<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಉಡುಪಿ Archives - Samyukta Karnataka</title>
	<atom:link href="https://samyuktakarnataka.in/category/districts/udupi/feed/" rel="self" type="application/rss+xml" />
	<link>https://samyuktakarnataka.in/category/districts/udupi/</link>
	<description>News that connects you to Karnataka since 1921</description>
	<lastBuildDate>Mon, 24 Aug 2026 11:27:26 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>ಉಡುಪಿ Archives - Samyukta Karnataka</title>
	<link>https://samyuktakarnataka.in/category/districts/udupi/</link>
	<width>32</width>
	<height>32</height>
</image> 
	<item>
		<title>ತಂದೆ-ತಾಯಿಯನ್ನೇ ಕೊಂದು 112ಕ್ಕೆ ಕರೆ ಮಾಡಿದ ಪಾಪಿ ಮಗ!</title>
		<link>https://samyuktakarnataka.in/districts/udupi/brahmavara-son-kills-parents-with-hammer-udupi/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 24 Aug 2026 11:27:25 +0000</pubDate>
				<category><![CDATA[ಉಡುಪಿ]]></category>
		<category><![CDATA[#Udupi]]></category>
		<guid isPermaLink="false">https://samyuktakarnataka.in/?p=105416</guid>

					<description><![CDATA[<p>ಉಡುಪಿಯಲ್ಲಿ ದಾರುಣ ಘಟನೆ: ಸುತ್ತಿಗೆಯಿಂದ ಹೊಡೆದು ತಂದೆ-ತಾಯಿಯನ್ನೇ ಕೊಂದ ಮಗ ಸಂ.ಕ.ಸಮಾಚಾರ, ಉಡುಪಿ : ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಹೆತ್ತ ತಂದೆ-ತಾಯಿಯನ್ನೇ ಮಗನೊಬ್ಬ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಾವರದ ಗಾಂಧಿನಗರ ನಿವಾಸಿ ಶಾಹಿದ್ ಅಲಿ (31) ಬಂಧಿತ ಆರೋಪಿ. ಮೃತರನ್ನು ಮೆಹಬೂಬ್ ಹಾಗೂ ಅವರ ಪತ್ನಿ ಸಂಶದ್ [&#8230;]</p>
<p>The post <a href="https://samyuktakarnataka.in/districts/udupi/brahmavara-son-kills-parents-with-hammer-udupi/">ತಂದೆ-ತಾಯಿಯನ್ನೇ ಕೊಂದು 112ಕ್ಕೆ ಕರೆ ಮಾಡಿದ ಪಾಪಿ ಮಗ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಉಡುಪಿಯಲ್ಲಿ ದಾರುಣ ಘಟನೆ: ಸುತ್ತಿಗೆಯಿಂದ ಹೊಡೆದು ತಂದೆ-ತಾಯಿಯನ್ನೇ ಕೊಂದ ಮಗ</strong></p>



<p class="wp-block-paragraph">ಸಂ.ಕ.ಸಮಾಚಾರ, ಉಡುಪಿ : ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ಹೆತ್ತ ತಂದೆ-ತಾಯಿಯನ್ನೇ ಮಗನೊಬ್ಬ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಭಾನುವಾರ ರಾತ್ರಿ ನಡೆದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.</p>



<p class="wp-block-paragraph">ಬ್ರಹ್ಮಾವರದ ಗಾಂಧಿನಗರ ನಿವಾಸಿ ಶಾಹಿದ್ ಅಲಿ (31) ಬಂಧಿತ ಆರೋಪಿ. ಮೃತರನ್ನು ಮೆಹಬೂಬ್ ಹಾಗೂ ಅವರ ಪತ್ನಿ ಸಂಶದ್ ಬೇಗಂ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ಮನೆಯಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>



<p class="wp-block-paragraph">ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಾಹಿದ್ ಅಲಿ ತನ್ನ ತಂದೆ-ತಾಯಿ ತನಗೆ ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದು, ಇದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.</p>



<p class="wp-block-paragraph">ಪೊಲೀಸರಿಗೆ ಮಾಹಿತಿ ನೀಡಿದ ಆರೋಪಿ: ಘಟನೆ ಬಳಿಕ ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಗೆ ಆರೋಪಿ ಸ್ವತಃ 112 ತುರ್ತು ಸಹಾಯವಾಣಿಗೆ ಕರೆ ಮಾಡಿ, ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.</p>



<p class="wp-block-paragraph">ಮಾಹಿತಿ ದೊರೆತ ತಕ್ಷಣ ಬ್ರಹ್ಮಾವರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.</p>



<p class="wp-block-paragraph">ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣವೇನು, ಆರೋಪಿ ನೀಡಿರುವ ಮಾನಸಿಕ ಹಿಂಸೆಯ ಆರೋಪದ ಹಿನ್ನೆಲೆ ಏನು ಹಾಗೂ ಘಟನೆಯ ಹಿಂದೆ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.</p>



<p class="wp-block-paragraph">ಕುಟುಂಬದೊಳಗಿನ ಕಲಹವೇ ಘಟನೆಗೆ ಕಾರಣವೇ ಅಥವಾ ಇತರ ಯಾವುದೇ ವಿಚಾರ ಇದೆಯೇ ಎಂಬುದನ್ನು ತನಿಖೆಯ ಬಳಿಕವಷ್ಟೇ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/sugar-prices-drop-4-but-still-27-costlier/">ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ</a></li>
<li><a class="wp-block-latest-posts__post-title" href="https://samyuktakarnataka.in/news/karnataka/karnataka-teachers-tr-prefix-dk-shivakumar/">ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ</a></li>
<li><a class="wp-block-latest-posts__post-title" href="https://samyuktakarnataka.in/news/india/national-teachers-awards-2026-droupadi-murmu/">ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು</a></li>
<li><a class="wp-block-latest-posts__post-title" href="https://samyuktakarnataka.in/news/karnataka/prajaseva-abhiyana-kudligi-dk-shivakumar/">ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ</a></li>
<li><a class="wp-block-latest-posts__post-title" href="https://samyuktakarnataka.in/entertainment/mohanlal-operation-ganga-movie-vishnu-mohan/">ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ</a></li>
</ul><p>The post <a href="https://samyuktakarnataka.in/districts/udupi/brahmavara-son-kills-parents-with-hammer-udupi/">ತಂದೆ-ತಾಯಿಯನ್ನೇ ಕೊಂದು 112ಕ್ಕೆ ಕರೆ ಮಾಡಿದ ಪಾಪಿ ಮಗ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಉಡುಪಿ ಶೂಟೌಟ್: ತಪ್ಪಿಸಲೆತ್ನಿಸಿದ ಇನ್ನೋರ್ವ ಆರೋಪಿಗೆ ಗುಂಡೇಟು</title>
		<link>https://samyuktakarnataka.in/districts/udupi/udupi-david-dsouza-murder-case-anuj-patil-police-firing/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 24 Aug 2026 06:03:35 +0000</pubDate>
				<category><![CDATA[ಉಡುಪಿ]]></category>
		<category><![CDATA[#Udupi]]></category>
		<category><![CDATA[police]]></category>
		<guid isPermaLink="false">https://samyuktakarnataka.in/?p=105376</guid>

					<description><![CDATA[<p>ಡೇವಿಡ್ ಡಿ&#8217;ಸೋಜಾ ಕೊಲೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆ, ಪಿಸ್ತೂಲ್ ಕಸಿದು ಗುಂಡು ಹಾರಿಸಿದ ಆರೋಪಿಗೆ ಶೂಟೌಟ್ ಸಂ.ಕ. ಸಮಾಚಾರ, ಉಡುಪಿ : ಮುದರಂಗಡಿಯ ಗುತ್ತಿಗೆದಾರ, ಉದ್ಯಮಿ ಡೇವಿಡ್ ಡಿ&#8217;ಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪಿಎಸ್ಐಯಿಂದ ಪಿಸ್ತೂಲ್ ಕಸಿದು ಗುಂಡು ಹಾರಿಸಿದ ಆರೋಪಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಮುಂಬೈ ಮೂಲದ ಕುಖ್ಯಾತ [&#8230;]</p>
<p>The post <a href="https://samyuktakarnataka.in/districts/udupi/udupi-david-dsouza-murder-case-anuj-patil-police-firing/">ಉಡುಪಿ ಶೂಟೌಟ್: ತಪ್ಪಿಸಲೆತ್ನಿಸಿದ ಇನ್ನೋರ್ವ ಆರೋಪಿಗೆ ಗುಂಡೇಟು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಡೇವಿಡ್ ಡಿ&#8217;ಸೋಜಾ ಕೊಲೆ ಪ್ರಕರಣ: ಪೊಲೀಸರ ಮೇಲೆ ಹಲ್ಲೆ, ಪಿಸ್ತೂಲ್ ಕಸಿದು ಗುಂಡು ಹಾರಿಸಿದ ಆರೋಪಿಗೆ ಶೂಟೌಟ್</strong></p>



