ಸಂಯುಕ್ತ ಕರ್ನಾಟಕ ವರದಿಗಾರ ನಾಮದೇವ ವಾಟ್ಕರ್‌ಗೆ ಪ್ರಶಸ್ತಿ

Advertisement

ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿ ವರ್ಷ ನೀಡುವ ರಾಜ್ಯ ಮಟ್ಟದ ಹೆಚ್.ಎಸ್.ರಂಗಸ್ವಾಮಿ ದತ್ತಿನಿಧಿ ಪ್ರಶಸ್ತಿ `ಸಂಯುಕ್ತ ಕರ್ನಾಟಕ’ ಪತ್ರಿಕೆಯ ವರದಿಗಾರ ನಾಮದೇವ ವಾಟ್ಕರ್ ಅವರಿಗೆ ಲಭಿಸಿದೆ.
ವಾಟ್ಕರ್ ಅವರು ಕಳೆದ ೩೧ ವರ್ಷಗಳಿಂದ ಪತ್ರಿಕೋದ್ಯಮದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಶಹಾಪುರ ತಾಲೂಕಿನಲ್ಲಿ ಬರುತ್ತಿದ್ದ ವಡಗೇರಾ ಹೋಬಳಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ವಡಗೇರಾ ತಾಲೂಕ ಕೇಂದ್ರವಾದ ನಂತರ ತಾಲೂಕ ವರದಿಗಾರರಾಗಿ ಸಂಯುಕ್ತ ಕರ್ನಾಟದಲ್ಲೆ ಕಳೆದ ೩೧ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು ಪತ್ರಕರ್ತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬರುವ ಏಪ್ರಿಲ್ ೧ ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.