ರಾಯಚೂರು(ಕವಿತಾಳ): ಲಾರಿ ಮತ್ತು ಬೈಕ್ ಮಧ್ಯ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು. ಮೃತನ ಮಗಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಮಂಗಳವಾರ ಸಮೀಪದ ವಟಗಲ್ ಗ್ರಾಮದ ಸಮೀಪ ನಡೆದಿದೆ.
ಘಟನೆಯಲ್ಲಿ ಮಾನ್ವಿ ತಾಲೂಕಿನ ಯರಮಲದೊಡ್ಡಿ ಗ್ರಾಮದ ನಿವಾಸಿ ಸಾವನ್ನಪ್ಪಿದ ಬೈಕ್ ಸವಾರ ಬೀರಪ್ಪ(42) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕಿ ಅಶ್ವಿನಿ ಎಂದು ತಿಳಿದು ಬಂದಿದೆ.
ಮಾನ್ವಿ ತಾಲೂಕಿನ ಯರಮದೊಡ್ಡಿ ಗ್ರಾಮದ ಮೃತ ವ್ಯಕ್ತಿ ಬೀರಪ್ಪ ಬೈಕ್ನಲ್ಲಿ ತನ್ನ ಮಗಳ ಜೊತೆ ಶಾಲಾ ವರ್ಗಾವಣೆ ಪತ್ರ ತರಲು ಪಾಮನಕಲ್ಲೂರಿನ ಸರಕಾರಿ ಪ್ರೌಢ ಶಾಲೆಗೆ ಹೊರಟಿದ್ದರು. ಮಾರ್ಗಮಧ್ಯೆ ವಟಗಲ್ ಸಮೀಪ ಲಾರಿ-ಬೈಕ್ ನಡುವೆ ಅಪಘಾತ ಸಂಭವಿಸಿದೆ. ಗಾಯಗೊಂಡ ಬಾಲಕಿ ಅಶ್ವಿನಿಗೆ ಚಿಕಿತ್ಸೆಗಾಗಿ ಕವಿತಾಳ ಗ್ರಾಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಸ್ಥಳಕ್ಕೆ ಕವಿತಾಳ ಪಿ.ಎಸ್.ಐ ವೆಂಕಟೇಶ ಭೇಟಿ ನೀಡಿ ಪರಿಶೀಲಿಸಿದ್ದಾರೆ.