<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>#pralhadjoshi Archives - Samyukta Karnataka</title>
	<atom:link href="https://samyuktakarnataka.in/tag/pralhadjoshi/feed/" rel="self" type="application/rss+xml" />
	<link>https://samyuktakarnataka.in/tag/pralhadjoshi/</link>
	<description>News that connects you to Karnataka since 1921</description>
	<lastBuildDate>Sat, 04 Jul 2026 10:17:36 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.5</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>#pralhadjoshi Archives - Samyukta Karnataka</title>
	<link>https://samyuktakarnataka.in/tag/pralhadjoshi/</link>
	<width>32</width>
	<height>32</height>
</image> 
	<item>
		<title>ಸಾಮೂಹಿಕ ವಿತರಣೆ ಸರಿಯಲ್ಲ: SIR ಪ್ರಕ್ರಿಯೆ ವಿರುದ್ಧ ಜೋಶಿ ಆಕ್ಷೇಪ</title>
		<link>https://samyuktakarnataka.in/districts/dharwad/pralhad-joshi-voter-list-special-revision-blo-survey-hubballi-allegations/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 04 Jul 2026 10:15:16 +0000</pubDate>
				<category><![CDATA[ಧಾರವಾಡ]]></category>
		<category><![CDATA[#pralhadjoshi]]></category>
		<category><![CDATA[hubli]]></category>
		<guid isPermaLink="false">https://samyuktakarnataka.in/?p=102198</guid>

					<description><![CDATA[<p>ಹುಬ್ಬಳ್ಳಿ: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision &#8211; SIR) ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಕುಟುಂಬ ಸಮೇತ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಹುಬ್ಬಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ಚುನಾವಣಾ ಆಯೋಗದಿಂದ ನಿಯೋಜಿಸಲಾದ ಬೂತ್ ಮಟ್ಟದ ಅಧಿಕಾರಿಗಳು (BLO) ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸಿರುವುದಾಗಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಇದನ್ನೂ [&#8230;]</p>
<p>The post <a href="https://samyuktakarnataka.in/districts/dharwad/pralhad-joshi-voter-list-special-revision-blo-survey-hubballi-allegations/">ಸಾಮೂಹಿಕ ವಿತರಣೆ ಸರಿಯಲ್ಲ: SIR ಪ್ರಕ್ರಿಯೆ ವಿರುದ್ಧ ಜೋಶಿ ಆಕ್ಷೇಪ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಹುಬ್ಬಳ್ಳಿ: ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision &#8211; SIR) ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಕುಟುಂಬ ಸಮೇತ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.</p>



<p class="wp-block-paragraph">ಹುಬ್ಬಳ್ಳಿಯಲ್ಲಿರುವ ತಮ್ಮ ನಿವಾಸಕ್ಕೆ ಚುನಾವಣಾ ಆಯೋಗದಿಂದ ನಿಯೋಜಿಸಲಾದ ಬೂತ್ ಮಟ್ಟದ ಅಧಿಕಾರಿಗಳು (BLO) ಭೇಟಿ ನೀಡಿದ ಸಂದರ್ಭದಲ್ಲಿ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸಿರುವುದಾಗಿ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/haveri/haveri-navy-soldier-yashodhara-vaddar-martyred-kochi-firing-training/">ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ</a></strong></strong></p>



<p class="wp-block-paragraph">ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, &#8220;ನಿಮ್ಮ ಮನೆಗೂ ಆಗಮಿಸುವ ಬೂತ್ ಮಟ್ಟದ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿ. ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸುವ ಮೂಲಕ ನಿಮ್ಮ ಹೆಸರು ಮತ್ತು ವಿವರಗಳು ಮತದಾರರ ಪಟ್ಟಿಯಲ್ಲಿ ನಿಖರವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ಅತ್ಯಂತ ಮಹತ್ವದ್ದು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ತಪ್ಪದೇ ಎಲ್ಲರೂ ಪಾಲ್ಗೊಳ್ಳೋಣ&#8221; ಎಂದು ಮನವಿ ಮಾಡಿದ್ದಾರೆ.</p>



<p class="wp-block-paragraph"><strong>SIR ಪ್ರಕ್ರಿಯೆ ಕುರಿತು ಆಕ್ಷೇಪ: </strong>ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. &#8220;ಎನ್ಯುಮರೇಷನ್ ಫಾರ್ಮ್‌ಗಳನ್ನು ಸಾಮೂಹಿಕವಾಗಿ ವಿತರಿಸಲಾಗುತ್ತಿದೆ. ಇದು ಚುನಾವಣಾ ಆಯೋಗದ ಉದ್ದೇಶಕ್ಕೆ ವಿರುದ್ಧವಾಗಿದೆ. ಎಸ್ಐಆರ್ ಪ್ರಕ್ರಿಯೆಯನ್ನು ಈ ರೀತಿಯಲ್ಲಿ ನಡೆಸುವುದು ಸರಿಯಾದ ವಿಧಾನವಲ್ಲ&#8221; ಎಂದು ಅವರು ಹೇಳಿದರು.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/bengaluru/bengaluru-kr-circle-bmtc-bus-tempo-chain-accident-13-injured/">KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ</a></strong></strong></p>



<p class="wp-block-paragraph"><strong>ಮೂರು ಕುಟುಂಬಗಳಿಗೆ 50 ಫಾರ್ಮ್ ನೀಡಿದ ಆರೋಪ : </strong>ಹುಬ್ಬಳ್ಳಿಯ ವಾರ್ಡ್ ಸಂಖ್ಯೆ 69, ಬೂತ್ ಸಂಖ್ಯೆ 116ರಲ್ಲಿ ಕೇವಲ ಮೂರು ಕುಟುಂಬಗಳಿಗೆ ಸುಮಾರು 50 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಿರುವ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಈ ಕುರಿತು ಬಿಎಲ್‌ಒಗಳು ಆಕ್ಷೇಪ ವ್ಯಕ್ತಪಡಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.</p>



<p class="wp-block-paragraph"><strong>ಸುಪ್ರೀಂ ಕೋರ್ಟ್ ನಿರ್ದೇಶನ ಉಲ್ಲೇಖ :</strong> ಸುಪ್ರೀಂ ಕೋರ್ಟ್ ನಿರ್ದೇಶನದಂತೆ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯ ಉದ್ದೇಶ ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಅರ್ಹತೆಯಿಲ್ಲದ ಹೆಸರುಗಳನ್ನು ಗುರುತಿಸಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದಾಗಿದೆ. ಆದರೆ ಸಾಮೂಹಿಕವಾಗಿ ಫಾರ್ಮ್‌ಗಳನ್ನು ವಿತರಿಸಿ ಭರ್ತಿ ಮಾಡಿಸುವುದು ಈ ಪ್ರಕ್ರಿಯೆಯ ಮೂಲ ಉದ್ದೇಶವಲ್ಲ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟರು.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/districts/davanagere/srisaila-seer-demands-probe-ayodhya-ram-temple-fund-misuse-caste-census-reaction/" type="link" id="https://samyuktakarnataka.in/districts/davanagere/srisaila-seer-demands-probe-ayodhya-ram-temple-fund-misuse-caste-census-reaction/">ಮೀಸಲಾತಿಗೆ ಜಾತಿಗಿಂತ ಆರ್ಥಿಕ ಸ್ಥಿತಿ ಮುಖ್ಯ: ಶ್ರೀಶೈಲ ಜಗದ್ಗುರುಗಳು</a></strong></strong></p>



<p class="wp-block-paragraph"><strong>ಬಿಜೆಪಿಯಲ್ಲಿ ಚರ್ಚೆ : </strong>ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಂಡುಬರುತ್ತಿರುವ ಲೋಪದೋಷಗಳ ಬಗ್ಗೆ ಭಾರತೀಯ ಜನತಾ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.</p>



<p class="wp-block-paragraph">ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ, ನಾಗರಿಕರು ತಮ್ಮ ವಿವರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿರುವ ನಡುವೆಯೇ, ಪ್ರಕ್ರಿಯೆಯ ಅನುಷ್ಠಾನದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಮುಂದುವರಿದಿವೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="pDuFJkXGel"><a href="https://samyuktakarnataka.in/districts/uttara-kannada/honnavar-doddahittalakere-road-bridge-demand-villagers-struggle-monsoon/">ಮೃತದೇಹವನ್ನೇ ಕುತ್ತಿಗೆ ಮಟ್ಟದ ನೀರಲ್ಲಿ ಹೊತ್ತು ಸಾಗಿಸಿದ ಗ್ರಾಮಸ್ಥರು</a></blockquote><iframe class="wp-embedded-content" sandbox="allow-scripts" security="restricted"  title="“ಮೃತದೇಹವನ್ನೇ ಕುತ್ತಿಗೆ ಮಟ್ಟದ ನೀರಲ್ಲಿ ಹೊತ್ತು ಸಾಗಿಸಿದ ಗ್ರಾಮಸ್ಥರು” — Samyukta Karnataka" src="https://samyuktakarnataka.in/districts/uttara-kannada/honnavar-doddahittalakere-road-bridge-demand-villagers-struggle-monsoon/embed/#?secret=WEerRZfzbL#?secret=pDuFJkXGel" data-secret="pDuFJkXGel" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/dharwad/pralhad-joshi-voter-list-special-revision-blo-survey-hubballi-allegations/">ಸಾಮೂಹಿಕ ವಿತರಣೆ ಸರಿಯಲ್ಲ: SIR ಪ್ರಕ್ರಿಯೆ ವಿರುದ್ಧ ಜೋಶಿ ಆಕ್ಷೇಪ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಹುಬ್ಬಳ್ಳಿ-ಧಾರವಾಡಕ್ಕೆ ದೇಶದ ಅತ್ಯಾಧುನಿಕ &#8216;ಕಸದಿಂದ ಇಂಧನ&#8217; ಘಟಕ</title>
		<link>https://samyuktakarnataka.in/districts/dharwad/hubballi-dharwad-waste-to-energy-plant-successfully-completes-trial-run/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 26 Jun 2026 11:43:48 +0000</pubDate>
				<category><![CDATA[ಧಾರವಾಡ]]></category>
		<category><![CDATA[#pralhadjoshi]]></category>
		<category><![CDATA[hubli]]></category>
		<guid isPermaLink="false">https://samyuktakarnataka.in/?p=101557</guid>

