ವಿಶ್ವ ಪರಿಸರ ದಿನಾಚರಣೆ: ಕಾಂಡ್ಲಾ ಸಸಿ ಜಾಗೃತಿ ಕಾರ್ಯಕ್ರಮ

Advertisement

ಕುಂದಾಪುರ: ಕಡಲ ತೀರದ ಆವಾಸ ಸ್ಥಾನದ ರಕ್ಷಣೆಯಲ್ಲಿ ಕಾಂಡ್ಲಾ ವನವು ಮಹತ್ವದ ಪಾತ್ರ ಹಾಗೂ ಪರಿಸರದ ಸಮತೊಲನದಲ್ಲಿ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕುಂದಾಪುರದ ಕೊಡಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಕಾಂಡ್ಲಾ ಸಸಿ ನೆಡುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮಾಧ್ಯಮದ ಮೂಲಕ ವಿಶ್ವ ಪರಿಸರ ದಿನವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕಿರಣ್ ಕೊಡ್ಗಿ ಮತ್ತು ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.