<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>#EntertainmentNews Archives - Samyukta Karnataka</title>
	<atom:link href="https://samyuktakarnataka.in/tag/entertainmentnews/feed/" rel="self" type="application/rss+xml" />
	<link>https://samyuktakarnataka.in/tag/entertainmentnews/</link>
	<description>News that connects you to Karnataka since 1921</description>
	<lastBuildDate>Fri, 14 Aug 2026 06:26:22 +0000</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=7.0.4</generator>

<image>
	<url>https://samyuktakarnataka.in/wp-content/uploads/2025/07/SK-FAVICON-150x146.jpg</url>
	<title>#EntertainmentNews Archives - Samyukta Karnataka</title>
	<link>https://samyuktakarnataka.in/tag/entertainmentnews/</link>
	<width>32</width>
	<height>32</height>
</image> 
	<item>
		<title>AI ತಂತ್ರಜ್ಞಾನದಲ್ಲಿ ‘ಮುಧೋಳ’ ಹೊಸ ಪ್ರಯೋಗ: ಪಾತ್ರ ಪರಿಚಯ ವಿಡಿಯೋ ವೈರಲ್</title>
		<link>https://samyuktakarnataka.in/entertainment/mudhol-movie-ai-character-announcement-vikram-ravichandran/</link>
		
		<dc:creator><![CDATA[Samyukta Karnataka]]></dc:creator>
		<pubDate>Fri, 14 Aug 2026 06:26:21 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<category><![CDATA[#KannadaCinema]]></category>
		<category><![CDATA[#sandalwood]]></category>
		<guid isPermaLink="false">https://samyuktakarnataka.in/?p=104806</guid>

					<description><![CDATA[<p>ವಿಕ್ರಮ್ ರವಿಚಂದ್ರನ್ ‘ಮುಧೋಳ’ಗೆ ಟೆಕ್ನಾಲಜಿ ಟಚ್; AI ಮೂಲಕ ಪಾತ್ರಗಳ ವಿಭಿನ್ನ ಅನಾವರಣ ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ‘ಮುಧೋಳ’ ಚಿತ್ರತಂಡವು ಪ್ರಮೋಷನ್‌ನಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ಈ ಚಿತ್ರದ ಕ್ಯಾರೆಕ್ಟರ್ ಅನೌನ್ಸ್‌ಮೆಂಟ್ ವಿಡಿಯೋದಲ್ಲಿ AI-Generated Visuals ಬಳಕೆ ಮಾಡಲಾಗಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಗ್ಯಾಂಗ್‌ಸ್ಟರ್ ಜಗತ್ತಿನ ಕ್ರೌರ್ಯ, ಅಧಿಕಾರ, ರಗಡ್‌ನೆಸ್ ಹಾಗೂ ಭೂಗತ ಲೋಕದ ವಾತಾವರಣವನ್ನು ಕಟ್ಟಿಕೊಡುವ ರೀತಿಯಲ್ಲಿ ವಿಡಿಯೋ ರೂಪಿಸಲಾಗಿದೆ. ಚಿತ್ರದಲ್ಲಿ ನಟಿಸಿರುವ [&#8230;]</p>
<p>The post <a href="https://samyuktakarnataka.in/entertainment/mudhol-movie-ai-character-announcement-vikram-ravichandran/">AI ತಂತ್ರಜ್ಞಾನದಲ್ಲಿ ‘ಮುಧೋಳ’ ಹೊಸ ಪ್ರಯೋಗ: ಪಾತ್ರ ಪರಿಚಯ ವಿಡಿಯೋ ವೈರಲ್</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ವಿಕ್ರಮ್ ರವಿಚಂದ್ರನ್ ‘ಮುಧೋಳ’ಗೆ ಟೆಕ್ನಾಲಜಿ ಟಚ್; AI ಮೂಲಕ ಪಾತ್ರಗಳ ವಿಭಿನ್ನ ಅನಾವರಣ</strong></p>



<p class="wp-block-paragraph">ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ‘ಮುಧೋಳ’ ಚಿತ್ರತಂಡವು ಪ್ರಮೋಷನ್‌ನಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ಈ ಚಿತ್ರದ ಕ್ಯಾರೆಕ್ಟರ್ ಅನೌನ್ಸ್‌ಮೆಂಟ್ ವಿಡಿಯೋದಲ್ಲಿ AI-Generated Visuals ಬಳಕೆ ಮಾಡಲಾಗಿದ್ದು, ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ.</p>



<p class="wp-block-paragraph">ಗ್ಯಾಂಗ್‌ಸ್ಟರ್ ಜಗತ್ತಿನ ಕ್ರೌರ್ಯ, ಅಧಿಕಾರ, ರಗಡ್‌ನೆಸ್ ಹಾಗೂ ಭೂಗತ ಲೋಕದ ವಾತಾವರಣವನ್ನು ಕಟ್ಟಿಕೊಡುವ ರೀತಿಯಲ್ಲಿ ವಿಡಿಯೋ ರೂಪಿಸಲಾಗಿದೆ. ಚಿತ್ರದಲ್ಲಿ ನಟಿಸಿರುವ ಕಲಾವಿದರ ಪಾತ್ರಗಳ ಪರಿಕಲ್ಪನೆಯನ್ನು ಆಧರಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ವಿಭಿನ್ನ ವಿಶುವಲ್ಸ್ ಸಿದ್ಧಪಡಿಸಲಾಗಿದೆ.</p>



<p class="wp-block-paragraph">ಮಾಸ್ ಎಲಿಮೆಂಟ್ಸ್ ಮತ್ತು ಅನಿರೀಕ್ಷಿತ ತಿರುವುಗಳ ಸುಳಿವು ನೀಡುವ ಈ ಪಾತ್ರ ಪರಿಚಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ‘ಮುಧೋಳ’ ಚಿತ್ರದ ಕಥೆ ಹಾಗೂ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಹಾಗೂ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ರಾಜನ್ ನಿರ್ದೇಶನದ ಚಿತ್ರಕ್ಕೆ ಯುವರಾಜ್ ಚಂದ್ರನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅಮೃತ ಸಿನಿಕ್ರಾಫ್ಸ್ ಸಂಸ್ಥೆಯಡಿ ಚಿತ್ರ ನಿರ್ಮಾಣವಾಗುತ್ತಿದೆ.</p>



<p class="wp-block-paragraph">ಇದೇ ವೇಳೆ ಚಿತ್ರದ ಮೊದಲ ಹಾಡು ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಇದೇ ದಿನ ‘ಚಿಂಟು ಸನ್ ಆಫ್ ವಿಶಾಲಾಕ್ಷಿ’ ಚಿತ್ರದ ಫಸ್ಟ್ ಲುಕ್ ಕೂಡ ಅನಾವರಣಗೊಳ್ಳಲಿದೆ.</p>