					<description><![CDATA[<p>ದಕ್ಷಿಣ ಭಾರತದ ಮೊದಲ &#8216;ವೇಸ್ಟ್ ಟು ಚಾರ್ಕೋಲ್&#8217; ಘಟಕ ಹುಬ್ಬಳ್ಳಿಯಲ್ಲಿ: ಪ್ರತಿದಿನ 200 ಟನ್ ಕಸ ಸಂಸ್ಕರಣೆ &#8211; ₹157 ಕೋಟಿ ವೆಚ್ಚದ ತ್ಯಾಜ್ಯದಿಂದ ಹಸಿರು ಇದ್ದಿಲು ಘಟಕ ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ &#8216;ಕಸದಿಂದ ಇಂಧನ&#8217; (Waste-to-Energy) ಯೋಜನೆ ಮಹತ್ವದ ಹಂತ ತಲುಪಿದ್ದು, ಯೋಜನೆಯ ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ [&#8230;]</p>
<p>The post <a href="https://samyuktakarnataka.in/districts/dharwad/hubballi-dharwad-waste-to-energy-plant-successfully-completes-trial-run/">ಹುಬ್ಬಳ್ಳಿ-ಧಾರವಾಡಕ್ಕೆ ದೇಶದ ಅತ್ಯಾಧುನಿಕ &#8216;ಕಸದಿಂದ ಇಂಧನ&#8217; ಘಟಕ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಕ್ಷಿಣ ಭಾರತದ ಮೊದಲ &#8216;ವೇಸ್ಟ್ ಟು ಚಾರ್ಕೋಲ್&#8217; ಘಟಕ ಹುಬ್ಬಳ್ಳಿಯಲ್ಲಿ: ಪ್ರತಿದಿನ 200 ಟನ್ ಕಸ ಸಂಸ್ಕರಣೆ &#8211; ₹157 ಕೋಟಿ ವೆಚ್ಚದ ತ್ಯಾಜ್ಯದಿಂದ ಹಸಿರು ಇದ್ದಿಲು ಘಟಕ</strong></p>



<p class="wp-block-paragraph">ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ &#8216;ಕಸದಿಂದ ಇಂಧನ&#8217; (Waste-to-Energy) ಯೋಜನೆ ಮಹತ್ವದ ಹಂತ ತಲುಪಿದ್ದು, ಯೋಜನೆಯ ಪ್ರಾಯೋಗಿಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.</p>



<p class="wp-block-paragraph">ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ಗಬ್ಬೂರು ಸಮೀಪ ನಿರ್ಮಾಣವಾಗುತ್ತಿರುವ ದಕ್ಷಿಣ ಭಾರತದ ಮೊದಲ ಹಾಗೂ ಅತ್ಯಾಧುನಿಕ ಪರಿಸರ ಸ್ನೇಹಿ &#8216;ವೇಸ್ಟ್ ಟು ಚಾರ್ಕೋಲ್&#8217; ಘಟಕಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.</p>



<p class="wp-block-paragraph"><strong><strong><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/sports/hubballi-shooter-aishwarya-balehosur-wins-silver-at-issf-world-junior-championship/">ISSF ವಿಶ್ವ ಜೂನಿಯರ್ ಶೂಟಿಂಗ್: ಹುಬ್ಬಳ್ಳಿಯ ಐಶ್ವರ್ಯಾಗೆ ಬೆಳ್ಳಿ ಪದಕ</a></strong></strong></strong></strong></p>



<p class="wp-block-paragraph">ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಹಾಗೂ ಎನ್‌ಟಿಪಿಸಿಯ ಅಂಗಸಂಸ್ಥೆಯಾದ ಎನ್‌ವಿವಿಎನ್ (NVVN) ಸಹಭಾಗಿತ್ವದಲ್ಲಿ ₹157 ಕೋಟಿ ವೆಚ್ಚದಲ್ಲಿ 8 ಎಕರೆ ಪ್ರದೇಶದಲ್ಲಿ ಈ ಘಟಕ ನಿರ್ಮಾಣವಾಗುತ್ತಿದೆ. ಪ್ರತಿದಿನ ಸುಮಾರು 200 ಟನ್ ಒಣ ಕಸವನ್ನು ಸಂಸ್ಕರಿಸಿ, 120 ಟನ್ &#8216;ಟೊರಿಫೈಡ್ ಚಾರ್ಕೋಲ್&#8217; ಅಥವಾ ಹಸಿರು ಇದ್ದಿಲು ಉತ್ಪಾದಿಸುವ ಸಾಮರ್ಥ್ಯ ಈ ಘಟಕಕ್ಕಿದೆ.</p>



<p class="wp-block-paragraph">ಈಗಾಗಲೇ ಘಟಕದಲ್ಲಿ ಸತತ 72 ಗಂಟೆಗಳ ಕಾಲ ಯಶಸ್ವಿ ಟ್ರಯಲ್ ರನ್ ನಡೆಸಲಾಗಿದ್ದು, ಸುಮಾರು 250 ಟನ್ ಚಾರ್ಕೋಲ್ ಉತ್ಪಾದಿಸಲಾಗಿದೆ. ತ್ಯಾಜ್ಯದಿಂದ ಶೇ.30ರಿಂದ 35ರಷ್ಟು ಹಸಿರು ಇದ್ದಿಲು ತಯಾರಿಸುವ ತಂತ್ರಜ್ಞಾನವನ್ನು ಹೊಂದಿರುವ ರಾಜ್ಯದ ಮೊದಲ ಘಟಕ ಇದಾಗಿದೆ.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/india/champat-rai-resigns-from-ram-temple-trust-amid-donation-misuse-allegations/">ರಾಮ ಮಂದಿರ ದೇಣಿಗೆ ಪ್ರಕರಣ: ಟ್ರಸ್ಟ್‌ನ ಇಬ್ಬರು ಪ್ರಮುಖರ ರಾಜೀನಾಮೆ</a></strong></strong></p>



<p class="wp-block-paragraph">ಅವಳಿ ನಗರದಲ್ಲಿ ಪ್ರತಿದಿನ 500ರಿಂದ 600 ಟನ್ ಘನ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಸುಮಾರು 200 ಟನ್ ಒಣ ಕಸವನ್ನು ಈ ಘಟಕವೇ ಸಂಸ್ಕರಿಸಲಿದೆ. ಇದರಿಂದ ನಗರದಲ್ಲಿನ ಕಸದ ಗುಡ್ಡೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.</p>



<p class="wp-block-paragraph">ಇಲ್ಲಿ ಉತ್ಪಾದನೆಯಾಗುವ ಹಸಿರು ಇದ್ದಿಲನ್ನು ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಇದರಿಂದ ಶೇ.60ರಿಂದ 70ರಷ್ಟು ಕಲ್ಲಿದ್ದಲು ಬಳಕೆ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಉತ್ತೇಜನ ಸಿಗಲಿದೆ.</p>



<p class="wp-block-paragraph"><strong><strong>ಇದನ್ನೂ ಓದಿ:<a href="https://samyuktakarnataka.in/districts/davanagere/famous-bodybuilder-dies-of-heart-attack/"> </a><a href="https://samyuktakarnataka.in/news/karnataka/kea-helpline-online-services-to-remain-suspended-on-june-26/">ತಾಂತ್ರಿಕ ನಿರ್ವಹಣೆ ಹಿನ್ನೆಲೆ: ಇಂದು ಇಡೀ ದಿನ KEA ಹೆಲ್ಪ್‌ಲೈನ್ ಬಂದ್</a></strong></strong></p>



<p class="wp-block-paragraph">ಈ ಯೋಜನೆ &#8216;ಸ್ವಚ್ಛ ಭಾರತ&#8217; ಮತ್ತು &#8216;ಆತ್ಮನಿರ್ಭರ ಭಾರತ&#8217; ಸಂಕಲ್ಪಗಳಿಗೆ ಪೂರಕವಾಗಿದ್ದು, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ದೇಶದ ಮಾದರಿ ಯೋಜನೆಯಾಗಲಿದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="ONlU07gfE4"><a href="https://samyuktakarnataka.in/news/india/centre-mandates-qr-codes-for-vaccines-anti-cancer-and-other-drugs/">ಕೇಂದ್ರ ಸರ್ಕಾರದ ಹೊಸ ನಿಯಮ: ನಕಲಿ ಔಷಧ ತಡೆಗೆ QR code ಅಸ್ತ್ರ</a></blockquote><iframe class="wp-embedded-content" sandbox="allow-scripts" security="restricted"  title="“ಕೇಂದ್ರ ಸರ್ಕಾರದ ಹೊಸ ನಿಯಮ: ನಕಲಿ ಔಷಧ ತಡೆಗೆ QR code ಅಸ್ತ್ರ” — Samyukta Karnataka" src="https://samyuktakarnataka.in/news/india/centre-mandates-qr-codes-for-vaccines-anti-cancer-and-other-drugs/embed/#?secret=nSyUzDJnzL#?secret=ONlU07gfE4" data-secret="ONlU07gfE4" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/dharwad/hubballi-dharwad-waste-to-energy-plant-successfully-completes-trial-run/">ಹುಬ್ಬಳ್ಳಿ-ಧಾರವಾಡಕ್ಕೆ ದೇಶದ ಅತ್ಯಾಧುನಿಕ &#8216;ಕಸದಿಂದ ಇಂಧನ&#8217; ಘಟಕ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>KUD ರಸ್ತೆ ಸಂಚಾರ ಸಮಸ್ಯೆಗೆ ಅಂತ್ಯ: ರೈಲ್ವೆ ಅಂಡರ್ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜು</title>
		<link>https://samyuktakarnataka.in/districts/dharwad/karnataka-university-rub-dharwad-ready-for-inauguration-after-completion/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 06 Jun 2026 07:57:41 +0000</pubDate>
				<category><![CDATA[ಧಾರವಾಡ]]></category>
		<category><![CDATA[#Dharwad]]></category>
		<category><![CDATA[#pralhadjoshi]]></category>
		<guid isPermaLink="false">https://samyuktakarnataka.in/?p=99975</guid>

