Home ನಮ್ಮ ಜಿಲ್ಲೆ ಉಡುಪಿ ಬೃಹತ್‌ ಧ್ವಜ ಮೆರವಣಿಗೆ ಮೂಲಕ ಸೇನೆ ಸಿಂದೂರ ವಿಜಯೋತ್ಸವ

ಬೃಹತ್‌ ಧ್ವಜ ಮೆರವಣಿಗೆ ಮೂಲಕ ಸೇನೆ ಸಿಂದೂರ ವಿಜಯೋತ್ಸವ

0
ಬೃಹತ್‌ ಧ್ವಜ ಮೆರವಣಿಗೆ ಮೂಲಕ ಸೇನೆ ಸಿಂದೂರ ವಿಜಯೋತ್ಸವ

ಸಂ.ಕ. ಸಮಾಚಾರ, ಉಡುಪಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಉಡುಪಿಯಲ್ಲಿ ಬುಧವಾರ ಸಂಭ್ರಮಾಚರಣೆ ಮಾಡಲಾಯಿತು.
ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಬೃಹತ್ ರಾಷ್ಟ್ರಧ್ವಜವನ್ನು ಜಯಘೋಷ ಹಾಗೂ ತಮಟೆಯ ನಿನಾದದೊಂದಿಗೆ ನಗರದಲ್ಲಿ ಮೆರವಣಿಗೆ ಮಾಡಲಾಯಿತು. ಯಶಸ್ವಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರವನ್ನು ಶ್ಲಾಘಿಸಿ, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಲಾಯಿತು. ವಿಜಯೋತ್ಸವ ಹಿನ್ನೆಲೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.