ಮಡಿವಾಳೇಶ್ವರ ಮಠದ ಸ್ವಾಮೀಜಿ ನೇಣಿಗೆ ಶರಣು

Advertisement

ವಿಜಯಪುರ: ತಾಳಿಕೋಟೆ ತಾಲೂಕಿನ ತುಂಬಗಿ-ಸಾಸನೂರ ಶ್ರೀಮಡಿವಾಳೇಶ್ವರ ಹಿರೇಮಠದ ಶಂಕರಲಿಂಗ ದೇವರು(೨೩) ಸಾಸನೂರ ಮಠದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಸನೂರ-ತುಂಬಗಿ ಶ್ರೀ ಮಡಿವಾಳೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಸಲುವಾಗಿ ಮರಿದೇವರನ್ನಾಗಿ ಶಂಕರಲಿಂಗ ದೇವರನ್ನು ನೇಮಕ ಮಾಡಿಕೊಂಡಿದ್ದರು.
ಇಂದು ಬೆಳಗ್ಗೆ ೬-೮ ಗಂಟೆಯವರೆಗೆ ಸಾಸನೂರ ಮಠದಲ್ಲಿ ಭಕ್ತರಿಗೆ ಭೆಟ್ಟಿಯಾಗಿದ್ದಾರೆ ನಂತರ ಶ್ರೀಮಠದ ಕೋಣೆಯೊಳಗೆ ಹೋದವರು ಶ್ರೀಮಠಕ್ಕೆ ಸಾಕಷ್ಟು ಭಕ್ತರು ಬಂದರೂ ಕೂಡಾ ಹೊರಗಡೆ ಬರದ್ದರಿಂದ ೯.೩೦ಕ್ಕೆ ಸುಮಾರಿಗೆ ಭಕ್ತರೇ ಹೋಗಿ ಕೋಣೆಯ ಕಿಟಕಿಯಲ್ಲಿ ನೋಡಿದಾಗ ಫ್ಯಾನಿಗೆ ಶೆಲ್ಲೆಯಿಂದ ನೇಣು ಹಾಕಿಕೊಂಡಿರುವದು ಬೆಳಕಿಗೆ ಬಂದಿದೆ.
ನಂತರು ಭಕ್ತರು ಬಾಗಿಲು ಮುರಿದು ಶ್ರೀಗಳ ಪಾರ್ಥಿವ ಶರೀರ ಹೊರಗಡೆ ತಂದು ತುಂಬಗಿ ಗ್ರಾಮದಲ್ಲಿ ಮಠದಲ್ಲಿದ್ದ ಹಿರಿಯ ಶ್ರೀಗಳಿಗೆ ದೂರವಾಣಿಯ ಮೂಲಕ ತಿಳಿಸಿ ವೈದ್ಯರಿಂದ ತಪಾಸಣೆ ನಡೆಸಿದಾಗ ಮೃತಪಟ್ಟಿರುವದು ದೃಢಪಟ್ಟಿದೆ.