<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ನಮ್ಮ ಜಿಲ್ಲೆ Archives - Samyukta Karnataka</title>
	<atom:link href="https://samyuktakarnataka.in/category/districts/feed/" rel="self" type="application/rss+xml" />
	<link>https://samyuktakarnataka.in/category/districts/</link>
	<description>News that connects you to Karnataka since 1921</description>
	<lastBuildDate>Sat, 05 Sep 2026 06:55:34 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>ನಮ್ಮ ಜಿಲ್ಲೆ Archives - Samyukta Karnataka</title>
	<link>https://samyuktakarnataka.in/category/districts/</link>
	<width>32</width>
	<height>32</height>
</image> 
	<item>
		<title>ಹುಬ್ಬಳ್ಳಿ: ಗಣೇಶ ಚತುರ್ಥಿಗೆ 312 ಹೆಚ್ಚುವರಿ ವಿಶೇಷ ಬಸ್ ಕಾರ್ಯಾಚರಣೆ</title>
		<link>https://samyuktakarnataka.in/districts/dharwad/nwkrtc-312-special-buses-ganesh-chaturthi-2026/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 05 Sep 2026 06:55:32 +0000</pubDate>
				<category><![CDATA[ಧಾರವಾಡ]]></category>
		<category><![CDATA[#KSRTC]]></category>
		<category><![CDATA[hubli]]></category>
		<guid isPermaLink="false">https://samyuktakarnataka.in/?p=106648</guid>

					<description><![CDATA[<p>ಹುಬ್ಬಳ್ಳಿ: 2026ನೇ ಸಾಲಿನ ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 312 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ವಿಶೇಷ ಬಸ್‌ಗಳು ಸಂಚರಿಸಲಿವೆ. ಸೆ.14 ರಂದು ಗಣೇಶ ಹಬ್ಬವಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಂದ ಸ್ವಊರುಗಳಿಗೆ ತೆರಳಲು ಸೆ.11 ರಿಂದ 13 ರವರೆಗೆ ಹೆಚ್ಚುವರಿ ಬಸ್ [&#8230;]</p>
<p>The post <a href="https://samyuktakarnataka.in/districts/dharwad/nwkrtc-312-special-buses-ganesh-chaturthi-2026/">ಹುಬ್ಬಳ್ಳಿ: ಗಣೇಶ ಚತುರ್ಥಿಗೆ 312 ಹೆಚ್ಚುವರಿ ವಿಶೇಷ ಬಸ್ ಕಾರ್ಯಾಚರಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಹುಬ್ಬಳ್ಳಿ: 2026ನೇ ಸಾಲಿನ ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 312 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ.</p>



<p class="wp-block-paragraph">ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ವಿಶೇಷ ಬಸ್‌ಗಳು ಸಂಚರಿಸಲಿವೆ.</p>



<p class="wp-block-paragraph">ಸೆ.14 ರಂದು ಗಣೇಶ ಹಬ್ಬವಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಂದ ಸ್ವಊರುಗಳಿಗೆ ತೆರಳಲು ಸೆ.11 ರಿಂದ 13 ರವರೆಗೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಬ್ಬದ ನಂತರ ಸೆ.14 ಮತ್ತು ನಂತರದ ದಿನಗಳಲ್ಲಿ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುವುದು.</p>



<p class="wp-block-paragraph">ಪ್ರಯಾಣಿಕರು ಈ ಸೌಲಭ್ಯದ ಸುರಕ್ಷಿತ ಪ್ರಯಾಣ ಕೈಗೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.</p>



<p class="wp-block-paragraph"><strong>ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ</strong> 👉 <strong><a href="https://samyuktakarnataka.in/news/live-news-updates-in-samyukta-karnataka-6/" type="link" id="https://samyuktakarnataka.in/news/live-news-updates-in-samyukta-karnataka-6/">ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.</a></strong></p>
<p>The post <a href="https://samyuktakarnataka.in/districts/dharwad/nwkrtc-312-special-buses-ganesh-chaturthi-2026/">ಹುಬ್ಬಳ್ಳಿ: ಗಣೇಶ ಚತುರ್ಥಿಗೆ 312 ಹೆಚ್ಚುವರಿ ವಿಶೇಷ ಬಸ್ ಕಾರ್ಯಾಚರಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>KPSC ಪರೀಕ್ಷಾ ಅಕ್ರಮ : ಯುವಕರ‌ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸುವುದಿಲ್ಲ &#8211; ಪ್ರಿಯಾಂಕ್ ಖರ್ಗೆ</title>
		<link>https://samyuktakarnataka.in/districts/kalburgi/priyank-kharge-kpsc-exam-scam-strict-action-students-future/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 05 Sep 2026 06:27:42 +0000</pubDate>
				<category><![CDATA[ಕಲಬುರಗಿ]]></category>
		<category><![CDATA[#Exam]]></category>
		<category><![CDATA[kalaburagi]]></category>
		<guid isPermaLink="false">https://samyuktakarnataka.in/?p=106638</guid>

					<description><![CDATA[<p>ಸಂ.ಕ. ಸಮಾಚಾರ ಕಲಬುರಗಿ : ಕೆ.ಪಿ.ಎಸ್.ಸಿ ಪರೀಕ್ಷಾ ಅಕ್ರಮದಲ್ಲಿ ಯಾರೇ ಭಾಗಿಯಾದರು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮದಲ್ಲಿ ಬಾಗಿಯಾದವರು ಎಷ್ಟೆ ಬಲಿಷ್ಟವಾದರು, ಯಾವುದೇ ಪಕ್ಷದವರಾದರು ಸರಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ ಎಂದ ಅವರು, ತಾವೇ ರಾಜ್ಯದ ಗೃಹ ಸಚಿವರಿರುವಾಗ ಯಾವುದೇ [&#8230;]</p>
<p>The post <a href="https://samyuktakarnataka.in/districts/kalburgi/priyank-kharge-kpsc-exam-scam-strict-action-students-future/">KPSC ಪರೀಕ್ಷಾ ಅಕ್ರಮ : ಯುವಕರ‌ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸುವುದಿಲ್ಲ &#8211; ಪ್ರಿಯಾಂಕ್ ಖರ್ಗೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಸಂ.ಕ. ಸಮಾಚಾರ ಕಲಬುರಗಿ : ಕೆ.ಪಿ.ಎಸ್.ಸಿ ಪರೀಕ್ಷಾ ಅಕ್ರಮದಲ್ಲಿ ಯಾರೇ ಭಾಗಿಯಾದರು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.</p>



<p class="wp-block-paragraph">ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಅಕ್ರಮದಲ್ಲಿ ಬಾಗಿಯಾದವರು ಎಷ್ಟೆ ಬಲಿಷ್ಟವಾದರು, ಯಾವುದೇ ಪಕ್ಷದವರಾದರು ಸರಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ ಎಂದ ಅವರು, ತಾವೇ ರಾಜ್ಯದ ಗೃಹ ಸಚಿವರಿರುವಾಗ ಯಾವುದೇ ಸಾಕ್ಷಿ ದುರ್ಬಲಗೊಳಿಸಲು‌ ಸಹ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p>



<p class="wp-block-paragraph">ಹಿಂದೆ ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಪರೀಕ್ಷಾ ಅಕ್ರಮ ತಡೆಯಲು ಖಾಸಗಿ ಬಿಲ್ ಮಂಡಿಸಿದೆ. ಇದೀಗ ನಮ್ಮ ಸರ್ಕಾರದ ಅವಧಿಯಲ್ಲಿಯೆ ಪರೀಕ್ಷಾ ಅಕ್ರಮ ತಡೆಯಲು ಬಿಲ್ಲು ತರಲಾಗಿದೆ. 70 ಸಾವಿರ ಹುದ್ದೆ ಭರ್ತಿಗೆ ಚಾಲನೆ ನೀಡಿದ್ದು, 35 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರೆಲ್ಲರ ಹಿತ ಕಾಯುವುದು ನಮ್ಮ‌ ಜವಾಬ್ದಾರಿಯಾಗಿದೆ ಎಂದರು.</p>



