ಕಾರು ಅಪಘಾತ ಓರ್ವ ಸಾವು      

0
14

ಶಿರೂರ(ಬಾಗಲಕೋಟೆ ಜಿಲ್ಲೆ): ತಾಲೂಕಿನ ಶಿರೂರ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿರುವ ಘಟನೆ ರವಿವಾರ ಸಂಜೆ ಸಂಭವಿಸಿದೆ. 
ಕೋಪ್ ಪಣಿಬಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರು  ರಬಕವಿ-ಬನಹಟ್ಟಿ ಮೂಲದವರು ಎಂದು ತಿಳಿದು ಬಂದಿದೆ. ಇವರು ಇಳಕಲ್ಲಿನಲ್ಲಿ ನಿಶ್ಚಿತಾರ್ಥ ಸಮಾರಂಭಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆAದು ತಿಳಿದು ಬಂದಿದ್ದು, ಅವರನ್ನು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Previous articleಸಂಯುಕ್ತ ಕರ್ನಾಟಕ ರಾಜಕೀಯ ಹೋರಾಟಗಳಿಗೆ ಬಲ ತುಂಬಿದೆ
Next articleಸಾಲಬಾಧೆ : ರೈತ ಆತ್ಮಹತ್ಯೆ