<p class="wp-block-paragraph">ಸಂ.ಕ. ಸಮಾಚಾರ, ಉಡುಪಿ : ಮುದರಂಗಡಿಯ ಗುತ್ತಿಗೆದಾರ, ಉದ್ಯಮಿ ಡೇವಿಡ್ ಡಿ&#8217;ಸೋಜಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ ಕರೆತರುತ್ತಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪಿಎಸ್ಐಯಿಂದ ಪಿಸ್ತೂಲ್ ಕಸಿದು ಗುಂಡು ಹಾರಿಸಿದ ಆರೋಪಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.</p>



<p class="wp-block-paragraph">ಮುಂಬೈ ಮೂಲದ ಕುಖ್ಯಾತ ಗ್ಯಾಂಗ್ ಸ್ಟರ್ ಅನೂಜ್ ಪಾಟೀಲ್ (35) ಗುಂಡೇಟಿಗೊಳಗಾದ ಆರೋಪಿಯಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಅಜ್ಜರಕಾಡು‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.</p>



<p class="wp-block-paragraph">ಆ. 7ರಂದು ಅಪರಾಹ್ನ 3.45ರ ಸುಮಾರಿಗೆ ಕಾಪು ತಾಲೂಕಿನ ಮುದರಂಗಡಿ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್ ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿ&#8217;ಸೋಜಾನನ್ನು ಮೋಟಾರ್ ಸೈಕಲ್ ನಲ್ಲಿ ಬಂದಿದ್ದ ದುಷ್ಕರ್ಮಿಗಳ ಪೈಕಿ ಸಹಸವಾರ ಪಿಸ್ತೂಲ್ ನಿಂದ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿತ್ತು.</p>



<p class="wp-block-paragraph">ಪ್ರಕರಣದ ತನಿಖೆಯ ಭಾಗವಾಗಿ ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ನಂಜಾ ನಾಯಕ್, ಕೊಲ್ಲೂರು ಠಾಣೆಯ ಪಿಎಸ್ಐ ವಿನಯ್ ಹಾಗೂ ಸಿಬ್ಬಂದಿ ತಂಡ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಡೇವಿಡ್ ಡಿ&#8217;ಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಶೂಟರ್ ಗಳನ್ನು ಕಳುಹಿಸಿದ ಆರೋಪದ ಮೇಲೆ ಮುಂಬೈನ ಗ್ಯಾಂಗ್ ಸ್ಟರ್ ಅನೂಜ್ ಪಾಟೀಲ್ ನನ್ನು ಬೆಳಗ್ಗೆ 6ರಿಂದ 6.30ರ ನಡುವೆ ಬಂಧಿಸಿತ್ತು.</p>



<p class="wp-block-paragraph">ಬಂಧಿಸಿ ಕರೆತರುತ್ತಿದ್ದ ವೇಳೆ ಅನೂಜ್ ಪಾಟೀಲ್ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕೊಲ್ಲೂರು ಪಿಎಸ್ಐ ವಿನಯ್ ಅವರ ಪಿಸ್ತೂಲ್ ಕಸಿದುಕೊಂಡು ಪೊಲೀಸರತ್ತ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕುಂದಾಪುರ ಪಿಎಸ್ಐ ನಂಜಾ ನಾಯಕ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಗುಂಡೇಟಿನಿಂದ ಗಾಯಗೊಂಡ ಅನೂಜ್ ಪಾಟೀಲ್ ನನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.</p>



<p class="wp-block-paragraph">ಅನೂಜ್ ಪಾಟೀಲ್ ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, 2017ರಿಂದ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ಮಹಾರಾಷ್ಟ್ರದಲ್ಲಿ ಮೊಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಆತನ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿವೆ.<br>ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತಿನಲ್ಲಿ ಐದು, ದಮನ್ ಮತ್ತು ದಿಯುನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>



<p class="wp-block-paragraph">ಡೇವಿಡ್ ಡಿ&#8217;ಸೋಜಾ ಕೊಲೆ ಪ್ರಕರಣದಲ್ಲಿ ಈಗಾಗಲೇ 10 ಮಂದಿಯನ್ನು ಬಂಧಿಸಲಾಗಿದ್ದು, ಇನ್ನಷ್ಟು ಮಂದಿಯ‌ ಕೃತ್ಯ ಹಾಗೂ ಕೃತ್ಯದ ಹಿಂದಿರುವ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.</p>



<p class="wp-block-paragraph"></p>
<p>The post <a href="https://samyuktakarnataka.in/districts/udupi/udupi-david-dsouza-murder-case-anuj-patil-police-firing/">ಉಡುಪಿ ಶೂಟೌಟ್: ತಪ್ಪಿಸಲೆತ್ನಿಸಿದ ಇನ್ನೋರ್ವ ಆರೋಪಿಗೆ ಗುಂಡೇಟು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಶೂಟೌಟ್ ಪ್ರಕರಣ: 24 ಗಂಟೆಯೊಳಗೆ ಪ್ರಮುಖ ಆರೋಪಿಗಳ ಬಂಧನ</title>
		<link>https://samyuktakarnataka.in/districts/udupi/udupi-david-dsouza-shootout-three-accused-arrested/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 08 Aug 2026 06:35:55 +0000</pubDate>
				<category><![CDATA[ಉಡುಪಿ]]></category>
		<category><![CDATA[#Udupi]]></category>
		<category><![CDATA[police]]></category>
		<guid isPermaLink="false">https://samyuktakarnataka.in/?p=104440</guid>

					<description><![CDATA[<p>ಉಡುಪಿ ಕಾಪು ಮುದರಂಗಡಿ ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣದಲ್ಲಿ 24 ಗಂಟೆಯೊಳಗೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಪಿಎಸ್ಐ ಮೇಲೆ ಗುಂಡಿನ ದಾಳಿ ನಡೆದಿದ್ದು, ಪ್ರತಿದಾಳಿಯಲ್ಲಿ ಆರೋಪಿ ಗಾಯಗೊಂಡಿದ್ದಾನೆ. ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಶುಕ್ರವಾರ ನಡೆದ ಗುತ್ತಿಗೆದಾರ ಡೇವಿಡ್ ಡಿ’ಸೋಜಾ ಶೂಟೌಟ್ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಗುಂಡಿನ ದಾಳಿ [&#8230;]</p>
<p>The post <a href="https://samyuktakarnataka.in/districts/udupi/udupi-david-dsouza-shootout-three-accused-arrested/">ಶೂಟೌಟ್ ಪ್ರಕರಣ: 24 ಗಂಟೆಯೊಳಗೆ ಪ್ರಮುಖ ಆರೋಪಿಗಳ ಬಂಧನ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಉಡುಪಿ ಕಾಪು ಮುದರಂಗಡಿ ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣದಲ್ಲಿ 24 ಗಂಟೆಯೊಳಗೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಪಿಎಸ್ಐ ಮೇಲೆ ಗುಂಡಿನ ದಾಳಿ ನಡೆದಿದ್ದು, ಪ್ರತಿದಾಳಿಯಲ್ಲಿ ಆರೋಪಿ ಗಾಯಗೊಂಡಿದ್ದಾನೆ.</strong></p>



<p class="wp-block-paragraph">ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಶುಕ್ರವಾರ ನಡೆದ ಗುತ್ತಿಗೆದಾರ ಡೇವಿಡ್ ಡಿ’ಸೋಜಾ ಶೂಟೌಟ್ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಯೊಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆದಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಪ್ರಮುಖ ಆರೋಪಿ ಕಾಲಿಗೆ ಗುಂಡೇಟು ತಗುಲಿ ಗಾಯಗೊಂಡಿದ್ದಾನೆ.</p>



<p class="wp-block-paragraph"><strong>ಕಚೇರಿಯಿಂದ ವಾಪಸಾಗುತ್ತಿದ್ದಾಗ ಗುಂಡಿನ ದಾಳಿ :</strong> ಡೇವಿಡ್ ಡಿ’ಸೋಜಾ ಅವರು ತಮ್ಮ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿಯಿಂದ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದಿದ್ದ ಅಪರಿಚಿತರ ತಂಡ ಅವರ ಮೇಲೆ ದಾಳಿ ನಡೆಸಿತ್ತು. ಆರೋಪಿಗಳ ಪೈಕಿ ಒಬ್ಬಾತ ಪಿಸ್ತೂಲ್‌ನಿಂದ ಡೇವಿಡ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಡೇವಿಡ್ ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದರು. ಘಟನೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತನಿಖೆಗೆ ಪ್ರಮುಖ ಸುಳಿವಾಗಿ ಪರಿಣಮಿಸಿತ್ತು.</p>