<p class="wp-block-paragraph">ಜಿಲ್ಲೆಯ 5 ತಾಲೂಕು ಮಾತ್ರ ಬರ ಘೋಷಣೆ ಮಾಡಲಾಗಿದೆ‌ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಬರ ಘೋಷಣೆ ಮಾಡಬೇಕಾಗುತ್ತದೆ. ನಿಯಾಮಾವಳಿ ರಚಿಸಿದ್ದು ಕೇಂದ್ರ ಸರ್ಕಾರ. ವಿರೋಧ ಪಕ್ಷದವರು ಕಲಬುರಗಿಯಲ್ಲಿ ಪ್ರತಿಭಟನೆ ಮಾಡುವುದರ‌ ಬದಲಾಗಿ ಕೇಂದ್ರ ಸರ್ಕಾರದ ಮುಂದೆ ಹೀಗಿ ಪ್ರತಿಭಟಿಸಲಿ ಎಂದರು.</p>



<p class="wp-block-paragraph">ಕಾರಾಗೃಹ ಸುಧಾರಣೆ ವರದಿ ಸಲ್ಲಿಕೆ: ಕರ್ನಾಟಕದ ಕಾರಾಗೃಹಗಳ (ಜೈಲುಗಳ) ಆಡಳಿತ, ಸುರಕ್ಷತೆ ಮತ್ತು ಸುಧಾರಣೆಗಳಿಗೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರ ನೇತೃತ್ವದಲ್ಲಿ ರಚಿಸಲಾದ ಉನ್ನತ ಮಟ್ಟದ ಸಮಿತಿಯೂ ಈಗಾಗಲೆ ವರದಿ ಸಲ್ಲಿಸಿದ್ದು, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು. ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ ಇದ್ದರು.</p>



<p class="wp-block-paragraph"></p>
<p>The post <a href="https://samyuktakarnataka.in/districts/kalburgi/priyank-kharge-kpsc-exam-scam-strict-action-students-future/">KPSC ಪರೀಕ್ಷಾ ಅಕ್ರಮ : ಯುವಕರ‌ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸುವುದಿಲ್ಲ &#8211; ಪ್ರಿಯಾಂಕ್ ಖರ್ಗೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಡಾಲಿ ಧನಂಜಯ ‘ಪುಟ್ಟಮಲ್ಲಿ’ ಸಾಂಗ್‌ಗೆ ಸಖತ್ ಹವಾ; ‘ಅಣ್ಣ ಫ್ರಮ್ ಮೆಕ್ಸಿಕೋ’ಗೆ ಹೆಚ್ಚಿದ ನಿರೀಕ್ಷೆ</title>
		<link>https://samyuktakarnataka.in/districts/anna-from-mexico-puttamalli-song-creates-a-buzz-dhananjayas-track-trends-on-social-media/</link>
		
		<dc:creator><![CDATA[Samyuktha Karnataka]]></dc:creator>
		<pubDate>Sat, 05 Sep 2026 04:25:36 +0000</pubDate>
				<category><![CDATA[ನಮ್ಮ ಜಿಲ್ಲೆ]]></category>
		<guid isPermaLink="false">https://samyuktakarnataka.in/?p=106614</guid>

					<description><![CDATA[<p>ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ನೂತನ ‘ಪುಟ್ಟಮಲ್ಲಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಸದ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡುತ್ತಿದೆ. ರೆಟ್ರೋ ಶೈಲಿ ಹಾಗೂ ಆಧುನಿಕ ಟ್ರೆಂಡ್‌ಗಳ ಅದ್ಭುತ ಸಮ್ಮಿಲನವಾಗಿರುವ ಈ ಗೀತೆ ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ #Puttamalli ಮತ್ತು #AnnaFromMexico [&#8230;]</p>
<p>The post <a href="https://samyuktakarnataka.in/districts/anna-from-mexico-puttamalli-song-creates-a-buzz-dhananjayas-track-trends-on-social-media/">ಡಾಲಿ ಧನಂಜಯ ‘ಪುಟ್ಟಮಲ್ಲಿ’ ಸಾಂಗ್‌ಗೆ ಸಖತ್ ಹವಾ; ‘ಅಣ್ಣ ಫ್ರಮ್ ಮೆಕ್ಸಿಕೋ’ಗೆ ಹೆಚ್ಚಿದ ನಿರೀಕ್ಷೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ನೂತನ ‘ಪುಟ್ಟಮಲ್ಲಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಸದ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡುತ್ತಿದೆ. ರೆಟ್ರೋ ಶೈಲಿ ಹಾಗೂ ಆಧುನಿಕ ಟ್ರೆಂಡ್‌ಗಳ ಅದ್ಭುತ ಸಮ್ಮಿಲನವಾಗಿರುವ ಈ ಗೀತೆ ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ #Puttamalli ಮತ್ತು #AnnaFromMexico ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.</p>



<p class="wp-block-paragraph">ವಾಸೂಕಿ ವೈಭವ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸುಮಧುರ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ ಹಾಡು ಅತ್ಯಂತ ಆಕರ್ಷಕವಾಗಿ ಹೊರಹೊಮ್ಮಿದೆ. ಕೇಳುಗರನ್ನು ತಕ್ಷಣವೇ ಗುಂಗಿಗೆ ಕೆಡವುವ ಈ ಟ್ರ್ಯಾಕ್‌ಗೆ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಈ ಗೀತೆಯು ಚಿತ್ರಕ್ಕೆ ದೊಡ್ಡ ಮಟ್ಟದ ಮೈಲೇಜ್ ತಂದುಕೊಟ್ಟಿದೆ.</p>



<p class="wp-block-paragraph">ಶಂಕರ್ ಗುರು ನಿರ್ದೇಶನದ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರವು ಸಾಹಸ, ಹಾಸ್ಯ ಹಾಗೂ ಸಂಪೂರ್ಣ ಕೌಟುಂಬಿಕ ಮನರಂಜನೆಯ ಅಂಶಗಳನ್ನು ಒಳಗೊಂಡಿದೆ. ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ 24ರಂದು ಚಿತ್ರವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಈ ಹಾಡಿನ ಮೂಲಕ ಸದ್ದು ಮಾಡಿರುವ ಚಿತ್ರತಂಡ, ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರದ ಮಾಸ್ ಬೀಟ್‌ಗಳ ಹಾಡುಗಳನ್ನು ಹೊರತರಲು ಸಿದ್ಧತೆ ನಡೆಸಿದೆ.</p>



<p class="wp-block-paragraph">ದಿ ರಾಯಲ ಸ್ಟುಡಿಯೋಸ್ ಹಾಗೂ ಐರಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ. ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಜಂಟಿಯಾಗಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಧನಂಜಯ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಸಾಥ್ ನೀಡಿದ್ದು, ಉಮಾಶ್ರೀ, ರಂಗಾಯಣ ರಘು, ನಾಗಭೂಷಣ್, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಹಾಗೂ ಹುಲಿ ಕಾರ್ತಿಕ್ ಪ್ರಮುಖ ತಾರಾಗಣದಲ್ಲಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ ಹಾಗೂ ಅಜಯ್ ಕುಮಾರ್ ಮತ್ತು ನಿರಂಜನ್ ದೇವರಮನೆ ಅವರ ಸಂಕಲನ ಈ ಚಿತ್ರಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲಿ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.</p>
<p>The post <a href="https://samyuktakarnataka.in/districts/anna-from-mexico-puttamalli-song-creates-a-buzz-dhananjayas-track-trends-on-social-media/">ಡಾಲಿ ಧನಂಜಯ ‘ಪುಟ್ಟಮಲ್ಲಿ’ ಸಾಂಗ್‌ಗೆ ಸಖತ್ ಹವಾ; ‘ಅಣ್ಣ ಫ್ರಮ್ ಮೆಕ್ಸಿಕೋ’ಗೆ ಹೆಚ್ಚಿದ ನಿರೀಕ್ಷೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕೂಡಲಸಂಗಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಕ್ತಿ: ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಣೆ</title>
		<link>https://samyuktakarnataka.in/districts/baglkot/cmdks-visit-kudalasangama-temple-bagina-offering/</link>
		
		<dc:creator><![CDATA[Samyuktha Karnataka]]></dc:creator>
		<pubDate>Fri, 04 Sep 2026 15:40:32 +0000</pubDate>
				<category><![CDATA[ಬಾಗಲಕೋಟೆ]]></category>
		<category><![CDATA[bagalakote]]></category>
		<category><![CDATA[bjp]]></category>
		<category><![CDATA[Congress CM]]></category>
		<category><![CDATA[DK Shivakuma]]></category>
		<guid isPermaLink="false">https://samyuktakarnataka.in/?p=106605</guid>