					<description><![CDATA[<p>ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ರೈಲ್ವೆ ಗೇಟ್ 29 ಸಮಸ್ಯೆಗೆ ಶಾಶ್ವತ ಪರಿಹಾರ ₹55 ಕೋಟಿ ವೆಚ್ಚದ 900 ಮೀಟರ್ ರೈಲ್ವೆ ಅಂಡರ್ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜು ಧಾರವಾಡ: ಧಾರವಾಡ ನಗರದ ಜನತೆ, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಹಲವು ವರ್ಷಗಳಿಂದ ಎದುರಿಸುತ್ತಿದ್ದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ಕ್ಷಣ ಸಮೀಪಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದ (KUD) ಸಮೀಪ ನಿರ್ಮಾಣವಾಗಿರುವ ರೈಲ್ವೆ ಅಂಡರ್ ಬ್ರಿಡ್ಜ್ (RUB) ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಕೇಂದ್ರ [&#8230;]</p>
<p>The post <a href="https://samyuktakarnataka.in/districts/dharwad/karnataka-university-rub-dharwad-ready-for-inauguration-after-completion/">KUD ರಸ್ತೆ ಸಂಚಾರ ಸಮಸ್ಯೆಗೆ ಅಂತ್ಯ: ರೈಲ್ವೆ ಅಂಡರ್ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಳಿ ರೈಲ್ವೆ ಗೇಟ್ 29 ಸಮಸ್ಯೆಗೆ ಶಾಶ್ವತ ಪರಿಹಾರ ₹55 ಕೋಟಿ ವೆಚ್ಚದ 900 ಮೀಟರ್ ರೈಲ್ವೆ ಅಂಡರ್ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜು</strong></p>



<p class="wp-block-paragraph"><strong>ಧಾರವಾಡ:</strong> ಧಾರವಾಡ ನಗರದ ಜನತೆ, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಹಲವು ವರ್ಷಗಳಿಂದ ಎದುರಿಸುತ್ತಿದ್ದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವ ಕ್ಷಣ ಸಮೀಪಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದ (KUD) ಸಮೀಪ ನಿರ್ಮಾಣವಾಗಿರುವ ರೈಲ್ವೆ ಅಂಡರ್ ಬ್ರಿಡ್ಜ್ (RUB) ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.</p>



<p class="wp-block-paragraph">ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಾಗೂ ಮಾಹಿತಿ ಹಂಚಿಕೊಂಡಿರುವ ಅವರು, ಈ ಯೋಜನೆ ಧಾರವಾಡದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><a href="https://samyuktakarnataka.in/sports/r-praggnanandhaa-becomes-first-indian-to-win-norway-chess-2026-title/">ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ: ಪ್ರಜ್ಞಾನಂದ ಹೊಸ ದಾಖಲೆ</a></strong></p>



<p class="wp-block-paragraph"><strong>ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಯೋಜನೆ :</strong> ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯು ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ ರೈಲ್ವೆ ಗೇಟ್ ಸಂಖ್ಯೆ 29ರ ಬಳಿ ರೈಲು ಸಂಚಾರದ ಕಾರಣದಿಂದಾಗಿ ವಾಹನ ದಟ್ಟಣೆ ಮತ್ತು ವಿಳಂಬ ಸಾಮಾನ್ಯವಾಗಿತ್ತು. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.</p>



<p class="wp-block-paragraph">ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಹಲವು ಜನಪ್ರತಿನಿಧಿಗಳು ಮತ್ತು ನಾಗರಿಕರ ಬೇಡಿಕೆಯ ಮೇರೆಗೆ ಯೋಜನೆಗೆ ವೇಗ ನೀಡಲಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><a href="https://samyuktakarnataka.in/news/india/cockroach-janata-party-jantar-mantar-protest-demanding-dharmendra-pradhan-resignation/">ಶಿಕ್ಷಣ ಸಚಿವರ ವಿರುದ್ಧ ಜಂತರ್ ಮಂತರ್‌ನಲ್ಲಿ CJP ಭಾರೀ ಪ್ರತಿಭಟನೆ</a></strong></p>



<p class="wp-block-paragraph"><strong>₹55 ಕೋಟಿ ವೆಚ್ಚದಲ್ಲಿ ನಿರ್ಮಾಣ :</strong> ರೈಲ್ವೆ ಗೇಟ್ ಸಂಖ್ಯೆ 29ರ ಸಮೀಪ ಸುಮಾರು ₹55 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ರೈಲ್ವೆ ಅಂಡರ್ ಬ್ರಿಡ್ಜ್ ಒಟ್ಟು 900 ಮೀಟರ್ ಉದ್ದ ಹೊಂದಿದೆ. ಯೋಜನೆಯ ಕಾಮಗಾರಿ ಈಗ ಸಂಪೂರ್ಣ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಲೋಕಾರ್ಪಣೆಯ ನಂತರ ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.</p>



<p class="wp-block-paragraph"><strong>ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ :</strong> ಕರ್ನಾಟಕ ವಿಶ್ವವಿದ್ಯಾಲಯ ಉತ್ತರ ಕರ್ನಾಟಕದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಈ ಪ್ರದೇಶಕ್ಕೆ ಆಗಮಿಸುತ್ತಾರೆ. ರೈಲ್ವೆ ಗೇಟ್ ಮುಚ್ಚುವ ಸಂದರ್ಭಗಳಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆ, ಸಮಯ ವ್ಯರ್ಥ ಹಾಗೂ ತುರ್ತು ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಅಡಚಣೆಗಳಿಗೆ ಈ ಅಂಡರ್ ಬ್ರಿಡ್ಜ್ ಪರಿಣಾಮಕಾರಿ ಪರಿಹಾರ ಒದಗಿಸಲಿದೆ. ಇದರಿಂದ ವಾಹನ ಸಂಚಾರ ಹೆಚ್ಚು ಸುಗಮವಾಗುವುದರ ಜೊತೆಗೆ ರಸ್ತೆ ಸುರಕ್ಷತೆಯೂ ಹೆಚ್ಚಾಗುವ ನಿರೀಕ್ಷೆಯಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><em><a href="https://samyuktakarnataka.in/news/india/rare-caracal-spotted-in-kuno-national-park-after-decades/">ಕುನೋ ಕಾಡಿಗೆ ಮರಳಿದ ಅಪರೂಪದ ಅತಿಥಿ ಕಾಡು ಬೆಕ್ಕು (ಕ್ಯಾರಕಲ್)</a></em></strong></p>



<p class="wp-block-paragraph"><strong>ರೈಲ್ವೆ ಇಲಾಖೆಯೊಂದಿಗೆ ನಿರಂತರ ಸಮನ್ವಯ :</strong> ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಕಾರ, ಈ ಯೋಜನೆಗೆ ಅನುಮೋದನೆ ಹಾಗೂ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗಿತ್ತು. ಸಂಚಾರ ಸಮಸ್ಯೆಯ ಗಂಭೀರತೆಯನ್ನು ಮನಗಂಡು ಯೋಜನೆಯನ್ನು ಆದ್ಯತೆಯ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದ್ದು, ಇದೀಗ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.</p>



<p class="wp-block-paragraph"><strong>ಧಾರವಾಡದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ :</strong> ಧಾರವಾಡ ನಗರದಲ್ಲಿ ಇತ್ತೀಚಿನ ವರ್ಷಗಳಲ್ಲಿ ರಸ್ತೆ, ರೈಲ್ವೆ ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಸಮೀಪದ ಈ ರೈಲ್ವೆ ಅಂಡರ್ ಬ್ರಿಡ್ಜ್ ನಗರಾಭಿವೃದ್ಧಿಗೆ ಹೊಸ ವೇಗ ನೀಡಲಿದ್ದು, ಭವಿಷ್ಯದ ಸಂಚಾರ ಅವಶ್ಯಕತೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.</p>



<p class="wp-block-paragraph"><strong>ಇದನ್ನೂ ಓದಿ:<a href="https://samyuktakarnataka.in/districts/%E0%B2%A4%E0%B3%81%E0%B2%AE%E0%B2%95%E0%B3%82%E0%B2%B0%E0%B3%81/former-minister-venkataramanappa-passes-away-heart-attack/"> </a><em><a href="https://samyuktakarnataka.in/news/india/nia-arrests-former-mla-sakot-molla-in-bhangar-bomb-blast-case-west-bengal/" type="link" id="https://samyuktakarnataka.in/news/india/nia-arrests-former-mla-sakot-molla-in-bhangar-bomb-blast-case-west-bengal/">Bomb ಸ್ಫೋಟ ಪ್ರಕರಣ: ತಲೆಮರೆಸಿಕೊಂಡಿದ್ದ ಮಾಜಿ ಶಾಸಕನ ಬಂಧನ</a></em></strong></p>



<p class="wp-block-paragraph"><strong>ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ : </strong>ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಪ್ರಹ್ಲಾದ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="NiV19f1AM7"><a href="https://samyuktakarnataka.in/entertainment/rakshit-shetty-43rd-birthday-rishab-shetty-emotional-wish-hints-at-comeback/">ಸದ್ಯದಲ್ಲೇ ರಕ್ಷಿತ್ ಶೆಟ್ಟಿ ದರ್ಶನ : BIG ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ</a></blockquote><iframe class="wp-embedded-content" sandbox="allow-scripts" security="restricted"  title="“ಸದ್ಯದಲ್ಲೇ ರಕ್ಷಿತ್ ಶೆಟ್ಟಿ ದರ್ಶನ : BIG ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ” — Samyukta Karnataka" src="https://samyuktakarnataka.in/entertainment/rakshit-shetty-43rd-birthday-rishab-shetty-emotional-wish-hints-at-comeback/embed/#?secret=mpOF7REpXK#?secret=NiV19f1AM7" data-secret="NiV19f1AM7" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/dharwad/karnataka-university-rub-dharwad-ready-for-inauguration-after-completion/">KUD ರಸ್ತೆ ಸಂಚಾರ ಸಮಸ್ಯೆಗೆ ಅಂತ್ಯ: ರೈಲ್ವೆ ಅಂಡರ್ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ವಿದ್ಯುತ್‌ನಿಂದ LPG ತರಹದ ಜ್ವಾಲೆ: Make in Indiaಗೆ ಹೊಸ ಅವಕಾಶ</title>
		<link>https://samyuktakarnataka.in/news/india/electric-flame-stove-india-lpg-alternative-surya-ghar/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 10 Apr 2026 09:11:07 +0000</pubDate>
				<category><![CDATA[ದೇಶ]]></category>
		<category><![CDATA[#education]]></category>
		<category><![CDATA[#India]]></category>
		<category><![CDATA[#pralhadjoshi]]></category>
		<category><![CDATA[technology]]></category>
		<guid isPermaLink="false">https://samyuktakarnataka.in/?p=95228</guid>