<p class="wp-block-paragraph"><strong>ಬಸ್‌ನಲ್ಲಿ ಭಟ್ಕಳದತ್ತ ಪರಾರಿ : </strong>ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್‌ನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತು. ಮಾಹಿತಿ ಆಧರಿಸಿ ಪೊಲೀಸರು ಬೈಂದೂರಿನ ಒತ್ತಿನಾಣೆ ಬಳಿ ಬಸ್‌ನ್ನು ತಡೆದು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಮೂವರು ಆರೋಪಿಗಳು ಪೊಲೀಸರನ್ನು ಕಂಡು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದಾರೆ.</p>



<p class="wp-block-paragraph">ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಉತ್ತರ ಪ್ರದೇಶದ ಥಾಣಾ ಫಿಲ್ವದ ರಾಜು (42) ಎಂಬ ಆರೋಪಿ ಕಾಪು ಪೊಲೀಸ್ ಠಾಣೆಯ ಪಿಎಸ್ಐ ತೇಜಸ್ವಿ ಅವರನ್ನು ದೂಡಿ, ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಪೊಲೀಸರತ್ತ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>



<p class="wp-block-paragraph"><strong>ಆತ್ಮರಕ್ಷಣೆಗಾಗಿ ಪೊಲೀಸರಿಂದ ಗುಂಡಿನ ದಾಳಿ :</strong> ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ರಾಜು ವಿರುದ್ಧ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ರಾಜುವಿನ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜುವಿನ ಬಳಿಯಿದ್ದ ಪಿಸ್ತೂಲ್‌ನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡೇವಿಡ್ ಡಿ’ಸೋಜಾ ಅವರಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಮುಖ ಆರೋಪಿಗಳಲ್ಲಿ ರಾಜು ಕೂಡ ಒಬ್ಬ ಎಂದು ಪೊಲೀಸರು ತಿಳಿಸಿದ್ದಾರೆ.</p>



<p class="wp-block-paragraph">ಪೊಲೀಸರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜು ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಕೂಡ ದಾಖಲಿಸಲಾಗಿದೆ.</p>



<p class="wp-block-paragraph"><strong>ಕುಮಟಾ, ಭಟ್ಕಳದಲ್ಲಿ ಇಬ್ಬರು ಆರೋಪಿಗಳ ಬಂಧನ : </strong>ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳನ್ನೂ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ. ಉತ್ತರಾಖಂಡ ಮೂಲದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23)ನನ್ನು ಕುಮಟಾದಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಬಿಹಾರ ಮೂಲದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38)ನನ್ನು ಭಟ್ಕಳದಲ್ಲಿ ಪೊಲೀಸರು ಬಂಧಿಸಿದ್ದಾರೆ.</p>



<p class="wp-block-paragraph">ಈ ಮೂಲಕ ಡೇವಿಡ್ ಡಿ’ಸೋಜಾ ಹತ್ಯೆ ಪ್ರಕರಣದಲ್ಲಿ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಪ್ರಮುಖ ಆರೋಪಿಗಳು ಪೊಲೀಸರ ವಶಕ್ಕೆ ಬಂದಿದ್ದಾರೆ.</p>



<p class="wp-block-paragraph"><strong>ಪಿಎಸ್ಐ ತೇಜಸ್ವಿಗೆ ಗಾಯ : </strong>ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಆರೋಪಿಯ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಕಾಪು ಪೊಲೀಸ್ ಠಾಣೆಯ ಪಿಎಸ್ಐ ತೇಜಸ್ವಿ ಅವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟಿಗೆ ಒಳಗಾದ ಆರೋಪಿ ರಾಜು ಕೂಡ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.</p>



<p class="wp-block-paragraph"><strong>ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ : </strong>ಡೇವಿಡ್ ಡಿ’ಸೋಜಾ ಅವರ ಮೇಲೆ ದಾಳಿ ನಡೆಸಲು ಆರೋಪಿಗಳು ಬಳಸಿದ್ದ ಮೋಟಾರ್ ಬೈಕ್‌ನ್ನು ಎರ್ಮಾಳ್‌ನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಆರೋಪಿಗಳ ಚಲನವಲನ ಹಾಗೂ ತಾಂತ್ರಿಕ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.</p>



<p class="wp-block-paragraph"><strong>ಸುಪಾರಿ ಹತ್ಯೆಯ ಶಂಕೆ : </strong>ಡೇವಿಡ್ ಡಿ’ಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯರಾಜ್ಯದ ಕಂಪನಿಯೊಂದಿಗಿನ ಹಣಕಾಸಿನ ವಿಚಾರದಲ್ಲಿ ಉಂಟಾದ ವೈಮನಸ್ಸೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph">ಈ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಡೇವಿಡ್ ಅವರ ಹತ್ಯೆಗೆ ಸುಪಾರಿ ನೀಡಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೃತ್ಯಕ್ಕೆ ಸಹಕರಿಸಿದವರು, ಆರೋಪಿಗಳಿಗೆ ಹಣಕಾಸಿನ ನೆರವು ನೀಡಿದವರು ಹಾಗೂ ಅವರಿಗೆ ಆಶ್ರಯ ನೀಡಿದವರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.</p>



<p class="wp-block-paragraph"><strong>ಹಲವು ತಂಡಗಳಿಂದ ಕಾರ್ಯಾಚರಣೆ :</strong> ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಾಪು ವೃತ್ತ ನಿರೀಕ್ಷಕ ಅಝ್ಮತ್ ಆಲಿ ಜಿ., ಡಿಎಸ್‌ಬಿ ವಿಭಾಗದ ಪಿಐ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>



<p class="wp-block-paragraph">ಭಟ್ಕಳ ಮತ್ತು ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಸಿಡಿಆರ್ ಸೆಲ್ ಸೇರಿದಂತೆ ವಿವಿಧ ಘಟಕಗಳು ತನಿಖೆಯಲ್ಲಿ ಸಹಕರಿಸಿವೆ.</p>



<p class="wp-block-paragraph">ಘಟನೆ ನಡೆದ 24 ಗಂಟೆಯೊಳಗೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಉಡುಪಿ ಜಿಲ್ಲಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪ್ರಕರಣದ ಹಿಂದೆ ಇರುವ ಸಂಪೂರ್ಣ ಜಾಲ, ಸುಪಾರಿ ನೀಡಿದವರು ಹಾಗೂ ಆರ್ಥಿಕ ವ್ಯವಹಾರದ ಹಿನ್ನೆಲೆಯನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/sugar-prices-drop-4-but-still-27-costlier/">ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ</a></li>
<li><a class="wp-block-latest-posts__post-title" href="https://samyuktakarnataka.in/news/karnataka/karnataka-teachers-tr-prefix-dk-shivakumar/">ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ</a></li>
<li><a class="wp-block-latest-posts__post-title" href="https://samyuktakarnataka.in/news/india/national-teachers-awards-2026-droupadi-murmu/">ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು</a></li>
<li><a class="wp-block-latest-posts__post-title" href="https://samyuktakarnataka.in/news/karnataka/prajaseva-abhiyana-kudligi-dk-shivakumar/">ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ</a></li>
<li><a class="wp-block-latest-posts__post-title" href="https://samyuktakarnataka.in/entertainment/mohanlal-operation-ganga-movie-vishnu-mohan/">ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ</a></li>
</ul><p>The post <a href="https://samyuktakarnataka.in/districts/udupi/udupi-david-dsouza-shootout-three-accused-arrested/">ಶೂಟೌಟ್ ಪ್ರಕರಣ: 24 ಗಂಟೆಯೊಳಗೆ ಪ್ರಮುಖ ಆರೋಪಿಗಳ ಬಂಧನ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಹಾಡಹಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಹತ್ಯೆ</title>
		<link>https://samyuktakarnataka.in/districts/udupi/congress-leader-shot-dead-in-broad-daylight/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 07 Aug 2026 12:14:12 +0000</pubDate>
				<category><![CDATA[ಉಡುಪಿ]]></category>
		<category><![CDATA[udupi]]></category>
		<guid isPermaLink="false">https://samyuktakarnataka.in/?p=104380</guid>

