ಲಘು ವಿಮಾನ ಪತನ, ಕೂದಲೆಳೆ ಅಂತರದಲ್ಲಿ ಪೈಲಟ್‌ಗಳು ಪಾರು

Advertisement

ಚಾಮರಾಜನಗರ: ಲಘು ವಿಮಾನ ಪತನವಾಗಿದ್ದು, ಕೂದಲೆಳೆ ಅಂತರದಲ್ಲಿ ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾದ ಘಟನೆ ಜಿಲ್ಲೆಯ ಭೋಗಪುರದ ಹೊರವಲಯದ ಕೆ. ಮೂಕಹಳ್ಳಿಯಲ್ಲಿ ನಡೆದಿದೆ.
ಇದೊಂದು ಸೇನಾ ತರಬೇತಿ ವಿಮಾನವಾಗಿದ್ದು, ವಿಂಗ್ ಕಮಾಂಡರ್ ತೇಜಪಾಲ್ ಅವರಿಂದ ಭೂಮಿಕಾ ಅವರಿಗೆ ತರಬೇತಿ ನೀಡಲು ಬಂದಿದ್ದರು. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ವಿಮಾನ ಪತನವಾಗಿದೆ.
ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪೈಲಟ್‌ಗಳು ಪ್ಯಾರಾಚೂಟ್‌ಗಳ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಇಬ್ಬರು ಪೈಲಟ್‌ಗಳನ್ನು ಹೆಲಿಕಾಪ್ಟರ್‌ನಲ್ಲಿ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ ಸಂಪೂರ್ಣ ಸುಟ್ಟು ಬೆಂಕಿಗೆ ಆಹುತಿಯಾಗಿದೆ.