<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Samyukta Karnataka, Author at Samyukta Karnataka</title>
	<atom:link href="https://samyuktakarnataka.in/author/samyuktawebgmail-com/feed/" rel="self" type="application/rss+xml" />
	<link>https://samyuktakarnataka.in/author/samyuktawebgmail-com/</link>
	<description>News that connects you to Karnataka since 1921</description>
	<lastBuildDate>Fri, 04 Sep 2026 17:17:48 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>Samyukta Karnataka, Author at Samyukta Karnataka</title>
	<link>https://samyuktakarnataka.in/author/samyuktawebgmail-com/</link>
	<width>32</width>
	<height>32</height>
</image> 
	<item>
		<title>ರಾಜ್ಯದ 31 ಶಿಕ್ಷಕರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ</title>
		<link>https://samyuktakarnataka.in/news/karnataka/best-teacher-award-for-31-teachers-in-the-state/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 17:17:48 +0000</pubDate>
				<category><![CDATA[ರಾಜ್ಯ]]></category>
		<category><![CDATA[#karnataka]]></category>
		<guid isPermaLink="false">https://samyuktakarnataka.in/?p=106611</guid>

					<description><![CDATA[<p>ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು, ಪ್ರಾಥಮಿಕ ಶಾಲಾ ವಿಭಾಗದಿಂದ 20 ಜನ ಮತ್ತು ಪ್ರೌಢ ಶಾಲಾ ವಿಭಾಗದಿಂದ ಓರ್ವ ವಿಶೇಷ ಶಿಕ್ಷಕರೂ ಸೇರಿದಂತೆ 11 ಜನ ಸೇರಿ ಒಟ್ಟು 31 ಶಿಕ್ಷಕರು ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಿಂದಸಿ ಉಮಾ-ಬೆಂಗಳೂರು ಗ್ರಾಮಾಂತರ,ಬಸಪ್ಪ ಪರಪ್ಪ ಪಾಟೀಲ-ಚಿಕ್ಕೋಡಿ,ಅಶೋಕ-ಉಡುಪಿ,ಸುರೇಶ್ ಕೆ.-ರಾಯಚೂರು,ಹಣಮಂತ ಕಲ್ಲಪ್ಪ ಕಾತರಕಿ- ವಿಜಯಪುರ,ಉಷಾ ವಿ. ನಾಯಕ- ಉತ್ತರ ಕನ್ನಡ,ಮಸ್ತಾನ್ ವಲಿ-ಚಿಕ್ಕಬಳ್ಳಾಪುರ,ಪ್ರಭಾವತಿ ಬಾಳಪ್ಪ ಹಾಲೆನ್ನವರ-ಬೆಳಗಾವಿ,ಸರೋಜಮ್ಮ- ಚಾಮರಾಜನಗರ,ನಿಂಗಪ್ಪಾ-ಕಲಬುರಗಿ,ರತ್ನಮ್ಮ ಎನ್.ಎಂ. -ಬೆಂಗಳೂರು ಕೇಂದ್ರ ಶೈಕ್ಷಣಿಕ,ನೇಮಣ್ಣ [&#8230;]</p>
<p>The post <a href="https://samyuktakarnataka.in/news/karnataka/best-teacher-award-for-31-teachers-in-the-state/">ರಾಜ್ಯದ 31 ಶಿಕ್ಷಕರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು:</strong> ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು, ಪ್ರಾಥಮಿಕ ಶಾಲಾ ವಿಭಾಗದಿಂದ 20 ಜನ ಮತ್ತು ಪ್ರೌಢ ಶಾಲಾ ವಿಭಾಗದಿಂದ ಓರ್ವ ವಿಶೇಷ ಶಿಕ್ಷಕರೂ ಸೇರಿದಂತೆ 11 ಜನ ಸೇರಿ ಒಟ್ಟು 31 ಶಿಕ್ಷಕರು ಆಯ್ಕೆಯಾಗಿದ್ದಾರೆ.</p>



<p class="wp-block-paragraph"><strong>ಪ್ರಾಥಮಿಕ ಶಾಲಾ ವಿಭಾಗದಿಂದ<br></strong>ಸಿ ಉಮಾ-ಬೆಂಗಳೂರು ಗ್ರಾಮಾಂತರ,<br>ಬಸಪ್ಪ ಪರಪ್ಪ ಪಾಟೀಲ-ಚಿಕ್ಕೋಡಿ,<br>ಅಶೋಕ-ಉಡುಪಿ,<br>ಸುರೇಶ್ ಕೆ.-ರಾಯಚೂರು,<br>ಹಣಮಂತ ಕಲ್ಲಪ್ಪ ಕಾತರಕಿ- ವಿಜಯಪುರ,<br>ಉಷಾ ವಿ. ನಾಯಕ- ಉತ್ತರ ಕನ್ನಡ,<br>ಮಸ್ತಾನ್ ವಲಿ-ಚಿಕ್ಕಬಳ್ಳಾಪುರ,<br>ಪ್ರಭಾವತಿ ಬಾಳಪ್ಪ ಹಾಲೆನ್ನವರ-ಬೆಳಗಾವಿ,<br>ಸರೋಜಮ್ಮ- ಚಾಮರಾಜನಗರ,<br>ನಿಂಗಪ್ಪಾ-ಕಲಬುರಗಿ,<br>ರತ್ನಮ್ಮ ಎನ್.ಎಂ. -ಬೆಂಗಳೂರು ಕೇಂದ್ರ ಶೈಕ್ಷಣಿಕ,<br>ನೇಮಣ್ಣ ಬಮ್ಮಣ್ಣ ಜಮಖಂಡಿ-ಬಾಗಲಕೋಟೆ,<br>ರಾಮಚಂದ್ರ ಈ. ನಾಯಕ- ಶಿರಸಿ,<br>ಮಾಲಿನಿ ಎಂ-ಮಧುಗಿರಿ,<br>ಕುಮಾರನಾಯ್ಕ ಬಿ.ಡಿ- ಶಿವಮೊಗ್ಗ,<br>ಕೃಷ್ಣಮೂರ್ತಿ ಕೆ.ಎಸ್-ಬೆಂಗಳೂರು ಉತ್ತರ,<br>ಮಲ್ಲಿಕಾರ್ಜನ ಬಡಿಗೇರ- ದಾವಣಗೆರೆ,<br>ಪ್ರೇಮಕುಮಾರ್ ವಿ.ಎಸ್- ತುಮಕೂರು,<br>ದುರಗಪ್ಪ ಹೆಚ್.- ಬಳ್ಳಾರಿ,<br>ಮೈಲಾರಪ್ಪ ಬೂದಿಹಾಳ-ಕೊಪ್ಪಳ.</p>



<p class="wp-block-paragraph"><strong>ಪ್ರೌಢ ಶಾಲಾ ವಿಭಾಗದಿಂದ<br></strong>ಬಿರಾದಾರ ಸಿದ್ದಪ್ಪ ವೀರಭದ್ರಪ್ಪ- ಶಿರಸಿ,<br>ಶೈನಾಕುಮಾರಿ ಎಂ.- ಬೆಂಗಳೂರು,<br>ಕುಬೇರನಾಯ್ಕ ಬಿ.-ಶಿವಮೊಗ್ಗ,<br>ನೀಲಕಂಠ ಗಾಂವಕರ್-ಬೆಂಗಳೂರು ಗ್ರಾಮಾಂತರ,<br>ವಿ. ವೆಂಕಟೇಶ- ಚಿಕ್ಕಬಳ್ಳಾಪುರ,<br>ಮಮತ ಆರ್. ನಾಯ್ಕ- ಉತ್ತರ ಕನ್ನಡ,<br>ರೋಶನ್ ಅಲೆಗ್ಸಾಂಡರ್-ದಕ್ಷಿಣ ಕನ್ನಡ,<br>ಜಯಶೀಲ-ಮೈಸೂರು,<br>ಮಥಾಯಿ ಟಿ.- ಚಿಕ್ಕಮಗಳೂರು</p>



<p class="wp-block-paragraph">ಈ ಎಲ್ಲರೂ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಳಾ ಶಿಕ್ಷಕರಿಗೆ ವಿಶೇಷ ಗೌರವವಾಗಿ, ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಹೆಸರಿನಲ್ಲಿ ಸೆ. 5ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನಗದು ಪುರಸ್ಕಾರವನ್ನು ನೀಡಲಾಗುತ್ತದೆ. ಒಟ್ಟು 7.75 ಲಕ್ಷ ನಗದು ಪುರಸ್ಕಾರವನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲು ಆದೇಶಿಸಲಾಗಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="EjD9ovVSYV"><a href="https://samyuktakarnataka.in/news/karnataka/another-shock-for-the-people-of-karnataka-bus-ticket-fares-to-rise-soon/">ಕರ್ನಾಟಕದ ಜನರಿಗೆ ಮತ್ತೊಂದು ಶಾಕ್‌: ಶೀಘ್ರದಲ್ಲೇ ಬಸ್ ಟಿಕೆಟ್ ದರ ಹೆಚ್ಚಳ!</a></blockquote><iframe class="wp-embedded-content" sandbox="allow-scripts" security="restricted"  title="“ಕರ್ನಾಟಕದ ಜನರಿಗೆ ಮತ್ತೊಂದು ಶಾಕ್‌: ಶೀಘ್ರದಲ್ಲೇ ಬಸ್ ಟಿಕೆಟ್ ದರ ಹೆಚ್ಚಳ!” — Samyukta Karnataka" src="https://samyuktakarnataka.in/news/karnataka/another-shock-for-the-people-of-karnataka-bus-ticket-fares-to-rise-soon/embed/#?secret=Td2Y6aFd2F#?secret=EjD9ovVSYV" data-secret="EjD9ovVSYV" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/karnataka/best-teacher-award-for-31-teachers-in-the-state/">ರಾಜ್ಯದ 31 ಶಿಕ್ಷಕರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕರ್ನಾಟಕದ ಜನರಿಗೆ ಮತ್ತೊಂದು ಶಾಕ್‌: ಶೀಘ್ರದಲ್ಲೇ ಬಸ್ ಟಿಕೆಟ್ ದರ ಹೆಚ್ಚಳ!</title>
		<link>https://samyuktakarnataka.in/news/karnataka/another-shock-for-the-people-of-karnataka-bus-ticket-fares-to-rise-soon/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 16:05:40 +0000</pubDate>
				<category><![CDATA[ರಾಜ್ಯ]]></category>
		<category><![CDATA[#karnataka]]></category>
		<guid isPermaLink="false">https://samyuktakarnataka.in/?p=106608</guid>