					<description><![CDATA[<p>ಉಡುಪಿ: ಕಾಂಗ್ರೆಸ್ ಮುಖಂಡ, ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ (55) ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಉಡುಪಿಯ ಮುದರಂಗಡಿ ಪೇಟೆಯಲ್ಲಿರುವ ಡೇವಿಡ್ ಡಿಸೋಜಾ ಅವರ ಕಚೇರಿ ಸಮೀಪ ಮಧ್ಯಾಹ್ನ ಈ ಶೂಟೌಟ್ ನಡೆದಿದ್ದು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಒಂದು ಗುಂಡು ಡೇವಿಡ್ ಅವರ ಹಣೆಗೆ ತಗುಲಿದ್ದು, ಇನ್ನೆರಡು ಗುಂಡುಗಳು ಕೈಗೆ ತಗುಲಿವೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು [&#8230;]</p>
<p>The post <a href="https://samyuktakarnataka.in/districts/udupi/congress-leader-shot-dead-in-broad-daylight/">ಹಾಡಹಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಹತ್ಯೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಉಡುಪಿ:</strong> ಕಾಂಗ್ರೆಸ್ ಮುಖಂಡ, ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ (55) ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ.</p>



<p class="wp-block-paragraph">ಉಡುಪಿಯ ಮುದರಂಗಡಿ ಪೇಟೆಯಲ್ಲಿರುವ ಡೇವಿಡ್ ಡಿಸೋಜಾ ಅವರ ಕಚೇರಿ ಸಮೀಪ ಮಧ್ಯಾಹ್ನ ಈ ಶೂಟೌಟ್ ನಡೆದಿದ್ದು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಒಂದು ಗುಂಡು ಡೇವಿಡ್ ಅವರ ಹಣೆಗೆ ತಗುಲಿದ್ದು, ಇನ್ನೆರಡು ಗುಂಡುಗಳು ಕೈಗೆ ತಗುಲಿವೆ.</p>



<p class="wp-block-paragraph">ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>



<p class="wp-block-paragraph">ಘಟನೆಯ ಬಳಿಕ ಮೃತದೇಹವನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪಡುಬಿದ್ರೆ ಹಾಗೂ ಶಿರ್ವ ಪೊಲೀಸ್ ಠಾಣೆಗಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.</p>



<p class="wp-block-paragraph">ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ದ್ವೇಷ, ವ್ಯವಹಾರಿಕ ವೈಷಮ್ಯ ಅಥವಾ ಇತರೆ ಕಾರಣಗಳ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಮುದರಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="9HDTelGltC"><a href="https://samyuktakarnataka.in/news/india/hapida-skynex-personal-electric-flying-vehicle-successful-test-flight-ravi-tamta-india/">ಹಾರಿದ ಹೊಸ ಕನಸು! : ಹಾರುವ ವಾಹನ ಯಶಸ್ವಿ ಪರೀಕ್ಷಾ ಹಾರಾಟ</a></blockquote><iframe class="wp-embedded-content" sandbox="allow-scripts" security="restricted"  title="“ಹಾರಿದ ಹೊಸ ಕನಸು! : ಹಾರುವ ವಾಹನ ಯಶಸ್ವಿ ಪರೀಕ್ಷಾ ಹಾರಾಟ” — Samyukta Karnataka" src="https://samyuktakarnataka.in/news/india/hapida-skynex-personal-electric-flying-vehicle-successful-test-flight-ravi-tamta-india/embed/#?secret=poR2kBnJDI#?secret=9HDTelGltC" data-secret="9HDTelGltC" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/udupi/congress-leader-shot-dead-in-broad-daylight/">ಹಾಡಹಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಹತ್ಯೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಉದ್ಯಮಿ ಹತ್ಯೆ ಪ್ರಕರಣ : ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು</title>
		<link>https://samyuktakarnataka.in/districts/udupi/udupi-businessman-ivan-mascarenhas-murder-financial-dispute-special-teams/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 31 Jul 2026 09:35:04 +0000</pubDate>
				<category><![CDATA[ಉಡುಪಿ]]></category>
		<category><![CDATA[#Death]]></category>
		<category><![CDATA[#Udupi]]></category>
		<category><![CDATA[police]]></category>
		<guid isPermaLink="false">https://samyuktakarnataka.in/?p=103830</guid>

					<description><![CDATA[<p>ಉಡುಪಿ: ಕುಂದಾಪುರದಲ್ಲಿ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬಹಿರಂಗವಾಗಿದ್ದು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವೇ ಕೊಲೆಗೆ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪರಾರಿಯಾಗಿರುವ ಆರೋಪಿ ಡೆರಿಕ್ ಕ್ರಾಸ್ತಾನನ್ನು ಬಂಧಿಸಲು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಸಿಗಡಿ (ಶ್ರಿಂಪ್) ವ್ಯಾಪಾರ ನಡೆಸುತ್ತಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಅವರಿಗೆ ಗುರುವಾರ [&#8230;]</p>
<p>The post <a href="https://samyuktakarnataka.in/districts/udupi/udupi-businessman-ivan-mascarenhas-murder-financial-dispute-special-teams/">ಉದ್ಯಮಿ ಹತ್ಯೆ ಪ್ರಕರಣ : ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಉಡುಪಿ: ಕುಂದಾಪುರದಲ್ಲಿ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಬಹಿರಂಗವಾಗಿದ್ದು, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವೇ ಕೊಲೆಗೆ ಪ್ರಮುಖ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪರಾರಿಯಾಗಿರುವ ಆರೋಪಿ ಡೆರಿಕ್ ಕ್ರಾಸ್ತಾನನ್ನು ಬಂಧಿಸಲು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.</p>



<p class="wp-block-paragraph">ಪೊಲೀಸರ ಮಾಹಿತಿ ಪ್ರಕಾರ, ಸಿಗಡಿ (ಶ್ರಿಂಪ್) ವ್ಯಾಪಾರ ನಡೆಸುತ್ತಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಅವರಿಗೆ ಗುರುವಾರ ರಾತ್ರಿ ಸುಮಾರು 11.45 ಗಂಟೆಗೆ ಡೆರಿಕ್ ಕ್ರಾಸ್ತಾ ದೂರವಾಣಿ ಕರೆ ಮಾಡಿದ್ದ. ಈ ವೇಳೆ ಸಿಗಡಿ ಕೃಷಿಗೆ ಸಂಬಂಧಿಸಿದ ಬಾಕಿ ಹಣದ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, &#8220;ಧೈರ್ಯ ಇದ್ದರೆ ಕುಂದಾಪುರಕ್ಕೆ ಒಬ್ಬರೇ ಬನ್ನಿ&#8221; ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ.</p>



<p class="wp-block-paragraph">ಬಳಿಕ ರಾತ್ರಿ ಸುಮಾರು 1.30 ಗಂಟೆಗೆ ಡೆರಿಕ್ ತನ್ನ ಸ್ಥಳದ (ಲೊಕೇಶನ್) ಮಾಹಿತಿಯನ್ನು ಐವನ್ ಅವರಿಗೆ ಕಳುಹಿಸಿದ್ದ. ಅದರಂತೆ ಶುಕ್ರವಾರ ಬೆಳಗಿನ ಜಾವ ಸುಮಾರು 3.15 ಗಂಟೆಗೆ ಐವನ್ ಕುಂದಾಪುರದ ಹೋಲಿ ರೋಸಾರಿಯೊ ಚರ್ಚ್ ಎದುರಿನ ರಸ್ತೆಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಡೆರಿಕ್ ಬರುವುದನ್ನು ಕಾಯುತ್ತಿದ್ದರು.</p>



<p class="wp-block-paragraph">ಅದೇ ವೇಳೆ ಕಪ್ಪು-ಕೆಂಪು ಬಣ್ಣದ ಥಾರ್ ವಾಹನದಲ್ಲಿ ಅಲ್ಲಿಗೆ ಬಂದ ಡೆರಿಕ್, ಐವನ್ ಅವರ ಕಾರಿನ ಎದುರು ತನ್ನ ವಾಹನ ನಿಲ್ಲಿಸಿದ್ದಾನೆ. ಐವನ್ ಕಾರಿನಿಂದ ಕೆಳಗಿಳಿದ ತಕ್ಷಣ ಪಿಸ್ತೂಲ್‌ನಿಂದ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>



<p class="wp-block-paragraph">ಗುಂಡೇಟಿನಿಂದ ಸೊಂಟ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗೊಂಡ ಐವನ್ ರಸ್ತೆಯಲ್ಲೇ ಕುಸಿದುಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.</p>