					<description><![CDATA[<p>ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಕೂಡಲಸಂಗಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಪವಿತ್ರ ಸಂಗಮನಾಥನ ದರ್ಶನ ಪಡೆದರು. ಹುನಗುಂದ ತಾಲ್ಲೂಕಿನ ಈ ಐತಿಹಾಸಿಕ ಕ್ಷೇತ್ರದಲ್ಲಿ ನೆಲೆಸಿರುವ ಸಂಗಮನಾಥ ದೇವಸ್ಥಾನಕ್ಕೆ ಆಗಮಿಸಿದ ಅವರು, ಹಣೆಗೆ ವಿಭೂತಿ ಧರಿಸಿ ಸಂಪೂರ್ಣ ಶರಣರ ಶೈಲಿಯಲ್ಲಿ ವಿಶೇಷ ಪೂಜೆ ಹಾಗೂ ಆರಾಧನೆಗಳನ್ನು ನೆರವೇರಿಸಿದರು. ದೇಗುಲದ ದರ್ಶನದ ಬಳಿಕ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆ ನದಿಗಳು ಒಂದಾಗುವ ಪವಿತ್ರ ತ್ರಿವೇಣಿ ಸಂಗಮಕ್ಕೆ ತೆರಳಿದ ಡಿ.ಕೆ. ಶಿವಕುಮಾರ್ ಅವರು, ಮೈದುಂಬಿ ಹರಿಯುತ್ತಿರುವ ನದಿಗೆ ಸಾಂಪ್ರದಾಯಿಕವಾಗಿ [&#8230;]</p>
<p>The post <a href="https://samyuktakarnataka.in/districts/baglkot/cmdks-visit-kudalasangama-temple-bagina-offering/">ಕೂಡಲಸಂಗಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಕ್ತಿ: ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಕೂಡಲಸಂಗಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಪವಿತ್ರ ಸಂಗಮನಾಥನ ದರ್ಶನ ಪಡೆದರು. ಹುನಗುಂದ ತಾಲ್ಲೂಕಿನ ಈ ಐತಿಹಾಸಿಕ ಕ್ಷೇತ್ರದಲ್ಲಿ ನೆಲೆಸಿರುವ ಸಂಗಮನಾಥ ದೇವಸ್ಥಾನಕ್ಕೆ ಆಗಮಿಸಿದ ಅವರು, ಹಣೆಗೆ ವಿಭೂತಿ ಧರಿಸಿ ಸಂಪೂರ್ಣ ಶರಣರ ಶೈಲಿಯಲ್ಲಿ ವಿಶೇಷ ಪೂಜೆ ಹಾಗೂ ಆರಾಧನೆಗಳನ್ನು ನೆರವೇರಿಸಿದರು.</p>



<p class="wp-block-paragraph">ದೇಗುಲದ ದರ್ಶನದ ಬಳಿಕ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆ ನದಿಗಳು ಒಂದಾಗುವ ಪವಿತ್ರ ತ್ರಿವೇಣಿ ಸಂಗಮಕ್ಕೆ ತೆರಳಿದ ಡಿ.ಕೆ. ಶಿವಕುಮಾರ್ ಅವರು, ಮೈದುಂಬಿ ಹರಿಯುತ್ತಿರುವ ನದಿಗೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿ ನಮನ ಸಲ್ಲಿಸಿದರು. ನಾಡಿನ ಸಮೃದ್ಧಿ ಮತ್ತು ರೈತರ ಹಿತಕ್ಕಾಗಿ ಪ್ರಾರ್ಥಿಸಿದ ಅವರು, ಗಂಗಾ ಪೂಜೆಯ ವಿಧಿವಿಧಾನಗಳನ್ನು ಪೂರೈಸಿದರು.</p>



<p class="wp-block-paragraph">ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ್ ಹಾಗೂ ಅವರ ಕುಟುಂಬಸ್ಥರು ಡಿ.ಕೆ. ಶಿವಕುಮಾರ್ ಅವರಿಗೆ ಮರ್ಯಾದಾ ಪೂರ್ವಕವಾಗಿ ಜಗದ್ಗುರು ಬಸವಣ್ಣನವರ ಸುಂದರ ಬೆಳ್ಳಿ ಮೂರ್ತಿ ಹಾಗೂ ಬೆಳ್ಳಿ ಗಧೆಯನ್ನು ನೀಡಿ ಸನ್ಮಾನಿಸಿದರು.</p>



<p class="wp-block-paragraph">ಈ ಭೇಟಿಯ ವೇಳೆ ವಿಧಾನಸಭೆಯ ಉಪಾಧ್ಯಕ್ಷರಾದ ಮಂಕಾಳ ವೈದ್ಯ, ಸಂಸದರಾದ ಡಾ. ಜಿ.ಸಿ. ಚಂದ್ರಶೇಖರ್, ಮಾಜಿ ಸಚಿವರಾದ ಆರ್.ಬಿ. ತಿಮ್ಮಾಪುರ ಮತ್ತು ಶಾಸಕ ಉಮೇಶ್ ಮೇಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.</p>



<p class="wp-block-paragraph">ರಾಜ್ಯದ ಪ್ರಮುಖ ಜಲಮೂಲಗಳು ತುಂಬಿದ ಹಿನ್ನೆಲೆಯಲ್ಲಿ ಕೃಷ್ಣಾ ತೀರದ ಪ್ರಮುಖ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಬಾಗಿನ ಅರ್ಪಿಸಿದ ಸಿಎಂ ಅವರ ಈ ಪ್ರವಾಸವು ಜಿಲ್ಲೆಯ ಜನರ ಗಮನ ಸೆಳೆಯಿತು. ನದಿಯ ಒಳಹರಿವು ಹೆಚ್ಚಾಗಿರುವ ಕಾರಣ ಸುರಕ್ಷತಾ ಕ್ರಮಗಳ ನಡುವೆಯೇ ಈ ಬಾಗಿನ ಅರ್ಪಣೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.</p>
<p>The post <a href="https://samyuktakarnataka.in/districts/baglkot/cmdks-visit-kudalasangama-temple-bagina-offering/">ಕೂಡಲಸಂಗಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಭಕ್ತಿ: ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ತ್ರಿವೇಣಿ ಸಂಗಮಕ್ಕೆ ಬಾಗಿನ ಅರ್ಪಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ</title>
		<link>https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 15:27:59 +0000</pubDate>
				<category><![CDATA[ಬಾಗಲಕೋಟೆ]]></category>
		<category><![CDATA[#bagalkote]]></category>
		<guid isPermaLink="false">https://samyuktakarnataka.in/?p=106602</guid>

					<description><![CDATA[<p>ಬಾಗಲಕೋಟೆ: ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಬಾಗಲಕೋಟೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಆರ್‌ಎಸ್ಎಸ್ ಸ್ವಯಂಸೇವಕರು ಧರಿಸುವ ಕೇಸರಿ ಬಣ್ಣದ ರಾಖಿ ಕಟ್ಟಿದ್ದಾರೆ. ಆರ್‌ಎಸ್ಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿರುವ ಹೊತ್ತಿನಲ್ಲಿ ಈ ಘಟನೆ ರಾಜಕೀಯ ವಲಯದಲ್ಲಿ ಗಮನಸೆಳೆದಿದೆ. ಶುಕ್ರವಾರ ಬರ ವೀಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಡಿ.ಕೆ. ಶಿವಕುಮಾರ ಅವರು‌ ನವನಗರದ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು. ಸಭೆ ನಂತರ ಸಿಎಂ ಬಳಿ ತೆರಳಿದ ನಾರಾಯಣಸಾ ಭಾಂಡಗೆ ಸಹೋದರತ್ವದ ಭಾಗವಾಗಿ ರಾಖಿ [&#8230;]</p>
<p>The post <a href="https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/">ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬಾಗಲಕೋಟೆ: </strong>ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಬಾಗಲಕೋಟೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಆರ್‌ಎಸ್ಎಸ್ ಸ್ವಯಂಸೇವಕರು ಧರಿಸುವ ಕೇಸರಿ ಬಣ್ಣದ ರಾಖಿ ಕಟ್ಟಿದ್ದಾರೆ.</p>



<p class="wp-block-paragraph">ಆರ್‌ಎಸ್ಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿರುವ ಹೊತ್ತಿನಲ್ಲಿ ಈ ಘಟನೆ ರಾಜಕೀಯ ವಲಯದಲ್ಲಿ ಗಮನಸೆಳೆದಿದೆ.</p>