<p class="wp-block-paragraph">ಚಿತ್ರದ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ಮಾತನಾಡಿರುವ ವಿಕ್ರಮ್ ರವಿಚಂದ್ರನ್, ಸಿನಿಮಾ ಬಲವಾಗಿ ಮೂಡಿಬರಬೇಕು ಎಂಬ ಪ್ರಯತ್ನದಿಂದ ಸ್ವಲ್ಪ ತಡವಾಗಿದೆ ಎಂದು ಹೇಳಿದ್ದಾರೆ. “ನಿಯತ್ತಿಗೆ ಮತ್ತೊಂದು ಹೆಸರೇ ಮುಧೋಳ್” ಎಂದು ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.</p>



<p class="wp-block-paragraph">AI ತಂತ್ರಜ್ಞಾನವನ್ನು ಪ್ರಮೋಷನ್‌ನ ಪ್ರಮುಖ ಭಾಗವನ್ನಾಗಿ ಮಾಡಿಕೊಂಡಿರುವ ‘ಮುಧೋಳ’ ಇದೀಗ ಚಿತ್ರದ ಕಥೆ, ಪಾತ್ರಗಳು ಮತ್ತು ಆಕ್ಷನ್ ಪ್ರಪಂಚದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.</p>



<p class="wp-block-paragraph"><strong>AI ತಂತ್ರಜ್ಞಾನದ ಮೂಲಕ ‘ಮುಧೋಳ’ ಚಿತ್ರದ ಗ್ಯಾಂಗ್‌ಸ್ಟರ್‌ಗಳ ಪಾತ್ರ ಪರಿಚಯದ ವಿಡಿಯೋ</strong></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="Rqov3bdK2Ks"><iframe title="The World Of Mudhol | A FIRST-OF-ITS-KIND AI CHARACTER ANNOUNCEMENT | Meet the Gangsters" width="696" height="392" src="https://www.youtube.com/embed/Rqov3bdK2Ks?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/mudhol-movie-ai-character-announcement-vikram-ravichandran/">AI ತಂತ್ರಜ್ಞಾನದಲ್ಲಿ ‘ಮುಧೋಳ’ ಹೊಸ ಪ್ರಯೋಗ: ಪಾತ್ರ ಪರಿಚಯ ವಿಡಿಯೋ ವೈರಲ್</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>‘ಶಾಂತಿಕ್ರಾಂತಿ’ ರೀ-ರಿಲೀಸ್ : ವೈರಲ್ ಚರ್ಚೆಗೆ ತೆರೆ ಎಳೆದ ಬಾಲಾಜಿ</title>
		<link>https://samyuktakarnataka.in/entertainment/shanti-kranti-re-release-balaji-veeraswamy-clarification/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 13 Aug 2026 13:54:24 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<category><![CDATA[#KannadaCinema]]></category>
		<category><![CDATA[#sandalwood]]></category>
		<guid isPermaLink="false">https://samyuktakarnataka.in/?p=104788</guid>

					<description><![CDATA[<p>‘ಶಾಂತಿಕ್ರಾಂತಿ’ ರೀ-ರಿಲೀಸ್ ಟ್ರೆಂಡ್‌ ಬಗ್ಗೆ ಹಕ್ಕುದಾರ ಬಾಲಾಜಿ ವೀರಸ್ವಾಮಿ ಸ್ಪಷ್ಟನೆ &#8211; ಶಾಂತಿಕ್ರಾಂತಿ ಮರುಬಿಡುಗಡೆ ಆಗುತ್ತಾ? ಹಕ್ಕುದಾರ ಬಾಲಾಜಿ ವೀರಸ್ವಾಮಿ ಹೇಳಿದ್ದೇನು? ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಶಾಂತಿಕ್ರಾಂತಿ’ ಮರುಬಿಡುಗಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಚಿತ್ರದ ಹಕ್ಕುದಾರರಾದ ಬಾಲಾಜಿ ವೀರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. 1991ರಲ್ಲಿ ಬಿಡುಗಡೆಯಾದ ‘ಶಾಂತಿಕ್ರಾಂತಿ’ ರವಿಚಂದ್ರನ್ ಅವರ ಪ್ರಮುಖ ಹಾಗೂ ಬಹುಭಾಷಾ ಮಹತ್ವಾಕಾಂಕ್ಷೆಯ ಚಿತ್ರವಾಗಿತ್ತು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದ್ದು, [&#8230;]</p>
<p>The post <a href="https://samyuktakarnataka.in/entertainment/shanti-kranti-re-release-balaji-veeraswamy-clarification/">‘ಶಾಂತಿಕ್ರಾಂತಿ’ ರೀ-ರಿಲೀಸ್ : ವೈರಲ್ ಚರ್ಚೆಗೆ ತೆರೆ ಎಳೆದ ಬಾಲಾಜಿ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>‘ಶಾಂತಿಕ್ರಾಂತಿ’ ರೀ-ರಿಲೀಸ್ ಟ್ರೆಂಡ್‌ ಬಗ್ಗೆ ಹಕ್ಕುದಾರ ಬಾಲಾಜಿ ವೀರಸ್ವಾಮಿ ಸ್ಪಷ್ಟನೆ &#8211; ಶಾಂತಿಕ್ರಾಂತಿ ಮರುಬಿಡುಗಡೆ ಆಗುತ್ತಾ? ಹಕ್ಕುದಾರ ಬಾಲಾಜಿ ವೀರಸ್ವಾಮಿ ಹೇಳಿದ್ದೇನು?</strong></p>



<p class="wp-block-paragraph">ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಶಾಂತಿಕ್ರಾಂತಿ’ ಮರುಬಿಡುಗಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಚಿತ್ರದ ಹಕ್ಕುದಾರರಾದ ಬಾಲಾಜಿ ವೀರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.</p>



<p class="wp-block-paragraph">1991ರಲ್ಲಿ ಬಿಡುಗಡೆಯಾದ ‘ಶಾಂತಿಕ್ರಾಂತಿ’ ರವಿಚಂದ್ರನ್ ಅವರ ಪ್ರಮುಖ ಹಾಗೂ ಬಹುಭಾಷಾ ಮಹತ್ವಾಕಾಂಕ್ಷೆಯ ಚಿತ್ರವಾಗಿತ್ತು. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದ್ದು, ಕನ್ನಡದಲ್ಲಿ ರವಿಚಂದ್ರನ್, ತೆಲುಗಿನಲ್ಲಿ ನಾಗಾರ್ಜುನ ಹಾಗೂ ತಮಿಳು-ಹಿಂದಿ ಆವೃತ್ತಿಗಳಲ್ಲಿ ರಜನಿಕಾಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.</p>



<p class="wp-block-paragraph">ಇತ್ತೀಚೆಗೆ ಚಿತ್ರದ ಮರುಬಿಡುಗಡೆ ಕುರಿತ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಾಗಿದೆ. ಆದರೆ ‘ರೀ-ರಿಲೀಸ್’ ಕುರಿತು ವಿವಿಧ ರೀತಿಯ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಹಕ್ಕುದಾರ ಬಾಲಾಜಿ ವೀರಸ್ವಾಮಿ ಅವರು ಈ ಟ್ರೆಂಡ್‌ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.</p>



