ಹಾವೇರಿ: ಬಿಜೆಪಿಯವರು ಕೊಟ್ಟ ಭರವಸೆಗಳಲ್ಲಿ ಒಂದೂ ಈಡೇರಿಸಿಲ್ಲ, ನುಡಿದಂತೆ ನಡೆದಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಹಾವೇರಿಯಲ್ಲಿ ಇಂದು ಚುನಾವಣಾ ಪ್ರಚಾರ ಕುರಿತು ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬರ ಬಂದಾಗ ಎಲ್ಲಿದ್ದರು. ಪ್ರವಾಹ ಬಂದಾಗ ಎಲ್ಲಿ ಬಂದರು?, ಹೆಲಿಕಾಪ್ಟರ್ನಲ್ಲಿಯಾದರು ಬರಬೇಕಿತ್ತಲ್ಲವಾ?. ಕೊರೋನಾ ಟೈಮ್ನಲ್ಲಿ ಎಲ್ಲಿದ್ದರು ಮೋದಿ? ಎಂದು ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿದ ಅವರು ಈ ರೀತಿಯ ಪ್ರಕರಣಗಳನ್ನು ಚುನಾವಣೆಗೆ ಬಳಸಿಕೊಳ್ಳಬಾರದು. ಇದು 200% ಖಂಡಿಸೋ ಘಟನೆ ಎಂದರು.