					<description><![CDATA[<p>ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತೊಂದು ದರ ಏರಿಕೆಯ ಶಾಕ್ ನೀಡಲು ಸಿದ್ಧವಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಶೀಘ್ರದಲ್ಲೇ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್‌ ಮಹತ್ವದ ಮಾಹಿತಿ ನೀಡಿದ್ದಾರೆ. ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ಹಲವು ಬಾರಿ [&#8230;]</p>
<p>The post <a href="https://samyuktakarnataka.in/news/karnataka/another-shock-for-the-people-of-karnataka-bus-ticket-fares-to-rise-soon/">ಕರ್ನಾಟಕದ ಜನರಿಗೆ ಮತ್ತೊಂದು ಶಾಕ್‌: ಶೀಘ್ರದಲ್ಲೇ ಬಸ್ ಟಿಕೆಟ್ ದರ ಹೆಚ್ಚಳ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬೆಂಗಳೂರು:</strong> ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತೊಂದು ದರ ಏರಿಕೆಯ ಶಾಕ್ ನೀಡಲು ಸಿದ್ಧವಾಗಿದೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಶೀಘ್ರದಲ್ಲೇ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್‌ ಮಹತ್ವದ ಮಾಹಿತಿ ನೀಡಿದ್ದಾರೆ.</p>



<p class="wp-block-paragraph">ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರ ಹಲವು ಬಾರಿ ತೈಲೋತ್ಪನ್ನಗಳ ದರ ಹೆಚ್ಚಳ ಮಾಡಿದ್ದು, ಇದರ ಪರಿಣಾಮ ರಾಜ್ಯದ ಸಾರಿಗೆ ನಿಗಮಗಳು ಭಾರಿ ನಷ್ಟ ಅನುಭವಿಸುತ್ತಿವೆ ಎಂದು ಅವರು ಹೇಳಿದ್ದಾರೆ.</p>



<p class="wp-block-paragraph"><strong>ಸಾವಿರಾರು ಕೋಟಿ ನಷ್ಟ: </strong>ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡದೆ ಇರುವುದರಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದ್ದಾರೆ.</p>



<p class="wp-block-paragraph">ತೈಲ ಬೆಲೆ ಏರಿಕೆ ಸೇರಿದಂತೆ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂಬ ಸಂದೇಶವನ್ನು ಸಚಿವರು ನೀಡಿದ್ದಾರೆ.</p>



<p class="wp-block-paragraph"><strong>ದರ ಏರಿಕೆ ಎಷ್ಟು?:</strong> ಬಸ್ ಟಿಕೆಟ್ ದರವನ್ನು ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂಬುದರ ಕುರಿತು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿ ಅಧ್ಯಯನ ನಡೆಸುತ್ತಿದೆ. ಸಮಿತಿ ಶೀಘ್ರದಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.</p>



<p class="wp-block-paragraph">ಸಮಿತಿಯ ವರದಿ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗದಂತೆ ಸ್ವಲ್ಪ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡುವ ಚಿಂತನೆ ಸರ್ಕಾರದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.</p>



<p class="wp-block-paragraph"><strong>ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ನೆರವು: </strong>ದರ ಏರಿಕೆಯಿಂದ ಪ್ರಯಾಣಿಕರ ಮೇಲೆ ಬೀಳುವ ಹೆಚ್ಚುವರಿ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದಲೂ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಬೈರತಿ ಸುರೇಶ್ ಹೇಳಿದ್ದಾರೆ.</p>



<p class="wp-block-paragraph">ಹೀಗಾಗಿ, ರಾಜ್ಯದ ಸರ್ಕಾರಿ ಬಸ್ ಪ್ರಯಾಣಿಕರಿಗೆ ಸದ್ಯದಲ್ಲೇ ಹೊಸ ಬಸ್ ದರ ಅನ್ವಯವಾಗುವ ಸಾಧ್ಯತೆ ಇದ್ದು, ಎಷ್ಟು ರೂಪಾಯಿ ಹೆಚ್ಚಳವಾಗಲಿದೆ ಎಂಬುದು ಸಮಿತಿ ವರದಿ ಬಳಿಕ ಸ್ಪಷ್ಟವಾಗಲಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="UBgNL4Gz5E"><a href="https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/">ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ</a></blockquote><iframe class="wp-embedded-content" sandbox="allow-scripts" security="restricted"  title="“ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ” — Samyukta Karnataka" src="https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/embed/#?secret=xZRCLwJxpd#?secret=UBgNL4Gz5E" data-secret="UBgNL4Gz5E" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/karnataka/another-shock-for-the-people-of-karnataka-bus-ticket-fares-to-rise-soon/">ಕರ್ನಾಟಕದ ಜನರಿಗೆ ಮತ್ತೊಂದು ಶಾಕ್‌: ಶೀಘ್ರದಲ್ಲೇ ಬಸ್ ಟಿಕೆಟ್ ದರ ಹೆಚ್ಚಳ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ</title>
		<link>https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 15:27:59 +0000</pubDate>
				<category><![CDATA[ಬಾಗಲಕೋಟೆ]]></category>
		<category><![CDATA[#bagalkote]]></category>
		<guid isPermaLink="false">https://samyuktakarnataka.in/?p=106602</guid>

					<description><![CDATA[<p>ಬಾಗಲಕೋಟೆ: ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಬಾಗಲಕೋಟೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಆರ್‌ಎಸ್ಎಸ್ ಸ್ವಯಂಸೇವಕರು ಧರಿಸುವ ಕೇಸರಿ ಬಣ್ಣದ ರಾಖಿ ಕಟ್ಟಿದ್ದಾರೆ. ಆರ್‌ಎಸ್ಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿರುವ ಹೊತ್ತಿನಲ್ಲಿ ಈ ಘಟನೆ ರಾಜಕೀಯ ವಲಯದಲ್ಲಿ ಗಮನಸೆಳೆದಿದೆ. ಶುಕ್ರವಾರ ಬರ ವೀಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಡಿ.ಕೆ. ಶಿವಕುಮಾರ ಅವರು‌ ನವನಗರದ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು. ಸಭೆ ನಂತರ ಸಿಎಂ ಬಳಿ ತೆರಳಿದ ನಾರಾಯಣಸಾ ಭಾಂಡಗೆ ಸಹೋದರತ್ವದ ಭಾಗವಾಗಿ ರಾಖಿ [&#8230;]</p>
<p>The post <a href="https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/">ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬಾಗಲಕೋಟೆ: </strong>ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಬಾಗಲಕೋಟೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಆರ್‌ಎಸ್ಎಸ್ ಸ್ವಯಂಸೇವಕರು ಧರಿಸುವ ಕೇಸರಿ ಬಣ್ಣದ ರಾಖಿ ಕಟ್ಟಿದ್ದಾರೆ.</p>



<p class="wp-block-paragraph">ಆರ್‌ಎಸ್ಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿರುವ ಹೊತ್ತಿನಲ್ಲಿ ಈ ಘಟನೆ ರಾಜಕೀಯ ವಲಯದಲ್ಲಿ ಗಮನಸೆಳೆದಿದೆ.</p>



<p class="wp-block-paragraph">ಶುಕ್ರವಾರ ಬರ ವೀಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಡಿ.ಕೆ. ಶಿವಕುಮಾರ ಅವರು‌ ನವನಗರದ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು. ಸಭೆ ನಂತರ ಸಿಎಂ ಬಳಿ ತೆರಳಿದ ನಾರಾಯಣಸಾ ಭಾಂಡಗೆ ಸಹೋದರತ್ವದ ಭಾಗವಾಗಿ ರಾಖಿ ಕಟ್ಟುವುದಾಗಿ ಹೇಳಿ ಕೇಸರಿ ನೂಲು ಹೊಂದಿರುವ ರಕ್ಷೆ ಕಟ್ಟಿದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="InmYIQYl2N"><a href="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/">ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</a></blockquote><iframe class="wp-embedded-content" sandbox="allow-scripts" security="restricted"  title="“ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್” — Samyukta Karnataka" src="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/embed/#?secret=yFfTWplwr0#?secret=InmYIQYl2N" data-secret="InmYIQYl2N" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/">ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>`ಬಳ್ಳಾರಿ ಚಲೋ&#8217; ಪಾದಯಾತ್ರೆ: ಕೊಪ್ಪಳಕ್ಕೆ ಕಾಲಿಟ್ಟ ಕೇಸರಿ ಪಡೆ</title>
		<link>https://samyuktakarnataka.in/news/karnataka/the-ballari-chalo-padayatra-bade-farewell-to-raichur-district-and-entered-koppal/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 14:42:40 +0000</pubDate>
				<category><![CDATA[ರಾಜ್ಯ]]></category>
		<category><![CDATA[#Ballari]]></category>
		<category><![CDATA[#karnataka]]></category>
		<guid isPermaLink="false">https://samyuktakarnataka.in/?p=106596</guid>

