Home ತಾಜಾ ಸುದ್ದಿ ಸೌಹಾರ್ದ ನಡಿಗೆಗೆ ಮುಂದಾದವರು ಪೊಲೀಸ್ ವಶಕ್ಕೆ

ಸೌಹಾರ್ದ ನಡಿಗೆಗೆ ಮುಂದಾದವರು ಪೊಲೀಸ್ ವಶಕ್ಕೆ

0
ಸೌಹಾರ್ದ ನಡಿಗೆಗೆ ಮುಂದಾದವರು ಪೊಲೀಸ್ ವಶಕ್ಕೆ

ಬಾಗಲಕೋಟೆ: ಹಿಂದೂ ಜಾಗರಣ ವೇದಿಕೆ ಹಮ್ಮಿಕೊಂಡಿರುವ ಕೆರೂರು ಚಲೋಗೆ ಪ್ರತಿಯಾಗಿ ಕುಳಗೇರಿಯಿಂದ ಸೌಹಾರ್ದ ನಡಿಗೆ ನಡೆಸಲು‌ ಮುಂದಾದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಾರತೀಯ ಶರಣ ಸೇನಾ ಸಂಘಟನೆ ವತಿಯಿಂದ ಸಾಮಾಜಿಕ ಕಾರ್ಯೊರ್ತ ಯಲ್ಲಪ್ಪ ಹೆಗಡೆ ನೇತೃತ್ವದಲ್ಲಿ ೧೫ಕ್ಕೂ ಹೆಚ್ಚು ಜನ ಕೆರೂರು ವರೆಗೆ ನಡಿಗೆಗೆ ಮುಂದಾಗಿದ್ದರು. ಈ ವೇಳೆ ಅನುಮತಿ‌ ಇಲ್ಲದ ಕಾರಣ ಅವರನ್ನು ಪೊಲೀಸರು ವಶಕ್ಕೆ ಪಡೆದರು.