<p class="wp-block-paragraph">ಶುಕ್ರವಾರ ಬರ ವೀಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಡಿ.ಕೆ. ಶಿವಕುಮಾರ ಅವರು‌ ನವನಗರದ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು. ಸಭೆ ನಂತರ ಸಿಎಂ ಬಳಿ ತೆರಳಿದ ನಾರಾಯಣಸಾ ಭಾಂಡಗೆ ಸಹೋದರತ್ವದ ಭಾಗವಾಗಿ ರಾಖಿ ಕಟ್ಟುವುದಾಗಿ ಹೇಳಿ ಕೇಸರಿ ನೂಲು ಹೊಂದಿರುವ ರಕ್ಷೆ ಕಟ್ಟಿದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="InmYIQYl2N"><a href="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/">ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</a></blockquote><iframe class="wp-embedded-content" sandbox="allow-scripts" security="restricted"  title="“ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್” — Samyukta Karnataka" src="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/embed/#?secret=yFfTWplwr0#?secret=InmYIQYl2N" data-secret="InmYIQYl2N" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/baglkot/bjp-mp-ties-rss-rakhi-on-d-k-shivakumars-wrist/">ಡಿ.ಕೆ. ಶಿವಕುಮಾರ್ ಕೈಗೆ RSS ರಾಖಿ ಕಟ್ಟಿದ ಬಿಜೆಪಿ ಸಂಸದ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಅಣ್ಣನ ಅಂತ್ಯಕ್ರಿಯೆಗೆ ಬಂದಿದ್ದ ತಂಗಿ ಹೃದಯಾಘಾತದಿಂದ ಸಾವು</title>
		<link>https://samyuktakarnataka.in/districts/baglkot/sister-who-came-for-brothers-funeral-dies-of-heart-attack/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 14:06:30 +0000</pubDate>
				<category><![CDATA[ಬಾಗಲಕೋಟೆ]]></category>
		<category><![CDATA[#bagalkote]]></category>
		<guid isPermaLink="false">https://samyuktakarnataka.in/?p=106590</guid>

					<description><![CDATA[<p>ಬಾಗಲಕೋಟೆ: ಅಣ್ಣನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆಂದು ಓಡಿಬಂದ ತಂಗಿ, ಅಣ್ಣನ ಪಾರ್ಥಿವ ಶರೀರ ಕಂಡು ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಹನಗಂಡಿ ಗ್ರಾಮದಲ್ಲಿ ನಡೆದಿದೆ. ಹನಗಂಡಿ ಗ್ರಾಮದ ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚೆ (46) ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಣ್ಣನ ಅಗಲಿಕೆಯ ಸುದ್ದಿ ತಿಳಿದು ದುಃಖದಲ್ಲೇ ಅಂತ್ಯಕ್ರಿಯೆಗೆಂದು ಆಗಮಿಸಿದ್ದ ಅವರ ಸಹೋದರಿ ಶ್ರೀದೇವಿ ಕಲ್ಲಪ್ಪ ಅಸೋದೆ (37) ಅವರಿಗೆ, ಅಣ್ಣನ ಪಾರ್ಥಿವ ಶರೀರವನ್ನು ಕಂಡ ಕ್ಷಣದಲ್ಲೇ ದುಃಖ ತಡೆಯಲಾಗದೆ ಕುಸಿದುಬಿದ್ದಿದ್ದಾರೆ. [&#8230;]</p>
<p>The post <a href="https://samyuktakarnataka.in/districts/baglkot/sister-who-came-for-brothers-funeral-dies-of-heart-attack/">ಅಣ್ಣನ ಅಂತ್ಯಕ್ರಿಯೆಗೆ ಬಂದಿದ್ದ ತಂಗಿ ಹೃದಯಾಘಾತದಿಂದ ಸಾವು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬಾಗಲಕೋಟೆ: </strong>ಅಣ್ಣನ ಸಾವಿನ ಸುದ್ದಿ ಕೇಳಿ ಅಂತ್ಯಕ್ರಿಯೆಗೆಂದು ಓಡಿಬಂದ ತಂಗಿ, ಅಣ್ಣನ ಪಾರ್ಥಿವ ಶರೀರ ಕಂಡು ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಹನಗಂಡಿ ಗ್ರಾಮದಲ್ಲಿ ನಡೆದಿದೆ.</p>



<p class="wp-block-paragraph">ಹನಗಂಡಿ ಗ್ರಾಮದ ಕಾಂಗ್ರೆಸ್ ಧುರೀಣ ಚಂದ್ರಶೇಖರ ಗುಬಚೆ (46) ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಣ್ಣನ ಅಗಲಿಕೆಯ ಸುದ್ದಿ ತಿಳಿದು ದುಃಖದಲ್ಲೇ ಅಂತ್ಯಕ್ರಿಯೆಗೆಂದು ಆಗಮಿಸಿದ್ದ ಅವರ ಸಹೋದರಿ ಶ್ರೀದೇವಿ ಕಲ್ಲಪ್ಪ ಅಸೋದೆ (37) ಅವರಿಗೆ, ಅಣ್ಣನ ಪಾರ್ಥಿವ ಶರೀರವನ್ನು ಕಂಡ ಕ್ಷಣದಲ್ಲೇ ದುಃಖ ತಡೆಯಲಾಗದೆ ಕುಸಿದುಬಿದ್ದಿದ್ದಾರೆ.</p>



<p class="wp-block-paragraph">ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಹಾಗೂ ಸ್ಥಳೀಯರು ಮುಂದಾದರೂ, ಅಷ್ಟರಲ್ಲಾಗಲೇ ಶ್ರೀದೇವಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.</p>



<p class="wp-block-paragraph">ಅಣ್ಣನನ್ನು ಕಳೆದುಕೊಂಡ ನೋವಿನಲ್ಲಿದ್ದ ಕುಟುಂಬಕ್ಕೆ, ಕೆಲವೇ ಕ್ಷಣಗಳಲ್ಲಿ ತಂಗಿಯ ಸಾವಿನ ಆಘಾತವೂ ಎದುರಾಗಿದ್ದು, ಇಡೀ ಕುಟುಂಬವೇ ದುಃಖದ ಮಡುವಿನಲ್ಲಿ ಮುಳುಗಿದೆ. ಅಣ್ಣನ ಅಂತ್ಯಕ್ರಿಯೆಗೆ ಬಂದ ತಂಗಿಯೂ ಅದೇ ದಿನ ವಿಧಿವಶರಾಗಿರುವುದು ಹನಗಂಡಿ ಗ್ರಾಮಸ್ಥರ ಮನಕಲಕಿದೆ.</p>



<p class="wp-block-paragraph">ಅಣ್ಣ-ತಂಗಿಯ ಅಕಾಲಿಕ ಅಗಲಿಕೆಯಿಂದ ಹನಗಂಡಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಬಂಧು-ಬಳಗದವರ ಕಣ್ಣೀರು ಕಟ್ಟಲಾಗದಂತಾಗಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="4GH08Wdw1r"><a href="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/">ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್</a></blockquote><iframe class="wp-embedded-content" sandbox="allow-scripts" security="restricted"  title="“ಡಿಸೆಂಬರ್‌ನಲ್ಲಿ ಡಿ.ಕೆ. ಶಿವಕುಮಾರ್ ಅಧಿಕಾರ ಅಂತ್ಯ, ಹೊಸ ವರ್ಷಕ್ಕೆ ಹೊಸ ಸಿಎಂ: ಸುನೀಲ್‌ಕುಮಾರ್ ಹೊಸ ಬಾಂಬ್” — Samyukta Karnataka" src="https://samyuktakarnataka.in/news/karnataka/new-cm-for-the-new-year-sunil-kumar-drops-a-new-bombshell/embed/#?secret=92pkvbFOxK#?secret=4GH08Wdw1r" data-secret="4GH08Wdw1r" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/baglkot/sister-who-came-for-brothers-funeral-dies-of-heart-attack/">ಅಣ್ಣನ ಅಂತ್ಯಕ್ರಿಯೆಗೆ ಬಂದಿದ್ದ ತಂಗಿ ಹೃದಯಾಘಾತದಿಂದ ಸಾವು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಜನರ ಆಶೋತ್ತರಗಳಿಗೆ ಸ್ಪಂದನೆ: 4ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’ ಪಾದಯಾತ್ರೆ</title>
		<link>https://samyuktakarnataka.in/districts/raichur/ballari-chalo-day-4-vijayendra-sindhanur-padayatra/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 12:30:33 +0000</pubDate>
				<category><![CDATA[ರಾಯಚೂರು]]></category>
		<category><![CDATA[#Ballari]]></category>
		<category><![CDATA[raichur]]></category>
		<guid isPermaLink="false">https://samyuktakarnataka.in/?p=106563</guid>