					<description><![CDATA[<p>ನವದೆಹಲಿ: ಭಾರತದಲ್ಲಿ ಅಡುಗೆ ವಿಧಾನದಲ್ಲಿ ಮಹತ್ವದ ಬದಲಾವಣೆ ತರಬಹುದಾದ ಹೊಸ ತಂತ್ರಜ್ಞಾನವೊಂದು ಗಮನ ಸೆಳೆದಿದೆ. ವಿದ್ಯುತ್ ಬಳಸಿ LPG ಗ್ಯಾಸಿನಂತೆ ಜ್ವಾಲೆ ಉತ್ಪಾದಿಸುವ ವಿಶೇಷ ಒಲೆ (stove) ಯನ್ನು ಭಾರತೀಯ ಕಂಪನಿಯೊಂದು ಪ್ರದರ್ಶಿಸಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ನವೀನ ಆವಿಷ್ಕಾರವು ದೇಶದ ಇಂಧನ ಬಳಕೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. LPGಗೆ ಪರ್ಯಾಯ &#8211; ವಿದ್ಯುತ್ ಒಲೆ ಹೇಗೆ ಕಾರ್ಯನಿರ್ವಹಿಸುತ್ತದೆ? : ಈ ಹೊಸ [&#8230;]</p>
<p>The post <a href="https://samyuktakarnataka.in/news/india/electric-flame-stove-india-lpg-alternative-surya-ghar/">ವಿದ್ಯುತ್‌ನಿಂದ LPG ತರಹದ ಜ್ವಾಲೆ: Make in Indiaಗೆ ಹೊಸ ಅವಕಾಶ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ನವದೆಹಲಿ: ಭಾರತದಲ್ಲಿ ಅಡುಗೆ ವಿಧಾನದಲ್ಲಿ ಮಹತ್ವದ ಬದಲಾವಣೆ ತರಬಹುದಾದ ಹೊಸ ತಂತ್ರಜ್ಞಾನವೊಂದು ಗಮನ ಸೆಳೆದಿದೆ. ವಿದ್ಯುತ್ ಬಳಸಿ LPG ಗ್ಯಾಸಿನಂತೆ ಜ್ವಾಲೆ ಉತ್ಪಾದಿಸುವ ವಿಶೇಷ ಒಲೆ (stove) ಯನ್ನು ಭಾರತೀಯ ಕಂಪನಿಯೊಂದು ಪ್ರದರ್ಶಿಸಿದೆ.</p>



<p class="wp-block-paragraph">ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈ ನವೀನ ಆವಿಷ್ಕಾರವು ದೇಶದ ಇಂಧನ ಬಳಕೆಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.</p>



<p class="wp-block-paragraph"><strong>LPGಗೆ ಪರ್ಯಾಯ &#8211; ವಿದ್ಯುತ್ ಒಲೆ ಹೇಗೆ ಕಾರ್ಯನಿರ್ವಹಿಸುತ್ತದೆ? :</strong> ಈ ಹೊಸ ತಂತ್ರಜ್ಞಾನವು ವಿದ್ಯುತ್ ಬಳಸಿ ಜ್ವಾಲೆಯಂತೆಯೇ ಹೀಟ್ ಉತ್ಪಾದಿಸುತ್ತದೆ ಹಾಗೂ LPG ಸ್ಟೌವ್ ಅನುಭವವನ್ನು ನೀಡುತ್ತದೆ. ಅಡುಗೆ ವಿಧಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲದೆ ಬಳಸಬಹುದಾಗಿದೆ. ಇದು ಸಾಮಾನ್ಯ ಇಂಡಕ್ಷನ್ ಸ್ಟೌವ್‌ಗಳಿಗಿಂತ ವಿಭಿನ್ನವಾಗಿದ್ದು, ನೇರ ಜ್ವಾಲೆಯ ಅನುಭವ ನೀಡುವುದು ವಿಶೇಷವಾಗಿದೆ.</p>



<p class="wp-block-paragraph"><strong>PMSuryaGhar ಯೋಜನೆಯ ಜೊತೆ ಸಂಯೋಜನೆ: </strong>ಈ ತಂತ್ರಜ್ಞಾನವನ್ನು PM Surya Ghar Yojana ಜೊತೆ ಸಂಯೋಜಿಸಿದರೆ ಮನೆಮನೆಗೆ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದನೆ ಹಾಗೂ ಅಡುಗೆಗೆ ಉಚಿತ ಅಥವಾ ಕಡಿಮೆ ವೆಚ್ಚದ ವಿದ್ಯುತ್ ಬಳಕೆ ಮತ್ತು LPG ಮೇಲಿನ ಅವಲಂಬನೆ ಕಡಿಮೆ ಎಂಬ ಪ್ರಯೋಜನಗಳಿವೆ.</p>



<p class="wp-block-paragraph"><strong>ದೇಶೀಯ ಉತ್ಪಾದನೆಗೆ ಒತ್ತು: </strong>ಕೇಂದ್ರ ಸಚಿವರು ಈ ತಂತ್ರಜ್ಞಾನವನ್ನು ಭಾರತದಲ್ಲೇ ಉತ್ಪಾದನೆ ಮಾಡಲು ಆಸಕ್ತಿವಹಿಸುವಂತೆ ಸೂಚಿಸಿದ್ದು ‘Make in India’ ಗೆ ಉತ್ತೇಜನ ಹಾಗೂ ಆಮದು ಕಡಿತ ಮತ್ತು ಸ್ಥಳೀಯ ಉದ್ಯಮಗಳಿಗೆ ಅವಕಾಶ ಎಂದು ತಿಳಿಸಿದ್ದಾರೆ.</p>



<p class="wp-block-paragraph"><strong>ಪರಿಸರ ಸ್ನೇಹಿ ಆಯ್ಕೆ : </strong>ಈ ತಂತ್ರಜ್ಞಾನವು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ, ಸ್ವಚ್ಛ ಇಂಧನ ಬಳಕೆಗೆ ಉತ್ತೇಜನ ನೀಡುತ್ತದೆ ಅಲ್ಲದೆ ಹಸಿರು ಶಕ್ತಿಯ ಬಳಕೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.</p>



<p class="wp-block-paragraph"><strong>ಭವಿಷ್ಯದ ಅಡುಗೆ ವಿಧಾನ?:</strong> ಈ ಹೊಸ ವಿದ್ಯುತ್ ಜ್ವಾಲೆ ಒಲೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆಗೆ ಅನುಕೂಲಕರವಾಗಿದ್ದು LPG ಬೆಲೆ ಏರಿಕೆಗೆ ಪರ್ಯಾಯ ಪರಿಹಾರವಾಗಿದೆ. ಭಾರತದ ಅಡುಗೆ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ತರಬಹುದಾದ ಸಾಧ್ಯತೆ ಎಂದು ನಿರೀಕ್ಷಿಸಲಾಗಿದೆ.</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="5CF6js7qOI"><a href="https://samyuktakarnataka.in/news/karnataka/sslc-grading-pil-dismissed-karnataka-high-court-fine/">SSLC ಗ್ರೇಡಿಂಗ್ ವಿವಾದ : PIL ವಜಾ, ₹1 ಲಕ್ಷ ದಂಡ &#8211; ಹೈಕೋರ್ಟ್</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;SSLC ಗ್ರೇಡಿಂಗ್ ವಿವಾದ : PIL ವಜಾ, ₹1 ಲಕ್ಷ ದಂಡ &#8211; ಹೈಕೋರ್ಟ್&#8221; &#8212; Samyukta Karnataka" src="https://samyuktakarnataka.in/news/karnataka/sslc-grading-pil-dismissed-karnataka-high-court-fine/embed/#?secret=AgKORPriH5#?secret=5CF6js7qOI" data-secret="5CF6js7qOI" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/news/india/electric-flame-stove-india-lpg-alternative-surya-ghar/">ವಿದ್ಯುತ್‌ನಿಂದ LPG ತರಹದ ಜ್ವಾಲೆ: Make in Indiaಗೆ ಹೊಸ ಅವಕಾಶ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಆಟೋ ಗ್ಯಾಸ್ ಅಭಾವ: ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ, ಕೆಪಿಸಿಸಿ ವ್ಯಂಗ್ಯ</title>
		<link>https://samyuktakarnataka.in/districts/baglkot/if-there-is-no-gas-put-petrol-in-and-drive-says-minister-pralhad-joshi/</link>
		
		<dc:creator><![CDATA[Samyuktha Karnataka]]></dc:creator>
		<pubDate>Tue, 07 Apr 2026 07:40:59 +0000</pubDate>
				<category><![CDATA[ಬಾಗಲಕೋಟೆ]]></category>
		<category><![CDATA[#Bjp]]></category>
		<category><![CDATA[#pralhadjoshi]]></category>
		<category><![CDATA[ANNatarajGowd]]></category>
		<category><![CDATA[congress]]></category>
		<category><![CDATA[KPCC]]></category>
		<guid isPermaLink="false">https://samyuktakarnataka.in/?p=94947</guid>

					<description><![CDATA[<p>ಬಾಗಲಕೋಟೆ: ರಾಜ್ಯಾದ್ಯಂತ ಆಟೋ ಎಲ್‌ಪಿಜಿ (LPG) ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿದ &#8220;ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಬಳಸಿ&#8221; ಎಂಬ ಸಲಹೆಯು ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಈ ಹೇಳಿಕೆಯನ್ನು ಕೆಪಿಸಿಸಿ ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸಚಿವರ ವಿರುದ್ಧ 3 ಪ್ರಶ್ನೆಗಳನ್ನು ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವ ಪ್ರಲ್ಹಾದ್ ಜೋಶಿ, &#8220;ರಾಜ್ಯದಲ್ಲಿ ಆಟೋ ಗ್ಯಾಸ್‌ಗೆ ಸ್ವಲ್ಪ ಸಮಸ್ಯೆ ಆಗಿರಬಹುದು, ಆದ್ರೆ ಸಂಪೂರ್ಣ ಕೊರತೆ ಇನ್ನೂ ಆಗಿಲ್ಲ. ಖಾಸಗಿ ಕೇಂದ್ರಗಳು [&#8230;]</p>
<p>The post <a href="https://samyuktakarnataka.in/districts/baglkot/if-there-is-no-gas-put-petrol-in-and-drive-says-minister-pralhad-joshi/">ಆಟೋ ಗ್ಯಾಸ್ ಅಭಾವ: ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ, ಕೆಪಿಸಿಸಿ ವ್ಯಂಗ್ಯ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಬಾಗಲಕೋಟೆ: ರಾಜ್ಯಾದ್ಯಂತ ಆಟೋ ಎಲ್‌ಪಿಜಿ (LPG) ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿದ &#8220;ಗ್ಯಾಸ್ ಇಲ್ಲದಿದ್ದರೆ ಪೆಟ್ರೋಲ್ ಬಳಸಿ&#8221; ಎಂಬ ಸಲಹೆಯು ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. ಈ ಹೇಳಿಕೆಯನ್ನು ಕೆಪಿಸಿಸಿ ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸಚಿವರ ವಿರುದ್ಧ 3 ಪ್ರಶ್ನೆಗಳನ್ನು ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph">ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವ ಪ್ರಲ್ಹಾದ್ ಜೋಶಿ, &#8220;ರಾಜ್ಯದಲ್ಲಿ ಆಟೋ ಗ್ಯಾಸ್‌ಗೆ ಸ್ವಲ್ಪ ಸಮಸ್ಯೆ ಆಗಿರಬಹುದು, ಆದ್ರೆ ಸಂಪೂರ್ಣ ಕೊರತೆ ಇನ್ನೂ ಆಗಿಲ್ಲ. ಖಾಸಗಿ ಕೇಂದ್ರಗಳು ಅನಿಲವನ್ನು ಆಮದು ಮಾಡಿಕೊಳ್ಳುತ್ತಿವೆ. ಹಾಗೇ ಪರಿಸ್ಥಿತಿಯು ಸರಿಯಾಗುವವರೆಗೆ ಆಟೋ ಚಾಲಕರು ತಾತ್ಕಾಲಿಕವಾಗಿ ಪೆಟ್ರೋಲ್ ಬಳಕೆಗೆ ಬದಲಾಯಿಸಿಕೊಳ್ಳುವುದು ಉತ್ತಮ&#8221; ಎಂದು ತಿಳಿಸಿದ್ದರು.</p>