<p class="wp-block-paragraph"><strong>ಆರೋಪಿ ಬಂಧನಕ್ಕೆ ಮೂರು ವಿಶೇಷ ತಂಡ :</strong> ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಡುಪಿ ಪೊಲೀಸರು ಪರಾರಿಯಾಗಿರುವ ಡೆರಿಕ್ ಕ್ರಾಸ್ತಾ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಕರೆಗಳ ವಿವರಗಳು ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ತನಿಖೆ ಮುಂದುವರಿದಿದೆ.</p>



<p class="wp-block-paragraph"><strong>ರೌಡಿಶೀಟರ್ ಹಿನ್ನೆಲೆ : </strong>ಪೊಲೀಸರ ಮಾಹಿತಿ ಪ್ರಕಾರ, ಐವನ್ ರಿಚರ್ಡ್ ಮಸ್ಕರೇನಸ್, &#8216;ಮುನ್ನಾ&#8217; ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದು. ಈ ಹಿಂದೆ ಉಡುಪಿ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಕುಕ್ಕಿಕಟ್ಟೆ ಪಿಟ್ಟಿ ನಾಗೇಶ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಪಿಟ್ಟಿ ನಾಗೇಶ ಅವರ ತಂಡ ಹಲವು ಬಾರಿ ಐವನ್ ಹತ್ಯೆಗೆ ಸಂಚು ರೂಪಿಸಿದ್ದ ಮಾಹಿತಿಯೂ ಪೊಲೀಸರಿಗೆ ಲಭ್ಯವಿತ್ತು. ಇದೀಗ ಐವನ್ ಗುಂಡಿನ ದಾಳಿಗೆ ಬಲಿಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ.</p>



<p class="wp-block-paragraph">ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಹಣಕಾಸಿನ ವ್ಯವಹಾರ, ವೈಯಕ್ತಿಕ ವೈಷಮ್ಯ ಹಾಗೂ ಇತರೆ ಸಂಭವನೀಯ ಕಾರಣಗಳ ಕುರಿತೂ ತನಿಖೆ ಮುಂದುವರಿಸಿದ್ದಾರೆ. ಆರೋಪಿ ಡೆರಿಕ್ ಕ್ರಾಸ್ತಾ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/sugar-prices-drop-4-but-still-27-costlier/">ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ</a></li>
<li><a class="wp-block-latest-posts__post-title" href="https://samyuktakarnataka.in/news/karnataka/karnataka-teachers-tr-prefix-dk-shivakumar/">ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ</a></li>
<li><a class="wp-block-latest-posts__post-title" href="https://samyuktakarnataka.in/news/india/national-teachers-awards-2026-droupadi-murmu/">ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು</a></li>
<li><a class="wp-block-latest-posts__post-title" href="https://samyuktakarnataka.in/news/karnataka/prajaseva-abhiyana-kudligi-dk-shivakumar/">ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ</a></li>
<li><a class="wp-block-latest-posts__post-title" href="https://samyuktakarnataka.in/entertainment/mohanlal-operation-ganga-movie-vishnu-mohan/">ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ</a></li>
</ul><p>The post <a href="https://samyuktakarnataka.in/districts/udupi/udupi-businessman-ivan-mascarenhas-murder-financial-dispute-special-teams/">ಉದ್ಯಮಿ ಹತ್ಯೆ ಪ್ರಕರಣ : ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿಗೆ ಗುಂಡಿಕ್ಕಿ ಬರ್ಬರ ಹತ್ಯೆ</title>
		<link>https://samyuktakarnataka.in/districts/udupi/kundapura-businessman-shot-dead-church-road-udupi/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 31 Jul 2026 04:57:14 +0000</pubDate>
				<category><![CDATA[ಉಡುಪಿ]]></category>
		<category><![CDATA[#Death]]></category>
		<category><![CDATA[#Udupi]]></category>
		<guid isPermaLink="false">https://samyuktakarnataka.in/?p=103788</guid>

					<description><![CDATA[<p>ಉಡುಪಿ: ಜಿಲ್ಲೆಯ ಕುಂದಾಪುರ ಪಟ್ಟಣದ ಚರ್ಚ್ ರಸ್ತೆಯಲ್ಲಿ ಉದ್ಯಮಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶುಕ್ರವಾರ ನಸುಕಿನ ವೇಳೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೃತರನ್ನು ಐವನ್ ರಿಚಾರ್ಡ್ ಮಸ್ಕರೇಂಞಸ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಅವರನ್ನು ಗುರಿಯಾಗಿಸಿಕೊಂಡು ಪಿಸ್ತೂಲ್‌ನಿಂದ ಗುಂಡು ಹಾರಿಸಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಅವರು ತಮ್ಮ ಕಾರಿನ ಸಮೀಪವೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ [&#8230;]</p>
<p>The post <a href="https://samyuktakarnataka.in/districts/udupi/kundapura-businessman-shot-dead-church-road-udupi/">ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿಗೆ ಗುಂಡಿಕ್ಕಿ ಬರ್ಬರ ಹತ್ಯೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಉಡುಪಿ: ಜಿಲ್ಲೆಯ ಕುಂದಾಪುರ ಪಟ್ಟಣದ ಚರ್ಚ್ ರಸ್ತೆಯಲ್ಲಿ ಉದ್ಯಮಿಯೊಬ್ಬರನ್ನು ಪಿಸ್ತೂಲ್‌ನಿಂದ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಶುಕ್ರವಾರ ನಸುಕಿನ ವೇಳೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.</p>



<p class="wp-block-paragraph">ಮೃತರನ್ನು ಐವನ್ ರಿಚಾರ್ಡ್ ಮಸ್ಕರೇಂಞಸ್ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಅವರನ್ನು ಗುರಿಯಾಗಿಸಿಕೊಂಡು ಪಿಸ್ತೂಲ್‌ನಿಂದ ಗುಂಡು ಹಾರಿಸಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಅವರು ತಮ್ಮ ಕಾರಿನ ಸಮೀಪವೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.</p>



<p class="wp-block-paragraph">ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸ್ಥಳದಲ್ಲಿದ್ದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.</p>



<p class="wp-block-paragraph">ಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ದ್ವೇಷ, ವ್ಯವಹಾರ ಸಂಬಂಧಿತ ವೈಮನಸ್ಸು ಅಥವಾ ಇತರ ಯಾವುದೇ ಕಾರಣಗಳ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯೇ ಎಂಬ ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</p>



<p class="wp-block-paragraph">ಈ ಘಟನೆ ಕುಂದಾಪುರ ನಗರದಲ್ಲಿ ಸಂಚಲನ ಮೂಡಿಸಿದ್ದು, ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವ ನಿರೀಕ್ಷೆಯಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/sugar-prices-drop-4-but-still-27-costlier/">ಸಕ್ಕರೆ ಬೆಲೆಯಲ್ಲಿ 4% ಇಳಿಕೆ: ಗ್ರಾಹಕರಿಗೆ ಸಿಹಿ ಸುದ್ದಿ, ಆದರೆ ಕಳೆದ ತಿಂಗಳಕ್ಕಿಂತ 27% ದುಬಾರಿ</a></li>
<li><a class="wp-block-latest-posts__post-title" href="https://samyuktakarnataka.in/news/karnataka/karnataka-teachers-tr-prefix-dk-shivakumar/">ಶಿಕ್ಷಕರಿಗೆ ರಾಜ್ಯ ಸರ್ಕಾರದ ವಿಶೇಷ ಗೌರವ; ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ‘Tr. ಗೌರವಸೂಚಕ ಪದ ಬಳಕೆ</a></li>
<li><a class="wp-block-latest-posts__post-title" href="https://samyuktakarnataka.in/news/india/national-teachers-awards-2026-droupadi-murmu/">ಗುಣಮಟ್ಟದ ಶಿಕ್ಷಣದಿಂದ ವಿಕಸಿತ ಭಾರತ ಸಾಧ್ಯ: ರಾಷ್ಟ್ರಪತಿ ಮುರ್ಮು</a></li>
<li><a class="wp-block-latest-posts__post-title" href="https://samyuktakarnataka.in/news/karnataka/prajaseva-abhiyana-kudligi-dk-shivakumar/">ಜನರ ಮನೆಬಾಗಿಲಿಗೆ ಸರ್ಕಾರ: ಕೂಡ್ಲಿಗಿಯಿಂದ ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ</a></li>
<li><a class="wp-block-latest-posts__post-title" href="https://samyuktakarnataka.in/entertainment/mohanlal-operation-ganga-movie-vishnu-mohan/">ರಷ್ಯಾ-ಉಕ್ರೇನ್ ಯುದ್ಧದ ‘ಆಪರೇಷನ್ ಗಂಗಾ’ ಕಥೆಗೆ ಮೋಹನ್‌ಲಾಲ್ ಎಂಟ್ರಿ: ಹೊಸ ಸಿನಿಮಾ ಘೋಷಣೆ</a></li>
</ul><p>The post <a href="https://samyuktakarnataka.in/districts/udupi/kundapura-businessman-shot-dead-church-road-udupi/">ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿಗೆ ಗುಂಡಿಕ್ಕಿ ಬರ್ಬರ ಹತ್ಯೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಮಿಸ್ ಯುನಿವರ್ಸ್ ಇಂಡಿಯಾ: ಅಂತಿಮ ಸುತ್ತಿಗೆ ಸ್ಫೂರ್ತಿ ಶೆಟ್ಟಿ ಆಯ್ಕೆ</title>
		<link>https://samyuktakarnataka.in/districts/udupi/miss-universe-india-spurthi-shetty-selected-for-the-final-round/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 17 Jul 2026 15:28:53 +0000</pubDate>
				<category><![CDATA[ಉಡುಪಿ]]></category>
		<category><![CDATA[#Udupi]]></category>
		<guid isPermaLink="false">https://samyuktakarnataka.in/?p=103020</guid>

