶಕ್ಕೆ</strong></p>



<p class="wp-block-paragraph">ದಾವಣಗೆರೆ: ಫಲಾನುಭವಿಗಳಿಗೆ ವಿತರಿಸಬೇಕಾಗಿದ್ದ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತೆಂಬ ಅನುಮಾನಕ್ಕೆ ಕಾರಣವಾದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಪಡಿತರ ಧಾನ್ಯಗಳನ್ನು ಸಾಗಿಸುತ್ತಿದ್ದ ಎನ್ನಲಾದ ಆಟೋವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಬಳಿಕ, ಅದರಲ್ಲಿದ್ದ ಅಕ್ಕಿ ಮತ್ತು ರಾಗಿ ಚೀಲಗಳು ಹರಿದು ಧಾನ್ಯಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.</p>



<p class="wp-block-paragraph">ಶನಿವಾರ ಮಧ್ಯಾಹ್ನ ನಗರದ ಬಿ.ಪಿ. ರಸ್ತೆಯ ಅಪೂರ್ವ ಹೋಟೆಲ್ ಸಮೀಪದ ರಾಮರಾಜ್ ಕಾಟನ್ ಬಟ್ಟೆ ಅಂಗಡಿ ಮುಂಭಾಗದಲ್ಲಿ ಘಟನೆ ನಡೆದಿದೆ.</p>



<p class="wp-block-paragraph">ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಕೆಎಂಎಫ್ ಶೀಲು ಹೊಂದಿರುವ ಚೀಲಗಳಲ್ಲಿ ಸುಮಾರು 75 ಕೆ.ಜಿ. ತೂಕದ ನಾಲ್ಕು ಪ್ಯಾಕೆಟ್ ಅಕ್ಕಿ ಹಾಗೂ ಮೂರು ಪ್ಯಾಕೆಟ್ ರಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಆಟೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.</p>



<p class="wp-block-paragraph">ಡಿಕ್ಕಿಯ ರಭಸಕ್ಕೆ ಆಟೋದ ಗಾಜು ಪುಡಿಪುಡಿಯಾಗಿದ್ದು, ವಾಹನದಲ್ಲಿದ್ದ ಅಕ್ಕಿ ಮತ್ತು ರಾಗಿ ಚೀಲಗಳು ಹರಿದು ಹೋಗಿವೆ. ಪರಿಣಾಮ ಧಾನ್ಯಗಳು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಪಡಿತರ ಧಾನ್ಯಗಳ ಸಾಗಣೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph"><strong>ಬೈಕ್ ಸವಾರನಿಗೆ ಗಾಯ &#8211; ಆಟೋ ಚಾಲಕ ಪರಾರಿ :</strong> ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದಾರೆ. ಆದರೆ ಅಪಘಾತ ಸಂಭವಿಸುತ್ತಿದ್ದಂತೆಯೇ ಆಟೋ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಇದರಿಂದ ಪಡಿತರ ಧಾನ್ಯಗಳನ್ನು ಸಾಗಿಸುತ್ತಿದ್ದವರು ಯಾರು ಮತ್ತು ಅವುಗಳ ಮೂಲವೇನು ಎಂಬ ಪ್ರಶ್ನೆಗಳು ಮತ್ತಷ್ಟು ಗಂಭೀರವಾಗಿವೆ.</p>



<p class="wp-block-paragraph"><strong>ಆಹಾರ ಇಲಾಖೆ ಅಧಿಕಾರಿಗಳಿಂದ ಧಾನ್ಯ, ಆಟೋ ವಶ :</strong> ಘಟನೆ ಗಮನಿಸಿದ ಸಾರ್ವಜನಿಕರು ತಕ್ಷಣ ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿದ್ದ ಪಡಿತರ ಅಕ್ಕಿ, ರಾಗಿ ಹಾಗೂ ಆಟೋವನ್ನು ವಶಕ್ಕೆ ಪಡೆದಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಕೆಎಂಎಫ್ ಶೀಲು ಹೊಂದಿರುವ ಚೀಲಗಳಲ್ಲಿ ಪಡಿತರ ಧಾನ್ಯಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.</p>