<p class="wp-block-paragraph">ಇದಕ್ಕೆ ಕೆಪಿಸಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗೆ ಕಾಂಗ್ರೆಸ್ ಎತ್ತಿರುವ 3 ಪ್ರಮುಖ ಪ್ರಶ್ನೆಗಳಿಗೆ<br>ಸಚಿವರ ಈ ಹೇಳಿಕೆಯನ್ನು ನೀಡಿದ್ದು ಜನರನ್ನ ಕೇರಳಿಸುವಂತೆ ಮಾಡಿದ್ದು, ಅಲ್ಲದೇ.. &#8220;ಬಡವರ ವಿರೋಧಿ&#8221; ಎಂದು ಕರೆದಿರುವ ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ, ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದ್ದಾರೆ.</p>



<p class="wp-block-paragraph">ಆರ್ಥಿಕ ವಾಸ್ತವತೆ ಎಲ್ಲಿ ಹೋಯಿತು?: ಗ್ಯಾಸ್‌ಗೆ ಹೋಲಿಸಿದರೆ ಪೆಟ್ರೋಲ್ ಬೆಲೆ ದುಪ್ಪಟ್ಟಾಗಿದೆ. ದುಬಾರಿ ಪೆಟ್ರೋಲ್ ಬಳಸಿ ಆಟೋ ಓಡಿಸಿದರೆ ಬಡ ಚಾಲಕನಿಗೆ ದಿನದ ಕೊನೆಯಲ್ಲಿ ಲಾಭ ಸಿಗುವುದಾದರೂ ಹೇಗೆ? ಅವನ ಸಂಸಾರದ ಹೊಟ್ಟೆ ತುಂಬುವವರು ಯಾರು? ಎಂದು ಪ್ರಶ್ನೆಯನ್ನು ಹಾಕಿದ್ದಾರೆ.</p>



<p class="wp-block-paragraph">ತಾಂತ್ರಿಕ ಅಜ್ಞಾನದ ಪರಮಾವಧಿ: ಲಕ್ಷಾಂತರ ಆಟೋಗಳು ಕೇವಲ ಗ್ಯಾಸ್ ಆಧಾರಿತ ಎಂಜಿನ್ (Dedicated LPG) ಹೊಂದಿವೆ. ಅವುಗಳಲ್ಲಿ ಪೆಟ್ರೋಲ್ ಬಳಸುವ ವ್ಯವಸ್ಥೆಯೇ ಇರುವುದಿಲ್ಲ. ಇಂತಹ ಕನಿಷ್ಠ ಜ್ಞಾನವೂ ಸಚಿವರಿಗಿಲ್ಲವೇ?</p>



<p class="wp-block-paragraph">ಜವಾಬ್ದಾರಿಯಿಂದ ಜಾರಿಕೊಳ್ಳುವುದು: ಇಂಧನ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಅಂತರಾಷ್ಟ್ರೀಯ ಬಿಕ್ಕಟ್ಟಿನ ನೆಪ ಹೇಳಿ ಖಾಸಗಿ ಕಂಪನಿಗಳ ಕೃತಕ ಅಭಾವವನ್ನು ಮುಚ್ಚಿಡುವುದು ಸರಿಯಲ್ಲ, ಎಂದು ವ್ಯಂಗವಾಡಿದ್ದಾರೆ.</p>



<p class="wp-block-paragraph">ಹಾಗೇ ಸಚಿವರ ನಡೆಯನ್ನು ಗಮನಿಸಿದರೆ ಫ್ರೆಂಚ್ ಕ್ರಾಂತಿಯ ಕಾಲ ಮರಳಿದಂತೆ ಕಾಣಿಸುತ್ತೆ. &#8220;ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಿ&#8221; ಎಂಬ ಕುಖ್ಯಾತ ಹೇಳಿಕೆಗೆ ಹೋಲಿಸಿದ ಕಾಂಗ್ರೆಸ್, ಇದು ಸರ್ಕಾರದ ಅಹಂಕಾರವನ್ನು ಪ್ರದರ್ಶಿಸುತ್ತದೆ ಎಂದು ವ್ಯಂಗ್ಯವಾಡಿದೆ. ಕೃತಕ ಅಭಾವ ಸೃಷ್ಟಿಸಿರುವ ಖಾಸಗಿ ಕಂಪನಿಗಳ ಮೇಲೆ ನಿಯಂತ್ರಣ ಸಾಧಿಸದ ಕೇಂದ್ರ ಸರ್ಕಾರ, ಬಡವರ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿದೆ.</p>



<p class="wp-block-paragraph">ಕೆಪಿಸಿಸಿ ವಕ್ತಾರರ ಒತ್ತಾಯ: ಈ ಕೂಡಲೇ ಸಚಿವರು ಕ್ಷಮೆಯಾಚಿಸಬೇಕು ಮತ್ತು ಸಮರೋಪಾದಿಯಲ್ಲಿ ಎಲ್‌ಪಿಜಿ ಪೂರೈಕೆಯನ್ನು ಸಹಜ ಸ್ಥಿತಿಗೆ ತರಬೇಕು ಎಂದು ಕಾರ್ಮಿಕ ವರ್ಗದ ಪರವಾಗಿ ವಕ್ತಾರ ಎ.ಎನ್. ನಟರಾಜ್ ಗೌಡ ಆಗ್ರಹಿಸಿದ್ದಾರೆ.</p>
<p>The post <a href="https://samyuktakarnataka.in/districts/baglkot/if-there-is-no-gas-put-petrol-in-and-drive-says-minister-pralhad-joshi/">ಆಟೋ ಗ್ಯಾಸ್ ಅಭಾವ: ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ, ಕೆಪಿಸಿಸಿ ವ್ಯಂಗ್ಯ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕಲಬುರಗಿ: ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಲ್ಲಿ ಮುಂಚೂಣಿ</title>
		<link>https://samyuktakarnataka.in/districts/kalburgi/pralhad-joshi-slams-congress-appeasement-politics-kalaburagi/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 20 Feb 2026 13:07:45 +0000</pubDate>
				<category><![CDATA[ಕಲಬುರಗಿ]]></category>
		<category><![CDATA[#pralhadjoshi]]></category>
		<category><![CDATA[kalaburagi]]></category>
		<guid isPermaLink="false">https://samyuktakarnataka.in/?p=92189</guid>

					<description><![CDATA[<p>ಕಾಂಗ್ರೆಸ್ ಪಕ್ಷದೊಳಗೆ ಹಲವು ರೀತಿಯ ಗೊಂದಲಗಳಿವೆ &#8211; ರಾಹುಲ್ ದಾರಿ ತಪ್ಪಿದ ಮಗ ಸಂ.ಕ.‌ ಸಮಾಚಾರ ಕಲಬುರಗಿ: ಕಾಂಗ್ರೆಸ್ ಪಕ್ಷ ತುಷ್ಟಿಕರಣ ರಾಜಕೀಯ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಶುಕ್ರವಾರ ಸಂಜೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿಗೆ ಚಪ್ಪಲಿ ಎಸೆದ ಘಟನೆ ಉಲ್ಲೇಖಿಸಿ, ಇಂತಹ ಘಟನೆಗಳಿಗೆ ಕಾಂಗ್ರೆಸ್‌ನ ರಾಜಕೀಯ ಧೋರಣೆ ಕಾರಣ ಎಂದು ಆರೋಪಿಸಿದರು. “ನೀವು ‘ಬ್ರದರ್ಸ್’ ಎಂದು ಹೇಳುತ್ತೀರಿ, [&#8230;]</p>
<p>The post <a href="https://samyuktakarnataka.in/districts/kalburgi/pralhad-joshi-slams-congress-appeasement-politics-kalaburagi/">ಕಲಬುರಗಿ: ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಲ್ಲಿ ಮುಂಚೂಣಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಕಾಂಗ್ರೆಸ್ ಪಕ್ಷದೊಳಗೆ ಹಲವು ರೀತಿಯ ಗೊಂದಲಗಳಿವೆ &#8211; ರಾಹುಲ್ ದಾರಿ ತಪ್ಪಿದ ಮಗ</strong></p>



<p class="wp-block-paragraph"><strong>ಸಂ.ಕ.‌ ಸಮಾಚಾರ ಕಲಬುರಗಿ</strong>: ಕಾಂಗ್ರೆಸ್ ಪಕ್ಷ ತುಷ್ಟಿಕರಣ ರಾಜಕೀಯ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.</p>



