ಗಾಜಿನ ಮನೆಯಲ್ಲಿ ವಾಸ

ಚಿತ್ರದುರ್ಗ: ಹನಿಟ್ರ್ಯಾಪ್ ಕುರಿತು ಜವಾಬ್ದಾರಿ ಸ್ಥಾನದಲ್ಲಿರುವವರು ಮುಂದಿನ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಆ ರೀತಿ ಅನುಭವ ಆಗಿಲ್ಲ. ನಾವು ಜನಪ್ರತಿನಿಧಿಗಳು ಗಾಜಿನ ಮನೆಯಲ್ಲಿ ಇರುತ್ತೇವೆ. ಪಕ್ಷಕ್ಕೆ ಸೀಮಿತ ಅಲ್ಲ, ಎಲ್ಲರೂ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕಿದೆ. ಅಧಿಕಾರ ಶಾಶ್ವತ ಅಲ್ಲ, ಸೋಲು, ಗೆಲುವು ಜನ ತೀರ್ಮಾನಿಸುತ್ತಾರೆ ಎಂದರು.