<p class="wp-block-paragraph">ತಮ್ಮ ಸಂಸ್ಥೆ ಹಾಗೂ ಸಹೋದರ ರಚಿಚಂದ್ರನ ಮತ್ತು ಚಿತ್ರದ ಮೇಲಿನ ಸಾರ್ವಜನಿಕರ ಅಭಿಮಾನಕ್ಕೆ ಚಿರಋಣಿ ಎಂದಿದ್ದಾರೆ. ಶಾಂತಿ ಕ್ರಾಂತಿ ರೀ-ರಿಲೀಸ್ ಕುರಿತಂತೆ ಅಭಿಮಾನಿಗಳಲ್ಲಿ ಕ್ರೇಜ್‌ ಆರಂಭವಾಗುತ್ತಿದಂತೆ ಬಾಲಾಜಿ ಹಾಗೂ ಸಹೋದರ ರವಿಚಂದ್ರನ ಈ ಕುರಿತಂತೆ ಮಾತನಾಡಿರುವುದಾಗಿ ತಿಳಿಸಿರುವ ಅವರು, ರೀ-ರಿಲೀಸ್ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.</p>



<figure class="wp-block-embed alignleft is-type-rich is-provider-x wp-block-embed-x"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ರವಿಚಂದ್ರನ್ ಅವರ ‘ಶಾಂತಿಕ್ರಾಂತಿ’ ಮರುಬಿಡುಗಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಚಿತ್ರದ ಹಕ್ಕುದಾರ ಬಾಲಾಜಿ ವೀರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.  <a href="https://t.co/zzTiFETt88">https://t.co/zzTiFETt88</a><a href="https://x.com/hashtag/%E0%B2%B6%E0%B2%BE%E0%B2%82%E0%B2%A4%E0%B2%BF%E0%B2%95%E0%B3%8D%E0%B2%B0%E0%B2%BE%E0%B2%82%E0%B2%A4%E0%B2%BF?src=hash&amp;ref_src=twsrc%5Etfw">#ಶಾಂತಿಕ್ರಾಂತಿ</a> <a href="https://x.com/hashtag/ShantiKranti?src=hash&amp;ref_src=twsrc%5Etfw">#ShantiKranti</a> <a href="https://x.com/hashtag/Ravichandran?src=hash&amp;ref_src=twsrc%5Etfw">#Ravichandran</a> <a href="https://x.com/hashtag/ReRelease?src=hash&amp;ref_src=twsrc%5Etfw">#ReRelease</a> <a href="https://t.co/XKNHHvczww">pic.twitter.com/XKNHHvczww</a></p>&mdash; Samyukta Karnataka (@SamyuktaKarnatk) <a href="https://x.com/SamyuktaKarnatk/status/2087901033217544303?ref_src=twsrc%5Etfw">August 13, 2026</a></blockquote><script async src="https://platform.x.com/widgets.js" charset="utf-8"></script>
</div></figure>



<p class="wp-block-paragraph">ಶಾಂತಿ ಕ್ರಾಂತಿಯ ರೀಲ್‌ ಈಗಾಗಲೆ ಮೆಲ್ಟ್‌ ಆಗಿದೆ, ಅದನ್ನು ಈಗಿನ ಟೆಕ್ನಾಲಜೆಗೆ ತಕ್ಕಂತೆ ಮಾರ್ಪಾಡು ಮಾಡುವುದು ಕಷ್ಟಕರ ಆದರೆ ಅದನ್ನು ತಾಂತ್ರಿಕವಾಗಿ ಹೇಗೆಲ್ಲಾ ಮಾಡಬಹದು ಎಂಬ ನಮ್ಮ ಪ್ರಯತ್ನ ನಿರಂತರವಾಗಿ ಸಾಗಿದೆ. ಸೂಕ್ತ ತಂತ್ರಜ್ಞಾನ ದೊರೆತಲ್ಲಿ ಅದನ್ನು ಸಿದ್ದಪಡಿಸಿ ನಿಮ್ಮ ಮುಂದೆ ಪ್ರದರ್ಶನ ಮಾಡುವ ಉದ್ದೇಶದ ಆಶಯ ನಮಗೂ ಇದೆ. ಹಾಗೆನಾದರೂ ಈ ಕಾರ್ಯ ಆರಂಭವಾದರೆ ನಿಮ್ಮೆಲ್ಲರಿಗೂ ತಿಳಿಸಿ ಓಂ ಕಾರ ಹಾಕಲಾಗುವುದು ಎಂದಿದ್ದಾರೆ.</p>



<p class="wp-block-paragraph">ಆದರೆ ಇನ್ನೂ ಮುಂದುವರೆದು ತಾಂತ್ರಿಕವಾಗಿ ಈ ಕೆಲಸ ಆರಂಭ ಮಾಡಿದ್ರೆ ಕನಿಷ್ಟ ಒಂದು ವರ್ಷ ತಗಲಿಲದೆ ಎಂದು ಸಹ ತಿಳಿಸಿದ್ದಾರೆ. ಬಿಡುಗಡೆ ಕುರಿತಂತೆ ಈಗಾಗಲೆ ದಿನಾಂಕ ವದಂತಿಗಳನ್ನೂ ನಂಬ ಬೇಡಿ ಎಂದು ವಿನಂತಿಸಿದ್ದಾರೆ.</p>



<p class="wp-block-paragraph">‘ಶಾಂತಿಕ್ರಾಂತಿ’ ತನ್ನ ಕಾಲದಲ್ಲಿ ದೊಡ್ಡ ಮಟ್ಟದ ನಿರ್ಮಾಣ, ಬಹುಭಾಷಾ ತಾರಾಬಳಗ ಹಾಗೂ ಅದ್ದೂರಿ ದೃಶ್ಯ ವೈಭವದಿಂದ ಗಮನ ಸೆಳೆದಿದ್ದ ಚಿತ್ರವಾಗಿದೆ. ಬಿಡುಗಡೆಯ ಸಂದರ್ಭದಲ್ಲಿ ವಾಣಿಜ್ಯವಾಗಿ ನಿರೀಕ್ಷಿತ ಯಶಸ್ಸು ಪಡೆಯದಿದ್ದರೂ, ಚಿತ್ರದ ನಿರ್ಮಾಣದ ಸಾಹಸ ಮತ್ತು ರವಿಚಂದ್ರನ್ ಅವರ ಪ್ರಯೋಗಶೀಲತೆಗೆ ಇಂದಿಗೂ ಚರ್ಚೆಯಾಗುತ್ತದೆ.</p>