<p class="wp-block-paragraph">ಶುಕ್ರವಾರ ಸಂಜೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಬಾಗಲಕೋಟೆಯಲ್ಲಿ ಶಿವಾಜಿ ಮೂರ್ತಿಗೆ ಚಪ್ಪಲಿ ಎಸೆದ ಘಟನೆ ಉಲ್ಲೇಖಿಸಿ, ಇಂತಹ ಘಟನೆಗಳಿಗೆ ಕಾಂಗ್ರೆಸ್‌ನ ರಾಜಕೀಯ ಧೋರಣೆ ಕಾರಣ ಎಂದು ಆರೋಪಿಸಿದರು. “ನೀವು ‘ಬ್ರದರ್ಸ್’ ಎಂದು ಹೇಳುತ್ತೀರಿ, ಅದರಿಂದಲೇ ಇಂತಹ ಘಟನೆಗಳು ನಡೆಯುತ್ತವೆ. ನಂತರ ಪೊಲೀಸರ ಮೇಲೆ ಒತ್ತಡ ಹೇರುತ್ತಾರೆ” ಎಂದು ಟೀಕಿಸಿದರು.</p>



<p class="wp-block-paragraph"><strong>ಇದನ್ನೂ ಓದಿ:</strong> <strong><strong><a href="https://samyuktakarnataka.in/districts/davanagere/pejawar-seer-vishwaprasanna-tirtha-statement-hindus-davanagere/" type="link" id="https://samyuktakarnataka.in/districts/davanagere/pejawar-seer-vishwaprasanna-tirtha-statement-hindus-davanagere/">“ಭಾರತದಲ್ಲೂ ಹಿಂದೂಗಳ ಸ್ಥಿತಿ ಹೀನಾಯ” – ದಾವಣಗೆರೆಯಲ್ಲಿ ಪೇಜಾವರ ಶ್ರೀಗಳ ಕಳವಳ</a></strong></strong></p>



<p class="wp-block-paragraph"><strong>“ಎರಡೂ ಕಡೆಯವರ ಬಂಧನ ಯಾಕೆ?” : </strong>ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳವರನ್ನು ಬಂಧಿಸುವ ಬದಲು, ತಪ್ಪು ಮಾಡಿದವರನ್ನು ಮಾತ್ರ ಬಂಧಿಸಬೇಕು. ತಪ್ಪು ಮಾಡದವರನ್ನು ಒಳಗೊಂಡು ಸಾಮೂಹಿಕ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.</p>



<p class="wp-block-paragraph"><strong>AI ಸಮ್ಮಿಟ್ ವಿಚಾರ:</strong> ಎಐ ಸಮ್ಮಿಟ್ ವೇಳೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ ಜೋಶಿ, ಈ ರೀತಿಯ ವರ್ತನೆ ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದರು.</p>



<p class="wp-block-paragraph"><strong>ಇದನ್ನೂ ಓದಿ:</strong> <strong><strong><a href="https://samyuktakarnataka.in/sports/ranji-trophy-2025-26-final-karnataka-vs-jammu-kashmir-hubballi/">ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ</a></strong></strong></p>



<p class="wp-block-paragraph"><strong>ರಾಹುಲ್ ಗಾಂಧಿ, ಖರ್ಗೆ ವಿರುದ್ಧ ಟೀಕೆ:</strong> ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ತೀವ್ರ ಟೀಕೆ ಮಾಡಿದ ಅವರು, “ರಾಹುಲ್ ದಾರಿ ತಪ್ಪಿದ ಮಗ. ಅವರು ಅಪ್ರಬುದ್ಧ ರಾಜಕಾರಣಿ. ಅವರ ಬಗ್ಗೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ” ಎಂದು ಹೇಳಿದರು. ಅದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಮಾತನಾಡಿ, ದೇಶದ ಗೌರವ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸ್ವಲ್ಪನಾದರೂ ವಿವೇಕ ಇದ್ದರೆ ಕ್ಷಮೆ ಕೇಳಬೇಕು ಎಂದು ಅಭಿಪ್ರಾಯಪಟ್ಟರು.</p>



<p class="wp-block-paragraph"><strong>ಗ್ಯಾರೆಂಟಿ ಯೋಜನೆಗಳ ವಿವಾದ: </strong>ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಉಚಿತ ಗ್ಯಾರೆಂಟಿ ಯೋಜನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಕಿಡಿಕಾರಿದ ವಿಚಾರವನ್ನು ಉಲ್ಲೇಖಿಸಿದ ಜೋಶಿ, “ಗ್ಯಾರೆಂಟಿ ಯೋಜನೆಗಳಿಂದ ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂದು ಖರ್ಗೆಯವರೇ ಹೇಳಿದ್ದರು. ಇನ್ಮುಂದೆ ಯಾರೆ ಆಗಲಿ ಗ್ಯಾರೆಂಟಿ ನೀಡುವ ಮೊದಲು ಯೋಚಿಸಬೇಕು” ಎಂದು ಹೇಳಿದರು.</p>



<p class="wp-block-paragraph"><strong>ಇದನ್ನೂ ಓದಿ:</strong> <strong><strong><a href="https://samyuktakarnataka.in/districts/vijayapur/vijayapura-grape-revolution-mb-patil-california-comparison-irrigation-success/">ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ: ‘California’ ಕನಸು ನನಸಾಗುತ್ತಿದೆ</a></strong></strong></p>



<p class="wp-block-paragraph">ಕಾಂಗ್ರೆಸ್ ಪಕ್ಷದೊಳಗೆ ಹಲವು ರೀತಿಯ ಗೊಂದಲಗಳಿವೆ ಎಂದು ಎಂದು ಟೀಕಿಸಿದರು</p>



<figure class="wp-block-embed is-type-wp-embed is-provider-samyukta-karnataka wp-block-embed-samyukta-karnataka"><div class="wp-block-embed__wrapper">
<blockquote class="wp-embedded-content" data-secret="8Y4AAw8j6p"><a href="https://samyuktakarnataka.in/news/india/isro-yuvika-2026-young-scientist-program-space-training-students/">YUVIKA-2026: ಮಕ್ಕಳಿಗೆ ISROದಿಂದ ಬಾಹ್ಯಾಕಾಶ ತರಬೇತಿ ಅವಕಾಶ</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;YUVIKA-2026: ಮಕ್ಕಳಿಗೆ ISROದಿಂದ ಬಾಹ್ಯಾಕಾಶ ತರಬೇತಿ ಅವಕಾಶ&#8221; &#8212; Samyukta Karnataka" src="https://samyuktakarnataka.in/news/india/isro-yuvika-2026-young-scientist-program-space-training-students/embed/#?secret=MzAlqMcHK7#?secret=8Y4AAw8j6p" data-secret="8Y4AAw8j6p" width="600" height="338" frameborder="0" marginwidth="0" marginheight="0" scrolling="no"></iframe>
</div></figure>
<p>The post <a href="https://samyuktakarnataka.in/districts/kalburgi/pralhad-joshi-slams-congress-appeasement-politics-kalaburagi/">ಕಲಬುರಗಿ: ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಲ್ಲಿ ಮುಂಚೂಣಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ParikshaPeCharcha26: ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ಅನುಭವಕ್ಕೆ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ</title>
		<link>https://samyuktakarnataka.in/districts/dharwad/pariksha-pe-charcha26-sneha-ranebennuru-shares-experience/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 09 Feb 2026 06:14:03 +0000</pubDate>
				<category><![CDATA[ಧಾರವಾಡ]]></category>
		<category><![CDATA[#pralhadjoshi]]></category>
		<category><![CDATA[hubballi]]></category>
		<category><![CDATA[narendra-modi]]></category>
		<guid isPermaLink="false">https://samyuktakarnataka.in/?p=91406</guid>

					<description><![CDATA[<p>ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವದ ಶೈಕ್ಷಣಿಕ ಕಾರ್ಯಕ್ರಮ #ParikshaPeCharcha26 ಮೂಲಕ ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ತಮ್ಮ ಅನುಭವವನ್ನು ಹೃದಯಪೂರ್ವಕವಾಗಿ ಹಂಚಿಕೊಂಡಿದ್ದು, ಈ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಸ್ನೇಹಾ ರಾಣೆಬೆನ್ನೂರು ಅವರು, ಈ ಕಾರ್ಯಕ್ರಮವು ಪೋಷಕರು ಹಾಗೂ ವಿದ್ಯಾರ್ಥಿಗಳ ಮನಸ್ಸಿನ ಆಳವನ್ನು ಸ್ಪರ್ಶಿಸುವ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪರೀಕ್ಷೆಗಳ ಸಮಯದಲ್ಲಿ ಮಕ್ಕಳ ಮೇಲೆ ಬೀಳುವ ಒತ್ತಡವನ್ನು ಹೇಗೆ ಕಡಿಮೆ ಮಾಡಬೇಕು, ಅವರ ಆತ್ಮವಿಶ್ವಾಸವನ್ನು [&#8230;]</p>
<p>The post <a href="https://samyuktakarnataka.in/districts/dharwad/pariksha-pe-charcha26-sneha-ranebennuru-shares-experience/">ParikshaPeCharcha26: ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ಅನುಭವಕ್ಕೆ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಹುಬ್ಬಳ್ಳಿ:</strong> ಕೇಂದ್ರ ಸರ್ಕಾರದ ಮಹತ್ವದ ಶೈಕ್ಷಣಿಕ ಕಾರ್ಯಕ್ರಮ #ParikshaPeCharcha26 ಮೂಲಕ ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ತಮ್ಮ ಅನುಭವವನ್ನು ಹೃದಯಪೂರ್ವಕವಾಗಿ ಹಂಚಿಕೊಂಡಿದ್ದು, ಈ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.</p>



<p class="wp-block-paragraph">ಸ್ನೇಹಾ ರಾಣೆಬೆನ್ನೂರು ಅವರು, ಈ ಕಾರ್ಯಕ್ರಮವು ಪೋಷಕರು ಹಾಗೂ ವಿದ್ಯಾರ್ಥಿಗಳ ಮನಸ್ಸಿನ ಆಳವನ್ನು ಸ್ಪರ್ಶಿಸುವ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪರೀಕ್ಷೆಗಳ ಸಮಯದಲ್ಲಿ ಮಕ್ಕಳ ಮೇಲೆ ಬೀಳುವ ಒತ್ತಡವನ್ನು ಹೇಗೆ ಕಡಿಮೆ ಮಾಡಬೇಕು, ಅವರ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಈ ವೇದಿಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.</p>



<p class="wp-block-paragraph"><strong><strong>ಇದನ್ನೂ ಓದಿ: <a href="https://samyuktakarnataka.in/districts/bengaluru/bengaluru-metro-fare-hike-protest-tejasvi-surya-arrested/" type="link" id="https://samyuktakarnataka.in/districts/bengaluru/bengaluru-metro-fare-hike-protest-tejasvi-surya-arrested/">METRO ದರ ಏರಿಕೆ ವಿರುದ್ಧ ಖಾಲಿ ಟ್ರಂಕ್‌ ಹಿಡಿದು ತೇಜಸ್ವಿ ಪ್ರತಿಭಟನೆ</a></strong></strong></p>



