ಬರದ ನಾಡಲ್ಲ: ಜಲದ ನಾಡು!

Advertisement

ಬೆಂಗಳೂರು: ಅಂತರಜಲ ಹೆಚ್ಚಿ, ಬಸವನಾಡು ಜಲಸಂಪನ್ಮೂಲವಾಗುತ್ತಿದೆ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೆರೆ ತುಂಬುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕಾರಣ ಅಂತರಜಲ ಹೆಚ್ಚಿ, ಬಸವನಾಡು ಜಲಸಂಪನ್ಮೂಲವಾಗುತ್ತಿದೆ…

ಬಬಲೇಶ್ವರ ಮತ ಕ್ಷೇತ್ರದ ಮಮದಾಪುರ ವಿರಕ್ತಮಠದ ಜಮೀನಿನಲ್ಲಿ ಬುಧವಾರ ಕೊರೆಸಿದ ಬೋರ್ ನಿಂದ 4 ಇಂಚು ನೀರು ದೊರೆತಿದ್ದು, ಪೂಜ್ಯ ಸ್ವಾಮಿಗಳಾದ ಶ್ರೀ ಅಭಿನವ ಮುರುಗೇಂದ್ರ ಮಹಾಸ್ವಾಮಿಗಳು ಸಂತಸಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕೆರೆ ತುಂಬಿಸಿದ ಫಲವಾಗಿಯೇ ಅಂತರಜಲ ಹೆಚ್ಚಿ, ಬೋರ್ ನಲ್ಲಿ ನೀರು ಬರಲು ಕಾರಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಪೂಜ್ಯರ ಮಾತುಗಳು ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡಿದೆ.

ಜನಪ್ರತಿನಿಧಿಯಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೆರೆ ತುಂಬುವ ಯೋಜನೆಗಳು ನಮ್ಮೆಲ್ಲ ಜನರ ಕೈ ಹಿಡಿದಿರುವುದು ನನಗೂ ತೃಪ್ತಿ ತಂದಿದೆ. ಅಭಿವೃದ್ಧಿಯ ಪರ್ವ ಮುಂದುವರೆಯಲಿದೆ ಎಂದಿದ್ದಾರೆ.