ಯಾದಗಿರಿ: ಹೈಟೆನ್ಸನ್ ವಿದ್ಯುತ್ ತಂತಿ ಏಕಾಏಕಿ ತುಂಡಾಗಿ ಬಿದ್ದು ಯುವನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಎಪಿಎಂಸಿ ಯಾರ್ಡ್ ಹಿಂದುಗಡೆ ಮಂಗಳವಾರ ನಡೆದಿದೆ.
ಖಾಜಾ ಪಟೇಲ(22) ಮೃತಪಟ್ಟ ದುರ್ದೈವಿ ಯುವಕ. ವಡಿಗೇರಾ ತಾಲೂಕಿನ ಬಬಲಾದ ಗ್ರಾಮದ ನಿವಾಸಿಯಾಗಿದ್ದು, ತನ್ನ ಸಹೋದರಿಯನ್ನು ಕಾಣಲು ಯಾದಗಿರಿಯ ಮನೆಗೆ ತೆರಳುವ ವೇಳೆ ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದಿದೆ. ಹೈವೋಲ್ಟೇಜ್ನ ಪವರ್ ವೈರ್ ಇದ್ದ ಕಾರಣ ಯುವಕನ ಬೆನ್ನೊಳಗೆ ಹೊಕ್ಕಿದ್ದು ಹೃದಯ ವಿದ್ರಾಯಕವಾಗಿದೆ.
ಜೆಸ್ಕಾಂ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.