					<description><![CDATA[<p>ಸಿಂಧನೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ಕಡೆಗೆ ಮುಂದುವರಿಯಿತು. ಇಂದಿನ ಹಂತದಲ್ಲಿ ಸುಮಾರು 22ರಿಂದ 26 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ವರದಿಯಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಗೋಪೂಜೆ ನೆರವೇರಿಸಲಾಯಿತು. ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸಲು [&#8230;]</p>
<p>The post <a href="https://samyuktakarnataka.in/districts/raichur/ballari-chalo-day-4-vijayendra-sindhanur-padayatra/">ಜನರ ಆಶೋತ್ತರಗಳಿಗೆ ಸ್ಪಂದನೆ: 4ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’ ಪಾದಯಾತ್ರೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಸಿಂಧನೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಆರೋಪಗಳನ್ನು ಮುಂದಿಟ್ಟು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಇಂದು ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕೊಪ್ಪಳ ಜಿಲ್ಲೆಯ ಕಾರಟಗಿ ಕಡೆಗೆ ಮುಂದುವರಿಯಿತು. ಇಂದಿನ ಹಂತದಲ್ಲಿ ಸುಮಾರು 22ರಿಂದ 26 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ವರದಿಯಾಗಿದೆ.</p>



<p class="wp-block-paragraph">ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ಪಾದಯಾತ್ರೆ ಆರಂಭಕ್ಕೂ ಮುನ್ನ ಗೋಪೂಜೆ ನೆರವೇರಿಸಲಾಯಿತು. ಅಧರ್ಮವನ್ನು ಅಳಿಸಿ ಧರ್ಮವನ್ನು ಸ್ಥಾಪಿಸಲು ಯುಗಯುಗದಲ್ಲಿ ಅವತರಿಸುವ ಶ್ರೀಕೃಷ್ಣನನ್ನು ಸ್ಮರಿಸಿ, ಗೋಪಾಲಕನಾದ ಶ್ರೀಕೃಷ್ಣನ ಪ್ರೀತ್ಯರ್ಥವಾಗಿ ಗೋಪೂಜೆ ನಡೆಸಲಾಯಿತು.</p>



<p class="wp-block-paragraph">ಬಳಿಕ ಮಾತನಾಡಿದ ವಿಜಯೇಂದ್ರ, ‘ಬಳ್ಳಾರಿ ಚಲೋ’ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಹೋರಾಟವಾಗಿದೆ ಎಂದು ಹೇಳಿದರು. ರಾಜ್ಯದ ಬಡವರು, ರೈತರು, ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ಆರೋಪಿಸಿದರು. ಸಾಮಾಜಿಕ ಭದ್ರತಾ ಪಿಂಚಣಿ, ಬಡವರ ಮನೆ, ರೈತರ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.</p>



<p class="wp-block-paragraph">ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ವಿಶಿಷ್ಟಚೇತನರು ಹಾಗೂ ಹಿರಿಯ ನಾಗರಿಕರ ಪಿಂಚಣಿ ಸಮಸ್ಯೆಗಳೊಂದಿಗೆ ಆಗಮಿಸಿದ್ದವರನ್ನು ವಿಜಯೇಂದ್ರ ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದರು.</p>



<p class="wp-block-paragraph">ಇದೇ ವೇಳೆ ಸಿಂಧನೂರಿನಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು ವಿಜಯೇಂದ್ರ ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ, ಬಿಜೆಪಿಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆಗೆ ಶುಭ ಹಾರೈಸಿದರು. ಸಮಾಜದ ಎಲ್ಲ ವರ್ಗಗಳ ಜನರನ್ನು ಒಳಗೊಂಡು ಹೋರಾಟ ನಡೆಸುವುದಾಗಿ ಬಿಜೆಪಿ ನಾಯಕರು ಪ್ರತಿಪಾದಿಸಿದರು.</p>



<p class="wp-block-paragraph">ಇಂದಿನ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಸುನಿಲ್ ಕುಮಾರ್, ಶಾಸಕ ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಹಲವು ಹಿರಿಯ ನಾಯಕರು, ಶಾಸಕರು, ಮುಖಂಡರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾದಯಾತ್ರೆಗೆ ಸಾಥ್ ನೀಡಿದ್ದಾರೆ.</p>



<p class="wp-block-paragraph">ಸಾಮಾಜಿಕ ಭದ್ರತಾ ಪಿಂಚಣಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ, ಅತಿಥಿ ಉಪನ್ಯಾಸಕರ ವೇತನ ಸೇರಿದಂತೆ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪವಾಗಿದೆ. ಗಂಗಾ ಕಲ್ಯಾಣ ಯೋಜನೆ ಹಾಗೂ ಬಡವರಿಗೆ ಮನೆ ಒದಗಿಸುವ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ವಿಜಯೇಂದ್ರ ಆರೋಪಗಳನ್ನು ಮಾಡಿದ್ದಾರೆ.</p>



<p class="wp-block-paragraph">ರಾಯಚೂರಿನಿಂದ ಆರಂಭವಾಗಿರುವ ಈ 10 ದಿನಗಳ ‘ಬಳ್ಳಾರಿ ಚಲೋ’ ಪಾದಯಾತ್ರೆ ಸೆಪ್ಟೆಂಬರ್ 10ರಂದು ಬಳ್ಳಾರಿ ತಲುಪುವ ಉದ್ದೇಶ ಹೊಂದಿದೆ. ಪಾದಯಾತ್ರೆ ಮುಂದುವರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.</p>



<p class="wp-block-paragraph"><strong>ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ</strong> 👉 <strong><a href="https://samyuktakarnataka.in/news/live-news-updates-in-samyukta-karnataka-5/" type="link" id="https://samyuktakarnataka.in/news/live-news-updates-in-samyukta-karnataka-5/">ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.</a></strong></p>
<p>The post <a href="https://samyuktakarnataka.in/districts/raichur/ballari-chalo-day-4-vijayendra-sindhanur-padayatra/">ಜನರ ಆಶೋತ್ತರಗಳಿಗೆ ಸ್ಪಂದನೆ: 4ನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’ ಪಾದಯಾತ್ರೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಬರ ಪೀಡಿತ ಪಟ್ಟಿಗೆ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳು ಸೇರ್ಪಡೆ</title>
		<link>https://samyuktakarnataka.in/districts/baglkot/more-taluks-to-be-added-to-the-drought-hit-list-within-15-days/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 12:28:59 +0000</pubDate>
				<category><![CDATA[ಬಾಗಲಕೋಟೆ]]></category>
		<category><![CDATA[#bagalkote]]></category>
		<guid isPermaLink="false">https://samyuktakarnataka.in/?p=106562</guid>

					<description><![CDATA[<p>ಬಾಗಲಕೋಟೆ: &#8220;ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ತೀರ್ಮಾನ ಮಾಡಲಾಗುವುದು&#8221; ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಬಾಗಲಕೋಟೆಯ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, &#8220;ಜಿಲ್ಲಾ ಸಚಿವರು ಭೇಟಿ ನೀಡಿ ಸಲ್ಲಿಸಿರುವ ವರದಿಗಳು ಮತ್ತು ಅಧಿಕಾರಿಗಳ ವರದಿಗಳನ್ನು ಆಧರಿಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಂತ-ಹಂತವಾಗಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಮಿಕ್ಕ ತಾಲ್ಲೂಕುಗಳ ಬಗ್ಗೆ ವೈಜ್ಞಾನಿಕ ಪರಿಶೀಲನೆ ನಡೆಯುತ್ತಿದೆ‌. ಒಂದಷ್ಟು ಅಚ್ಚುಕಟ್ಟು ಪ್ರದೇಶಗಳನ್ನು [&#8230;]</p>
<p>The post <a href="https://samyuktakarnataka.in/districts/baglkot/more-taluks-to-be-added-to-the-drought-hit-list-within-15-days/">ಬರ ಪೀಡಿತ ಪಟ್ಟಿಗೆ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳು ಸೇರ್ಪಡೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಬಾಗಲಕೋಟೆ: </strong>&#8220;ರಾಜ್ಯದಲ್ಲಿ ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲು ತೀರ್ಮಾನ ಮಾಡಲಾಗುವುದು&#8221; ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.</p>



