ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಹಿರಿಯ ಮಠಾಧಿಪತಿ ಶ್ರೀ ಗುರುಸ್ವಾಮಿ (76) ಬೃಹ್ಮನ್ಮಠ ಸಾಲೂರು ಮಠದಲ್ಲಿ ಹಲವಾರು ವರ್ಷಗಳಿಂದ ಮಠಾಧಿಪತಿಯಾಗಿದ್ದು, ಸರ್ವ ಜನಾಂಗದವರಿಗೂ ಪ್ರೀತಿ ಪಾತ್ರರಾಗಿದ್ದರು. ಅನಾರೋಗ್ಯಕ್ಕೀಡಾಗಿದ್ದ ಅವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲವು ದಿನಗಳಿಂದ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲೇ ಅವರು ವಿಶ್ರಾಂತಿ ಪಡೆಯುತ್ತಿದ್ದರು.
ಹನೂರು ತಾಲೂಕಿನ ಜಿಕೆ ಹೊಸೂರು ಗ್ರಾಮದಲ್ಲಿ ಪೂರ್ವಾಶ್ರಮದ ತಂದೆ ರುದ್ರಪ್ಪ ಮತ್ತು ತಾಯಿ ಪುಟ್ಟ ಮಾದಮ್ಮ ಅವರ ಪುತ್ರರಾಗಿ 1956 ಆಗಸ್ಟ್ 2 ರಂದು ಗುರು ಸ್ವಾಮೀಜಿ ಜನಿಸಿದರು. 1995ರ ಜನವರಿ 26ರಂದು ಸಾಲೂರು ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಅವರು ಪಟ್ಟಕ್ಕೆ ಬಂದ ನಂತರ ಸಾಲೂರು ಮಠದಲ್ಲಿ ನಿತ್ಯ ದಾಸೋಹ ಸೇವೆ ಮಲೆ ಮಾದೇಶ್ವರ ದೇವಸ್ಥಾನದ ಅಭಿವೃದ್ಧಿ ಮಠದ ಅಭಿವೃದ್ಧಿ ಸಾಲೂರು ಸ್ವಾಮಿ ಟ್ರಸ್ಟ್ ರಚಿಸಿದರು ದೀನ ದಲಿತರ ಹಿಂದುಳಿದವರಿಗಾಗಿ ಪ್ರೌಢಶಾಲೆ ಮತ್ತು ಉಚಿತ ಹಾಸ್ಟೆಲ್ ಸ್ಥಾಪನೆ ಮಾಡಿದರು. ಕೊಳ್ಳೇಗಾಲ ತಾಲೂಕಿನ ಕೆಂಪನ ಪಾಳ್ಯದಲ್ಲಿ ಪ್ರೌಢಶಾಲೆ, ವೃದ್ಧರಿಗೆ ಆಶ್ರಯ ನೀಡಲು ಎಕರೆ ವಿಸ್ತೀರ್ಣದಲ್ಲಿ ಹನೂರು ಸಮೀಪ ವೃದ್ಧಾಶ್ರಮವನ್ನು ಸ್ಥಾಪಿಸಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಮುನ್ನ ತಮ್ಮ ಉತ್ತರಾಧಿಕಾರಿಯಾಗಿ ಶ್ರೀ ಶಾಂತ ಮಲ್ಲಕಾರ್ಜುನಸ್ವಾಮಿ ಅವರನ್ನು ನೇಮಿಸಿದ್ದರು.