ಜೈಶ್ರೀರಾಮ ಎನ್ನುವವರಿಗೆ ಬೂಟಿನಿಂದ ಒದೆಯಬೇಕು: ಮುಸ್ಲಿಂ ಮುಖಂಡನ ಹೇಳಿಕೆ ವೈರಲ್

Advertisement

ರಾಯಚೂರು: ಜೈಶ್ರೀರಾಮ ಎನ್ನುವವರನ್ನು ಪೊಲೀಸರು ಬೂಟ್‌ನಿಂದ ಒದೆಯಬೇಕು ಎಂದು ಬಷಿರುದ್ದೀನ್ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋ ಹಳೆಯದಾಗಿದೆ ಎನ್ನಲಾಗುತ್ತಿದೆ.
ನಗರದ ಕಾಟೆ ದರವಾಜ ಕೋಟೆ ಜಾಗದಲ್ಲಿರುವ ಶರೀಫ್ ಹಜರತ್ ಸೈಯದ್ ಷಾ ಅಲ್ಲಾವುದ್ದೀನ್ ಖಾದ್ರಿ ದರ್ಗಾ ಬಳಿ ಕಮಾನು ನಿರ್ಮಿಸಲಾಗುತ್ತಿರುವ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. ಆ ಸಂದರ್ಭದಲ್ಲಿ ಮುಸ್ಲಿಂ ಮುಖಂಡರ ಸಭೆ ನಡೆಸಿದಾಗ ಬಷಿರುದ್ದೀನ್ ಅವರು ಮಾತನಾಡಿರುವ ವಿವಾದಿತ ಸ್ಥಳದಲ್ಲಿ ಬಂದು ಜೈ ಶ್ರೀರಾಮ ಎನ್ನವವರನ್ನು ಪೊಲೀಸರು ಬೂಟ್‌ಗಾಲಿನಿಂದ ಒದೆಯಬೇಕು ಎಂದು ಹೇಳಿರುವ ವಿಡಿಯೋವನ್ನು ಈಗ ವೈರಲ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಡಿಯೋವನ್ನು ತಿರುಚಿ ವೈರಲ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ಬಿಜೆಪಿ ಪಕ್ಷದವರು ಬಷಿರುದ್ದೀನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.