ಕೊಪ್ಪಳ: ಕೊಪ್ಪಳ ಜಿಲ್ಲಾಧಿಕಾರಿಯಾಗಿ
ಸುರೇಶ ಇಟ್ನಾಳ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಸದ್ಯ ದಾವಣಗೆರೆ ಜಿಲ್ಲಾ ಪಂಚಾಯತ
ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಯಾಗಿರುವ ಸುರೇಶ
ಇಟ್ನಾಳ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಈ ಹಿಂದೆ ಅವರು ಬೆಳಗಾವಿ
ಅಪರ್ ಜಿಲ್ಲಾಧಿಕಾರಿಯಾಗಿ,ಧಾರವಾಡ
ಜಿಲ್ಲಾ ಪಂಚಾಯತ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿಯಾಗಿ
ಸೇವೆ ಸಲ್ಲಿಸಿದ್ದಾರೆ.