<p class="wp-block-paragraph">ಬಾಗಲಕೋಟೆಯ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, &#8220;ಜಿಲ್ಲಾ ಸಚಿವರು ಭೇಟಿ ನೀಡಿ ಸಲ್ಲಿಸಿರುವ ವರದಿಗಳು ಮತ್ತು ಅಧಿಕಾರಿಗಳ ವರದಿಗಳನ್ನು ಆಧರಿಸಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಂತ-ಹಂತವಾಗಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಮಿಕ್ಕ ತಾಲ್ಲೂಕುಗಳ ಬಗ್ಗೆ ವೈಜ್ಞಾನಿಕ ಪರಿಶೀಲನೆ ನಡೆಯುತ್ತಿದೆ‌. ಒಂದಷ್ಟು ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಉತ್ತಮ ಬೆಳೆ ಕಾಣುತ್ತಿಲ್ಲ. ಬಾಗಲಕೋಟೆಯಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ರೈತರೊಂದಿಗೆ ಚರ್ಚಿಸಿ ವಾಸ್ತವ ಸ್ಥಿತಿಯನ್ನು ಅರಿಯಲಾಯಿತು. ರಾಜ್ಯದಲ್ಲಿ ಶೇ. 42-43ರಷ್ಟು ಮಳೆ ಕೊರತೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಗದಗ, ಧಾರವಾಡ, ಹಾವೇರಿ ಬಳಿಕ ಬಾಗಲಕೋಟೆಯಲ್ಲೂ ಬೆಳೆಗಳು ತೀವ್ರವಾಗಿ ಹದಗೆಟ್ಟಿವೆ&#8221; ಎಂದರು.</p>



<p class="wp-block-paragraph">&#8220;ಇತ್ತೀಚೆಗೆ ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಇನ್ನೂ ಎಲ್ಲ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿಲ್ಲ. ಈ ಕುರಿತು ವರದಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ಎರಡನೇ ಹಾಗೂ ಮೂರನೇ ಹಂತದಲ್ಲಿ ಇತರೇ ತಾಲ್ಲೂಕುಗಳ ಬಗ್ಗೆ ತೀರ್ಮಾನ ಮಾಡಲಾಗುವುದು&#8221; ಎಂದರು.</p>



<p class="wp-block-paragraph">&#8220;‌ಕೇಂದ್ರದ ಮಾರ್ಗಸೂಚಿಯಲ್ಲಿ ಇಷ್ಟು ದಿನಗಳ ಕಾಲ ಮಳೆಯಾಗಿರಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಗದಗ ಜಿಲ್ಲೆಯಲ್ಲಿ ಆರು ತಾಲ್ಲೂಕಿನಲ್ಲಿ ಒಂದು ತಾಲ್ಲೂಕು ಬರ ಎಂದು ಘೋಷಣೆಯಾಗಿದೆ. ಗದಗ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಭಾಗಗಳಲ್ಲಿ ಕೃಷಿ ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದೆ. ವೈಮಾನಿಕ ಸಮೀಕ್ಷೆ ಮೂಲಕವೂ ಪರಿಸ್ಥಿತಿಯನ್ನು ಗಮನಿಸಲಾಗಿದೆ&#8221; ಎಂದರು.</p>



<p class="wp-block-paragraph"><strong>ರೈತರ ಹಿತ ಸರ್ಕಾರಕ್ಕೆ ಮುಖ್ಯ: </strong>&#8220;ಕೃಷ್ಣಾ ನದಿಗೆ ಸ್ವಲ್ಪ ನೀರು ಬಂದಿದೆ, ಕಾವೇರಿ ಸೇರಿದಂತೆ ಬೇರೆಡೆಗಳಲ್ಲಿ ಇಷ್ಟೂ ನೀರು ಬಂದಿಲ್ಲ. ತಮಿಳುನಾಡಿನವರು ತಮ್ಮ ಬೆಳೆಗಳಿಗಾಗಿ ನೀರು ಕೇಳುತ್ತಿದ್ದಾರೆ. ನಾನು, ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಹಾಗೂ ಚೆಲುವರಾಯಸ್ವಾಮಿಯವರು ಚರ್ಚಿಸಿ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಕೆಆರ್‌ಎಸ್ ಬದಲಿಗೆ ಕಬಿನಿಯಿಂದ ನೀರನ್ನು ಹರಿಸಲಾಗುತ್ತಿದೆ. ರೈತರ ಹಿತ ಸರ್ಕಾರಕ್ಕೆ ಮುಖ್ಯ” ಎಂದರು.</p>



<p class="wp-block-paragraph"><strong>ಎಲ್ಲ ಪಕ್ಷಗಳ ಅಭಿಪ್ರಾಯ ಪಡೆಯುತ್ತೇವೆ: </strong>&#8220;ಕಸ್ತೂರಿರಂಗನ್ ವರದಿ ವಿಚಾರದಲ್ಲಿ ರಾಜ್ಯದ ಹಿಂದಿನ ನಿರ್ಧಾರಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಅಭಿಪ್ರಾಯ ತಿಳಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಹೀಗಾಗಿ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ರಾಜ್ಯದ ನಿಲುವು ರೂಪಿಸಬೇಕಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವುದರಿಂದ ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಬೇಕಿದೆ. ಆಗ ಅಧಿವೇಶನದಲ್ಲಿ ಮಾತನಾಡದವರು ಈಗ ಏಳು ದಿನಗಳ ವಿಶೇಷ ಅಧಿವೇಶನ ಕರೆಯಿರಿ ಎಂದು ಹೇಳುತ್ತಿದ್ದಾರೆ&#8221; ಎಂದು ವ್ಯಂಗ್ಯವಾಡಿದರು.</p>



<p class="wp-block-paragraph"><strong>ಮನೆ ಬಾಗಿಲಿಗೆ ಸರ್ಕಾರ: </strong>&#8220;ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೂಡ್ಲಗಿಯಲ್ಲಿ ‘ಪ್ರಜಾಸೇವಾ ಇಲಾಖೆ’ಗೆ ಚಾಲನೆ ನೀಡಲಾಗುತ್ತಿದೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ&#8221; ಎಂದು ತಿಳಿಸಿದರು.</p>



<p class="wp-block-paragraph">&#8220;ಪ್ರತಿ ತಿಂಗಳು ಮೊದಲ ಹಾಗೂ ಮೂರನೇ ಶನಿವಾರ ಸಚಿವರು ಕಡ್ಡಾಯವಾಗಿ ಒಂದೊಂದು ತಾಲೂಕಿಗೆ ತೆರಳಿ ಜನರ ಸಮಸ್ಯೆ ಆಲಿಸಬೇಕು. ಮೊದಲ ಸುತ್ತಿನ ಬಳಿಕ ಹೋಬಳಿ ಮಟ್ಟಕ್ಕೂ ತೆರಳಬೇಕು. ಶಾಸಕರು ಪಂಚಾಯಿತಿ ಮಟ್ಟದಲ್ಲಿ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಲು ಸೂಚಿಸಲಾಗಿದೆ. ಎಲ್ಲ ಸಮಸ್ಯೆಗಳನ್ನೂ ತಕ್ಷಣವೇ ಪರಿಹರಿಸಲಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಜನರ ಬಳಿಗೆ ತೆರಳಿ ಅವರ ಸಮಸ್ಯೆ ಮತ್ತು ಭಾವನೆಗಳನ್ನು ನೇರವಾಗಿ ತಿಳಿದುಕೊಂಡರೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಅವಕಾಶ ದೊರೆಯಲಿದೆ&#8221; ಎಂದು ಹೇಳಿದರು.</p>