					<description><![CDATA[<p>ಕೊಪ್ಪಳ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ `ಬಳ್ಳಾರಿ ಚಲೋ&#8217; ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ರಾಯಚೂರು ಜಿಲ್ಲೆಗೆ ವಿದಾಯ ಹೇಳಿ ಕೊಪ್ಪಳ ಜಿಲ್ಲೆಗೆ ಭರ್ಜರಿ ಎಂಟ್ರಿ ಕೊಟ್ಟಿತು. ಸಿಂಧನೂರಿನಿಂದ ಕಾರಟಗಿ ಕಡೆಗೆ ಸಾಗಿದ ಕೇಸರಿ ಪಡೆಯ ಹೆಜ್ಜೆಗಳಿಗೆ ಕಾರ್ಯಕರ್ತರ ಉತ್ಸಾಹ, ನಾಯಕರ ವಾಗ್ದಾಳಿ ಹಾಗೂ ಮಾರ್ಗಮಧ್ಯೆ ಸಿಕ್ಕ ಅದ್ದೂರಿ ಸ್ವಾಗತ ಮತ್ತಷ್ಟು ಕಳೆ ನೀಡಿತು. ನಾಲ್ಕನೇ ದಿನದ ಯಾತ್ರೆ ಸಿಂಧನೂರು ಕ್ಷೇತ್ರದಿಂದ ಹೊರಟು ಕನಕಗಿರಿ ಕ್ಷೇತ್ರದ ಕಾರಟಗಿ ತಾಲೂಕಿನತ್ತ ಮುನ್ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಗೋ [&#8230;]</p>
<p>The post <a href="https://samyuktakarnataka.in/news/karnataka/the-ballari-chalo-padayatra-bade-farewell-to-raichur-district-and-entered-koppal/">`ಬಳ್ಳಾರಿ ಚಲೋ&#8217; ಪಾದಯಾತ್ರೆ: ಕೊಪ್ಪಳಕ್ಕೆ ಕಾಲಿಟ್ಟ ಕೇಸರಿ ಪಡೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಕೊಪ್ಪಳ:</strong> ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ `ಬಳ್ಳಾರಿ ಚಲೋ&#8217; ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ರಾಯಚೂರು ಜಿಲ್ಲೆಗೆ ವಿದಾಯ ಹೇಳಿ ಕೊಪ್ಪಳ ಜಿಲ್ಲೆಗೆ ಭರ್ಜರಿ ಎಂಟ್ರಿ ಕೊಟ್ಟಿತು.</p>



<p class="wp-block-paragraph">ಸಿಂಧನೂರಿನಿಂದ ಕಾರಟಗಿ ಕಡೆಗೆ ಸಾಗಿದ ಕೇಸರಿ ಪಡೆಯ ಹೆಜ್ಜೆಗಳಿಗೆ ಕಾರ್ಯಕರ್ತರ ಉತ್ಸಾಹ, ನಾಯಕರ ವಾಗ್ದಾಳಿ ಹಾಗೂ ಮಾರ್ಗಮಧ್ಯೆ ಸಿಕ್ಕ ಅದ್ದೂರಿ ಸ್ವಾಗತ ಮತ್ತಷ್ಟು ಕಳೆ ನೀಡಿತು. ನಾಲ್ಕನೇ ದಿನದ ಯಾತ್ರೆ ಸಿಂಧನೂರು ಕ್ಷೇತ್ರದಿಂದ ಹೊರಟು ಕನಕಗಿರಿ ಕ್ಷೇತ್ರದ ಕಾರಟಗಿ ತಾಲೂಕಿನತ್ತ ಮುನ್ನಡೆಯಿತು.</p>



<p class="wp-block-paragraph">ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಸಿಂಧನೂರಿನ ಕೋರ್ಟ್ ಸರ್ಕಲ್‌ನಿಂದ ನಾಲ್ಕನೇ ದಿನದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಶಾಸಕ ಸುನೀಲ್ ಕುಮಾರ್, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಪ್ರಮುಖ ನಾಯಕರು ಹೆಜ್ಜೆ ಹಾಕಿದರು.</p>



<p class="wp-block-paragraph"><strong>ಅಕ್ಕಮ್ಮದೇವಿ ಪ್ರತಿಮೆಗೆ ಮಾಲಾರ್ಪಣೆ:</strong> ಸಿಂಧನೂರಿನ ಗಂಗಾವತಿ ರಸ್ತೆಯಲ್ಲಿರುವ ಅಕ್ಕಮ್ಮದೇವಿ ಪ್ರತಿಮೆಗೆ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ನಾಯಕರು ಮಾಲಾರ್ಪಣೆ ಮಾಡಿದರು. ಬಳಿಕ ಪಾದಯಾತ್ರೆ ಮುಂದುವರಿಯಿತು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದು ಘೋಷಣೆ ಕೂಗುತ್ತಾ ನಾಯಕರಿಗೆ ಸಾಥ್ ನೀಡಿದರು.</p>



<p class="wp-block-paragraph"><strong>ಗೋರೆಬಾಳದಲ್ಲಿ ಈಶ್ವರನಿಗೆ ಪೂಜೆ:</strong> ಸಿಂಧನೂರು ತಾಲೂಕಿನ ಗೋರೆಬಾಳ ತಲುಪಿದ ಸಂದರ್ಭದಲ್ಲಿ ವಿಜಯೇಂದ್ರ ಅವರು ಶ್ರೀಕ್ಷೇತ್ರ ಗೋರೆಬಾಳದ ಈಶ್ವರ ಲಿಂಗಕ್ಕೆ ಮಾಲಾರ್ಪಣೆ ಮಾಡಿದರು. ಧಾರ್ಮಿಕ ಕಾರ್ಯಕ್ರಮಗಳ ನಡುವೆಯೇ ಪಾದಯಾತ್ರೆ ಮುಂದುವರಿಯಿತು. ಇಜೆ ಹೊಸಳ್ಳಿ, ಶ್ರೀಪುರಂ ಜಂಕ್ಷನ್, ಗೊರೇಬಾಳ ಕ್ಯಾಂಪ್, ಗೊರೇಬಾಳ ಸೇರಿ ಮಾರ್ಗ ಮಧ್ಯದ ಹಳ್ಳಿಗಳಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಸ ಹಿಡಿದು ಸ್ವಾಗತಿಸಿಕೊಂಡರು.</p>



<p class="wp-block-paragraph">ಅಲ್ಲಿಂದ ಹೊರಟ ಯಾತ್ರೆ ಸಿಂಧನೂರು ಕ್ಷೇತ್ರದ ಗ್ರಾಮೀಣ ಪ್ರದೇಶ, ಹಂಚಿನಾಳ ಕ್ಯಾಂಪ್‌ಗೆ ಮಧ್ಯಾಹ್ನ 2 ಗಂಟೆಗೆ ತಲುಪಿತು. ಊಟ ವಿಶ್ರಾಂತಿ ಬಳಿಕ ಸಂಜೆ 4 ಗಂಟೆಗೆ ಪುನರಾರಂಭಗೊಂಡ ಕೇಸರಿ ದಂಡಯಾತ್ರೆ, ಸಿಂಧನೂರಿನ ಗಡಿ ಗ್ರಾಮ ಚನ್ನಳ್ಳಿ ಕ್ರಾಸ್ ದಾಟಿ ಕೊಪ್ಪಳ ಜಿಲ್ಲೆ ಪ್ರವೇಶಿಸಿತು. ಕೊಪ್ಪಳ ಜಿಲ್ಲೆಗೆ ಪ್ರವೇಶಿಸುವ ಮಾರ್ಗವನ್ನು ಈ ದಿನದ ಪ್ರಮುಖ ಹಂತವಾಗಿ ಬಿಜೆಪಿ ಗುರುತಿಸಿತ್ತು.</p>



<p class="wp-block-paragraph"><strong>ಜಾಲಿಹಾಳ ಕ್ಯಾಂಪ್‌ನಲ್ಲಿ ಹೂಮಳೆ, ಕ್ರೇನ್ ಹಾರ: </strong>ಕೊಪ್ಪಳ ಜಿಲ್ಲೆಯ ಗಡಿ ಪ್ರವೇಶಿಸಿದ ಬಳಿಕ ಜಾಲಿಹಾಳ ಕ್ಯಾಂಪ್ ಬಳಿ ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ, ಹೂಗಳನ್ನು ಎರಚುವ ಮೂಲಕ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಂಡರು. ಕೇಸರಿ ಧ್ವಜಗಳು ಹಾಗೂ ಕಾರ್ಯಕರ್ತರ ಘೋಷಣೆಗಳಿಂದ ಮಾರ್ಗದುದ್ದಕ್ಕೂ ರಾಜಕೀಯ ವಾತಾವರಣ ಕಾವೇರಿತ್ತು.</p>



<p class="wp-block-paragraph">ಸಂಜೆ 6.30 ರ ಸುಮಾರಿಗೆ ಆಗಮಿಸಿದ ಕೇಸರಿ ದಂಡು ಕಾರಟಗಿ ಪಟ್ಟಣ ಪೂರ್ಣ ಕೇಸರಿಮಯಗೊಳಿಸಿತು. ಮಾಜಿ ಶಾಸಕ ಬಸವರಾಜ ದಢೇಸ್ಗೂರು ನೇತೃತ್ವದಲ್ಲಿ ಕಾರಟಗಿಯಲ್ಲಿ ಬಹಿರಂಗ ಸಮಾವೇಶ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನಸ್ತೋಮದ ಕೇಸರಿ ಪಡೆಯ ಪಾದಯಾತ್ರೆ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಪಾದಯಾತ್ರೆಯಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಕಳೆದ 25 ದಿನಗಳಲ್ಲಿ ಬಿಜೆಪಿಯ ನಿರಂತರ ಹೋರಾಟಕ್ಕೆ ನಾಲ್ಕು ಮಹತ್ವದ ಯಶಸ್ಸುಗಳು ಸಿಕ್ಕಿವೆ ಎಂದು ಪ್ರತಿಪಾದಿಸಿದರು.</p>



<p class="wp-block-paragraph"><strong>ಈಗ ಕೊಪ್ಪಳದ ಸರದಿ:</strong> ಲಿಂಗಸುಗೂರಿನಿಂದ ಆರಂಭಗೊಂಡ ʻಬಳ್ಳಾರಿ ಚಲೋʼ ಪಾದಯಾತ್ರೆ ಮಸ್ಕಿ, ಸಿಂಧನೂರು ಭಾಗಗಳನ್ನು ದಾಟಿ ನಾಲ್ಕನೇ ದಿನ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದತ್ತ ಕಾಲಿಟ್ಟಿದೆ. ಒಟ್ಟು ಸುಮಾರು 175- 185 ಕಿ.ಮೀ. ವ್ಯಾಪ್ತಿಯಲ್ಲಿ ಸಾಗಲಿರುವ ಪಾದಯಾತ್ರೆ ಮುಂದಿನ ದಿನಗಳಲ್ಲಿ ಕನಕಗಿರಿ, ಗಂಗಾವತಿ, ಕಂಪ್ಲಿ, ಸಂಡೂರು ಮಾರ್ಗವಾಗಿ ಬಳ್ಳಾರಿಯತ್ತ ಸಾಗಲಿದೆ.</p>