					<description><![CDATA[<p>ಉಡುಪಿ: ಸಾಮಾನ್ಯ ಕುಟುಂಬದ ಹಿನ್ನೆಲೆಯ ಉಡುಪಿಯ ಸ್ಫೂರ್ತಿ ಶೆಟ್ಟಿ ಅವರು ವೈರ್ಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲೇ ಹುಟ್ಟಿ ಬೆಳೆದು, ಇಲ್ಲೇ ಶಿಕ್ಷಣ ಪೂರೈಸಿರುವ ಚೆಲುವೆ ಸ್ಫೂರ್ತಿ ಶೆಟ್ಟಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 16ನೇ ವಯಸ್ಸಿನಲ್ಲೇ ಸೌಂದರ್ಯ ಸ್ಪರ್ಧಾಲೋಕಕ್ಕೆ ಕಾಲಿಟ್ಟಿದ್ದು, 2018ರಿಂದ ಹಲವು ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. 2020ರಲ್ಲಿ ಕ್ವೀನ್ ಆಫ್ ಕರ್ನಾಟಕ ಕಿರೀಟ ಪಡೆದಿದ್ದು, 2021ರಲ್ಲಿ ಮಿಸ್ ಇಂಟರ್ [&#8230;]</p>
<p>The post <a href="https://samyuktakarnataka.in/districts/udupi/miss-universe-india-spurthi-shetty-selected-for-the-final-round/">ಮಿಸ್ ಯುನಿವರ್ಸ್ ಇಂಡಿಯಾ: ಅಂತಿಮ ಸುತ್ತಿಗೆ ಸ್ಫೂರ್ತಿ ಶೆಟ್ಟಿ ಆಯ್ಕೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಉಡುಪಿ: </strong>ಸಾಮಾನ್ಯ ಕುಟುಂಬದ ಹಿನ್ನೆಲೆಯ ಉಡುಪಿಯ ಸ್ಫೂರ್ತಿ ಶೆಟ್ಟಿ ಅವರು ವೈರ್ಲ್ಡ್ ಕಾರ್ಡ್ ಎಂಟ್ರಿ ಮೂಲಕ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.</p>



<p class="wp-block-paragraph">ಉಡುಪಿ ಜಿಲ್ಲೆಯಲ್ಲೇ ಹುಟ್ಟಿ ಬೆಳೆದು, ಇಲ್ಲೇ ಶಿಕ್ಷಣ ಪೂರೈಸಿರುವ ಚೆಲುವೆ ಸ್ಫೂರ್ತಿ ಶೆಟ್ಟಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 16ನೇ ವಯಸ್ಸಿನಲ್ಲೇ ಸೌಂದರ್ಯ ಸ್ಪರ್ಧಾಲೋಕಕ್ಕೆ ಕಾಲಿಟ್ಟಿದ್ದು, 2018ರಿಂದ ಹಲವು ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. 2020ರಲ್ಲಿ ಕ್ವೀನ್ ಆಫ್ ಕರ್ನಾಟಕ ಕಿರೀಟ ಪಡೆದಿದ್ದು, 2021ರಲ್ಲಿ ಮಿಸ್ ಇಂಟರ್ ನ್ಯಾಷನಲ್ ಯುನಿವರ್ಸ್‌ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದೆ. 2024ರಲ್ಲಿ ಮಿಸ್ ಗ್ರಾಂಡ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್ 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, 2025ರಲ್ಲಿ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದರು.</p>



<p class="wp-block-paragraph">ಜುಲೈ 18ರಿಂದ ಆಗಸ್ಟ್‌ 23ರ ವರೆಗೆ ಗುಜರಾತ್‌ನಲ್ಲಿ ನಡೆಯಲಿರುವ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಗೆ ವೈರ್ಲ್ಡ್ ಕಾರ್ಡ್ ಎಂಟ್ರಿ ಮೂಲಕ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದು, ಟಾಪ್ 50ರಲ್ಲಿ ಸ್ಥಾನ ಪಡೆದಿರುವುದಾಗಿ ತಿಳಿಸಿದರು. ಅಂತಿಮ ಸ್ಪರ್ಧೆ ಆ. 23ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ ಎಂದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="tI0BkHmPj0"><a href="https://samyuktakarnataka.in/districts/baglkot/ksrtc-bus-goes-off-route-passengers-safe/">ದಾರಿ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್: ಪ್ರಯಾಣಿಕರು ಪಾರು</a></blockquote><iframe class="wp-embedded-content" sandbox="allow-scripts" security="restricted"  title="“ದಾರಿ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್: ಪ್ರಯಾಣಿಕರು ಪಾರು” — Samyukta Karnataka" src="https://samyuktakarnataka.in/districts/baglkot/ksrtc-bus-goes-off-route-passengers-safe/embed/#?secret=KKHtQwHtpz#?secret=tI0BkHmPj0" data-secret="tI0BkHmPj0" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/udupi/miss-universe-india-spurthi-shetty-selected-for-the-final-round/">ಮಿಸ್ ಯುನಿವರ್ಸ್ ಇಂಡಿಯಾ: ಅಂತಿಮ ಸುತ್ತಿಗೆ ಸ್ಫೂರ್ತಿ ಶೆಟ್ಟಿ ಆಯ್ಕೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಉಡುಪಿಯಲ್ಲಿ ಖಾಸಗಿ ಶಾಲಾ ಬಸ್ ಪಲ್ಟಿ: ಏಳು ಮಂದಿಗೆ ಗಾಯ</title>
		<link>https://samyuktakarnataka.in/districts/udupi/udupi-private-school-bus-overturns-one-student-seriously-injured-seven-hurt/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 10 Jul 2026 06:06:59 +0000</pubDate>
				<category><![CDATA[ಉಡುಪಿ]]></category>
		<category><![CDATA[#Udupi]]></category>
		<guid isPermaLink="false">https://samyuktakarnataka.in/?p=102525</guid>

					<description><![CDATA[<p>ಉಡುಪಿ : ಖಾಸಗಿ ಶಾಲೆಯ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡು, ಏಳು ಮಂದಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಶುಕ್ರವಾರ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸರಳಬೆಟ್ಟು-ಕೊಡಂಗೆ ದೇವಸ್ಥಾನದ ಸಮೀಪ ನಡೆದಿದೆ. ಅಪಘಾತಕ್ಕೀಡಾದ ಬಸ್ ಉಡುಪಿಯ ಕ್ರೈಸ್ಟ್ ಶಾಲೆಗೆ ಸೇರಿದ್ದಾಗಿದೆ. ಶಾಲಾ ಬಸ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಕೊಡಂಗೆ ದೇವಸ್ಥಾನದ ಸಮೀಪ ಬಸ್ಸನ್ನು ರಿವರ್ಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯ [&#8230;]</p>
<p>The post <a href="https://samyuktakarnataka.in/districts/udupi/udupi-private-school-bus-overturns-one-student-seriously-injured-seven-hurt/">ಉಡುಪಿಯಲ್ಲಿ ಖಾಸಗಿ ಶಾಲಾ ಬಸ್ ಪಲ್ಟಿ: ಏಳು ಮಂದಿಗೆ ಗಾಯ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಉಡುಪಿ : ಖಾಸಗಿ ಶಾಲೆಯ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡು, ಏಳು ಮಂದಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಶುಕ್ರವಾರ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸರಳಬೆಟ್ಟು-ಕೊಡಂಗೆ ದೇವಸ್ಥಾನದ ಸಮೀಪ ನಡೆದಿದೆ.</p>



