ಪತಿಯ ಕೊಲೆಗೆ ಸುಫಾರಿ ನೀಡಿದ ಪ್ರಕರಣ: ಪತ್ನಿ ಹಾಗೂ ಕೊಲೆಗೆ ಯತ್ನಿಸಿದವನಿಗೆ ತಲಾ ಹತ್ತು ವರ್ಷ ಕಾರಾಗೃಹ ಶಿಕ್ಷೆ

ದಾಂಡೇಲಿ : ದಾಂಡೇಲಿ ಸಮೀಪದ ಅಂಬೇ ವಾಡಿ ಗಾಂವಠಾಣ ನಿವಾಸಿ ಅಂಕುಶ ಸುತಾರ ಅವರ ಕೊಲೆಗೆ ಸುಫಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶನ ಪತ್ನಿ ತೇಜಸ್ವಿನಿ ಹಾಗೂ ಕೊಲೆಗೆ ಯತ್ನಿಸಿದ ಗಣೇಶ್ ಪಾಟೀಲ್ ಗೆ ತಲಾ ಹತ್ತು ವರ್ಷಗಳ ವರೆಗೆ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
11 ಜೂನ್ 2021 ರಂದು ರಾತ್ರಿ ಅಂಕುಶ ಕೊಲೆಗೆ ಯತ್ನ ನಡೆದಿತ್ತು‌ . ಅಂಕುಶ ಪತ್ನಿ ಗಣೇಶ್ ಎಂಬಾತನಿಗೆ 30 ಸಾವಿರ ಹಣ ನೀಡುವುದಾಗಿ ಹೇಳಿ ಪತಿಯ ಕೊಲೆಗೆ ಸುಫಾರಿ ನೀಡಿದ್ದಳು. ಗಣೇಶ್ ಹಾಗೂ ಮತ್ತೊಬ್ಬ ಬಾಲಾಪರಾಧಿ ಸೇರಿ, ಗಾಂವಠಾಣದಲ್ಲಿನ ಅಂಕುಶ ಸಿತಾರೆ ಮನೆಯನ್ನು ಹಿಂಬಾಗಿಲಿನಿಂದ ಪ್ರವೇಶಿಸಿ, ಅಂಕುಶನ ಎದೆಯ ಮೇಲೆ ಕುಳಿತು ಕುತ್ತಿಗೆಗೆ ಕೈ ಹಾಕಿ , ಸಾಯಿಸಲು ಪ್ರಯತ್ನಿಸಿದ. ಆಗ ಎಚ್ಚರವಾದ ಅಂಕುಶ ,ಗಣೇಶ್ ನನ್ನು ತಳ್ಳಿ , ಕೂಗಿಕೊಂಡಿದ್ದ. ಆಗ ಗಣೇಶ್ ,ಪರಾರಿಯಾಗಿದ್ದ. ಆರೋಪಿಗಳನ್ನು ನಾಕಾ ಬಂದಿ ಮಾಡಿ ,ಹಿಡಿಯಲಾಗಿತ್ತು. ಕೋರ್ಟನಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ಮೊದಲ ಆರೋಪಿ ಗಣೇಶ್ ಶಾಂತಾರಾಮ ಪಾಟೀಲ್ ಹಾಗೂ ತೇಜಸ್ವಿನಿಗೆ ತಲಾ ಹತ್ತು ವರ್ಷ ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿ,ನ್ಯಾಯಾಧೀಶ ಕಿರಣ್ ಕಿಣಿ ಇಂದು ತೀರ್ಪು ಪ್ರಕಟಿಸಿದರು‌ .ಪಿಎಸ್ ಐ ಗಡ್ಡೇಕರ್ ಪ್ರಕರಣ ದಾಖಲಿಸಿ, ತನಿಖೆ ಮಾಡಿದ್ದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ್ ವಾದಿಸಿದ್ದರು‌.
….