<p class="wp-block-paragraph">ರಾಯಚೂರಿನಲ್ಲಿ ಮೂರು ದಿನಗಳ ಕಾಲ ಕಂಡ ಕೇಸರಿ ಶಕ್ತಿ ಇದೀಗ ಕೊಪ್ಪಳದ ನೆಲಕ್ಕೆ ಕಾಲಿಟ್ಟಿದ್ದು, ಕಾರಟಗಿ ಮೂಲಕ ʻಬಳ್ಳಾರಿ ಚಲೋʼ ಮತ್ತಷ್ಟು ರಾಜಕೀಯ ಕಾವು ಪಡೆದುಕೊಂಡಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="CKcflgXlzW"><a href="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/">ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</a></blockquote><iframe loading="lazy" class="wp-embedded-content" sandbox="allow-scripts" security="restricted"  title="“ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್” — Samyukta Karnataka" src="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/embed/#?secret=pcJwwgmBWe#?secret=CKcflgXlzW" data-secret="CKcflgXlzW" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/karnataka/the-ballari-chalo-padayatra-bade-farewell-to-raichur-district-and-entered-koppal/">`ಬಳ್ಳಾರಿ ಚಲೋ&#8217; ಪಾದಯಾತ್ರೆ: ಕೊಪ್ಪಳಕ್ಕೆ ಕಾಲಿಟ್ಟ ಕೇಸರಿ ಪಡೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಅಣ್ಣನ ಅಂತ್ಯಕ್ರಿಯೆಗೆ ಬಂದಿದ್ದ ತಂಗಿ ಹೃದಯಾಘಾತದಿಂದ ಸಾವು</title>
		<link>https://samyuktakarnataka.in/districts/baglkot/sister-who-came-for-brothers-funeral-dies-of-heart-attack/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 14:06:30 +0000</pubDate>
				<category><![CDATA[ಬಾಗಲಕೋಟೆ]]></category>
		<category><![CDATA[#bagalkote]]></category>
		<guid isPermaLink="false">https://samyuktakarnataka.in/?p=106590</guid>

					<description><![CDATA[<p>ಬಾಗಲಕೋಟೆ: ಅಣ್ಣನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆಂದು ಓಡಿಬಂದ ತಂಗಿ, ಅಣ್ಣನ ಪಾರ್ಥಿವ ಶರೀರ ಕಂಡು ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಹನಗಂಡಿ ಗ್ರಾಮದಲ್ಲಿ ನಡೆದಿದೆ. ಹನಗಂಡಿ ಗ್ರಾಮದ ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚೆ (46) ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಣ್ಣನ ಅಗಲಿಕೆಯ ಸುದ್ದಿ ತಿಳಿದು ದುಃಖದಲ್ಲೇ ಅಂತ್ಯಕ್ರಿಯೆಗೆಂದು ಆಗಮಿಸಿದ್ದ ಅವರ ಸಹೋದರಿ ಶ್ರೀದೇವಿ ಕಲ್ಲಪ್ಪ ಅಸೋದೆ (37) ಅವರಿಗೆ, ಅಣ್ಣನ ಪಾರ್ಥಿವ ಶರೀರವನ್ನು ಕಂಡ ಕ್ಷಣದಲ್ಲೇ ದುಃಖ ತಡೆಯಲಾಗದೆ ಕುಸಿದುಬಿದ್ದಿದ್ದಾರೆ. [&#8230;]</p>
<p>The post <a href="https://samyuktakarnataka.in/districts/baglkot/sister-who-came-for-brothers-funeral-dies-of-heart-attack/">ಅಣ್ಣನ ಅಂತ್ಯಕ್ರಿಯೆಗೆ ಬಂದಿದ್ದ ತಂಗಿ ಹೃದಯಾಘಾತದಿಂದ ಸಾವು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬಾಗಲಕೋಟೆ: </strong>ಅಣ್ಣನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆಂದು ಓಡಿಬಂದ ತಂಗಿ, ಅಣ್ಣನ ಪಾರ್ಥಿವ ಶರೀರ ಕಂಡು ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಹನಗಂಡಿ ಗ್ರಾಮದಲ್ಲಿ ನಡೆದಿದೆ.</p>



<p class="wp-block-paragraph">ಹನಗಂಡಿ ಗ್ರಾಮದ ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚೆ (46) ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಣ್ಣನ ಅಗಲಿಕೆಯ ಸುದ್ದಿ ತಿಳಿದು ದುಃಖದಲ್ಲೇ ಅಂತ್ಯಕ್ರಿಯೆಗೆಂದು ಆಗಮಿಸಿದ್ದ ಅವರ ಸಹೋದರಿ ಶ್ರೀದೇವಿ ಕಲ್ಲಪ್ಪ ಅಸೋದೆ (37) ಅವರಿಗೆ, ಅಣ್ಣನ ಪಾರ್ಥಿವ ಶರೀರವನ್ನು ಕಂಡ ಕ್ಷಣದಲ್ಲೇ ದುಃಖ ತಡೆಯಲಾಗದೆ ಕುಸಿದುಬಿದ್ದಿದ್ದಾರೆ.</p>



<p class="wp-block-paragraph">ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಹಾಗೂ ಸ್ಥಳೀಯರು ಮುಂದಾದರೂ, ಅಷ್ಟರಲ್ಲಾಗಲೇ ಶ್ರೀದೇವಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.</p>



<p class="wp-block-paragraph">ಅಣ್ಣನನ್ನು ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬಕ್ಕೆ, ಕೆಲವೇ ಕ್ಷಣಗಳಲ್ಲಿ ತಂಗಿಯ ಸಾವಿನ ಆಘಾತವೂ ಎದುರಾಗಿದ್ದು, ಇಡೀ ಕುಟುಂಬವೇ ದುಃಖದ ಮಡುವಿನಲ್ಲಿ ಮುಳುಗಿದೆ. ಅಣ್ಣನ ಅಂತ್ಯಕ್ರಿಯೆಗೆ ಬಂದ ತಂಗಿಯೂ ಅದೇ ದಿನ ವಿಧಿವಶರಾಗಿರುವುದು ಹನಗಂಡಿ ಗ್ರಾಮಸ್ಥರ ಮನಕಲಕಿದೆ.</p>



<p class="wp-block-paragraph">ಅಣ್ಣ-ತಂಗಿಯ ಅಕಾಲಿಕ ಅಗಲಿಕೆಯಿಂದ ಹನಗಂಡಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಬಂಧು-ಬಳಗದವರ ಕಣ್ಣೀರು ಕಟ್ಟಲಾಗದಂತಾಗಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="4GH08Wdw1r"><a href="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/">ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</a></blockquote><iframe loading="lazy" class="wp-embedded-content" sandbox="allow-scripts" security="restricted"  title="“ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್” — Samyukta Karnataka" src="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/embed/#?secret=92pkvbFOxK#?secret=4GH08Wdw1r" data-secret="4GH08Wdw1r" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/baglkot/sister-who-came-for-brothers-funeral-dies-of-heart-attack/">ಅಣ್ಣನ ಅಂತ್ಯಕ್ರಿಯೆಗೆ ಬಂದಿದ್ದ ತಂಗಿ ಹೃದಯಾಘಾತದಿಂದ ಸಾವು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</title>
		<link>https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 13:54:49 +0000</pubDate>
				<category><![CDATA[ರಾಜ್ಯ]]></category>
		<category><![CDATA[#karnataka]]></category>
		<guid isPermaLink="false">https://samyuktakarnataka.in/?p=106584</guid>

					<description><![CDATA[<p>ಸಿಂಧನೂರು: ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಕಳೆದುಕೊಳ್ಳಲಿದ್ದು, ಹೊಸ ವರ್ಷಕ್ಕೆ ಕಾಂಗ್ರೆಸ್‌ನಲ್ಲಿ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೊಸ ಬಾಂಬ್ ಸಿಡಿಸಿದರು. ಸಿಂಧನೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಬಿಸಿಲು ಕುದುರೆ ಏರಿದ್ದಾರೆ. ಬಿಸಿಲು ಕುದುರೆ ಎಲ್ಲಿಯವರೆಗೆ ಹೋಗುತ್ತದೆ ಎಂಬುದು ನಮಗೆ ಗೊತ್ತಿದೆ. ಹೊಸ ವರ್ಷಕ್ಕೆ ಕಾಂಗ್ರೆಸ್‌ನಲ್ಲಿ ಹೊಸ ಮುಖ್ಯಮಂತ್ರಿ ಬರಲಿದ್ದಾರೆ. ಈ ರೀತಿಯ ಸುದ್ದಿಗಳು ದೆಹಲಿಯಿಂದ ಬರುತ್ತಿವೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ವೃದ್ಧಾಪ್ಯ ವೇತನ, [&#8230;]</p>
<p>The post <a href="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/">ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಸಿಂಧನೂರು: </strong>ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಕಳೆದುಕೊಳ್ಳಲಿದ್ದು, ಹೊಸ ವರ್ಷಕ್ಕೆ ಕಾಂಗ್ರೆಸ್‌ನಲ್ಲಿ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೊಸ ಬಾಂಬ್ ಸಿಡಿಸಿದರು.</p>



