ಡೆಂಗ್ಯೂ: ಯುವಕ ಸಾವು

0
4

ನಿಪ್ಪಾಣಿ: ಇಲ್ಲಿನ ಆಂದೋಲನ ನಗರದ ಯುವಕನೋರ್ವ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ.
ಸೌರಭ್ ರಾಜು ಮಾನೆ(೨೬) ಮೃತಪಟ್ಟ ಯುವಕ. ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಈತ ತಿಂಗಳ ಹಿಂದೆ ನಿಪ್ಪಾಣಿಗೆ ಬಂದಿದ್ದ. ವಾರದ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರ ಬಳಿ ತೋರಿಸಿದಾಗ ರಕ್ತ ತಪಾಸಣೆಯಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗಿರುವುದು ಕಂಡುಬಂದಿದ್ದರಿಂದ ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಸೌರಭಗೆ ಮೂರು ತಿಂಗಳ ಹಿಂದೆ ಮದುವೆಯಾಗಿತ್ತು. ಸೌರಭ ಸಾವನ್ನಪ್ಪಿದ ವಿಷಯ ತಿಳಿಯುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Previous articleಕೌಂಟಿ ಆಡಲು ಹೊರಟ ಚಹಲ್
Next articleಮೋದಿ ಆರ್‌ಎಸ್ಎಸ್‌ನ ಗುಂಗಿನಲ್ಲಿದ್ದಾರೆ