ಮುರಳಿ ಮರಳಿ “ಉಗ್ರಾವತಾರ”

0
128

ಬೆಂಗಳೂರು: ನಟ ಮುರಳಿ ಅಭಿನಯದ ಹೊಸ ಸಿನಿಮಾ ‘ಉಗ್ರಾಯುಧಮ್’ (Ugrayudham) ಚಿತ್ರದ ಮುಹೂರ್ತವು ಶನಿವಾರ ಬಂಡೆ ಮಹಾಕಾಳಮ್ಮ ದೇವಾಲಯದಲ್ಲಿ ಯಶಸ್ವಿಯಾಗಿ ನೆರವೇರಿತು. ಭಕ್ತಿಯ ವಾತಾವರಣದ ಮಧ್ಯೆ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರ ತಂಡದ ಸದಸ್ಯರು, ಅಭಿಮಾನಿಗಳು ಹಾಗೂ ಹಿತೈಷಿಗಳು ಭಾಗವಹಿಸಿದ್ದರು.

ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸುತ್ತಿದ್ದು, ಜಯರಾಮ್ ದೇವಸಮುದ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಕಥೆ ಹಾಗೂ ನಿರ್ದೇಶನದ ಮೂಲಕ ತೀವ್ರ ಆಕ್ಷನ್ ಮತ್ತು ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಸದ್ಯ ಚಿತ್ರೀಕರಣ ಹಂತಕ್ಕೆ ಸಜ್ಜಾಗಿದೆ.

ಮುರಳಿ ಅವರ ವಿಭಿನ್ನ ಪಾತ್ರ ನಿರ್ವಹಣೆಯು ಈ ಬಾರಿ ಹೊಸ ತಿರುವು ಪಡೆಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. “ಚಿತ್ರದ ಶೀರ್ಷಿಕೆ ‘ಉಗ್ರಾಯುಧಮ್’ ಎಂದರೇ ಶಕ್ತಿ, ಧೈರ್ಯ ಮತ್ತು ತ್ಯಾಗದ ಸಂಕೇತ. ಪ್ರೇಕ್ಷಕರು ಹೊಸ ರೀತಿಯ ಕಥೆ ಮತ್ತು ನವೀನ ತಂತ್ರಜ್ಞಾನಗಳ ಸಂಯೋಜನೆಯನ್ನು ನೋಡಲಿದ್ದಾರೆ” ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರದ ತಾಂತ್ರಿಕ ವಿಭಾಗದ ಕುರಿತು ಮಾಹಿತಿಯ ಪ್ರಕಾರ, ಸಂಗೀತ ನಿರ್ದೇಶನ, ಛಾಯಾಗ್ರಹಣ ಹಾಗೂ ಹಿನ್ನಲೆ ಸ್ಕೋರ್‌ಗಳು ಯುವ ತಾಂತ್ರಿಕ ತಂಡದ ಕೈಯಲ್ಲಿ ಇವೆ. ಮುಂಬರುವ ತಿಂಗಳುಗಳಲ್ಲಿ ಮೊದಲ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡ ಹೊಂದಿದೆ.

Previous articleಶೇ.71ರಷ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣ
Next articleಮಂಗಳೂರು: 18,500ಕ್ಕೂ ಅಧಿಕ ಶಿಕ್ಷಕರ ನೇಮಕಾತಿಗೆ ಸಿದ್ಧತೆ

LEAVE A REPLY

Please enter your comment!
Please enter your name here