<p class="wp-block-paragraph">ಸಿಂಧನೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಬಿಸಿಲು ಕುದುರೆ ಏರಿದ್ದಾರೆ. ಬಿಸಿಲು ಕುದುರೆ ಎಲ್ಲಿಯವರೆಗೆ ಹೋಗುತ್ತದೆ ಎಂಬುದು ನಮಗೆ ಗೊತ್ತಿದೆ. ಹೊಸ ವರ್ಷಕ್ಕೆ ಕಾಂಗ್ರೆಸ್‌ನಲ್ಲಿ ಹೊಸ ಮುಖ್ಯಮಂತ್ರಿ ಬರಲಿದ್ದಾರೆ. ಈ ರೀತಿಯ ಸುದ್ದಿಗಳು ದೆಹಲಿಯಿಂದ ಬರುತ್ತಿವೆ ಎಂದು ಹೇಳಿದರು.</p>



<p class="wp-block-paragraph">ಕಾಂಗ್ರೆಸ್ ಸರ್ಕಾರ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ಸಾಮಾನ್ಯ ಜನರ ಯೋಜನೆಗಳನ್ನೇ ಕಸಿದುಕೊಂಡ ಸರ್ಕಾರವಾಗಿದೆ ಎಂದು ಆರೋಪಿಸಿದ ಸುನೀಲ್ ಕುಮಾರ್, ಗ್ರಾಮೀಣ ಭಾಗದ ಜನರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.</p>



<p class="wp-block-paragraph">ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು. 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಹೇಳುತ್ತಿರುವ ಸರ್ಕಾರ ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳನ್ನು ಬರ ಘೋಷಣೆಯಿಂದ ಹೊರಗಿಟ್ಟಿದೆ ಎಂದು ದೂರಿದರು.</p>



<p class="wp-block-paragraph">ಇದು ಉತ್ತರ ಕರ್ನಾಟಕ ವಿರೋಧಿ ಸರ್ಕಾರವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಯುವಕರು ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಸರ್ಕಾರ ರಾಜಕೀಯದಲ್ಲೇ ಮುಳುಗಿದೆ ಎಂದು ಟೀಕಿಸಿದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="5ln8B0Eomn"><a href="https://samyuktakarnataka.in/news/india/retired-ifs-officer-subhash-malkhede-appointed-to-the-vanatara-governing-board/">ವನತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಮಲ್ಕೇಡೆ ನೇಮಕ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“ವನತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಮಲ್ಕೇಡೆ ನೇಮಕ” — Samyukta Karnataka" src="https://samyuktakarnataka.in/news/india/retired-ifs-officer-subhash-malkhede-appointed-to-the-vanatara-governing-board/embed/#?secret=Gq7QMC77bc#?secret=5ln8B0Eomn" data-secret="5ln8B0Eomn" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/">ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಮೋಡ ಬಿತ್ತನೆಗೆ ಹಾರಿತು ವಿಶೇಷ ವಿಮಾನ: ರಾಜ್ಯದ ಮಳೆ ಕೊರತೆ ನೀಗಿಸಲು ಸರ್ಕಾರದ ಮಹತ್ವದ ಹೆಜ್ಜೆ</title>
		<link>https://samyuktakarnataka.in/news/karnataka/karnataka-cloud-seeding-programme-rainfall-deficit-2026/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 13:39:33 +0000</pubDate>
				<category><![CDATA[ರಾಜ್ಯ]]></category>
		<category><![CDATA[#karnataka]]></category>
		<category><![CDATA[formers]]></category>
		<guid isPermaLink="false">https://samyuktakarnataka.in/?p=106580</guid>

					<description><![CDATA[<p>ಕರ್ನಾಟಕದಲ್ಲಿ ಮೋಡ ಬಿತ್ತನೆ ಆರಂಭ: ಮಳೆಗಾಗಿ ಆಕಾಶದತ್ತ ಸರ್ಕಾರದ ಕಣ್ಣು; ₹28.52 ಕೋಟಿ ಮೋಡ ಬಿತ್ತನೆ ಯೋಜನೆ ಆರಂಭ ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲಕ್ಷಾಮದ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಮೋಡ ಬಿತ್ತನೆ (Cloud Seeding) ಯೋಜನೆಗೆ ಶುಕ್ರವಾರ ಅಧಿಕೃತ ಚಾಲನೆ ನೀಡಲಾಗಿದೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಶೇಷವಾಗಿ ಸಿದ್ಧಪಡಿಸಲಾದ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ತೋರಿಸುವ ಮೂಲಕ [&#8230;]</p>
<p>The post <a href="https://samyuktakarnataka.in/news/karnataka/karnataka-cloud-seeding-programme-rainfall-deficit-2026/">ಮೋಡ ಬಿತ್ತನೆಗೆ ಹಾರಿತು ವಿಶೇಷ ವಿಮಾನ: ರಾಜ್ಯದ ಮಳೆ ಕೊರತೆ ನೀಗಿಸಲು ಸರ್ಕಾರದ ಮಹತ್ವದ ಹೆಜ್ಜೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಕರ್ನಾಟಕದಲ್ಲಿ ಮೋಡ ಬಿತ್ತನೆ ಆರಂಭ: ಮಳೆಗಾಗಿ ಆಕಾಶದತ್ತ ಸರ್ಕಾರದ ಕಣ್ಣು; ₹28.52 ಕೋಟಿ ಮೋಡ ಬಿತ್ತನೆ ಯೋಜನೆ ಆರಂಭ</strong></p>



<p class="wp-block-paragraph">ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಜಲಕ್ಷಾಮದ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಮೋಡ ಬಿತ್ತನೆ (Cloud Seeding) ಯೋಜನೆಗೆ ಶುಕ್ರವಾರ ಅಧಿಕೃತ ಚಾಲನೆ ನೀಡಲಾಗಿದೆ. ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಶೇಷವಾಗಿ ಸಿದ್ಧಪಡಿಸಲಾದ ಲಘು ವಿಮಾನಕ್ಕೆ ರಾಷ್ಟ್ರಧ್ವಜ ಹಾಗೂ ನಾಡಧ್ವಜ ತೋರಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.</p>



<p class="wp-block-paragraph">ಈ ಯೋಜನೆಯ ಪ್ರಮುಖ ಉದ್ದೇಶ ಮಳೆ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು ಹೆಚ್ಚಿಸುವುದು ಹಾಗೂ ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿದೆ. ವಿಶೇಷವಾಗಿ ಕುಡಿಯುವ ನೀರು, ಕೃಷಿ ಹಾಗೂ ಜಲಾಶಯಗಳ ನೀರಿನ ಸಂಗ್ರಹದ ದೃಷ್ಟಿಯಿಂದ ಸರ್ಕಾರ ಈ ಪ್ರಯೋಗಕ್ಕೆ ಮುಂದಾಗಿದೆ.</p>



<p class="wp-block-paragraph">ಸಚಿವ ಚಲುವರಾಯಸ್ವಾಮಿ ಅವರ ಪ್ರಕಾರ, ಈ ವರ್ಷ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗದಿದ್ದರೆ ಮುಂದಿನ ಜೂನ್‌ವರೆಗೆ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರೈತರ ಹಿತ ಹಾಗೂ ಭವಿಷ್ಯದ ನೀರಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಮೋಡ ಬಿತ್ತನೆ ಕೈಗೊಳ್ಳಲಾಗಿದೆ. ಹಿಂದಿನ ಮೋಡ ಬಿತ್ತನೆ ಕಾರ್ಯಾಚರಣೆ ಸುಮಾರು 35% ಯಶಸ್ವಿಯಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.</p>



<p class="wp-block-paragraph">₹28.52 ಕೋಟಿ ವೆಚ್ಚದ ಯೋಜನೆ : ಮೋಡ ಬಿತ್ತನೆ ಯೋಜನೆಗೆ ₹28.52 ಕೋಟಿ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈ ಮೊತ್ತ ಜಿಎಸ್‌ಟಿ ಹೊರತುಪಡಿಸಿದೆ. ಜಲಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ (KNNL) ಹಾಗೂ ಕಂದಾಯ ಇಲಾಖೆಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಜಂಟಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ. ಯೋಜನೆಯ ಗುತ್ತಿಗೆಯನ್ನು Kyathi Climate Modification Consultants LLPಗೆ ನೀಡಲಾಗಿದೆ.</p>



<p class="wp-block-paragraph">ಯೋಜನೆಯ ಕಾರ್ಯಾಚರಣೆಯನ್ನು ವೈಜ್ಞಾನಿಕವಾಗಿ ಮೇಲ್ವಿಚಾರಣೆ ಮಾಡಲು ಸರ್ಕಾರ ಎರಡು ಸಮಿತಿಗಳನ್ನು ರಚಿಸಿದೆ. ಮೇಲ್ವಿಚಾರಣಾ ಸಮಿತಿ ಯೋಜನೆಯ ಒಟ್ಟಾರೆ ಅನುಷ್ಠಾನವನ್ನು ಪರಿಶೀಲಿಸಲಿದ್ದು, ತಾಂತ್ರಿಕ ಸಲಹಾ ಮತ್ತು ಮೌಲ್ಯಮಾಪನ ಸಮಿತಿ ಹವಾಮಾನ ಪರಿಸ್ಥಿತಿ, ಮೋಡಗಳ ಸ್ವರೂಪ ಹಾಗೂ ಮೋಡ ಬಿತ್ತನೆಯ ಪರಿಣಾಮವನ್ನು ನಿರಂತರವಾಗಿ ಪರಿಶೀಲಿಸಲಿದೆ. ತಾಂತ್ರಿಕ ತಂಡವು ಪ್ರತಿ ಎರಡು ಗಂಟೆಗೊಮ್ಮೆ ಲಭ್ಯವಾಗುವ ಹವಾಮಾನ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಯ ಸ್ಥಳವನ್ನು ನಿರ್ಧರಿಸಲಿದೆ.</p>



<p class="wp-block-paragraph">ಹೇಗೆ ನಡೆಯಲಿದೆ ಮೋಡ ಬಿತ್ತನೆ? : ಮೋಡ ಬಿತ್ತನೆ ಎಂದರೆ ಈಗಾಗಲೇ ವಾತಾವರಣದಲ್ಲಿರುವ ಸೂಕ್ತ ಮೋಡಗಳ ಮಳೆ ಸುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ದಿಷ್ಟ ಕಣಗಳನ್ನು ಬಳಸುವ ತಂತ್ರಜ್ಞಾನ. ಡಾಪ್ಲರ್ ರಾಡಾರ್ ಹಾಗೂ ನೈಜ-ಸಮಯದ ಹವಾಮಾನ ದತ್ತಾಂಶದ ಮೂಲಕ ಮಳೆಯ ಸಾಧ್ಯತೆಯಿರುವ ಸೂಕ್ತ ಮೋಡಗಳನ್ನು ಗುರುತಿಸಲಾಗುತ್ತದೆ.</p>



