ಮೋದಿಗೆ ಮಂಗಳ ಸೂತ್ರದ ಬೆಲೆ ಗೊತ್ತಾ..?

Advertisement

ಕಲಬುರಗಿ: ಮೋದಿಗೆ ಮಂಗಳ ಸೂತ್ರದ ಬೆಲೆ ಗೊತ್ತಾ..? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಪ್ರಧಾನಿ ಮೋದಿ ಮಂಗಳಸೂತ್ರದ ಹೇಳಿಕೆ ಪ್ರತಿಕ್ರಿಯಿಸಿದ್ದು ಸೋನಿಯಾ ಗಾಂಧಿ ದೇಶಕ್ಕಾಗಿ ಮಂಗಳಸೂತ್ರ ಬಲಿಕೊಟ್ರು, ಮೋದಿಯ ದ್ವೇಷದ ಭಾಷಣದ ವಿರುದ್ದ ಯಾಕೆ ಕ್ರಮ ಇಲ್ಲ ಮೋದಿಗೆ ಆಯೋಗ ಒಂದು ಒಂದು ನೋಟಿಸ್ ಕೊಟ್ಟಿಲ್ಲ. ಚುನಾವಣೆ ಎಲ್ಲರಿಗೂ ಸಮಾನವಗಿ ನಡೆಯತಿಲ್ಲ. ಆಯೋಗ ಮೋದಿ ಮೇಲೆ ದೂರು ದಾಖಲಿಸಿಕೊಳ್ಳುತ್ತಿಲ್ಲ. ಚುನಾವಣಾ ಆಯೋಗ ಕೇಂದ್ರವನ್ನ ರಕ್ಷಿಸುತ್ತಿದೆ ಎಂದಿದ್ದಾರೆ.