ಸಂ.ಕ.ಸಮಾಚಾರ ಕಲಬುರಗಿ: ನಗರದ 3ನೇ ಹೆಚ್ಚುವರಿ ಸಿನಿಯರ್ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ ಮುಗುತಿಯವರು (44) ಸೋಮವಾರ ಬೆಳಿಗ್ಗೆ ಹೃದಯಾಪಘಾತದಿಂದ ನಿಧನರಾಗಿದ್ದಾರೆ.
ಮನೆಯಲ್ಲಿರಬೇಕಾದರೆ ಬೆಳಿಗ್ಗೆ 9.45ಕ್ಕೆ ತಿಂಡಿ ಮುಗಿಸಿ, ಹೊರಬೇಕೆನ್ನುವಷ್ಟರಲ್ಲಿ ಎದೆ ನೋವು ಕಾಣಿಸಿಕೊಂಡಾಗಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಅಲ್ಲಿನ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ ರಬಕವಿ, ಬನಹಟ್ಟಿ ಮೂಲದ ಇವರು ಕಳೆದ 15 ದಿನಗಳ ಹಿಂದೆ ಕಲಬುರಗಿಗೆ ವರ್ಗವಾಗಿದ್ದರು. ಈ ಮುಂಚೆ ದಾವಣಗೇರೆ ಜಿಲ್ಲಾ ನ್ಯಾಯಾಲದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರು. ವಿಶ್ವನಾಥ ಮುಗುತಿ ಹೆಂಡತಿ ಮತ್ತು 4 ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ನ್ಯಾಯಾಲಯದ ಆವರಣ ಹಾಲ್ನಲ್ಲಿ ಈ ಘಟನೆ ನಡೆದಿಲ್ಲವೆಂದು ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ. ಪಸಾರ ಸ್ಪಷ್ಟಪಡಿಸಿದ್ದಾರೆ.
ವಕೀಲರ ಮತ್ತು ಸಾರ್ವಜನಿಕರ ದರ್ಶನಕ್ಕೆ ಮೃತರ ಶವ ಕೋಟ್೯ ಆವರಣದಲ್ಲಿ ಇರಿಸಿದ ಬಳಿಕ ಮೃತರ ಶವ ಸ್ವಗ್ರಾಮ ಬೆನ್ನಟ್ಟಿ ಕಳುಹಿಸಲಾಗಿದೆ.