<p class="wp-block-paragraph">ತಾಪಮಾನ ಮತ್ತು ಮೋಡಗಳ ಸ್ವರೂಪಕ್ಕೆ ಅನುಗುಣವಾಗಿ ಬಿತ್ತನೆಗೆ ಬಳಸುವ ಪದಾರ್ಥ ಬದಲಾಗುತ್ತದೆ. ಲಭ್ಯವಿರುವ ಯೋಜನಾ ವಿವರಗಳ ಪ್ರಕಾರ, ಬೆಚ್ಚಗಿನ ಮೋಡಗಳಲ್ಲಿ ಸೋಡಿಯಂ ಕ್ಲೋರೈಡ್ ಮತ್ತು ತಂಪಾದ ಮೋಡಗಳಲ್ಲಿ ಸಿಲ್ವರ್ ಅಯೋಡೈಡ್ ಬಳಸುವ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತದೆ. ವಿಶೇಷ ವಿಮಾನದ ಮೂಲಕ ಸೂಕ್ತ ಮೋಡಗಳೊಳಗೆ ಈ ಕಣಗಳನ್ನು ಹರಡಲಾಗುತ್ತದೆ.</p>



<p class="wp-block-paragraph">ಸೂಕ್ತ ಮೋಡಗಳಿದ್ದಾಗ ಮಾತ್ರ ಕಾರ್ಯಾಚರಣೆ : ರಾಜ್ಯದ ನಾಲ್ಕು ಕಂದಾಯ ವಿಭಾಗಗಳನ್ನು ಒಳಗೊಂಡಂತೆ ಸುಮಾರು 60 ದಿನಗಳ ಕಾಲ ಯೋಜನೆ ನಡೆಸುವ ಉದ್ದೇಶವಿದೆ. ಆದರೆ ಪ್ರತಿದಿನವೂ ವಿಮಾನ ಹಾರಾಟ ನಡೆಸಲಾಗುತ್ತದೆ ಎಂದಲ್ಲ. ಮೋಡಗಳ ತೇವಾಂಶ, ಎತ್ತರ, ಗಾಳಿಯ ವೇಗ ಹಾಗೂ ಇತರ ಹವಾಮಾನ ಅಂಶಗಳು ಮೋಡ ಬಿತ್ತನೆಗೆ ಅನುಕೂಲಕರವಾಗಿದ್ದಾಗ ಮಾತ್ರ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಯೋಜನೆಯಡಿ ಸುಮಾರು 200 ಹಾರಾಟದ ಗಂಟೆಗಳನ್ನು ಬಳಸುವ ಉದ್ದೇಶವಿದೆ.</p>



<p class="wp-block-paragraph">ಇದರ ನಡುವೆ, ₹28.5 ಕೋಟಿಯಷ್ಟು ಮೊತ್ತದ ಈ ಯೋಜನೆಗೆ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ನೀಡಿರುವ ಕುರಿತು ಪ್ರಶ್ನೆಗಳೂ ಎದ್ದಿವೆ. ಕಂಪನಿಯೊಂದಿಗಿನ ಸಂಬಂಧ ಮತ್ತು ಟೆಂಡರ್ ವಿನಾಯಿತಿ ಬಗ್ಗೆ ವರದಿಗಳು ಪಾರದರ್ಶಕತೆಯ ಕುರಿತು ಚರ್ಚೆಗೆ ಕಾರಣವಾಗಿವೆ. ಸರ್ಕಾರದ ಯೋಜನೆಯ ಅಧಿಕೃತ ಚಾಲನೆ ಮಾತ್ರ ಸೆಪ್ಟೆಂಬರ್ 4ರಂದು ನಡೆದಿದೆ.</p>



<p class="wp-block-paragraph">ಒಟ್ಟಿನಲ್ಲಿ, ಮಳೆ ಕೊರತೆ ಮತ್ತು ಸಂಭಾವ್ಯ ಜಲಕ್ಷಾಮವನ್ನು ಎದುರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಈ ಪ್ರಯತ್ನದಿಂದ ಕೃಷಿ ಪ್ರದೇಶಗಳು ಹಾಗೂ ಪ್ರಮುಖ ಜಲಾಶಯಗಳ ಜಲಾನಯನ ಪ್ರದೇಶಗಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ. ಆದರೆ ಮೋಡ ಬಿತ್ತನೆಯ ಫಲಿತಾಂಶವು ಸಂಪೂರ್ಣವಾಗಿ ಸೂಕ್ತ ಹವಾಮಾನ ಮತ್ತು ಮೋಡಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರಲಿದೆ.</p>



<p class="wp-block-paragraph"><strong>ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ</strong> 👉 <strong><a href="https://samyuktakarnataka.in/news/live-news-updates-in-samyukta-karnataka-5/" type="link" id="https://samyuktakarnataka.in/news/live-news-updates-in-samyukta-karnataka-5/">ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.</a></strong></p>
<p>The post <a href="https://samyuktakarnataka.in/news/karnataka/karnataka-cloud-seeding-programme-rainfall-deficit-2026/">ಮೋಡ ಬಿತ್ತನೆಗೆ ಹಾರಿತು ವಿಶೇಷ ವಿಮಾನ: ರಾಜ್ಯದ ಮಳೆ ಕೊರತೆ ನೀಗಿಸಲು ಸರ್ಕಾರದ ಮಹತ್ವದ ಹೆಜ್ಜೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಜಾಜಿ ಮಲ್ಲಿಗೆ… ‘ಪುಟ್ಟಮಲ್ಲಿ’ ಹಾಡು ರಿಲೀಸ್</title>
		<link>https://samyuktakarnataka.in/entertainment/anna-from-mexico-puttamalli-song-dhananjaya-reeshma-nanaiah/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 13:32:25 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<category><![CDATA[#KannadaCinema]]></category>
		<category><![CDATA[#sandalwood]]></category>
		<guid isPermaLink="false">https://samyuktakarnataka.in/?p=106574</guid>

					<description><![CDATA[<p>‘ಅಣ್ಣ ಫ್ರಮ್ ಮೆಕ್ಸಿಕೋ’ ಪುಟ್ಟಮಲ್ಲಿ ಹಾಡಿನ ಹವಾ; ಧನಂಜಯ್ ಎನರ್ಜಿಗೆ ಫಿದಾ ಆದ ಫ್ಯಾನ್ಸ್ &#8211; ‘ಓ ಪುಟ್ಟಮಲ್ಲಿ…’ ಎಂದು ಗುನುಗುತ್ತಿರುವ ಅಭಿಮಾನಿಗಳು ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಹೊಸ ಹಾಡು‘ಪುಟ್ಟಮಲ್ಲಿ’ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಗಮನ ಸೆಳೆಯುತ್ತಿರುವ ಹಾಡುಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ 4ರಂದು ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಇದರ ಕುರಿತು ಚರ್ಚೆ ಆರಂಭವಾಗಿದೆ. ‘ಪುಟ್ಟಮಲ್ಲಿ’ ಹಾಡಿನಲ್ಲಿ ಡಾಲಿ ಧನಂಜಯ್ ಅವರ ವಿಭಿನ್ನ ಲುಕ್, ಎನರ್ಜಿಟಿಕ್ ಮ್ಯಾನರಿಸಂ ಮತ್ತು ನಾಯಕಿ [&#8230;]</p>
<p>The post <a href="https://samyuktakarnataka.in/entertainment/anna-from-mexico-puttamalli-song-dhananjaya-reeshma-nanaiah/">ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಜಾಜಿ ಮಲ್ಲಿಗೆ… ‘ಪುಟ್ಟಮಲ್ಲಿ’ ಹಾಡು ರಿಲೀಸ್</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>‘ಅಣ್ಣ ಫ್ರಮ್ ಮೆಕ್ಸಿಕೋ’ ಪುಟ್ಟಮಲ್ಲಿ ಹಾಡಿನ ಹವಾ; ಧನಂಜಯ್ ಎನರ್ಜಿಗೆ ಫಿದಾ ಆದ ಫ್ಯಾನ್ಸ್ &#8211; ‘ಓ ಪುಟ್ಟಮಲ್ಲಿ…’ ಎಂದು ಗುನುಗುತ್ತಿರುವ ಅಭಿಮಾನಿಗಳು</strong></p>



<p class="wp-block-paragraph"><strong>ಬೆಂಗಳೂರು:</strong> ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾದ ಹೊಸ ಹಾಡು‘ಪುಟ್ಟಮಲ್ಲಿ’ ಬಿಡುಗಡೆಯಾಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಗಮನ ಸೆಳೆಯುತ್ತಿರುವ ಹಾಡುಗಳಲ್ಲಿ ಒಂದಾಗಿದೆ. ಸೆಪ್ಟೆಂಬರ್ 4ರಂದು ಹಾಡು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಇದರ ಕುರಿತು ಚರ್ಚೆ ಆರಂಭವಾಗಿದೆ.</p>



<p class="wp-block-paragraph">‘ಪುಟ್ಟಮಲ್ಲಿ’ ಹಾಡಿನಲ್ಲಿ ಡಾಲಿ ಧನಂಜಯ್ ಅವರ ವಿಭಿನ್ನ ಲುಕ್, ಎನರ್ಜಿಟಿಕ್ ಮ್ಯಾನರಿಸಂ ಮತ್ತು ನಾಯಕಿ ರೇಷ್ಮಾ ನಾಣಯ್ಯ ಅವರೊಂದಿಗೆ ಕಾಣಿಸಿಕೊಳ್ಳುವ ದೃಶ್ಯಗಳು ಗಮನ ಸೆಳೆಯುತ್ತವೆ. ಹಾಡಿನ ಜಾನಪದ ಸೊಗಡಿಗೆ ಆಧುನಿಕ ಪಾಪ್ ಸ್ಪರ್ಶ ನೀಡಿರುವ ಸಂಗೀತವು ಹಾಡಿಗೆ ವಿಭಿನ್ನ ಮೆರುಗು ನೀಡಿದೆ.</p>