<p class="wp-block-paragraph">ಅಪಘಾತಕ್ಕೀಡಾದ ಬಸ್ ಉಡುಪಿಯ ಕ್ರೈಸ್ಟ್ ಶಾಲೆಗೆ ಸೇರಿದ್ದಾಗಿದೆ. ಶಾಲಾ ಬಸ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಕೊಡಂಗೆ ದೇವಸ್ಥಾನದ ಸಮೀಪ ಬಸ್ಸನ್ನು ರಿವರ್ಸ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ.</p>



<p class="wp-block-paragraph">ಘಟನೆಯ ಪರಿಣಾಮ ಬಸ್ಸಿನಲ್ಲಿದ್ದ ಓರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಏಳು ಮಂದಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಬಸ್ಸಿನೊಳಗಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು ಸಮೀಪದ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.</p>



<p class="wp-block-paragraph">ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.</p>



<p class="wp-block-paragraph">ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಮಣಿಪಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್ ಪಲ್ಟಿಯಾಗಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.</p>



<p class="wp-block-paragraph">ಪ್ರಾಥಮಿಕ ಮಾಹಿತಿಯ ಪ್ರಕಾರ, ಇಳಿಜಾರು ಪ್ರದೇಶದಲ್ಲಿ ಬಸ್ಸನ್ನು ರಿವರ್ಸ್ ತೆಗೆಯುವ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡಿರುವ ಸಾಧ್ಯತೆ ವ್ಯಕ್ತವಾಗಿದ್ದು, ಬಸ್‌ನ ತಾಂತ್ರಿಕ ದೋಷ ಅಥವಾ ಇತರ ಕಾರಣಗಳ ಕುರಿತೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.</p>



<p class="wp-block-paragraph">ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳ ಪೋಷಕರು ಆಸ್ಪತ್ರೆ ಮತ್ತು ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="n6vPgRd4Cm"><a href="https://samyuktakarnataka.in/news/karnataka/karnataka-government-school-enrolment-decline-prahlad-joshi-slams-congress-government/">ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವರ ಆಕ್ರೋಶ</a></blockquote><iframe class="wp-embedded-content" sandbox="allow-scripts" security="restricted"  title="“ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವರ ಆಕ್ರೋಶ” — Samyukta Karnataka" src="https://samyuktakarnataka.in/news/karnataka/karnataka-government-school-enrolment-decline-prahlad-joshi-slams-congress-government/embed/#?secret=e1p1gDjG1o#?secret=n6vPgRd4Cm" data-secret="n6vPgRd4Cm" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/udupi/udupi-private-school-bus-overturns-one-student-seriously-injured-seven-hurt/">ಉಡುಪಿಯಲ್ಲಿ ಖಾಸಗಿ ಶಾಲಾ ಬಸ್ ಪಲ್ಟಿ: ಏಳು ಮಂದಿಗೆ ಗಾಯ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಅಯೋಧ್ಯೆ ಪ್ರಕರಣ: ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ</title>
		<link>https://samyuktakarnataka.in/districts/udupi/vinay-kumar-sorake-demands-supreme-court-probe-into-ayodhya-ram-mandir-fund-allegations/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 08 Jul 2026 08:15:44 +0000</pubDate>
				<category><![CDATA[ಉಡುಪಿ]]></category>
		<category><![CDATA[#Udupi]]></category>
		<guid isPermaLink="false">https://samyuktakarnataka.in/?p=102423</guid>

					<description><![CDATA[<p>ಸಂ.ಕ. ಸಮಾಚಾರ, ಉಡುಪಿ: ಅಯೋಧ್ಯೆಯ ರಾಮ ಮಂದಿರ ಮಂದಿರದ ಹುಂಡಿ ಹಣ ಲೂಟಿ ಪ್ರಕರಣ ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ವಿವಿಧ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ವಿನಯ‌ಕುಮಾರ್ ಸೊರಕೆ ಒತ್ತಾಯಿಸಿದ್ದಾರೆ. ಬುಧವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರನ್ನು ಬಳಸಿಕೊಂಡು ಬಿಜೆಪಿ ಹಲವು ಚುನಾವಣೆಗಳನ್ನು ಎದುರಿಸಿದ್ದು, ಮನೆ-ಮನೆಗೆ ಇಟ್ಟಿಗೆಗಳನ್ನು ನೀಡಿ ಪೂಜೆ ಮಾಡಿಸಿ [&#8230;]</p>
<p>The post <a href="https://samyuktakarnataka.in/districts/udupi/vinay-kumar-sorake-demands-supreme-court-probe-into-ayodhya-ram-mandir-fund-allegations/">ಅಯೋಧ್ಯೆ ಪ್ರಕರಣ: ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಸಂ.ಕ. ಸಮಾಚಾರ, ಉಡುಪಿ:</strong> ಅಯೋಧ್ಯೆಯ ರಾಮ ಮಂದಿರ ಮಂದಿರದ ಹುಂಡಿ ಹಣ ಲೂಟಿ ಪ್ರಕರಣ ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ವಿವಿಧ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ವಿನಯ‌ಕುಮಾರ್ ಸೊರಕೆ ಒತ್ತಾಯಿಸಿದ್ದಾರೆ.</p>



<p class="wp-block-paragraph">ಬುಧವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರನ್ನು ಬಳಸಿಕೊಂಡು ಬಿಜೆಪಿ ಹಲವು ಚುನಾವಣೆಗಳನ್ನು ಎದುರಿಸಿದ್ದು, ಮನೆ-ಮನೆಗೆ ಇಟ್ಟಿಗೆಗಳನ್ನು ನೀಡಿ ಪೂಜೆ ಮಾಡಿಸಿ ಜನರ ಬೆಂಬಲ ಕೋರಿತ್ತು. ಆದರೆ, ರಾಮ ಮಂದಿರ ನಿರ್ಮಾಣಕ್ಕಾಗಿ ದಶಕಗಳಿಂದ ಸಂಗ್ರಹಿಸಲಾದ ಹಣದ ಸಂಪೂರ್ಣ ಲೆಕ್ಕಪತ್ರ ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ ಎಂದು ಆರೋಪಿಸಿದರು.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/nia-conducts-nationwide-raids-in-terror-conspiracy-case-including-karnataka/">ಭಯೋತ್ಪಾದನಾ ಪಿತೂರಿ: ಕರ್ನಾಟಕ ಸೇರಿ ದೇಶದಾದ್ಯಂತ NIA ದಾಳಿ</a></strong></strong></p>



<p class="wp-block-paragraph"><strong>ಮಂದಿರ ನಿರ್ಮಾಣದಲ್ಲಿ ಅಕ್ರಮ ಆರೋಪ :</strong> ಮಂದಿರ ನಿರ್ಮಾಣದ ವೇಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸಂಬಂಧಿತ ಟ್ರಸ್ಟ್ ಸದಸ್ಯರು ಜನರಿಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಸೊರಕೆ ಹೇಳಿದರು. ಕರ್ನಾಟಕ ಮೂಲದ ಟ್ರಸ್ಟಿಯೊಬ್ಬರ ಅಳಿಯನಿಗೆ ಮಂದಿರ ನಿರ್ಮಾಣ ಕಾಮಗಾರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಅವರು ಆಗ್ರಹಿಸಿದರು.</p>



<p class="wp-block-paragraph"><strong>ಚಿನ್ನದ ಬಳಕೆ, ಆರ್‌ಟಿಐ ಮತ್ತು ಸಿಸಿ ಟಿವಿ ವಿವಾದ :</strong> ರಾಮ ಮಂದಿರಕ್ಕೆ ಭಕ್ತರು ನೀಡಿದ ಚಿನ್ನವನ್ನು ಕರ್ನಾಟಕದಲ್ಲೇ ಕರಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಮಂದಿರವನ್ನು ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ದೂರಿದ ಸೊರಕೆ, ಇದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/bellari/nia-conducts-search-operation-in-ballari-over-links-with-banned-terror-organisations/" type="link" id="https://samyuktakarnataka.in/districts/bellari/nia-conducts-search-operation-in-ballari-over-links-with-banned-terror-organisations/">ಬಳ್ಳಾರಿಯಲ್ಲಿ NIA ದಾಳಿ : ಕೌಲಬಜಾರ್‌ನಲ್ಲಿ ಶೋಧ ಕಾರ್ಯಾಚರಣೆ</a></strong></strong></p>