<p class="wp-block-paragraph">ಈ ವಿಡಿಯೋವನ್ನು ಹಂಚಿಕೊಂಡಿರುವ ಸಚಿವ ಪ್ರಲ್ಹಾದ್ ಜೋಶಿ, Pariksha Pe Charcha ಪೋಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸುವ ವಿಶಿಷ್ಟ ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಮನೋಬಲ ಹೆಚ್ಚಾಗುತ್ತದೆ ಮತ್ತು ಪೋಷಕರ ಜವಾಬ್ದಾರಿಯ ಅರಿವು ಮೂಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>



<p class="wp-block-paragraph">ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಕಳೆದ ಹಲವು ವರ್ಷಗಳಿಂದ ರಾಷ್ಟ್ರವ್ಯಾಪಿ ಚಳವಳಿಯಾಗಿ ರೂಪುಗೊಂಡಿದೆ. ಇದು ಕೇವಲ ಪರೀಕ್ಷೆಗಳ ಕುರಿತ ಚರ್ಚೆಗೆ ಮಾತ್ರ ಸೀಮಿತವಾಗದೆ, ಮಾನಸಿಕ ನೆಮ್ಮದಿ, ಸಮಗ್ರ ಬೆಳವಣಿಗೆ ಮತ್ತು ಜೀವನ ಮೌಲ್ಯಗಳ ಬಗ್ಗೆ ಚಿಂತನೆ ನಡೆಸುವ ವೇದಿಕೆಯಾಗಿದ್ದು, ದೇಶದಾದ್ಯಂತ ಅಪಾರ ಸಂಖ್ಯೆಯ ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ.</p>



<p class="wp-block-paragraph"><strong><strong>ಇದನ್ನೂ ಓದಿ: <a href="https://samyuktakarnataka.in/entertainment/sangeetha-madhavan-sandalwood-comeback-new-kannada-movie/" type="link" id="https://samyuktakarnataka.in/entertainment/sangeetha-madhavan-sandalwood-comeback-new-kannada-movie/">ಕನ್ನಡ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟ ‘ಯಾರೇ ನೀನು ಚೆಲುವೆ’ ನಟಿ</a></strong></strong></p>



<p class="wp-block-paragraph">ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಒತ್ತಡದ ಅನುಭವವಿಲ್ಲದೆ ಆತ್ಮವಿಶ್ವಾಸದ ಪ್ರಯಾಣವನ್ನಾಗಿ ಮಾಡಿಕೊಳ್ಳಲು ಪ್ರೇರಣೆ ಪಡೆಯುತ್ತಿದ್ದಾರೆ. ಜೊತೆಗೆ ಪೋಷಕರು ಮಕ್ಕಳಿಗೆ ಬೆಂಬಲ ನೀಡುವ ಸರಿಯಾದ ಮಾರ್ಗಗಳನ್ನು ತಿಳಿದುಕೊಳ್ಳುತ್ತಿದ್ದಾರೆ.</p>



<p class="wp-block-paragraph">ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ಅವರ ಅನುಭವ ಹಂಚಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, #ParikshaPeCharcha26 ಕಾರ್ಯಕ್ರಮದ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="jTc2PFmgN6U"><iframe loading="lazy" title="D.K. Hebasuru Met Indira Gandhi | Lakkundi History That Moved the Nation | Krishnamurthy Hebasuru" width="696" height="392" src="https://www.youtube.com/embed/jTc2PFmgN6U?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>
<p>The post <a href="https://samyuktakarnataka.in/districts/dharwad/pariksha-pe-charcha26-sneha-ranebennuru-shares-experience/">ParikshaPeCharcha26: ಹುಬ್ಬಳ್ಳಿಯ ಪೋಷಕಿ ಸ್ನೇಹಾ ರಾಣೆಬೆನ್ನೂರು ಅನುಭವಕ್ಕೆ ಸಚಿವ ಪ್ರಲ್ಹಾದ್ ಜೋಶಿ ಮೆಚ್ಚುಗೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತ: ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ</title>
		<link>https://samyuktakarnataka.in/districts/dharwad/hubballi-police-assault-woman-pralhad-joshi-condemns-congress-government/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 07 Jan 2026 09:48:08 +0000</pubDate>
				<category><![CDATA[ಧಾರವಾಡ]]></category>
		<category><![CDATA[#pralhadjoshi]]></category>
		<guid isPermaLink="false">https://samyuktakarnataka.in/?p=89033</guid>

					<description><![CDATA[<p>ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾಯಕ ಮಹಿಳೆಯ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಅಕ್ಷಮ್ಯ ಅಪರಾಧ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ–ಹುಬ್ಬಳ್ಳಿ ಸಂಸದರಾದ ಪ್ರಲ್ಹಾದ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಮಹಿಳೆಯರನ್ನು ಅಸಭ್ಯವಾಗಿ ನಡೆಸಿಕೊಂಡಿರುವ ರೀತಿ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆಯ ಮೇಲೆ ಪೊಲೀಸರು ತಮ್ಮ ದರ್ಪ ಮತ್ತು ಅಧಿಕಾರದ ದುರುಪಯೋಗ ತೋರಿಸಿರುವುದು ರಾಜ್ಯದಲ್ಲಿ [&#8230;]</p>
<p>The post <a href="https://samyuktakarnataka.in/districts/dharwad/hubballi-police-assault-woman-pralhad-joshi-condemns-congress-government/">ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತ: ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಹುಬ್ಬಳ್ಳಿ: </strong>ಹುಬ್ಬಳ್ಳಿ ನಗರದ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾಯಕ ಮಹಿಳೆಯ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಅಕ್ಷಮ್ಯ ಅಪರಾಧ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ–ಹುಬ್ಬಳ್ಳಿ ಸಂಸದರಾದ ಪ್ರಲ್ಹಾದ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.</p>



<p class="wp-block-paragraph">ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ಮಹಿಳೆಯರನ್ನು ಅಸಭ್ಯವಾಗಿ ನಡೆಸಿಕೊಂಡಿರುವ ರೀತಿ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.</p>



<p class="wp-block-paragraph">ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆಯ ಮೇಲೆ ಪೊಲೀಸರು ತಮ್ಮ ದರ್ಪ ಮತ್ತು ಅಧಿಕಾರದ ದುರುಪಯೋಗ ತೋರಿಸಿರುವುದು ರಾಜ್ಯದಲ್ಲಿ ಮಹಿಳೆಯರು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಜೋಶಿ ಹೇಳಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆರೋಪಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:</strong> <strong><a href="https://samyuktakarnataka.in/districts/dharwad/hubballi-police-assault-allegation-bjp-worker-arrest-video-viral/">ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್</a></strong></p>



<p class="wp-block-paragraph">ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನೀತಿಯನ್ನು ಅನುಸರಿಸುತ್ತಿದೆ. ತುಘಲಕ್ ಸಾಮ್ರಾಜ್ಯವನ್ನು ಮರುಸ್ಥಾಪಿಸುವಂತೆ ಆಡಳಿತ ನಡೆಯುತ್ತಿದೆ ಎಂದು ತೀವ್ರ ಟೀಕಿಸಿದ್ದಾರೆ. ಇಂತಹ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಜನರು ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.</p>



<p class="wp-block-paragraph">ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ಹಾಗೂ ನಾಟಕಗಳಲ್ಲಿ ಮುಳುಗಿದ್ದಾರೆ. ಇದರ ಪರಿಣಾಮವಾಗಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ:</strong> <strong><a href="https://samyuktakarnataka.in/districts/bellari/ballari-police-reshuffle-after-new-year-clash-ps-harsha-appointed-ig/">ಬಳ್ಳಾರಿ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ</a></strong></p>



<p class="wp-block-paragraph">ಇಂದಿನ ಈ ಘಟನೆ ತೀರ ಖಂಡನೀಯವಾಗಿದ್ದು, ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಹಾಗೂ ಈ ಪಿತೂರಿಗೆ ಕಾರಣರಾದ ಎಲ್ಲರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೋಶಿ ಕಿಡಿಕಾರಿದ್ದಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="4QxoCuw_gvg"><iframe loading="lazy" title="Lalbagh Flower Show 2026: Exclusive Interview with JD Dr. M Jagadhish on ‘Tejaswi Vishmaya’ Theme" width="696" height="392" src="https://www.youtube.com/embed/4QxoCuw_gvg?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>
<p>The post <a href="https://samyuktakarnataka.in/districts/dharwad/hubballi-police-assault-woman-pralhad-joshi-condemns-congress-government/">ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತ: ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಧಾರವಾಡದಲ್ಲಿ ಶೀಘ್ರವೇ ಆಧಾರ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ</title>
		<link>https://samyuktakarnataka.in/districts/dharwad/aadhar-seva-kendra-to-reopen-soon-in-dharwad-says-pralhad-joshi/</link>
		
		<dc:creator><![CDATA[Samyukta Karnataka]]></dc:creator>
		<pubDate>Sat, 03 Jan 2026 05:17:27 +0000</pubDate>
				<category><![CDATA[ಧಾರವಾಡ]]></category>
		<category><![CDATA[#pralhadjoshi]]></category>
		<category><![CDATA[Dharawad]]></category>
		<guid isPermaLink="false">https://samyuktakarnataka.in/?p=88682</guid>