<p class="wp-block-paragraph">ಹಾಡಿಗೆವಾಸುಕಿ ವೈಭವ್ ಸಂಗೀತ ನೀಡಿದ್ದು,ಸಚಿತ್ ಹೆಗಡೆ ಧ್ವನಿ ನೀಡಿದ್ದಾರೆ. ‘ಓ ಪುಟ್ಟಮಲ್ಲಿ… ನೀ ಕೇಳು ಇಲ್ಲಿ…’ ಎಂಬ ಹುಕ್ ಲೈನ್ ಹಾಡಿನ ಪ್ರಮುಖ ಆಕರ್ಷಣೆಯಾಗಿದ್ದು, ಸುಲಭವಾಗಿ ಗುನುಗುವಂತಿರುವ ಟ್ಯೂನ್ ಹಾಡನ್ನು ಮತ್ತಷ್ಟು ಕ್ಯಾಚಿಯಾಗಿಸಿದೆ.</p>



<p class="wp-block-paragraph">ಹಾಡಿನ ಸಾಹಿತ್ಯದಲ್ಲಿ ನಾಯಕಿಯ ಸೌಂದರ್ಯ, ಚುರುಕುತನ ಹಾಗೂ ಆಕೆಯ ಮೇಲಿನ ನಾಯಕನ ಪ್ರೀತಿಯನ್ನು ಗ್ರಾಮೀಣ ಸೊಗಡಿನ ಪದಗಳ ಮೂಲಕ ವರ್ಣಿಸಲಾಗಿದೆ. ‘ನಾಟಿ ಗೌರಿ, ಘಾಟಿ ಪೋರಿ’ ಸೇರಿದಂತೆ ಹಲವು ಸಾಲುಗಳು ಹಾಡಿಗೆ ಹಳ್ಳಿ ಸೊಗಡಿನ ಸ್ಪರ್ಶ ನೀಡುತ್ತವೆ.</p>



<p class="wp-block-paragraph">ಚಿತ್ರದಲ್ಲಿ ಧನಂಜಯ್‌ಗೆ ನಾಯಕಿಯಾಗಿರೇಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ ಸೇರಿದಂತೆ ಹಲವು ಪ್ರಮುಖ ಕಲಾವಿದರು ತಾರಾಗಣದಲ್ಲಿದ್ದಾರೆ. ಚಿತ್ರವನ್ನುಶಂಕರ್ ಗುರು ನಿರ್ದೇಶಿಸುತ್ತಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.</p>



<p class="wp-block-paragraph">ವಿಶೇಷವೆಂದರೆ, ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರವು ಈ ಹಿಂದೆ ಧನಂಜಯ್ ಮತ್ತು ಶಂಕರ್ ಗುರು ಅವರ ಯಶಸ್ವಿ ಕಾಂಬಿನೇಷನ್ ಆಗಿದ್ದ‘ಬಡವ ರಾಸ್ಕಲ್’ ಬಳಿಕದ ಮತ್ತೊಂದು ಸಿನಿಮಾ. ಆರಂಭದಲ್ಲಿ ಆಕ್ಷನ್ ಎಂಟರ್‌ಟೈನರ್ ಆಗಿ ರೂಪುಗೊಂಡಿದ್ದ ಚಿತ್ರವನ್ನು ಬಳಿಕ ಕುಟುಂಬ ಪ್ರೇಕ್ಷಕರನ್ನೂ ಗಮನದಲ್ಲಿಟ್ಟುಕೊಂಡು ಕಮರ್ಷಿಯಲ್ ಫ್ಯಾಮಿಲಿ ಎಂಟರ್‌ಟೈನರ್ ಆಗಿ ರೂಪಿಸಲಾಗಿದೆ ಎಂದು ವರದಿಯಾಗಿದೆ.</p>



<p class="wp-block-paragraph">ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್‌ಪ್ರೊಡಕ್ಷನ್ ಕೆಲಸಗಳು ನಡೆದಿವೆ. ಇದೀಗ ‘ಪುಟ್ಟಮಲ್ಲಿ’ ಹಾಡಿನ ಮೂಲಕ ಚಿತ್ರದ ಪ್ರಚಾರ ಮತ್ತಷ್ಟು ಚುರುಕುಗೊಂಡಿದೆ.</p>



<p class="wp-block-paragraph">ಈ ಸಿನಿಮಾಡಿಸೆಂಬರ್ 24, 2026ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನ ‘ಪುಟ್ಟಮಲ್ಲಿ’ ಹಾಡು ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.</p>



<p class="wp-block-paragraph"><strong>ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ</strong> 👉 <strong><a href="https://samyuktakarnataka.in/news/live-news-updates-in-samyukta-karnataka-5/" type="link" id="https://samyuktakarnataka.in/news/live-news-updates-in-samyukta-karnataka-5/">ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.</a></strong></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="w4nmEMHFMlo"><iframe loading="lazy" title="Puttamalli Song | Anna from Mexico | Daali Dhananjaya | Reeshma | Sanjith Hegde | Vasuki Vaibhav" width="696" height="392" src="https://www.youtube.com/embed/w4nmEMHFMlo?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>
<p>The post <a href="https://samyuktakarnataka.in/entertainment/anna-from-mexico-puttamalli-song-dhananjaya-reeshma-nanaiah/">ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಜಾಜಿ ಮಲ್ಲಿಗೆ… ‘ಪುಟ್ಟಮಲ್ಲಿ’ ಹಾಡು ರಿಲೀಸ್</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ವನತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಮಲ್ಕೇಡೆ ನೇಮಕ</title>
		<link>https://samyuktakarnataka.in/news/india/retired-ifs-officer-subhash-malkhede-appointed-to-the-vanatara-governing-board/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 12:40:06 +0000</pubDate>
				<category><![CDATA[ದೇಶ]]></category>
		<category><![CDATA[Reliance]]></category>
		<category><![CDATA[Vantara]]></category>
		<guid isPermaLink="false">https://samyuktakarnataka.in/?p=106568</guid>

					<description><![CDATA[<p>ಜಾಮ್‌ನಗರ: ರಿಲಯನ್ಸ್‌ ಇಂಡಸ್ಟ್ರೀಸ್‌ ಆರಂಭಿಸಿರುವ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾಗಿರುವ ವನತಾರಾ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಘೋಷಿಸಲಾಗಿದ್ದು, ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್‌ ಮಲ್ಕೇಡೆ ಸೇರಿದಂತೆ ಐವರು ಸದಸ್ಯರಾಗಿ ನೇಮಕವಾಗಿದ್ದಾರೆ. ಈ ಮಂಡಳಿಯು ವನತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಅನುಸರಣಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ವನ್ಯಜೀವಿಗಳನ್ನು ಆಮದು ಮಾಡಿಕೊಳ್ಳುವ ಭವಿಷ್ಯದ ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಮುಂದಿನ ಐದು ವರ್ಷಗಳು ಹಾಗೂ ಅದರಾಚೆಗಿನ ವನತಾರಾದ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ. [&#8230;]</p>
<p>The post <a href="https://samyuktakarnataka.in/news/india/retired-ifs-officer-subhash-malkhede-appointed-to-the-vanatara-governing-board/">ವನತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಮಲ್ಕೇಡೆ ನೇಮಕ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಜಾಮ್‌ನಗರ: </strong>ರಿಲಯನ್ಸ್‌ ಇಂಡಸ್ಟ್ರೀಸ್‌ ಆರಂಭಿಸಿರುವ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾಗಿರುವ ವನತಾರಾ ಸಂಸ್ಥೆಯ ನೂತನ ಆಡಳಿತ ಮಂಡಳಿಯನ್ನು ಘೋಷಿಸಲಾಗಿದ್ದು, ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್‌ ಮಲ್ಕೇಡೆ ಸೇರಿದಂತೆ ಐವರು ಸದಸ್ಯರಾಗಿ ನೇಮಕವಾಗಿದ್ದಾರೆ.</p>



<p class="wp-block-paragraph">ಈ ಮಂಡಳಿಯು ವನತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಅನುಸರಣಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ವನ್ಯಜೀವಿಗಳನ್ನು ಆಮದು ಮಾಡಿಕೊಳ್ಳುವ ಭವಿಷ್ಯದ ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಮುಂದಿನ ಐದು ವರ್ಷಗಳು ಹಾಗೂ ಅದರಾಚೆಗಿನ ವನತಾರಾದ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.</p>



<p class="wp-block-paragraph">ಸುಭಾಷ್ ಕೆ. ಮಲ್ಕೇಡೆಯವರು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ನಿವೃತ್ತ ಹಿರಿಯ ಅಧಿಕಾರಿ ಹಾಗೂ ಕರ್ನಾಟಕದ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆಗಿದ್ದಾರೆ. ಇವರು ವನ್ಯಜೀವಿ ಸಂರಕ್ಷಣೆ, ಸಂರಕ್ಷಿತ ಪ್ರದೇಶಗಳು, ಅಳಿವಿನಂಚಿನಲ್ಲಿರುವ ಜಾತಿಗಳ ನಿರ್ವಹಣೆ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಮತ್ತು ಕಾನೂನು ಜಾರಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಇತರ ಸದಸ್ಯರಾಗಿ ನ್ಯಾಯಮೂರ್ತಿ ಕೃಷ್ಣ ಮುರಾರಿ, ಕ್ರೇಗ್ ಹೂವರ್, ಗ್ರೆಟಾ ಎಫ್. ಲೋರಿ, ಡಾ. ಕುಶಾಲ್‌ ಕನ್ವಾರ್ ಶರ್ಮಾ ನೇಮಕವಾಗಿದ್ದಾರೆ. ಸ್ವತಂತ್ರ ಅಧ್ಯಕ್ಷರಾಗಿ ಜಾನ್ ಇ. ಸ್ಕ್ಯಾನ್‌ಲಾನ್ ಎಒ ನೇಮಕವಾಗಿದ್ದಾರೆ.</p>