<p class="wp-block-paragraph">&#8220;ಶಿಕ್ಷಕರ ದಿನಾಚರಣೆಯ ಹಿನ್ನೆಲೆ ಉನ್ನತ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಸೇರಿದಂತೆ ಮೂವರು ಸಚಿವರಿಗೆ ವಿಶೇಷ ಜವಾಬ್ದಾರಿ ಇರುವುದರಿಂದ, ಅವರನ್ನು ಹೊರತುಪಡಿಸಿ ಉಳಿದ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಜಾಸೇವೆ ಅಭಿಯಾನದಲ್ಲಿ ತಾವು ಸ್ವತಃ ಬೆಳಿಗ್ಗೆಯಿಂದ ಸಾರ್ವಜನಿಕರು ನೀಡುವ ಅರ್ಜಿಗಳನ್ನು ಸ್ವೀಕರಿಸಿ, ಅಧಿಕಾರಿಗಳ ಜೊತೆಗೂಡಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಈ ಪ್ರಕ್ರಿಯೆ ಎಲ್ಲಾ ತಾಲೂಕುಗಳಲ್ಲೂ ಮುಂದುವರಿಯಲಿದೆ&#8221; ಎಂದರು.</p>



<p class="wp-block-paragraph"><strong>ಬಿಜೆಪಿ ಇನ್ನೂ ನಾಲ್ಕು ಯಾತ್ರೆ ಮಾಡಲಿ: </strong>ಬಿಜೆಪಿ ಪಾದಯಾತ್ರೆ ಕುರಿತು ಕೇಳಿದಾಗ, &#8220;ಬಿಜೆಪಿಯವರು ಇನ್ನೂ ನಾಲ್ಕು ಯಾತ್ರೆ ಮಾಡಲಿ. ಪಶ್ಚಾತ್ತಾಪ ಯಾತ್ರೆಯನ್ನೂ ಮಾಡಿಕೊಳ್ಳಲಿ. ಜನರು ಅವರಿಗೆ ಈಗಾಗಲೇ ತೀರ್ಪು ನೀಡಿದ್ದಾರೆ’ ಎಂದು ಹೇಳಿದರು.</p>



<p class="wp-block-paragraph">ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ಮಾತನಾಡುತ್ತಾ, &#8220;ಸರ್ಕಾರಕ್ಕೆ ಮುಜುಗರವಾಗಬಾರದು ಹಾಗೂ ಎಂಬ ಕಾರಣಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಆದರೂ ಅವರು ನಮ್ಮ ನಾಯಕರೇ. ಅದರಲ್ಲಿ ಯಾವುದೇ ಅನುಮಾನವಿಲ್ಲ&#8221; ಎಂದರು.</p>



<p class="wp-block-paragraph"><strong>ಶಕ್ತಿಶಾಲಿಗಳಿಗೆ ಶತ್ರುಗಳು ಹೆಚ್ಚು:</strong> &#8220;ಹೆಚ್ಚು ಶಕ್ತಿಶಾಲಿಯಾಗಿದ್ದಷ್ಟು ಹೆಚ್ಚು ಶತ್ರು, ಕಡಿಮೆ ಶಕ್ತಿ ಇದ್ದರೆ ಕಡಿಮೆ ಶತ್ರುಗಳು, ಶಕ್ತಿಯೇ ಇಲ್ಲದಿದ್ದರೇ ಶತ್ರುಗಳೆ ಇಲ್ಲ. ದೃಢವಾಗಿ ಕೆಲಸ ಮಾಡುವವರ ಮೇಲೆ ಕಣ್ಣಿಡುವುದು ಸಹಜ&#8221; ಎಂದರು.</p>



<p class="wp-block-paragraph"><strong>ಎಸ್ ಟರ್ನ್ ಮಾಡೋಕೆ ಶಕ್ತಿ ಕೊಟ್ಟಿದ್ದೀರಿ:</strong> &#8220;ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆದಿರುವುದಕ್ಕೆ ವಿರೋಧಪಕ್ಷಗಳು ಸಿಎಂ &#8216;ಯು-ಟರ್ನ್&#8217; ಎನ್ನುತ್ತಿವೆ. ಯೂ, ವೈ, ಎಕ್ಸ್ ಎಲ್ಲಾ ಅವರ ಹತ್ತಿರಾನೇ ಇದೆ. ಎಸ್ ಟರ್ನ್ ಮಾಡೋಕೆ ಜನರು ನನಗೆ ಶಕ್ತಿ ಕೊಟ್ಟಿದ್ದಾರೆ. ಯಾವ ಟರ್ನ್ ಮಾಡಬೇಕು ಅನ್ನೋದನ್ನು ಆಮೇಲೆ ನೋಡೋಣ&#8221; ಎಂದು ಕುಟುಕಿಯಾಡಿದರು.</p>



<p class="wp-block-paragraph">&#8220;ಅಧಿವೇಶನದಲ್ಲಿ ಚರ್ಚೆ ನಡೆಸಿದ್ದರೆ ಈ ಬಗ್ಗೆ ಸೂಕ್ತ ಉತ್ತರ ಕೊಡುತ್ತಿದ್ದೆ. ವಿಧೇಯಕ ಜಾರಿ ಮಾಡುತ್ತಿರುವುದು ಸಾರ್ವಜನಿಕರ ಹಿತಕ್ಕಾಗಿ. ಅಗತ್ಯ ಬಿದ್ದರೆ ಸಮಿತಿ ಮಾಡಿ ತೀರ್ಮಾನ ಮಾಡಿ ಎಂದು ಹೇಳುತ್ತಿದ್ದೆ. ವಿಧೇಯಕಕ್ಕೆ ಅಧಿವೇಶದಲ್ಲಿ ಅನುಮೋದನೆ ಕೂಡ ದೊರೆತಿತ್ತು. ಹಿಂದಕ್ಕೆ ಪಡೆಯುವ ವಿಚಾರದಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಇಲ್ಲ. ನನಗೆ ಸಾರ್ವಜನಿಕ ಹಿತ, ಅಭಿಪ್ರಾಯ ಮುಖ್ಯ&#8221; ಎಂದರು.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="xzUv6utAcS"><a href="https://samyuktakarnataka.in/districts/baglkot/request-to-cm-to-construct-prajasoudha-in-banahatti/">ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಿ: ಸಿಎಂಗೆ ಹೋರಾಟಗಾರರ ಮನವಿ</a></blockquote><iframe class="wp-embedded-content" sandbox="allow-scripts" security="restricted"  title="“ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಿ: ಸಿಎಂಗೆ ಹೋರಾಟಗಾರರ ಮನವಿ” — Samyukta Karnataka" src="https://samyuktakarnataka.in/districts/baglkot/request-to-cm-to-construct-prajasoudha-in-banahatti/embed/#?secret=vGRG5MWfuW#?secret=xzUv6utAcS" data-secret="xzUv6utAcS" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/baglkot/more-taluks-to-be-added-to-the-drought-hit-list-within-15-days/">ಬರ ಪೀಡಿತ ಪಟ್ಟಿಗೆ 15 ದಿನಗಳಲ್ಲಿ ಮತ್ತಷ್ಟು ತಾಲೂಕುಗಳು ಸೇರ್ಪಡೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼಸ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್</title>
		<link>https://samyuktakarnataka.in/districts/toxic-rocking-star-yash-undergoes-massive-body-transformation/</link>
		
		<dc:creator><![CDATA[Samyuktha Karnataka]]></dc:creator>
		<pubDate>Fri, 04 Sep 2026 12:22:44 +0000</pubDate>
				<category><![CDATA[ನಮ್ಮ ಜಿಲ್ಲೆ]]></category>
		<guid isPermaLink="false">https://samyuktakarnataka.in/?p=106559</guid>

					<description><![CDATA[<p>ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ &#8216;ಟಾಕ್ಸಿಕ್&#8217; ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಭರ್ಜರಿಯಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದರು. ಯಶ್ ಅವರ ಈ ಸಾಲಿಡ್ ಹಾಗೂ ಕಟ್ಟುಮಸ್ತಾದ ಫಿಟ್‌ನೆಸ್ ಟ್ರಾನ್ಸ್‌ಫಾರ್ಮೇಷನ್ ಹಿಂದೆ ಖ್ಯಾತ ಫಿಟ್‌ನೆಸ್ ಗುರು, ಬಾಡಿಬಿಲ್ಡರ್ ‘ಪಾನಿಪುರಿ ಕಿಟ್ಟಿ’ ಅವರ ಕಠಿಣ ಪರಿಶ್ರಮ ಮತ್ತು ನಿರಂತರ ಮಾರ್ಗದರ್ಶನವಿದೆ. ಹಲವು ವರ್ಷಗಳಿಂದ ಯಶ್ ಅವರ ಆಪ್ತ ಪರ್ಸನಲ್ ಟ್ರೇನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಾನಿಪುರಿ ಕಿಟ್ಟಿ, ರಾಕಿ ಭಾಯ್ ಅವರ ಬಾಡಿಬಿಲ್ಡಿಂಗ್ ಜರ್ನಿಯಲ್ಲಿ ನೆರಳಿನಂತೆ ಜೊತೆಯಾಗಿದ್ದಾರೆ. [&#8230;]</p>
<p>The post <a href="https://samyuktakarnataka.in/districts/toxic-rocking-star-yash-undergoes-massive-body-transformation/">‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼಸ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ &#8216;ಟಾಕ್ಸಿಕ್&#8217; ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಭರ್ಜರಿಯಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದರು.</p>



