Home ನಮ್ಮ ಜಿಲ್ಲೆ ಮುಳುಗುತ್ತಿದ್ದವನನ್ನು ಹೊರ ತಂದ ಯುವಕ: ಸಾವಿರಾರು ಜನರಿಗೆ ಔತನಕೂಟ

ಮುಳುಗುತ್ತಿದ್ದವನನ್ನು ಹೊರ ತಂದ ಯುವಕ: ಸಾವಿರಾರು ಜನರಿಗೆ ಔತನಕೂಟ

0

ಬಾಗಲಕೋಟೆ: ಜನ್ಮ ದಿನ, ಶ್ರದ್ಧಾಂಜಲಿ ಕಾರ್ಯಕ್ರಮಗಳಿಗೆ ಔತನಕೂಟ ಸಹಜ ಆದರೆ, ಸಾವಿನ ದವಡೆಯಿಂದ ಪಾರಾದ ವ್ಯಕ್ತಿಯಿಂದ ತನ್ನ ಸಂತಸ ಮುಗಿಲು ಮುಟ್ಟಿದ್ದಲ್ಲದೆ ಸಾವಿರಾರು ಜನತೆಗೆ ಔತನಕೂಟ ಏರ್ಪಡಿಸುವ ಮೂಲಕ ನೆಮ್ಮದಿ ಕಾಣುವಲ್ಲಿ ಕಾರಣನಾಗಿದ್ದು ವಿಶೇಷ.
ನಡೆದಿದ್ದೇನು: ಈಚೆಗೆ ಬೆಳಗಾವಿ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ರಬಕವಿಯ ಖಲೀಲ ರಾಜನ್ನವರನನ್ನು ಹದಿ ಹರೆಯುವ ಯುವಕ ಮಲ್ಲಾಪುರ ಗ್ರಾಮದ ವಿಠ್ಠಲ ಒಡೆಯರ್ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾನೆ.
ನದಿ ದಡದ ಬಳಿ ಸೈಕಲ್‌ನಲ್ಲಿ ಹೋಗುತ್ತಿದ್ದ ವಿಠ್ಠಲ ಘಟಪ್ರಭಾ ನದಿಯಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿರುವದನ್ನು ಗಮನಿಸಿದ್ದಾನೆ. ಇಬ್ಬರು ಪ್ರಯಾಣಿಕರಿದ್ದ ಕಾರಿನಿಂದ ಓರ್ವ ಮಾತ್ರ ಹೊರ ಬಂದು ಈಜಿ ದಡ ಸೇರಿದ್ದಾನೆ.
ಮತ್ತೊರ್ವ ಪ್ರಯಾಣಿಕ ವಾಹನದಲ್ಲಿ ಸಿಲುಕಿಕೊಂಡಿರುವದನ್ನು ಗಮನಿಸಿ ಈಜು ಬರುವದಿಲ್ಲವೆಂದು ಅರಿತ ವಿಠ್ಠಲ, ತಕ್ಷಣ ನದಿಗೆ ಹಾರಿ ಕಾರನ್ನು ತಲುಪಿ, ಪ್ರಯಾಣಿಕನನ್ನು ಸುರಕ್ಷಿತವಾಗಿ ಹೊರಗೆಳೆದು ನದಿಯ ದಡಕ್ಕೆ ಕರೆದೊಯ್ದ ಸಿನಿಮೀಯ ಘಟನೆ ನಡೆದಿತ್ತು.
ಇದರ ಸಂಭ್ರಮಕ್ಕಾಗಿ ಶುಕ್ರವಾರದಂದು ರಬಕವಿ-ಬನಹಟ್ಟಿಯ ಸಾವಿರಾರು ಜನರಿಗೆ ಔತನಕೂಟದೊಂದಿಗೆ ಸಂಭ್ರಮಿಸುವ ಮೂಲಕ ತನ್ನ ಜೀವದಾನಕ್ಕೆ ಕಾರಣನಾದ ಯುವಕ ವಿಠ್ಠಲ ಒಡೆಯರ್ ಅವರನ್ನು ಸನ್ಮಾನಿಸಿದ ವಿಶೇಷ ಘಟನೆ ನಡೆಯಿತು.

Exit mobile version