ಕಾಲ್ತುಳಿತ ಪ್ರಕರಣದಲ್ಲಿ ಮೃತ RCB ಅಭಿಮಾನಿ ಮನೆಗೆ ಚಲುವರಾಯಸ್ವಾಮಿ ಭೇಟಿ

ಮಂಡ್ಯ : ಬೆಂಗಳೂರಿನಲ್ಲಿ RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಮೃತರಾಗಿದ್ದ ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲ್ಲೂಕಿನ ರಾಯಸಮುದ್ರ ಗ್ರಾಮದ ಪೂರ್ಣಚಂದ್ರ ರವರ ಮನೆಗೆ ಇಂದು ಕೃಷಿ ಹಾಗೂ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಯವರು ಬೇಟಿ ನೀಡಿ ಸರ್ಕಾರ ಘೋಷಿಸಿದ 25 ಲಕ್ಷ ಪರಿಹಾರದ ಚಕ್ ನ್ನು ಅವರ ತಂದೆ ತಾಯಿಗೆ ನೀಡಿದರು ಈ ಸಂದರ್ಭದಲ್ಲಿ ಶಾಸಕ ಮಂಜು,ಜಿಲ್ಲಾಧಿಕಾರಿ ಡಾ.ಕುಮಾರ್ ಮಾಜಿ ಜಿಪಂ ಸದಸ್ಯ ಅಂಬರೀಶ್ ಇದ್ದರು.