ಕಾಂಗ್ರೆಸ್‌ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ

Advertisement

ಇಳಕಲ್: ಸಂಜೆ ೬ ಗಂಟೆಗೆ ವಿಜಯಪುರ ಶಾಸಕ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಬರುತ್ತಾರೆ ಎಂದು ಹೇಳಿದ್ದರೂ ರಾತ್ರಿ ೯-೪೫ ಕ್ಕೆ ಕಂಠಿ ಸರ್ಕಲ್‌ಗೆ ಬಂದ ಅವರನ್ನು ಕಿಕ್ಕಿರಿದು ನೆರೆದಿದ್ದ ಜನರು ಭವ್ಯ ಸ್ವಾಗತ ನೀಡಿದರು.
ಸಮಯ ಇಲ್ಲದ ಕಾರಣ ನೇರವಾಗಿ ಭಾಷಣ ಆರಂಭಿಸಿದ ಅವರು ಬಾಗಲಕೋಟೆಯಲ್ಲಿ ಮೊನ್ನೆ ಸಿಎಂ ಡಿಸಿಎಂ ಬಂದರೂ ಇಷ್ಟು ಜನ ಸೇರಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಂದಿನ ಜನ್ಮ ಇದ್ದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳಿದ್ದಾರೆ. ಹಾಲುಮತ ಸಮಾಜ ಈ ರಾಜ್ಯದಲ್ಲಿ ಅದ್ಭುತ ಸಮಾಜವಾಗಿದ್ದು ಅಂತಹ ಸಮಾಜದ ಬಗ್ಗೆ ಅಸಡ್ಡೆ ತೋರಿಸಿದ್ದಾರೆ. ನನಗೇನಾದರೂ ಮುಂದಿನ ಜನ್ಮ ಇದ್ದರೆ ಹಾಲುಮತ ಸಮಾಜದಲ್ಲಿ ಹುಟ್ಟಿಸು ಎಂದು ಕೇಳಿಕೊಳ್ಳುತ್ತೇನೆ ಎಂದರು.
೨೭೩ ಎಂಪಿಗಳು ಆರಿಸಿ ಬಂದರೆ ಮಾತ್ರ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯ ಆದರೆ ೨೩೪ ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿರುವ ಕಾಂಗ್ರೆಸ್ ಎಲ್ಲಿಂದ ಅಧಿಕಾರ ಹಿಡಿಯುತ್ತೆ ಎಂದು ಕುಟುಕಿದ ಅವರು ರಾಜ್ಯ ಸರಕಾರದ ಗ್ಯಾರಂಟಿಗಳಿಗೆ ಯಾವುದೇ ವಾರಂಟಿ ಇಲ್ಲ ಎಂದು ಹೇಳಿದರು.
ಶಾಸಕ ವಿಜಯಾನಂದ ಕಾಶಪ್ಪನವರ ತಮ್ಮ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ ಅದಕ್ಕೆ ಅಂಜುವ ಅಳಕುವ ವ್ಯಕ್ತಿ ನಾನಲ್ಲ ನಾನೂ ವಿಜಯಪುರದ ಗೌಡನಿದ್ದೇನೆ ವಿಜಯಾನಂದ ನಿಜವಾದ ಗಂಡಸೇ ಆಗಿದ್ದರೇ ತಮ್ಮ ಸರಕಾರದಿಂದ ಪಂಚಮಸಾಲಿ ಸಮಾಜಕ್ಕೆ ಟುಎ ಕೊಡಿಸಲಿ ಎಂದು ಸವಾಲು ಹಾಕಿದರು.
ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿದೆ ಅದಕ್ಕಾಗಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಿ ಸಿ ಗದ್ದಿಗೌಡರ ಅವರನ್ನು ಬಹುಮತದಿಂದ ಆರಿಸಿ ತನ್ನಿ ಎಂದು ಕರೆಕೊಟ್ಟರು.
ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ಮೊದಲು ಮಂಥ್ಲಿ ಎಂಬುದು ಮಾತ್ರ ಚಲಾವಣೆಯಲ್ಲಿ ಇತ್ತು ಆದರೆ ವಿಜಯಾನಂದ ಕಾಶಪ್ಪನವರ ಆಯ್ಕೆಯಾಗಿ ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದೇ ಮಂಥ್ಲಿ ಹೋಗಿ ಡೇಲಿ ಕಲೆಕ್ಸನ್ ಗೆ ಬಂದು ನಿಂತಿದೆ ೧೪೦೦ ಹಕ್ಕು ಪತ್ರಗಳನ್ನು ಹೋದ ಬಾರಿ ನಾವು ತಂದಿದ್ದರೂ ಅದನ್ನು ಅಧಿಕಾರಿ ಮಟ್ಟದಲ್ಲಿ ತಡೆ ಹಿಡಿದು ಈಗ ಅವುಗಳನ್ನು ಹಂಚಿ ನಾನು ಮಾಡಿದೆ ಎಂದು ಎದೆ ತಟ್ಟಿಕೊಳ್ಳುತ್ತಿದ್ದಾನೆ ಧೈರ್ಯ ಇದ್ದರೆ ಕೂಡಲಸಂಗಮನಾಥನ ಆಣೆ ಮಾಡಲು ಸಿದ್ದರಿದ್ದಾರಾ ಎಂದು ಪ್ರಶ್ನಿಸಿದರು.