<p class="wp-block-paragraph">ಈ ಹಿನ್ನೆಲೆಯಲ್ಲಿ ಚಿತ್ರವನ್ನು ಮತ್ತೆ ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗಲಿದೆಯೇ ಎಂಬುದು ರವಿಚಂದ್ರನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಹಕ್ಕುದಾರರ ಇತ್ತೀಚಿನ ಸ್ಪಷ್ಟನೆಯ ನಂತರ ‘ಶಾಂತಿಕ್ರಾಂತಿ’ ಮರುಬಿಡುಗಡೆಯ ಮುಂದಿನ ಬೆಳವಣಿಗೆಗಳತ್ತ ಸಿನಿಪ್ರಿಯರ ಗಮನ ನೆಟ್ಟಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/shanti-kranti-re-release-balaji-veeraswamy-clarification/">‘ಶಾಂತಿಕ್ರಾಂತಿ’ ರೀ-ರಿಲೀಸ್ : ವೈರಲ್ ಚರ್ಚೆಗೆ ತೆರೆ ಎಳೆದ ಬಾಲಾಜಿ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ಹಿಂದಿ ಟ್ರೇಲರ್ ಬಿಡುಗಡೆ</title>
		<link>https://samyuktakarnataka.in/entertainment/7-dogs-hindi-trailer-salman-khan-sanjay-dutt-release/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 13 Aug 2026 09:39:38 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<guid isPermaLink="false">https://samyuktakarnataka.in/?p=104771</guid>

					<description><![CDATA[<p>ಮುಂಬೈ: ಭಾರತೀಯ ಮತ್ತು ಈಜಿಪ್ಟಿನ ಸೂಪರ್‌ಸ್ಟಾರ್‌ಗಳ ಸಂಗಮದ ಅಂತರರಾಷ್ಟ್ರೀಯ ಆ್ಯಕ್ಷನ್ ಚಿತ್ರ ‘7 ಡಾಗ್ಸ್’ನ ಹಿಂದಿ ಟ್ರೇಲರ್ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಆಗಸ್ಟ್ 21, 2026ರಂದು ಭಾರತದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಜಿಪ್ಟಿನ ತಾರೆಯರಾದ ಅಹ್ಮದ್ ಎಝ್ ಮತ್ತು ಕರೀಮ್ ಅಬ್ದೆಲ್ ಅಜೀಜ್ ಅವರೊಂದಿಗೆ ಭಾರತೀಯ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಜತೆಗೆ ಅಂತರರಾಷ್ಟ್ರೀಯ ಖ್ಯಾತಿಯ ನಟಿಯರಾದ ಮೋನಿಕಾ [&#8230;]</p>
<p>The post <a href="https://samyuktakarnataka.in/entertainment/7-dogs-hindi-trailer-salman-khan-sanjay-dutt-release/">ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ಹಿಂದಿ ಟ್ರೇಲರ್ ಬಿಡುಗಡೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಮುಂಬೈ: ಭಾರತೀಯ ಮತ್ತು ಈಜಿಪ್ಟಿನ ಸೂಪರ್‌ಸ್ಟಾರ್‌ಗಳ ಸಂಗಮದ ಅಂತರರಾಷ್ಟ್ರೀಯ ಆ್ಯಕ್ಷನ್ ಚಿತ್ರ ‘7 ಡಾಗ್ಸ್’ನ ಹಿಂದಿ ಟ್ರೇಲರ್ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಆಗಸ್ಟ್ 21, 2026ರಂದು ಭಾರತದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.</p>



<p class="wp-block-paragraph">ಈಜಿಪ್ಟಿನ ತಾರೆಯರಾದ ಅಹ್ಮದ್ ಎಝ್ ಮತ್ತು ಕರೀಮ್ ಅಬ್ದೆಲ್ ಅಜೀಜ್ ಅವರೊಂದಿಗೆ ಭಾರತೀಯ ಸೂಪರ್‌ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಜತೆಗೆ ಅಂತರರಾಷ್ಟ್ರೀಯ ಖ್ಯಾತಿಯ ನಟಿಯರಾದ ಮೋನಿಕಾ ಬೆಲ್ಲುಸಿ ಮತ್ತು ಜಿಯಾನ್ಕಾರ್ಲೊ ಎಸ್ಪೊಸಿಟೊ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.</p>



<p class="wp-block-paragraph">ಜನರಲ್ ಎಂಟರ್‌ಟೈನ್‌ಮೆಂಟ್ ಅಥಾರಿಟಿ (GEA) ಮತ್ತು ರಿಯಾದ್ ಸೀಸನ್ ಬೆಂಬಲದೊಂದಿಗೆ ಸೆಲಾ ಸ್ಟುಡಿಯೋಸ್ ನಿರ್ಮಿಸಿರುವ ‘7 ಡಾಗ್ಸ್’ ಚಿತ್ರವನ್ನು ಆದಿಲ್ ಎಲ್ ಅರ್ಬಿ ಮತ್ತು ಬಿಲಾಲ್ ಫಲ್ಲಾ ನಿರ್ದೇಶಿಸಿದ್ದಾರೆ. ಇವರಿಬ್ಬರು ‘ಬ್ಯಾಡ್ ಬಾಯ್ಸ್ ಫಾರ್ ಲೈಫ್’ ಮತ್ತು ‘ಬ್ಯಾಡ್ ಬಾಯ್ಸ್: ರೈಡ್ ಆರ್ ಡೈ’ ಸಿನಿಮಾಗಳ ನಿರ್ದೇಶಕರಾಗಿದ್ದಾರೆ.</p>



<p class="wp-block-paragraph">ಟ್ರೇಲರ್‌ನಲ್ಲಿ ಹೈ-ಆಕ್ಟೇನ್ ಆ್ಯಕ್ಷನ್, ಅಂತರರಾಷ್ಟ್ರೀಯ ಮಟ್ಟದ ತಾರಾಬಳಗ ಹಾಗೂ ಭರ್ಜರಿ ದೃಶ್ಯ ವೈಭವ ಗಮನ ಸೆಳೆಯುತ್ತಿದ್ದು, ಭಾರತದಲ್ಲಿ ಚಿತ್ರದ ಬಿಡುಗಡೆಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.</p>