<p class="wp-block-paragraph">ಆಡಳಿತ ಮಂಡಳಿಯ ಅಧ್ಯಕ್ಷರಾದ ಜಾನ್ ಸ್ಕ್ಯಾನ್‌ಲಾನ್ ಮಾತನಾಡಿ, “ವನತಾರಾದ ಭವಿಷ್ಯದ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಇತ್ತೀಚೆಗೆ ಘೋಷಿಸಲಾದ ಬದಲಾವಣೆಗಳನ್ನು ದೈನಂದಿನ ಕಾರ್ಯಾಚರಣೆಗಳಲ್ಲಿ ಅಳವಡಿಸಿಕೊಳ್ಳುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಪ್ರಮುಖ ಪಾತ್ರ ವಹಿಸುತ್ತದೆ ” ಎಂದರು.</p>



<p class="wp-block-paragraph">ವನತಾರಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ವಿವಾನ್ ಕರಾಣಿ ಮಾತನಾಡಿ, “ವನತಾರಾದಲ್ಲಿ ವೈಜ್ಞಾನಿಕವಾಗಿ ವನ್ಯಜೀವಿ ಸಂರಕ್ಷಣೆಯನ್ನು ನಾವು ಮುನ್ನಡೆಸುತ್ತಿದ್ದೇವೆ. ಆದ್ದರಿಂದ ವನತಾರಾದ ಚಟುವಟಿಕೆಗಳನ್ನು ಉನ್ನತ ದರ್ಜೆಯಲ್ಲಿ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಆಡಳಿತ ಮಂಡಳಿಯ ಸದಸ್ಯರನ್ನು ನಾನು ಸ್ವಾಗತಿಸುತ್ತೇನೆ” ಎಂದರು.</p>



<p class="wp-block-paragraph">ಆಡಳಿತ ಮಂಡಳಿಯು ವನತಾರಾದ ಉನ್ನತ ಆಡಳಿತ ಮಂಡಳಿಯಾಗಿದೆ. ಇದು ವನತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳು, ಭಾರತೀಯ ಕಾನೂನು, ಸಿಐಟಿಇಎಸ್ ಮತ್ತು ಇತರ ಅಂತಾರಾಷ್ಟ್ರೀಯ ಒಪ್ಪಂದಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಒಟ್ಟು ಜವಾಬ್ದಾರಿಯನ್ನು ಹೊಂದಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="EPIIfc5vhf"><a href="https://samyuktakarnataka.in/news/international/lord-krishnas-miracle-took-place-on-janmashtami-itself/">9 ದಿನ ಸಾವಿನ ಸುರಂಗದಲ್ಲಿ ‘ಹರೇ ಕೃಷ್ಣ’ ಜಪಿಸಿದ ಸಂಜಯ್‌: ಜನ್ಮಾಷ್ಟಮಿಯಂದೇ ನಡೆಯಿತು ಶ್ರೀಕೃಷ್ಣನ ಪವಾಡ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“9 ದಿನ ಸಾವಿನ ಸುರಂಗದಲ್ಲಿ ‘ಹರೇ ಕೃಷ್ಣ’ ಜಪಿಸಿದ ಸಂಜಯ್‌: ಜನ್ಮಾಷ್ಟಮಿಯಂದೇ ನಡೆಯಿತು ಶ್ರೀಕೃಷ್ಣನ ಪವಾಡ” — Samyukta Karnataka" src="https://samyuktakarnataka.in/news/international/lord-krishnas-miracle-took-place-on-janmashtami-itself/embed/#?secret=YgBbt5no6J#?secret=EPIIfc5vhf" data-secret="EPIIfc5vhf" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/retired-ifs-officer-subhash-malkhede-appointed-to-the-vanatara-governing-board/">ವನತಾರಾ ಆಡಳಿತ ಮಂಡಳಿಗೆ ಕರ್ನಾಟಕದ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಭಾಷ್ ಮಲ್ಕೇಡೆ ನೇಮಕ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಜನರ ಆಶೋತ್ತರಗಳಿಗೆ ಸ್ಪಂದನೆ: 4ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’ ಪಾದಯಾತ್ರೆ</title>
		<link>https://samyuktakarnataka.in/districts/raichur/ballari-chalo-day-4-vijayendra-sindhanur-padayatra/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 12:30:33 +0000</pubDate>
				<category><![CDATA[ರಾಯಚೂರು]]></category>
		<category><![CDATA[#Ballari]]></category>
		<category><![CDATA[raichur]]></category>
		<guid isPermaLink="false">https://samyuktakarnataka.in/?p=106563</guid>

					<description><![CDATA[<p>ಸಿಂಧನೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ಕಡೆಗೆ ಮುಂದುವರಿಯಿತು. ಇಂದಿನ ಹಂತದಲ್ಲಿ ಸುಮಾರು 22ರಿಂದ 26 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ವರದಿಯಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಗೋಪೂಜೆ ನೆರವೇರಿಸಲಾಯಿತು. ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸಲು [&#8230;]</p>
<p>The post <a href="https://samyuktakarnataka.in/districts/raichur/ballari-chalo-day-4-vijayendra-sindhanur-padayatra/">ಜನರ ಆಶೋತ್ತರಗಳಿಗೆ ಸ್ಪಂದನೆ: 4ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’ ಪಾದಯಾತ್ರೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಸಿಂಧನೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ಕಡೆಗೆ ಮುಂದುವರಿಯಿತು. ಇಂದಿನ ಹಂತದಲ್ಲಿ ಸುಮಾರು 22ರಿಂದ 26 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ವರದಿಯಾಗಿದೆ.</p>



<p class="wp-block-paragraph">ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಗೋಪೂಜೆ ನೆರವೇರಿಸಲಾಯಿತು. ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸಲು ಯುಗಯುಗದಲ್ಲಿ ಅವತರಿಸುವ ಶ್ರೀಕೃಷ್ಣನನ್ನು ಸ್ಮರಿಸಿ, ಗೋಪಾಲಕನಾದ ಶ್ರೀಕೃಷ್ಣನ ಪ್ರೀತ್ಯರ್ಥವಾಗಿ ಗೋಪೂಜೆ ನಡೆಸಲಾಯಿತು.</p>



<p class="wp-block-paragraph">ಬಳಿಕ ಮಾತನಾಡಿದ ವಿಜಯೇಂದ್ರ, ‘ಬಳ್ಳಾರಿ ಚಲೋ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಹೋರಾಟವಾಗಿದೆ ಎಂದು ಹೇಳಿದರು. ರಾಜ್ಯದ ಬಡವರು, ರೈತರು, ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ಸಾಮಾಜಿಕ ಭದ್ರತಾ ಪಿಂಚಣಿ, ಬಡವರ ಮನೆ, ರೈತರ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.</p>



<p class="wp-block-paragraph">ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ವಿಶಿಷ್ಟಚೇತನರು ಹಾಗೂ ಹಿರಿಯ ನಾಗರಿಕರ ಪಿಂಚಣಿ ಸಮಸ್ಯೆಗಳೊಂದಿಗೆ ಆಗಮಿಸಿದ್ದವರನ್ನು ವಿಜಯೇಂದ್ರ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದರು.</p>



<p class="wp-block-paragraph">ಇದೇ ವೇಳೆ ಸಿಂಧನೂರಿನಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು ವಿಜಯೇಂದ್ರ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ, ಬಿಜೆಪಿಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಗೆ ಶುಭ ಹಾರೈಸಿದರು. ಸಮಾಜದ ಎಲ್ಲ ವರ್ಗಗಳ ಜನರನ್ನು ಒಳಗೊಂಡು ಹೋರಾಟ ನಡೆಸುವುದಾಗಿ ಬಿಜೆಪಿ ನಾಯಕರು ಪ್ರತಿಪಾದಿಸಿದರು.</p>



<p class="wp-block-paragraph">ಇಂದಿನ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಸುನಿಲ್ ಕುಮಾರ್, ಶಾಸಕ ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಹಲವು ಹಿರಿಯ ನಾಯಕರು, ಶಾಸಕರು, ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.</p>



<p class="wp-block-paragraph">ಸಾಮಾಜಿಕ ಭದ್ರತಾ ಪಿಂಚಣಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ, ಅತಿಥಿ ಉಪನ್ಯಾಸಕರ ವೇತನ ಸೇರಿದಂತೆ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪವಾಗಿದೆ. ಗಂಗಾ ಕಲ್ಯಾಣ ಯೋಜನೆ ಹಾಗೂ ಬಡವರಿಗೆ ಮನೆ ಒದಗಿಸುವ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪಗಳನ್ನು ಮಾಡಿದ್ದಾರೆ.</p>



<p class="wp-block-paragraph">ರಾಯಚೂರಿನಿಂದ ಆರಂಭವಾಗಿರುವ ಈ 10 ದಿನಗಳ ‘ಬಳ್ಳಾರಿ ಚಲೋ’ ಪಾದಯಾತ್ರೆ ಸೆಪ್ಟೆಂಬರ್ 10ರಂದು ಬಳ್ಳಾರಿ ತಲುಪುವ ಉದ್ದೇಶ ಹೊಂದಿದೆ. ಪಾದಯಾತ್ರೆ ಮುಂದುವರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.</p>



<p class="wp-block-paragraph"><strong>ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ</strong> 👉 <strong><a href="https://samyuktakarnataka.in/news/live-news-updates-in-samyukta-karnataka-5/" type="link" id="https://samyuktakarnataka.in/news/live-news-updates-in-samyukta-karnataka-5/">ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.</a></strong></p>
<p>The post <a href="https://samyuktakarnataka.in/districts/raichur/ballari-chalo-day-4-vijayendra-sindhanur-padayatra/">ಜನರ ಆಶೋತ್ತರಗಳಿಗೆ ಸ್ಪಂದನೆ: 4ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’ ಪಾದಯಾತ್ರೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
