ಹೃದಯಾಘಾತ: ಚುನಾವಣಾ ಚೆಕ್‌ಪೋಸ್ಟ್‌ ಅಧಿಕಾರಿ ಸಾವು

Advertisement

ಹುಮನಾಬಾದ: ಚುನಾವಣೆ ನಿಮಿತ್ಯ ಚೆಕ್ಪೋಸ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೃಷಿ ಇಲಾಖೆ ನೌಕರ ಹೃದಯ ಘಾತದಿಂದ ಮೃತ ಪಟ್ಟಿದ್ದಾರೆ.
ಚಿಟಗುಪ್ಪ ಪಟ್ಟಣದ ನಿವಾಸಿ ಆನಂದ್ ಲಕ್ಷ್ಮಣ(32) ಮೃತಪಟ್ಟ ಅಧಿಕಾರಿ ಎಂದು ಗುರಿತಸಲಾಗಿದ್ದು, ಆರ್.ಎಸ್.ಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚುನಾವಣಾ ನೀತಿ ಸಹಿಂತೆ‌ ಜಾರಿಯಾದ ನಂತರ ಕೊಡಂಬಲ್ ಚೆಕ್‌ಪೋಸ್ಟ್‌ ನಲ್ಲಿ‌ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಸಿಲಿನ ತಾಪ ಹೆಚ್ಚಾಗಿ ಸೋಮವಾರ ಮಧ್ಯಾಹ್ನ ಆರೋಗ್ಯ ಸಮಸ್ಯೆ ಕಂಡು ಬಂದ‌ ಹಿನ್ನಲ್ಲೆಯಲ್ಲಿ ಚಿಟಗುಪ್ಲ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿಯೇ ಮೃತಪಟ್ಟಿದ್ದಾರೆ.