ನೇಹಾ ಪ್ರಕರಣ: ರಾಜಕೀಯಕ್ಕಾಗಿ ಬಳಸಬೇಡಿ

Advertisement

ಹಾವೇರಿ: ಬಿಜೆಪಿಯವರು ಕೊಟ್ಟ ಭರವಸೆಗಳಲ್ಲಿ ಒಂದೂ ಈಡೇರಿಸಿಲ್ಲ, ನುಡಿದಂತೆ ನಡೆದಿಲ್ಲ ಎಂದು ಮಾಜಿ ಸಚಿವ ವಿನಯ್​​​ ಕುಲಕರ್ಣಿ ಹೇಳಿದ್ದಾರೆ.
ಹಾವೇರಿಯಲ್ಲಿ ಇಂದು ಚುನಾವಣಾ ಪ್ರಚಾರ ಕುರಿತು ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬರ ಬಂದಾಗ ಎಲ್ಲಿದ್ದರು. ಪ್ರವಾಹ ಬಂದಾಗ ಎಲ್ಲಿ ಬಂದರು?, ಹೆಲಿಕಾಪ್ಟರ್​ನಲ್ಲಿಯಾದರು ಬರಬೇಕಿತ್ತಲ್ಲವಾ?. ಕೊರೋನಾ ಟೈಮ್​ನಲ್ಲಿ ಎಲ್ಲಿದ್ದರು ಮೋದಿ? ಎಂದು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು ಈ ರೀತಿಯ ಪ್ರಕರಣಗಳನ್ನು ಚುನಾವಣೆಗೆ ಬಳಸಿಕೊಳ್ಳಬಾರದು. ಇದು 200% ಖಂಡಿಸೋ ಘಟನೆ ಎಂದರು.