<p class="wp-block-paragraph"><strong>ಧಾನ್ಯಗಳ ಮೂಲ ಯಾವುದು? :</strong> ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಧಾನ್ಯಗಳು ಅಕ್ರಮವಾಗಿ ಸಾಗಿಸಲಾಗುತ್ತಿತ್ತೆ? ಧಾನ್ಯಗಳು ಎಲ್ಲಿಂದ ಬಂದವು? ಎಲ್ಲಿಗೆ ಸಾಗಿಸಲಾಗುತ್ತಿತ್ತು? ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಅವುಗಳನ್ನು ಸಾಗಿಸುತ್ತಿದ್ದವರು ಯಾರು? ಎಂಬ ಹಲವು ಪ್ರಶ್ನೆಗಳು ಇದೀಗ ಸಾರ್ವಜನಿಕರಲ್ಲಿ ಮೂಡಿವೆ.</p>



<p class="wp-block-paragraph">ಪಡಿತರ ವ್ಯವಸ್ಥೆಯ ಮೂಲಕ ಬಡವರು ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಧಾನ್ಯಗಳು ಅಕ್ರಮವಾಗಿ ಬೇರೆಡೆ ಸಾಗಾಟವಾಗಿದ್ದರೆ, ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚುವುದು ಅಗತ್ಯವಾಗಿದೆ.</p>



<p class="wp-block-paragraph">ಆಹಾರ ಇಲಾಖೆ ಹಾಗೂ ಪೊಲೀಸರು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ, ಧಾನ್ಯಗಳ ಮೂಲ, ಸಾಗಣೆ ಉದ್ದೇಶ ಹಾಗೂ ಚಾಲಕನ ಗುರುತು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಬೇಕು. ಪಡಿತರ ಧಾನ್ಯಗಳ ಅಕ್ರಮ ಸಾಗಣೆ ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/sugar-prices-drop-4-but-still-27-costlier/">ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ</a></li>
<li><a class="wp-block-latest-posts__post-title" href="https://samyuktakarnataka.in/news/karnataka/karnataka-teachers-tr-prefix-dk-shivakumar/">ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ</a></li>
<li><a class="wp-block-latest-posts__post-title" href="https://samyuktakarnataka.in/news/india/national-teachers-awards-2026-droupadi-murmu/">ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು</a></li>
<li><a class="wp-block-latest-posts__post-title" href="https://samyuktakarnataka.in/news/karnataka/prajaseva-abhiyana-kudligi-dk-shivakumar/">ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ</a></li>
<li><a class="wp-block-latest-posts__post-title" href="https://samyuktakarnataka.in/entertainment/mohanlal-operation-ganga-movie-vishnu-mohan/">ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ</a></li>
</ul><p>The post <a href="https://samyuktakarnataka.in/districts/davanagere/davangere-ration-rice-ragi-illegal-transport-suspected/">ಅಪಘಾತದಲ್ಲಿ ಬಯಲಾದ ಪಡಿತರ ಅಕ್ಕಿ–ರಾಗಿಯ ಅಕ್ರಮ ಸಾಗಣೆ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ದಲಿತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ : ಎಂ.ಪಿ. ರೇಣುಕಾಚಾರ್ಯ</title>
		<link>https://samyuktakarnataka.in/districts/davanagere/renukacharya-valmiki-corporation-fund-misuse-bjp-congress-dalit-row/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 29 Aug 2026 12:27:23 +0000</pubDate>
				<category><![CDATA[ದಾವಣಗೆರೆ]]></category>
		<category><![CDATA[davangere]]></category>
		<guid isPermaLink="false">https://samyuktakarnataka.in/?p=105746</guid>

