ಮಾಜಿ ಶಾಸಕ, ಜನತಾ ಪರಿವಾರದ ಹಿರಿಯ ನಾಯಕ ಕಂದಕೂರು ಇನ್ನಿಲ್ಲ

Advertisement

ಯಾದಗಿರಿ : ಜಿಲ್ಲೆಯ ಹಿರಿಯ ರಾಜಕಾರಣಿ, ಜನತಾ ಪರಿವಾರದ ಧುರೀಣ, ಗುರುಮಠಕಲ್ ಮಾಜಿ ಶಾಸಕರಾದ ನಾಗನಗೌಡ ಕಂದಕೂರು ರವಿವಾರ ನಿಧನರಾಗಿದ್ದಾರೆ.
ಯಾದಗಿರಿ ನಗರದಲ್ಲಿನ ನಿವಾಸದಲ್ಲಿ ರವಿವಾರ ಬೆಳಿಗ್ಗೆ ಅಸ್ವಸ್ಥರಾದ ಅವರನ್ನು ಪಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ರವಿವಾರ ಸಂಜೆಯವರೆಗೆ ನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಜ. 29 ರಂದು ಸೋಮವಾರ ಮಧ್ಯಾಹ್ನ ಗುರುಮಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ 2018 ರಲ್ಲಿ ಗುರುಮಠಕಲ್ ಶಾಸಕರಾಗಿದ್ದ ಅವರು, 2023 ರಲ್ಲಿ ತಮ್ಮ ಪುತ್ರ ಶರಣಗೌಡರನ್ನು ಶಾಸಕರನ್ನಾಗಿ ಆಯ್ಕೆ ಮಾಡುವಲ್ಲಿ ಶ್ರಮಿಸಿದವರು. ಜಿಲ್ಲೆಯಲ್ಲಿ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದ ಅವರು ಕೊನೆಯವರೆಗೆ ಆ ಪಕ್ಷದಲ್ಲಿಯೇ ಸೇವೆ ಮಾಡುವ ಮೂಲಕ ಪಕ್ಷನಿಷ್ಟೆ ಮೆರೆದವರು.ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ನಿಕಟವರ್ತಿ ಆಗಿದ್ದವರು ನಾಗನಗೌಡ ಅಂದರೆ ದೇವೇಗೌಡ ಕುಟುಂಬಕ್ಕೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ನಾಗನಗೌಡ ನಿಧನಕ್ಕೆ ಅನೇಕರು ಗಣ್ಯರು ಸಂತಾಪ ಸೂಚಿಸಿದ್ದಾರೆ.