<p class="wp-block-paragraph">ಯಶ್ ಅವರ ಈ ಸಾಲಿಡ್ ಹಾಗೂ ಕಟ್ಟುಮಸ್ತಾದ ಫಿಟ್‌ನೆಸ್ ಟ್ರಾನ್ಸ್‌ಫಾರ್ಮೇಷನ್ ಹಿಂದೆ ಖ್ಯಾತ ಫಿಟ್‌ನೆಸ್ ಗುರು, ಬಾಡಿಬಿಲ್ಡರ್ ‘ಪಾನಿಪುರಿ ಕಿಟ್ಟಿ’ ಅವರ ಕಠಿಣ ಪರಿಶ್ರಮ ಮತ್ತು ನಿರಂತರ ಮಾರ್ಗದರ್ಶನವಿದೆ.</p>



<p class="wp-block-paragraph">ಹಲವು ವರ್ಷಗಳಿಂದ ಯಶ್ ಅವರ ಆಪ್ತ ಪರ್ಸನಲ್ ಟ್ರೇನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಾನಿಪುರಿ ಕಿಟ್ಟಿ, ರಾಕಿ ಭಾಯ್ ಅವರ ಬಾಡಿಬಿಲ್ಡಿಂಗ್ ಜರ್ನಿಯಲ್ಲಿ ನೆರಳಿನಂತೆ ಜೊತೆಯಾಗಿದ್ದಾರೆ.</p>



<p class="wp-block-paragraph">‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರ ಪಾತ್ರಕ್ಕೆ ತಕ್ಕಂತೆ ಅತ್ಯಂತ ಭಿನ್ನ ಹಾಗೂ ರಗಡ್ ಆದ ಲುಕ್ ಕಟ್ಟಿಕೊಡುವಲ್ಲಿ ಕಿಟ್ಟಿ ಅವರ ಕಸ್ಟಮೈಸ್ಡ್ ವರ್ಕೌಟ್ ಪ್ಲಾನ್ ಮತ್ತು ಡಯಟ್ ಪ್ರಮುಖ ಪಾತ್ರ ವಹಿಸಿದೆ.</p>



<p class="wp-block-paragraph">ಜಿಮ್‌ನಲ್ಲಿ ತಾಸುಗಟ್ಟಲೆ ಬೆವರು ಹರಿಸುವಾಗ ಯಶ್ ಜೊತೆಯಲ್ಲೇ ಇದ್ದು ಪ್ರೇರೇಪಿಸಿರುವ ಕಿಟ್ಟಿ, ರಾಕಿಂಗ್ ಸ್ಟಾರ್ ಅವರ ಈ ಅದ್ಭುತ ಫಿಸಿಕಲ್ ಬದಲಾವಣೆಯ ಅಸಲಿ ಶಕ್ತಿಯಾಗಿ ನಿಂತಿದ್ದಾರೆ.</p>
<p>The post <a href="https://samyuktakarnataka.in/districts/toxic-rocking-star-yash-undergoes-massive-body-transformation/">‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼಸ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಯುವ ದಸರಾಗೆ ಮತ್ತಷ್ಟು ಮೆರುಗು: ಪ್ರಭುದೇವಗೆ ಅಧಿಕೃತ ಆಹ್ವಾನ</title>
		<link>https://samyuktakarnataka.in/districts/mysuru/prabhu-deva-invited-to-inaugurate-yuva-dasara/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 04 Sep 2026 12:00:10 +0000</pubDate>
				<category><![CDATA[ಮೈಸೂರು]]></category>
		<category><![CDATA[#Mysuru]]></category>
		<category><![CDATA[Mysuru Dasara]]></category>
		<guid isPermaLink="false">https://samyuktakarnataka.in/?p=106552</guid>

					<description><![CDATA[<p>ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾ-2026ರ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ. ಯುವದಸರಾ ಸಮಿತಿಯ ಕಾರ್ಯಾಧ್ಯಕ್ಷ ಜಿ. ಸೋಮಶೇಖರ್ ಹಾಗೂ ಕಾರ್ಯದರ್ಶಿಗಳಾದ ಅರುಣ್ ಮತ್ತು ಸತ್ಯಮೂರ್ತಿ ಅವರು ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ ಪ್ರಭುದೇವ ಅವರು ಯುವ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಮೈಸೂರಿನವರೇ ಆಗಿರುವ ಪ್ರಭುದೇವ ಅವರ [&#8230;]</p>
<p>The post <a href="https://samyuktakarnataka.in/districts/mysuru/prabhu-deva-invited-to-inaugurate-yuva-dasara/">ಯುವ ದಸರಾಗೆ ಮತ್ತಷ್ಟು ಮೆರುಗು: ಪ್ರಭುದೇವಗೆ ಅಧಿಕೃತ ಆಹ್ವಾನ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಮೈಸೂರು:</strong> ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಯುವ ದಸರಾ-2026ರ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.</p>



<p class="wp-block-paragraph">ಯುವದಸರಾ ಸಮಿತಿಯ ಕಾರ್ಯಾಧ್ಯಕ್ಷ ಜಿ. ಸೋಮಶೇಖರ್ ಹಾಗೂ ಕಾರ್ಯದರ್ಶಿಗಳಾದ ಅರುಣ್ ಮತ್ತು ಸತ್ಯಮೂರ್ತಿ ಅವರು ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.</p>



<p class="wp-block-paragraph">ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ ಪ್ರಭುದೇವ ಅವರು ಯುವ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಮೈಸೂರಿನವರೇ ಆಗಿರುವ ಪ್ರಭುದೇವ ಅವರ ಆಗಮನವು ಈ ಬಾರಿಯ ಯುವದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.</p>



<p class="wp-block-paragraph">ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರಭುದೇವ ಅವರ ಉಪಸ್ಥಿತಿ ವಿಶೇಷ ಆಕರ್ಷಣೆಯಾಗುವ ನಿರೀಕ್ಷೆ ಮೂಡಿಸಿದೆ. ಅವರ ನೃತ್ಯ ಮತ್ತು ಚಿತ್ರರಂಗದ ಜನಪ್ರಿಯತೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರನ್ನು ಸೆಳೆಯುವ ಸಾಧ್ಯತೆಯಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="SRzSfR0ulW"><a href="https://samyuktakarnataka.in/news/international/lord-krishnas-miracle-took-place-on-janmashtami-itself/">9 ದಿನ ಸಾವಿನ ಸುರಂಗದಲ್ಲಿ ‘ಹರೇ ಕೃಷ್ಣ’ ಜಪಿಸಿದ ಸಂಜಯ್‌: ಜನ್ಮಾಷ್ಟಮಿಯಂದೇ ನಡೆಯಿತು ಶ್ರೀಕೃಷ್ಣನ ಪವಾಡ</a></blockquote><iframe loading="lazy" class="wp-embedded-content" sandbox="allow-scripts" security="restricted"  title="“9 ದಿನ ಸಾವಿನ ಸುರಂಗದಲ್ಲಿ ‘ಹರೇ ಕೃಷ್ಣ’ ಜಪಿಸಿದ ಸಂಜಯ್‌: ಜನ್ಮಾಷ್ಟಮಿಯಂದೇ ನಡೆಯಿತು ಶ್ರೀಕೃಷ್ಣನ ಪವಾಡ” — Samyukta Karnataka" src="https://samyuktakarnataka.in/news/international/lord-krishnas-miracle-took-place-on-janmashtami-itself/embed/#?secret=rw8LJ00mDQ#?secret=SRzSfR0ulW" data-secret="SRzSfR0ulW" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/mysuru/prabhu-deva-invited-to-inaugurate-yuva-dasara/">ಯುವ ದಸರಾಗೆ ಮತ್ತಷ್ಟು ಮೆರುಗು: ಪ್ರಭುದೇವಗೆ ಅಧಿಕೃತ ಆಹ್ವಾನ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