<figure class="wp-block-embed aligncenter is-type-rich is-provider-x wp-block-embed-x"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಸಲ್ಮಾನ್ ಖಾನ್, ಸಂಜಯ್ ದತ್ ಅಭಿನಯದ ಅಂತರರಾಷ್ಟ್ರೀಯ ಆ್ಯಕ್ಷನ್ ಚಿತ್ರ ‘7 ಡಾಗ್ಸ್’ ಹಿಂದಿ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಆಗಸ್ಟ್ 21, 2026ರಂದು ಭಾರತದಲ್ಲಿ ರಿಲೀಸ್.<a href="https://t.co/H5u6A4LsIG">https://t.co/H5u6A4LsIG</a><a href="https://x.com/hashtag/7Dogs?src=hash&amp;ref_src=twsrc%5Etfw">#7Dogs</a> <a href="https://t.co/lOtjydeJ8L">pic.twitter.com/lOtjydeJ8L</a></p>&mdash; Samyukta Karnataka (@SamyuktaKarnatk) <a href="https://x.com/SamyuktaKarnatk/status/2087836620875870619?ref_src=twsrc%5Etfw">August 13, 2026</a></blockquote><script async src="https://platform.x.com/widgets.js" charset="utf-8"></script>
</div></figure>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/7-dogs-hindi-trailer-salman-khan-sanjay-dutt-release/">ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ಹಿಂದಿ ಟ್ರೇಲರ್ ಬಿಡುಗಡೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಆ್ಯಕ್ಷನ್‌ಗೆ ಸಜ್ಜಾದ ತಲೈವಾ: ‘ಧರ್ಮನ್’ 2ನೇ ವೇಳಾಪಟ್ಟಿ ಆರಂಭ</title>
		<link>https://samyuktakarnataka.in/entertainment/rajinikanth-dharman-the-deadly-doctor-second-schedule/</link>
		
		<dc:creator><![CDATA[Samyukta Karnataka]]></dc:creator>
		<pubDate>Thu, 13 Aug 2026 05:10:12 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<guid isPermaLink="false">https://samyuktakarnataka.in/?p=104748</guid>

					<description><![CDATA[<p>ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ತಮಿಳು ಆ್ಯಕ್ಷನ್ ಥ್ರಿಲ್ಲರ್ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಚಿತ್ರದ ಚಿತ್ರೀಕರಣ ಮತ್ತೆ ಭರದಿಂದ ಸಾಗುತ್ತಿದೆ. ಚಿತ್ರದ ಎರಡನೇ ವೇಳಾಪಟ್ಟಿಯ ಚಿತ್ರೀಕರಣ ಆಗಸ್ಟ್ 13, 2026ರಂದು ಆರಂಭವಾಗಿದ್ದು, ಈ ಮೂಲಕ ಸಿನಿಮಾದ ಬಗ್ಗೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ (Raaj Kamal Films International) ನಿರ್ಮಾಣದ ಈ ಚಿತ್ರವನ್ನು ಅಶ್ವತ್ ಮಾರಿಮುತ್ತು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಇದೇ ಮೊದಲ ಬಾರಿಗೆ ವೈದ್ಯರ [&#8230;]</p>
<p>The post <a href="https://samyuktakarnataka.in/entertainment/rajinikanth-dharman-the-deadly-doctor-second-schedule/">ಆ್ಯಕ್ಷನ್‌ಗೆ ಸಜ್ಜಾದ ತಲೈವಾ: ‘ಧರ್ಮನ್’ 2ನೇ ವೇಳಾಪಟ್ಟಿ ಆರಂಭ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph">ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ತಮಿಳು ಆ್ಯಕ್ಷನ್ ಥ್ರಿಲ್ಲರ್ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಚಿತ್ರದ ಚಿತ್ರೀಕರಣ ಮತ್ತೆ ಭರದಿಂದ ಸಾಗುತ್ತಿದೆ. ಚಿತ್ರದ ಎರಡನೇ ವೇಳಾಪಟ್ಟಿಯ ಚಿತ್ರೀಕರಣ ಆಗಸ್ಟ್ 13, 2026ರಂದು ಆರಂಭವಾಗಿದ್ದು, ಈ ಮೂಲಕ ಸಿನಿಮಾದ ಬಗ್ಗೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.</p>



<p class="wp-block-paragraph">ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ (Raaj Kamal Films International) ನಿರ್ಮಾಣದ ಈ ಚಿತ್ರವನ್ನು ಅಶ್ವತ್ ಮಾರಿಮುತ್ತು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ಇದೇ ಮೊದಲ ಬಾರಿಗೆ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ‘ದಿ ಡೆಡ್ಲಿ ಡಾಕ್ಟರ್’ ಎಂಬ ಟ್ಯಾಗ್‌ಲೈನ್ ಕೂಡ ಚಿತ್ರದ ನಾಯಕನ ಪಾತ್ರದ ಸುತ್ತಲಿನ ಕುತೂಹಲವನ್ನು ಹೆಚ್ಚಿಸಿದೆ.</p>



<p class="wp-block-paragraph">ಚಿತ್ರದ ಎರಡನೇ ವೇಳಾಪಟ್ಟಿ ಆರಂಭವಾಗಿರುವುದನ್ನು ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದು, ‘ಡೆಡ್ಲಿ ಡಾಕ್ಟರ್ ಆನ್ ಡ್ಯೂಟಿ’ ಎಂಬ ಬರಹದೊಂದಿಗೆ ರಜನಿಕಾಂತ್ ಅವರ ಹೊಸ ಲುಕ್‌ ಅನ್ನು ಮತ್ತಷ್ಟು ಹೈಲೈಟ್ ಮಾಡಿದೆ. ಈ ಅಪ್‌ಡೇಟ್ ಅಭಿಮಾನಿಗಳಲ್ಲಿ ತಕ್ಷಣವೇ ಗಮನ ಸೆಳೆದಿದೆ.</p>



<p class="wp-block-paragraph"><strong>ಮೊದಲ ವೇಳಾಪಟ್ಟಿ ಪೂರ್ಣ : </strong>ಬೇಸಿಗೆಯಲ್ಲಿ ಚಿತ್ರದ ಮೊದಲ ವೇಳಾಪಟ್ಟಿಯ ಚಿತ್ರೀಕರಣ ಪೂರ್ಣಗೊಂಡ ಬಳಿಕ ಇದೀಗ ತಂಡ ಎರಡನೇ ಹಂತದ ಶೂಟಿಂಗ್‌ಗೆ ಪ್ರವೇಶಿಸಿದೆ. ಚಿತ್ರದ ಕಥೆ ಮತ್ತು ಆ್ಯಕ್ಷನ್ ಅಂಶಗಳ ಬಗ್ಗೆ ನಿರ್ಮಾಪಕರು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸದಿದ್ದರೂ, ಸಿನಿಮಾ ಹೈ-ಆಕ್ಟೇನ್ ಆ್ಯಕ್ಷನ್ ಹಾಗೂ ರಜನಿಕಾಂತ್ ಅವರ ವಿಭಿನ್ನ ಪಾತ್ರವನ್ನು ಒಳಗೊಂಡಿರಲಿದೆ ಎಂಬ ನಿರೀಕ್ಷೆ ಮೂಡಿದೆ.</p>