<p class="wp-block-paragraph">ಮಂದಿರದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಲಾಗಿದೆ ಎಂಬ ವರದಿಗಳು ಹಾಗೂ ಮಂದಿರದ ಕಟ್ಟಡದ ಕೆಲವು ಭಾಗಗಳಲ್ಲಿ ಹಾನಿಯ ಲಕ್ಷಣಗಳು ಕಂಡುಬರುತ್ತಿವೆ ಎಂಬ ಮಾಹಿತಿ ಹೊರಬಂದಿರುವ ಹಿನ್ನೆಲೆಯಲ್ಲಿ ಪಾರದರ್ಶಕ ತನಿಖೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.</p>



<p class="wp-block-paragraph"><strong>ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರುವುದಿಲ್ಲ :</strong> ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯಿಂದ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಸೊರಕೆ ಒತ್ತಾಯಿಸಿದರು.</p>



<p class="wp-block-paragraph"><strong>&#8216;ಮನ್ ಕೀ ಬಾತ್&#8217;ನಲ್ಲಿ ಮೌನ ಏಕೆ? : </strong>ಪ್ರಧಾನಿ ನರೇಂದ್ರ ಮೋದಿ ಅವರು &#8216;ಮನ್ ಕೀ ಬಾತ್&#8217; ಕಾರ್ಯಕ್ರಮದಲ್ಲಿ ಎಲ್ಲ ವಿಷಯಗಳ ಕುರಿತು ಮಾತನಾಡುತ್ತಾರೆ. ಆದರೆ, ರಾಮ ಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ಮೌನ ವಹಿಸಿರುವುದು ಏಕೆ ಎಂದು ಸೊರಕೆ ಪ್ರಶ್ನಿಸಿದರು.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/raichur/lokayukta-raids-kbjnl-executive-engineer-basanagouda-properties-in-raichur/">KBJNL ಇಇ ಬಸನಗೌಡ ಮನೆ ಸೇರಿ 7 ಕಡೆ ಲೋಕಾಯುಕ್ತರ ದಾಳಿ</a></strong></p>



<p class="wp-block-paragraph">ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ಅಧ್ಯಕ್ಷ ವೈ. ಸುಕುಮಾರ್ ಉಪಸ್ಥಿತರಿದ್ದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="fQGqUmSJy9"><a href="https://samyuktakarnataka.in/entertainment/kvn-productions-invites-applications-for-creative-team-amid-toxic-and-kd-projects/">‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ಸ್‌ನಿಂದ ಅರ್ಜಿ ಆಹ್ವಾನ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“‘ಟಾಕ್ಸಿಕ್’ ನಿರ್ಮಾಣ ಸಂಸ್ಥೆ KVN ಪ್ರೊಡಕ್ಷನ್ಸ್‌ನಿಂದ ಅರ್ಜಿ ಆಹ್ವಾನ” — Samyukta Karnataka" src="https://samyuktakarnataka.in/entertainment/kvn-productions-invites-applications-for-creative-team-amid-toxic-and-kd-projects/embed/#?secret=P61Ioe92ci#?secret=fQGqUmSJy9" data-secret="fQGqUmSJy9" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/udupi/vinay-kumar-sorake-demands-supreme-court-probe-into-ayodhya-ram-mandir-fund-allegations/">ಅಯೋಧ್ಯೆ ಪ್ರಕರಣ: ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕೊಲ್ಲೂರಿನಲ್ಲಿ ಭಕ್ತೆಯ ಹಣ ಎಗರಿಸಿದ ಮೂವರ ಬಂಧನ</title>
		<link>https://samyuktakarnataka.in/districts/udupi/three-arrested-for-stealing-a-female-devotees-money-in-kollur/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 06 Jul 2026 12:38:30 +0000</pubDate>
				<category><![CDATA[ಉಡುಪಿ]]></category>
		<category><![CDATA[#Udupi]]></category>
		<guid isPermaLink="false">https://samyuktakarnataka.in/?p=102307</guid>

					<description><![CDATA[<p>ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೋರ್ವರ ವ್ಯಾನಿಟಿ ಬ್ಯಾಗ್‌ನಿಂದ 80 ಸಾವಿರ ರೂ. ನಗದು ಕಳವು ಮಾಡಿದ್ದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಜುಲೈ 5ರಂದು ನಿಮಿಷಾ ಹಾಗೂ ಅವರ ಪತಿ ಪ್ರಜೋಶ್ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ದೇವಸ್ಥಾನದ ಹೊರಾಂಗಣಕ್ಕೆ ಬಂದ ವೇಳೆ ಬೆಳಗ್ಗೆ 8.20ರ ಸುಮಾರಿಗೆ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂತು‌. ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ 80 [&#8230;]</p>
<p>The post <a href="https://samyuktakarnataka.in/districts/udupi/three-arrested-for-stealing-a-female-devotees-money-in-kollur/">ಕೊಲ್ಲೂರಿನಲ್ಲಿ ಭಕ್ತೆಯ ಹಣ ಎಗರಿಸಿದ ಮೂವರ ಬಂಧನ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಉಡುಪಿ: </strong>ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೋರ್ವರ ವ್ಯಾನಿಟಿ ಬ್ಯಾಗ್‌ನಿಂದ 80 ಸಾವಿರ ರೂ. ನಗದು ಕಳವು ಮಾಡಿದ್ದ ಪ್ರಕರಣವನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.</p>



<p class="wp-block-paragraph">ಜುಲೈ 5ರಂದು ನಿಮಿಷಾ ಹಾಗೂ ಅವರ ಪತಿ ಪ್ರಜೋಶ್ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ದೇವಸ್ಥಾನದ ಹೊರಾಂಗಣಕ್ಕೆ ಬಂದ ವೇಳೆ ಬೆಳಗ್ಗೆ 8.20ರ ಸುಮಾರಿಗೆ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂತು‌. ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ 80 ಸಾವಿರ ರೂ. ನಗದು ಹೊಂದಿದ್ದ ಪರ್ಸ್ ನಾಪತ್ತೆಯಾಗಿರುವುದು ಗೊತ್ತಾಯಿತು‌.</p>



<p class="wp-block-paragraph">ದೇವಸ್ಥಾನದ ಸುತ್ತಮುತ್ತ ಹುಡುಕಾಟ ನಡೆಸಿದರೂ ಪರ್ಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಮಿಷಾ ಅವರು ಕೊಲ್ಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ಸೆರೆಹಿಡಿದ ಛಾಯಾಚಿತ್ರಗಳು ಹಾಗೂ ತಾಂತ್ರಿಕ ಮಾಹಿತಿ ನೆರವಿನಿಂದ ಆರೋಪಿಗಳ ಪತ್ತೆ ಮಾಡಲಾಯಿತು.</p>



<p class="wp-block-paragraph">ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ (33), ಶಾರದಾ (50) ಮತ್ತು ದುರ್ಗಮ್ಮ (44) ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಮೂವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.</p>



<p class="wp-block-paragraph">ಬಂಧಿತೆ ದುರ್ಗಮ್ಮ ವಿರುದ್ಧ ಈಗಾಗಲೇ ಎರಡು ಕಳ್ಳತನ ಪ್ರಕರಣ ದಾಖಲಾಗಿದ್ದು, ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಹಾಗೂ ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.</p>



<p class="wp-block-paragraph">ಇನ್ನೋರ್ವ ಆರೋಪಿ ಶಾರದಾ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಎರಡು ಹಾಗೂ ಮೈಸೂರು ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಒಂದು ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="x3LnsdyqJf"><a href="https://samyuktakarnataka.in/districts/udupi/couple-arrested-for-%e2%82%b923-lakh-fraud/">23 ಲಕ್ಷ ರೂ. ವಂಚನೆ: ದಂಪತಿ ಬಂಧನ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“23 ಲಕ್ಷ ರೂ. ವಂಚನೆ: ದಂಪತಿ ಬಂಧನ” — Samyukta Karnataka" src="https://samyuktakarnataka.in/districts/udupi/couple-arrested-for-%e2%82%b923-lakh-fraud/embed/#?secret=89KeDsm8G3#?secret=x3LnsdyqJf" data-secret="x3LnsdyqJf" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/udupi/three-arrested-for-stealing-a-female-devotees-money-in-kollur/">ಕೊಲ್ಲೂರಿನಲ್ಲಿ ಭಕ್ತೆಯ ಹಣ ಎಗರಿಸಿದ ಮೂವರ ಬಂಧನ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
