Home ನಮ್ಮ ಜಿಲ್ಲೆ ಕೊಪ್ಪಳ ನಿವೃತ್ತ ಶಿಕ್ಷಕ ರಾಯನಗೌಡ ಪಾಟೀಲ್ ಇನ್ನಿಲ್ಲ

ನಿವೃತ್ತ ಶಿಕ್ಷಕ ರಾಯನಗೌಡ ಪಾಟೀಲ್ ಇನ್ನಿಲ್ಲ

0

ಕೊಪ್ಪಳ: ತಾಲ್ಲೂಕಿನ ಹಲಗೇರಿ ಗ್ರಾಮದ ನಿವೃತ್ತ ಮುಖ್ಯಶಿಕ್ಷಕ ರಾಯನಗೌಡ ಪಾಟೀಲ್ ಗುರುವಾರ ನಿಧನರಾದರು. ಕುಕನೂರಿನ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ಬಹಳಷ್ಟು ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ತಮ್ಮ ವೇತನದ ಕೆಲ ಭಾಗವನ್ನು ಖರ್ಚು ಮಾಡಿ, ವಿದ್ಯಾವಂತರನ್ನಾಗಿ ಮಾಡಿದ ಕೀರ್ತಿ ರಾಯನಗೌಡ ಪಾಟೀಲರಿಗೆ ಸಲ್ಲುತ್ತದೆ. ನಿವೃತ್ತಿಯ ನಂತರ ಹಲಗೇರಿ ಗ್ರಾಮದ ಶಾಲೆ-ಕಾಲೇಜುಗಳಿಗೆ ಭೇಟಿ ನೀಡಿ, ಶಿಕ್ಷಣ ಬಗ್ಗೆ ಅರಿವು ಮೂಡಿಸಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ.

Exit mobile version