ಇಂದು ರಾಜ್ಯಕ್ಕೆ ರಾಹುಲ್

Advertisement

ಬೆಂಗಳೂರು: ಚುನಾವಣೆ ಘೋಷಣೆಯ  ನಂತರ ರಾಜ್ಯಕ್ಕೆ ಆಗಮಿಸಲಿರುವ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿಯವರು ಮಂಡ್ಯದಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಸ್ಟಾರ್‌ ಚಂದ್ರು ಪರ ರಾಹುಲ್‌‌ ಮತಯಾಚನೆ ಮಾಡಲಿದ್ದಾರೆ, ಮಂಡ್ಯದಿಂದ ರಾಹುಲ್‌ಗಾಂಧಿ ಕೋಲಾರಕ್ಕೆ ತೆರಳಿ ಕ್ಯಾಂಪೇನ್‌‌ ನಡೆಸಲಿದ್ದು. ಜೆಡಿಎಸ್‌‌ ಪಾಲಿನ ಭದ್ರಕೋಟೆಯಲ್ಲಿ ನಾಯಕ ರಾಹುಲ್‌ ಗಾಂಧಿ , ಮಂಡ್ಯ ಹಾಗೂ ಕೋಲಾರದ ಮಾಲೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.