					<description><![CDATA[<p>ಧಾರವಾಡ: ಈ ಹಿಂದೆ ಸ್ಥಗಿತಗೊಂಡಿದ್ದ ಧಾರವಾಡದ ಆಧಾರ್ ಸೇವಾ ನಿರ್ವಹಣಾ ಕೇಂದ್ರವನ್ನು ಪುನಃ ಆರಂಭಿಸುವ ಕುರಿತಾಗಿ ಧಾರವಾಡ ಜಿಲ್ಲೆಯ ಜನತೆಗೆ ಕೇಂದ್ರ ಸಚಿವ ಹಾಗೂ ಈ ಭಾಗದ ಸಂಸದರಾದ ಪ್ರಲ್ಹಾದ್ ಜೋಶಿ ಅವರು ಮಹತ್ವದ ಸಿಹಿಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಧಾರವಾಡ ನಗರದಲ್ಲಿ ಆಧಾರ್ ಸೇವಾ ನಿರ್ವಹಣಾ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಲ್ಹಾದ್ ಜೋಶಿ ಅವರು, ರಾಜ್ಯದಲ್ಲಿ ಈ ಹಿಂದೆ ಕೇವಲ ಆರು ಜಿಲ್ಲೆಗಳಲ್ಲಿ ಮಾತ್ರ ಆಧಾರ್ [&#8230;]</p>
<p>The post <a href="https://samyuktakarnataka.in/districts/dharwad/aadhar-seva-kendra-to-reopen-soon-in-dharwad-says-pralhad-joshi/">ಧಾರವಾಡದಲ್ಲಿ ಶೀಘ್ರವೇ ಆಧಾರ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಧಾರವಾಡ: </strong>ಈ ಹಿಂದೆ ಸ್ಥಗಿತಗೊಂಡಿದ್ದ ಧಾರವಾಡದ ಆಧಾರ್ ಸೇವಾ ನಿರ್ವಹಣಾ ಕೇಂದ್ರವನ್ನು ಪುನಃ ಆರಂಭಿಸುವ ಕುರಿತಾಗಿ ಧಾರವಾಡ ಜಿಲ್ಲೆಯ ಜನತೆಗೆ ಕೇಂದ್ರ ಸಚಿವ ಹಾಗೂ ಈ ಭಾಗದ ಸಂಸದರಾದ ಪ್ರಲ್ಹಾದ್ ಜೋಶಿ ಅವರು ಮಹತ್ವದ ಸಿಹಿಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಧಾರವಾಡ ನಗರದಲ್ಲಿ ಆಧಾರ್ ಸೇವಾ ನಿರ್ವಹಣಾ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.</p>



<p class="wp-block-paragraph">ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಲ್ಹಾದ್ ಜೋಶಿ ಅವರು, ರಾಜ್ಯದಲ್ಲಿ ಈ ಹಿಂದೆ ಕೇವಲ ಆರು ಜಿಲ್ಲೆಗಳಲ್ಲಿ ಮಾತ್ರ ಆಧಾರ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ರಾಜ್ಯದ ಹೆಚ್ಚಿನ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೆ ಒಂದರಂತೆ ಒಟ್ಟು 19 ಹೊಸ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಿತು ಎಂದು ವಿವರಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/districts/bellari/clash-between-reddy-factions-bellary-sp-takes-charge/">ರೆಡ್ಡಿ ಬಣಗಳ ಮಧ್ಯೆ ಘರ್ಷಣೆ: ಬಳ್ಳಾರಿ ಎಸ್ಪಿ ತಲೆದಂಡ</a></strong></p>



<p class="wp-block-paragraph">ಜಿಲ್ಲೆಗೆ ಒಂದೇ ಕೇಂದ್ರ ಎಂಬ ಹೊಸ ನಿಯಮ ಜಾರಿಗೆ ಬಂದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರ ಮುಂದುವರಿದರೂ, ಧಾರವಾಡದಲ್ಲಿದ್ದ ಕೇಂದ್ರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಧಾರವಾಡ ಜಿಲ್ಲೆಯ ನಾಗರಿಕರಿಗೆ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಇತರ ಸೇವೆಗಳಿಗೆ ಹುಬ್ಬಳ್ಳಿ ತೆರಳುವ ಅನಿವಾರ್ಯತೆ ಎದುರಾಗಿತ್ತು.</p>



<p class="wp-block-paragraph">ಈ ಸಮಸ್ಯೆಯನ್ನು ಮನಗಂಡು, ಧಾರವಾಡದ ಆಧಾರ್ ಕೇಂದ್ರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮರುಪ್ರಾರಂಭ ಮಾಡುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರಿಗೆ ನಾನು ಪತ್ರ ಬರೆದು ಮನವಿ ಸಲ್ಲಿಸಿದ್ದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಸಹ ಧಾರವಾಡದಲ್ಲಿ ಆಧಾರ್ ಸೇವಾ ಕೇಂದ್ರ ಸ್ಥಾಪನೆಗೆ ಬೆಂಬಲ ನೀಡಿ ವಿನಂತಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.</p>



<p class="wp-block-paragraph"><strong>ಇದನ್ನೂ ಓದಿ: <a href="https://samyuktakarnataka.in/districts/bellari/bellary-riots-four-firs-complaints-against-reddy-and-others/">ಬಳ್ಳಾರಿ ಗಲಾಟೆ: ನಾಲ್ಕು FIR, ರೆಡ್ಡಿ ಸೇರಿ ಹಲವರ ವಿರುದ್ಧ ದೂರು</a></strong></p>



<p class="wp-block-paragraph">ನನ್ನ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು, ಧಾರವಾಡ ಜಿಲ್ಲೆಯಲ್ಲಿ ಆಧಾರ್ ಸೇವಾ ನಿರ್ವಹಣಾ ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂಬುದನ್ನು ಮನಗಂಡು, ವಿಶೇಷ ಪ್ರಕರಣದಡಿ ಧಾರವಾಡದಲ್ಲಿಯೂ ಒಂದು ಆಧಾರ್ ಸೇವಾ ಕೇಂದ್ರ ಸ್ಥಾಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.</p>



<p class="wp-block-paragraph">ಈ ಹಿನ್ನೆಲೆಯಲ್ಲಿ, ಧಾರವಾಡ ಆಧಾರ್ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆಗಾಗಿ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದ್ದು, ಲಕ್ಷಾಂತರ ನಾಗರಿಕರಿಗೆ ಈ ಸೇವೆ ಬಹುಮಾನವಾಗಲಿದೆ. ಆಧಾರ್ ಸಂಬಂಧಿತ ಸೇವೆಗಾಗಿ ಇನ್ನು ಮುಂದೆ ಧಾರವಾಡದ ಜನರು ದೂರದ ಪ್ರಯಾಣ ಮಾಡುವ ಅಗತ್ಯವಿಲ್ಲ.</p>



<p class="wp-block-paragraph">ಧಾರವಾಡ ಜಿಲ್ಲೆಯ ಜನತೆಗೆ ಈ ಮಹತ್ವದ ಸೌಲಭ್ಯ ಒದಗಿಸಲು ಒಪ್ಪಿಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="k6tkVn86id0"><iframe loading="lazy" title="🔴 Ballari Gunfire Incident: Inside Story of Gali Janardhan Reddy vs Nara Bharath Reddy Political War" width="696" height="392" src="https://www.youtube.com/embed/k6tkVn86id0?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>
<p>The post <a href="https://samyuktakarnataka.in/districts/dharwad/aadhar-seva-kendra-to-reopen-soon-in-dharwad-says-pralhad-joshi/">ಧಾರವಾಡದಲ್ಲಿ ಶೀಘ್ರವೇ ಆಧಾರ ಸೇವಾ ನಿರ್ವಹಣಾ ಕೇಂದ್ರದ ಸ್ಥಾಪನೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕರ್ನಾಟಕದಲ್ಲಿ ಹೆಸರು ಖರೀದಿ ಗಡವು ವಿಸ್ತರಣೆ</title>
		<link>https://samyuktakarnataka.in/districts/dharwad/name-purchase-deadline-extended-in-karnataka/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 29 Dec 2025 17:41:43 +0000</pubDate>
				<category><![CDATA[ಧಾರವಾಡ]]></category>
		<category><![CDATA[#politics]]></category>
		<category><![CDATA[#pralhadjoshi]]></category>
		<guid isPermaLink="false">https://samyuktakarnataka.in/?p=88413</guid>

					<description><![CDATA[<p>ನವದೆಹಲಿ: ಕರ್ನಾಟಕದಲ್ಲಿ 2025-26ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರುಕಾಳು (ಮೂಂಗ್) ಖರೀದಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಸಮಯವನ್ನು ಜ. 22ರವರೆಗೆ (ಒಂದು ತಿಂಗಳು) ವಿಸ್ತರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. . ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಈ ಕೂಡಲೇ ಈಗ ಜಿಲ್ಲಾವಾರು ಖರೀದಿ ಪ್ರಕ್ರಿಯೆಯನ್ನು ಮುಂದುವರಿಸಿ ರಾಜ್ಯದ್ಯಂತ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಕೋರಿದ್ದಾರೆ. ರಾಜ್ಯದಲ್ಲಿ ಹೆಸರು ಕಾಳು ಖರೀದಿಯನ್ನು ವಿಸ್ತರಿಸುವಂತೆ ಕೇಂದ್ರ ಕೃಷಿ ಸಚಿವ [&#8230;]</p>
<p>The post <a href="https://samyuktakarnataka.in/districts/dharwad/name-purchase-deadline-extended-in-karnataka/">ಕರ್ನಾಟಕದಲ್ಲಿ ಹೆಸರು ಖರೀದಿ ಗಡವು ವಿಸ್ತರಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ನವದೆಹಲಿ:</strong> ಕರ್ನಾಟಕದಲ್ಲಿ 2025-26ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರುಕಾಳು (ಮೂಂಗ್) ಖರೀದಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಸಮಯವನ್ನು ಜ. 22ರವರೆಗೆ (ಒಂದು ತಿಂಗಳು) ವಿಸ್ತರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. .</p>



<p class="wp-block-paragraph">ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಈ ಕೂಡಲೇ ಈಗ ಜಿಲ್ಲಾವಾರು ಖರೀದಿ ಪ್ರಕ್ರಿಯೆಯನ್ನು ಮುಂದುವರಿಸಿ ರಾಜ್ಯದ್ಯಂತ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಕೋರಿದ್ದಾರೆ.</p>



<p class="wp-block-paragraph">ರಾಜ್ಯದಲ್ಲಿ ಹೆಸರು ಕಾಳು ಖರೀದಿಯನ್ನು ವಿಸ್ತರಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವಾಣ ಅವರಿಗೆ ವಿನಂತಿಸಲಾಗಿತ್ತು. ಅವರ ವಿನಂತಿಯ ಮೇರೆಗೆ ಖರೀದಿ ಸಮಯ ವಿಸ್ತರಿಸಿದ್ದಾರೆ ಎಂದು ತಿಳಿಸಿದ್ದಾರೆ.</p>
<p>The post <a href="https://samyuktakarnataka.in/districts/dharwad/name-purchase-deadline-extended-in-karnataka/">ಕರ್ನಾಟಕದಲ್ಲಿ ಹೆಸರು ಖರೀದಿ ಗಡವು ವಿಸ್ತರಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