					<description><![CDATA[<p>ದಾವಣಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದ್ದರೆ, ಅದನ್ನು ದಲಿತ ವಿರೋಧಿ ಹೋರಾಟ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದಿಗೂ ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಅವರ ಆಶಯಗಳಿಗೆ ಹಾಗೂ ಸಂವಿಧಾನಕ್ಕೆ ಸೂಕ್ತ ಗೌರವ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತರಿಗೆ [&#8230;]</p>
<p>The post <a href="https://samyuktakarnataka.in/districts/davanagere/renukacharya-valmiki-corporation-fund-misuse-bjp-congress-dalit-row/">ದಲಿತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ : ಎಂ.ಪಿ. ರೇಣುಕಾಚಾರ್ಯ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ದಾವಣಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದ್ದರೆ, ಅದನ್ನು ದಲಿತ ವಿರೋಧಿ ಹೋರಾಟ ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.</p>



<p class="wp-block-paragraph">ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದಿಗೂ ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಅವರ ಆಶಯಗಳಿಗೆ ಹಾಗೂ ಸಂವಿಧಾನಕ್ಕೆ ಸೂಕ್ತ ಗೌರವ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಲಿತರಿಗೆ ನಿರಂತರ ಅನ್ಯಾಯವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.</p>



<p class="wp-block-paragraph">ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮದ ವಿರುದ್ಧ ಬಿಜೆಪಿಯ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾಗಿದ್ದ ಗಂಗಾ ಕಲ್ಯಾಣ, ಮದುವೆ, ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಬಳಕೆಯಾಗಬೇಕಿದ್ದ ಹಣದ ದುರುಪಯೋಗದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.</p>



<p class="wp-block-paragraph">ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣವನ್ನು ಪ್ರಸ್ತಾಪಿಸಿದ ರೇಣುಕಾಚಾರ್ಯ, ಮೃತ ಅಧಿಕಾರಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಹಾಗೂ ಪರಿಹಾರ ದೊರಕಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಪತಿಯನ್ನ ಕಳೆದುಕೊಂಡ ಕುಟುಂಬದ ಕಣ್ಣೀರಿಗೆ ಸರ್ಕಾರ ಉತ್ತರ ನೀಡಬೇಕು. ಆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಜವಾಬ್ದಾರಿ ಎಂದರು.</p>



<p class="wp-block-paragraph">ಸಚಿವ ಕೆ.ಎನ್. ರಾಜಣ್ಣ ಅವರ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ರಾಜಣ್ಣ ಅವರನ್ನು ನಡೆಸಿಕೊಂಡ ರೀತಿಯೇ ದಲಿತರಿಗೆ ಕಾಂಗ್ರೆಸ್ ನೀಡುತ್ತಿರುವ ಗೌರವಕ್ಕೆ ಸಾಕ್ಷಿ ಎಂದು ಟೀಕಿಸಿದರು. &#8220;ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ತನ್ನದೇ ಪಕ್ಷದ ದಲಿತ ನಾಯಕರಿಗೆ ಯಾವ ರೀತಿಯ ಗೌರವ ನೀಡುತ್ತಿದೆ?&#8221; ಎಂದು ಪ್ರಶ್ನಿಸಿದರು.</p>



<p class="wp-block-paragraph">ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಯಾರು, ಅವರ ಅಂತ್ಯಸಂಸ್ಕಾರಕ್ಕೆ ಸೂಕ್ತ ಸ್ಥಳ ನೀಡದವರು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದಾಗ ದಲಿತ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂಬ ಆರೋಪ ಮಾಡುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಹೇಳಿದರು.</p>



<p class="wp-block-paragraph">ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಯಲಿದ್ದು, ದಲಿತರ ಹಕ್ಕು ಹಾಗೂ ಅಭಿವೃದ್ಧಿಯ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು.</p>



<p class="wp-block-paragraph"></p>
<p>The post <a href="https://samyuktakarnataka.in/districts/davanagere/renukacharya-valmiki-corporation-fund-misuse-bjp-congress-dalit-row/">ದಲಿತರ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ : ಎಂ.ಪಿ. ರೇಣುಕಾಚಾರ್ಯ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