<p class="wp-block-paragraph"><strong>ಅಶ್ವತ್ ಮಾರಿಮುತ್ತು ಜೊತೆ ರಜನಿಕಾಂತ್ :</strong> ‘ಧರ್ಮನ್’ ಮೂಲಕ ರಜನಿಕಾಂತ್ ಹಾಗೂ ನಿರ್ದೇಶಕ ಅಶ್ವತ್ ಮಾರಿಮುತ್ತು ಮೊದಲ ಬಾರಿಗೆ ಪ್ರಮುಖವಾಗಿ ಕೈಜೋಡಿಸುತ್ತಿದ್ದಾರೆ. ಅಶ್ವತ್ ಮಾರಿಮುತ್ತು ಅವರು ಈ ಹಿಂದೆ ‘ಓ ಮೈ ಕಡವುಳೆ’ ಮತ್ತು ‘ಡ್ರ್ಯಾಗನ್’ ಮುಂತಾದ ಚಿತ್ರಗಳ ಮೂಲಕ ವಿಭಿನ್ನ ಕಥನಶೈಲಿಗೆ ಗಮನ ಸೆಳೆದಿದ್ದಾರೆ. ‘ಧರ್ಮನ್’ ಘೋಷಣೆಯ ವೇಳೆ ಅವರೇ ಚಿತ್ರದ ನಿರ್ದೇಶಕರಾಗಿ ಅಧಿಕೃತವಾಗಿ ದೃಢಪಟ್ಟಿದ್ದರು.</p>



<p class="wp-block-paragraph"><strong>ಸಿಮ್ರಾನ್-ರಾಶಿ ಖನ್ನಾ ಜೋಡಿ : </strong>ಚಿತ್ರದ ತಾರಾಬಳಗದಲ್ಲಿ ಸಿಮ್ರಾನ್ ಮತ್ತು ರಾಶಿ ಖನ್ನಾ ಪ್ರಮುಖ ಹೆಸರುಗಳಾಗಿವೆ. ರಜನಿಕಾಂತ್ ಮತ್ತು ಸಿಮ್ರಾನ್ ಮತ್ತೊಮ್ಮೆ ಒಂದಾಗುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿರುವ ಪ್ರಮುಖ ಅಂಶವಾಗಿದೆ. ರಜನಿಕಾಂತ್ ಹಾಗೂ ಸಿಮ್ರಾನ್ ಈ ಹಿಂದೆ ‘ಪೆಟ್ಟಾ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.</p>



<p class="wp-block-paragraph"><strong>ಕಮಲ್ ಹಾಸನ್ ನಿರ್ಮಾಣ :</strong> ‘ಧರ್ಮನ್’ ಚಿತ್ರಕ್ಕೆ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ಬೆಂಬಲ ನೀಡುತ್ತಿರುವುದು ಮತ್ತೊಂದು ವಿಶೇಷ. ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ದಶಕಗಳ ಸ್ನೇಹ ಹಾಗೂ ಸಿನಿಮಾ ಸಂಬಂಧದ ಹಿನ್ನೆಲೆಯಲ್ಲಿ ಈ ಪ್ರಾಜೆಕ್ಟ್‌ಗೆ ಆರಂಭದಿಂದಲೇ ಭಾರೀ ನಿರೀಕ್ಷೆ ಇದೆ. ಚಿತ್ರದ ಶೀರ್ಷಿಕೆ ಘೋಷಣೆಯ ಸಂದರ್ಭದಲ್ಲೂ ಕಮಲ್ ಹಾಸನ್ ಅವರು ರಜನಿಕಾಂತ್ ಜೊತೆಗಿನ ತಮ್ಮ ದೀರ್ಘಕಾಲದ ಸಂಬಂಧ ಮತ್ತು ಈ ಸಹಯೋಗದ ವಿಶೇಷತೆಯನ್ನು ಹಂಚಿಕೊಂಡಿದ್ದರು.</p>



<p class="wp-block-paragraph"><strong>ಮಾಸ್ ಲುಕ್‌ಗೆ ಅಭಿಮಾನಿಗಳ ಮೆಚ್ಚುಗೆ :</strong> ಚಿತ್ರದ ಹೊಸ ಅಪ್‌ಡೇಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ರಜನಿಕಾಂತ್ ಅವರ ಮಾಸ್ ಲುಕ್ ಮತ್ತು ಹಿನ್ನೆಲೆ ಸಂಗೀತದ ಬಗ್ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಡೆಡ್ಲಿ ಡಾಕ್ಟರ್’ ಎಂಬ ಹೊಸ ಅವತಾರದಲ್ಲಿ ತಲೈವಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ.</p>



<p class="wp-block-paragraph">ಒಟ್ಟಿನಲ್ಲಿ, ರಜನಿಕಾಂತ್ ಅವರ ವಿಭಿನ್ನ ವೈದ್ಯರ ಪಾತ್ರ, ಅಶ್ವತ್ ಮಾರಿಮುತ್ತು ಅವರ ನಿರ್ದೇಶನ, ಕಮಲ್ ಹಾಸನ್ ಅವರ ನಿರ್ಮಾಣ ಹಾಗೂ ಸಿಮ್ರಾನ್-ರಾಶಿ ಖನ್ನಾ ಸೇರಿದಂತೆ ಗಮನ ಸೆಳೆಯುವ ತಾರಾಬಳಗದಿಂದ ‘ಧರ್ಮನ್: ದಿ ಡೆಡ್ಲಿ ಡಾಕ್ಟರ್’ ಚಿತ್ರರಂಗದ ಬಹುನಿರೀಕ್ಷಿತ ಆ್ಯಕ್ಷನ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಎರಡನೇ ವೇಳಾಪಟ್ಟಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚಿತ್ರದ ಮತ್ತಷ್ಟು ಲುಕ್‌ಗಳು, ಚಿತ್ರೀಕರಣದ ಅಪ್‌ಡೇಟ್‌ಗಳು ಮತ್ತು ಅಧಿಕೃತ ಮಾಹಿತಿಗಾಗಿ ಅಭಿಮಾನಿಗಳು ಕಾದಿದ್ದಾರೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/rajinikanth-dharman-the-deadly-doctor-second-schedule/">ಆ್ಯಕ್ಷನ್‌ಗೆ ಸಜ್ಜಾದ ತಲೈವಾ: ‘ಧರ್ಮನ್’ 2ನೇ ವೇಳಾಪಟ್ಟಿ ಆರಂಭ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ನಮ್ಮ ಮೆಟ್ರೋದಲ್ಲಿ ‘ಟಾಕ್ಸಿಕ್’ ಕ್ರೇಜ್: ಸಿನಿ ಪ್ರಚಾರಕ್ಕೆ ಭರ್ಜರಿ ಪ್ಲಾನ್</title>
		<link>https://samyuktakarnataka.in/entertainment/toxic-movie-yash-bengaluru-metro-promotion/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 12 Aug 2026 10:18:44 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<category><![CDATA[#KannadaCinema]]></category>
		<category><![CDATA[#sandalwood]]></category>
		<guid isPermaLink="false">https://samyuktakarnataka.in/?p=104698</guid>

