ಶ್ರೀ ರಾಮಲೀಲಾ ಹೈಟೆಕ್ ಆಟದ ಮೈದಾನಕ್ಕೆ ಶಂಕುಸ್ಥಾಪನೆ

Advertisement

ಕ್ರೀಡಾ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಗಣನೀಯ ಸೇವೆ ನೀಡುವ ನಿಟ್ಟಿನಲ್ಲಿ ಈ ಆಟದ ಮೈದಾನ ಮುಂದಿನ ದಿನಗಳಲ್ಲಿ ಯುವ ಜನತೆಗೆ ಸಹಕಾರಿಯಾಗಲಿ.

ರಾಮನಗರ: ಜಿಲ್ಲೆಯ ಕುದೂರು ಪಟ್ಟಣದ ಶ್ರೀ ರಾಮಲೀಲಾ ಹೈ ಟೆಕ್ ಆಟದ ಮೈದಾನ ನಿರ್ಮಾಣದ ಶಂಕುಸ್ಥಾಪನೆಯನ್ನು ಬೆಂಗಳೂರು ಗ್ರಾಮಾಂತರ ಸಂಸದ, ಸಹೋದರ ಡಿ.ಕೆ. ಸುರೇಶ್ ಉದ್ಘಾಟಿಸಿದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕ್ರೀಡಾ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಗಣನೀಯ ಸೇವೆ ನೀಡುವ ನಿಟ್ಟಿನಲ್ಲಿ ಈ ಆಟದ ಮೈದಾನ ಮುಂದಿನ ದಿನಗಳಲ್ಲಿ ಯುವ ಜನತೆಗೆ ಸಹಕಾರಿಯಾಗಲಿ, ಮಾಗಡಿಯಿಂದ ಇನ್ನಷ್ಟು ಕ್ರೀಡಾಪಟುಗಳು ಬರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.