ಬೆಂಗಳೂರು: ಕರ್ನಾಟಕದಲ್ಲಿ ಕೈಗಾರಿಕಾ ಉತ್ಪಾದನೆಯ ಭವಿಷ್ಯದ ಕುರಿತು ಕೈಗಾರಿಕೋದ್ಯಮಿಗಳ ಸಮಾವೇಶ ‘ಉತ್ಪಾದನಾ ಮಂಥನ’ ಸಮಾವೇಶವಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಚಾಲನೆ ನೀಡಿದ್ದಾರೆ.
ಕರ್ನಾಟಕವನ್ನು ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆ ತಯಾರಿಸುವ ಚಿಂತನ – ಮಂಥನಕ್ಕೆ ವೇದಿಕೆ ಕಲ್ಪಿಸುವ ಸಲುವಾಗಿ ಒಂದು ದಿನದ ʼಉತ್ಪಾದನಾ ಮಂಥನʼ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ ಉದ್ಯಮದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ #ಉತ್ಪಾದನಾಮಂಥನ ಒಂದು ವಿಶಿಷ್ಟ ವೇದಿಕೆಯೂ ಹೌದು. ತಲಾ #GSDP ಹಾಗೂ ಆದಾಯದಲ್ಲಿ ದೇಶದಲ್ಲಿ 2ನೇ, #SGST ಸಂಗ್ರಹದಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕ ಇಂದು ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, EV, R&D ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಈ ಬೆಳವಣಿಗೆ ನಿನ್ನೆಯಿಂದ ಶುರುವಾಗಿಲ್ಲ. ಅದು ನಿಮ್ಮ ಹೂಡಿಕೆ, ನಂಬಿಕೆ ಮತ್ತು ಪಾಲುದಾರಿಕೆಯಿಂದ ಸಾಧ್ಯವಾಗಿದೆ. ಇಂದು ಕೇಳಲು ಅಲ್ಲ, ಕಲಿಯಲು ಸೇರಿದ್ದೇವೆ ನಿಮ್ಮ ಅನುಭವದಿಂದ ನಾವು ಏನು ಉತ್ತಮ ಮಾಡಬಹುದು ಎಂಬುದನ್ನು ಅರಿಯಲು ಬಯಸುತ್ತಿದ್ದೇವೆ. ಉದ್ಯಮದ ಸ್ಥಾಪನೆಯಿಂದ ಆರಂಭಿಸಿ , ಸವಾಲು-ಸಾಧನೆಗಳ ತನಕ ನಿಮ್ಮ ನೈಜ ಅನುಭವ, ದೃಷ್ಟಿಕೋನ ಹಾಗೂ ಒಳನೋಟ ಸರ್ಕಾರಕ್ಕೆ ದಾರಿದೀಪವಾಗಲಿದೆ. ಈ ಪರಿಕಲ್ಪನೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲನೆಯ ಪ್ರಯತ್ನವಾಗಿದ್ದು, ಉದ್ಯಮಿಗಳಿಂದ ಹಾಗೂ ತಜ್ಞರಿಂದ ಉತ್ಸಾಹಪೂರಿತ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ. ಇದರಿಂದ ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ರೂಪಿಸಬೇಕೆಂಬ ನಮ್ಮ ಮಹತ್ವಾಕಾಂಕ್ಷೆಗೆ ಹೊಸ ದಿಕ್ಕು ದೊರೆಯಲಿದೆ ಎಂದರು.