					<description><![CDATA[<p>ನಮ್ಮ ಮೆಟ್ರೋ ರೈಲನ್ನೇ ಪ್ರಚಾರದ ವೇದಿಕೆ ಮಾಡಿಕೊಂಡ ಯಶ್: ‘ಟಾಕ್ಸಿಕ್’ ಪೋಸ್ಟರ್‌ಗೆ ಭಾರಿ ಕ್ರೇಜ್ ಬೆಂಗಳೂರು: ‘ಕೆಜಿಎಫ್’ ಸರಣಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮೂಲಕ ಮತ್ತೊಮ್ಮೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದ್ದಾರೆ. ಸಿನಿಮಾ ನಿರ್ಮಾಣದಷ್ಟೇ ಪ್ರಚಾರದಲ್ಲಿಯೂ ವಿಭಿನ್ನ ಪ್ರಯೋಗಗಳಿಗೆ ಮುಂದಾಗುತ್ತಿರುವ ಯಶ್, ಇದೀಗ ಬೆಂಗಳೂರಿನ ಜನಜೀವನದ ಅವಿಭಾಜ್ಯ ಅಂಗವಾಗಿರುವ ‘ನಮ್ಮ ಮೆಟ್ರೋ’ವನ್ನೇ ‘ಟಾಕ್ಸಿಕ್’ ಪ್ರಚಾರದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ‘ಟಾಕ್ಸಿಕ್’ [&#8230;]</p>
<p>The post <a href="https://samyuktakarnataka.in/entertainment/toxic-movie-yash-bengaluru-metro-promotion/">ನಮ್ಮ ಮೆಟ್ರೋದಲ್ಲಿ ‘ಟಾಕ್ಸಿಕ್’ ಕ್ರೇಜ್: ಸಿನಿ ಪ್ರಚಾರಕ್ಕೆ ಭರ್ಜರಿ ಪ್ಲಾನ್</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ನಮ್ಮ ಮೆಟ್ರೋ ರೈಲನ್ನೇ ಪ್ರಚಾರದ ವೇದಿಕೆ ಮಾಡಿಕೊಂಡ ಯಶ್: ‘ಟಾಕ್ಸಿಕ್’ ಪೋಸ್ಟರ್‌ಗೆ ಭಾರಿ ಕ್ರೇಜ್</strong></p>



<p class="wp-block-paragraph">ಬೆಂಗಳೂರು: ‘ಕೆಜಿಎಫ್’ ಸರಣಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮೂಲಕ ಮತ್ತೊಮ್ಮೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದ್ದಾರೆ. ಸಿನಿಮಾ ನಿರ್ಮಾಣದಷ್ಟೇ ಪ್ರಚಾರದಲ್ಲಿಯೂ ವಿಭಿನ್ನ ಪ್ರಯೋಗಗಳಿಗೆ ಮುಂದಾಗುತ್ತಿರುವ ಯಶ್, ಇದೀಗ ಬೆಂಗಳೂರಿನ ಜನಜೀವನದ ಅವಿಭಾಜ್ಯ ಅಂಗವಾಗಿರುವ ‘ನಮ್ಮ ಮೆಟ್ರೋ’ವನ್ನೇ ‘ಟಾಕ್ಸಿಕ್’ ಪ್ರಚಾರದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.</p>



<p class="wp-block-paragraph">‘ಟಾಕ್ಸಿಕ್’ ಚಿತ್ರತಂಡದ ನಿರ್ಮಾಣ ಸಂಸ್ಥೆ KVN Productions ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿನ ಮೆಟ್ರೋ ರೈಲಿನ ಮೇಲೆ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್‌ಗಳು ರಾರಾಜಿಸುತ್ತಿರುವ ದೃಶ್ಯಗಳು ಗಮನ ಸೆಳೆದಿವೆ.</p>



<p class="wp-block-paragraph"><strong>ನಮ್ಮ</strong> <strong>ಮೆಟ್ರೋ ರೈಲಿನ ಮೇಲೆ ರಾಕಿ ಭಾಯ್:</strong> ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಪ್ರಯಾಣಿಸುವ ನಮ್ಮ ಮೆಟ್ರೋ ರೈಲಿನ ಬೋಗಿಗಳ ಹೊರಭಾಗದಲ್ಲಿ ‘ಟಾಕ್ಸಿಕ್’ ಸಿನಿಮಾದ ಭರ್ಜರಿ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಯಶ್ ಅವರ ಕೈಯಲ್ಲಿ ಗನ್ ಹಿಡಿದಿರುವ ಮಾಸ್ ಹಾಗೂ ಸ್ಟೈಲಿಶ್ ಲುಕ್ನ ಪೋಸ್ಟರ್‌ಗಳು ಮೆಟ್ರೋ ರೈಲಿನ ಹೊರಭಾಗದಲ್ಲಿ ಪ್ರಮುಖವಾಗಿ ಕಾಣಿಸುತ್ತಿವೆ. ನಗರದ ವಿವಿಧ ಮಾರ್ಗಗಳಲ್ಲಿ ಮೆಟ್ರೋ ಸಂಚರಿಸುವಾಗ ಈ ಪೋಸ್ಟರ್‌ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.</p>



<p class="wp-block-paragraph">ಮೆಟ್ರೋ ಮೂಲಕ ಪ್ರತಿದಿನ ಪ್ರಯಾಣಿಸುವ ಸಾವಿರಾರು ಮಂದಿ ಹಾಗೂ ರೈಲು ಸಂಚರಿಸುವ ಮಾರ್ಗದ ಸುತ್ತಮುತ್ತಲಿನ ಜನರಿಗೆ ‘ಟಾಕ್ಸಿಕ್’ ಪೋಸ್ಟರ್‌ಗಳು ಕಾಣಿಸುತ್ತಿರುವುದರಿಂದ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವ್ಯಾಪ್ತಿ ದೊರೆತಿದೆ.</p>



<p class="wp-block-paragraph"><strong>ಪ್ರಚಾರದಲ್ಲೂ ಯಶ್ ಹೊಸ ಪ್ರಯೋಗ :</strong> ‘ಕೆಜಿಎಫ್’ ಬಳಿಕ ಯಶ್ ಅವರ ಪ್ರತಿಯೊಂದು ಸಿನಿಮಾದ ಮೇಲೂ ದೇಶಾದ್ಯಂತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕುತೂಹಲ ಹೆಚ್ಚಾಗಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರದಲ್ಲೂ ಚಿತ್ರತಂಡ ಸಾಂಪ್ರದಾಯಿಕ ಪ್ರಚಾರದ ಮಾದರಿಯಿಂದ ಹೊರಬಂದು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದೆ.</p>



<p class="wp-block-paragraph">ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋವನ್ನು ಪ್ರಚಾರಕ್ಕಾಗಿ ಬಳಸಿರುವುದು ಇದೇ ಪ್ರಯತ್ನದ ಮತ್ತೊಂದು ಭಾಗವಾಗಿದೆ. ಇದರಿಂದ ಸಿನಿಮಾ ಬಿಡುಗಡೆಯ ಮುನ್ನವೇ ನಗರದಾದ್ಯಂತ ‘ಟಾಕ್ಸಿಕ್’ ಬಗ್ಗೆ ಚರ್ಚೆ ಮತ್ತಷ್ಟು ಹೆಚ್ಚಾಗಿದೆ.</p>



<p class="wp-block-paragraph"><strong>ಜಾಗತಿಕ ಪ್ರೇಕ್ಷಕರನ್ನು ತಲುಪುವ ಗುರಿ :</strong> ‘ಟಾಕ್ಸಿಕ್’ ಅನ್ನು ಕೇವಲ ಕನ್ನಡ ಸಿನಿಮಾವಾಗಿ ಸೀಮಿತಗೊಳಿಸದೆ ಜಾಗತಿಕ ಪ್ರೇಕ್ಷಕರನ್ನು ತಲುಪಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ದೇಶದ ವಿವಿಧ ಚಿತ್ರರಂಗಗಳ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಚಿತ್ರತಂಡ ಗಮನ ಹರಿಸಿದೆ. ಈ ಹಿಂದೆ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ದೇಶ-ವಿದೇಶಗಳ ಮಾಧ್ಯಮಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.</p>



<p class="wp-block-paragraph">ಯಶ್ ಅವರ ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗದ ಸಿನಿಮಾಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೊರೆತಿರುವ ಗಮನವನ್ನು ‘ಟಾಕ್ಸಿಕ್’ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ.</p>



<p class="wp-block-paragraph"><strong>ಬಿಡುಗಡೆ ದಿನಾಂಕ ಯಾವಾಗ? : </strong>‘ಟಾಕ್ಸಿಕ್’ ಸಿನಿಮಾವನ್ನು ಆರಂಭದಲ್ಲಿ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ ಅಂತರರಾಷ್ಟ್ರೀಯ ಬೆಳವಣಿಗೆಗಳು ಹಾಗೂ ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಗಳನ್ನು ಪರಿಗಣಿಸಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಚಿತ್ರತಂಡದ ಯೋಜನೆಯಂತೆ ಆಗಸ್ಟ್ 26, 2026ರಂದು ‘ಟಾಕ್ಸಿಕ್’ ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.</p>



<p class="wp-block-paragraph">ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರವೂ ಮತ್ತಷ್ಟು ವೇಗ ಪಡೆದುಕೊಂಡಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡಿರುವ ‘ಟಾಕ್ಸಿಕ್’ ಪೋಸ್ಟರ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯಶ್ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.</p>



<p class="wp-block-paragraph"><strong>ರಾಕಿ ಭಾಯ್‌ಗಾಗಿ ಕಾತರ :</strong> ‘ಕೆಜಿಎಫ್’ ಸಿನಿಮಾದ ರಾಕಿ ಭಾಯ್ ಪಾತ್ರದ ಮೂಲಕ ಯಶ್ ಪಡೆದಿರುವ ಜನಪ್ರಿಯತೆ ‘ಟಾಕ್ಸಿಕ್’ ಮೇಲಿನ ನಿರೀಕ್ಷೆಗೆ ಪ್ರಮುಖ ಕಾರಣವಾಗಿದೆ. ಈ ಬಾರಿ ಯಶ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಕಥೆ ಯಾವ ರೀತಿಯಲ್ಲಿರಲಿದೆ ಹಾಗೂ ಸಿನಿಮಾ ಜಾಗತಿಕ ಮಟ್ಟದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.</p>



<p class="wp-block-paragraph">ಮೆಟ್ರೋದಿಂದ ಹಿಡಿದು ಸಾಮಾಜಿಕ ಜಾಲತಾಣದವರೆಗೆ ವಿಭಿನ್ನ ರೀತಿಯಲ್ಲಿ ‘ಟಾಕ್ಸಿಕ್’ ಹವಾ ಸೃಷ್ಟಿಸುತ್ತಿರುವ ಚಿತ್ರತಂಡ, ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ದೊಡ್ಡ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/toxic-movie-yash-bengaluru-metro-promotion/">ನಮ್ಮ ಮೆಟ್ರೋದಲ್ಲಿ ‘ಟಾಕ್ಸಿಕ್’ ಕ್ರೇಜ್: ಸಿನಿ ಪ್ರಚಾರಕ್ಕೆ ಭರ್ಜರಿ ಪ್ಲಾನ್</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಅಕ್ಷಯ್–ಸೈಫ್ &#8211; ‘ಹೈವಾನ್’ ಚಿತ್ರದ ಟೀಸರ್ ಸೃಷ್ಟಿಸಿದ ಕುತೂಹಲ</title>
		<link>https://samyuktakarnataka.in/entertainment/haiwaan-teaser-akshay-kumar-saif-ali-khan/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 12 Aug 2026 08:27:18 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<guid isPermaLink="false">https://samyuktakarnataka.in/?p=104687</guid>

					<description><![CDATA[<p>18 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಅಕ್ಷಯ್–ಸೈಫ್ : ‘ಹೈವಾನ್’ ಟೀಸರ್ ಔಟ್ &#8211; ಥ್ರಿಲ್ಲರ್ ಕಥೆಗೆ ಅಭಿಮಾನಿಗಳ ಕುತೂಹಲ ಮುಂಬೈ: ಬಾಲಿವುಡ್‌ನ ಜನಪ್ರಿಯ ನಟರಾದ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಸುಮಾರು 18 ವರ್ಷಗಳ ಬಳಿಕ ಮತ್ತೆ ದೊಡ್ಡ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಹೈವಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಕಥೆ ಹಾಗೂ ಪಾತ್ರಗಳ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಮಿಸ್ಟರಿ, ಆತಂಕ ಮತ್ತು [&#8230;]</p>
<p>The post <a href="https://samyuktakarnataka.in/entertainment/haiwaan-teaser-akshay-kumar-saif-ali-khan/">ಅಕ್ಷಯ್–ಸೈಫ್ &#8211; ‘ಹೈವಾನ್’ ಚಿತ್ರದ ಟೀಸರ್ ಸೃಷ್ಟಿಸಿದ ಕುತೂಹಲ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>18 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಅಕ್ಷಯ್–ಸೈಫ್ : ‘ಹೈವಾನ್’ ಟೀಸರ್ ಔಟ್ &#8211; ಥ್ರಿಲ್ಲರ್ ಕಥೆಗೆ ಅಭಿಮಾನಿಗಳ ಕುತೂಹಲ</strong></p>



<p class="wp-block-paragraph">ಮುಂಬೈ: ಬಾಲಿವುಡ್‌ನ ಜನಪ್ರಿಯ ನಟರಾದ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಸುಮಾರು 18 ವರ್ಷಗಳ ಬಳಿಕ ಮತ್ತೆ ದೊಡ್ಡ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಹೈವಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಕಥೆ ಹಾಗೂ ಪಾತ್ರಗಳ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.</p>



<p class="wp-block-paragraph">ಮಿಸ್ಟರಿ, ಆತಂಕ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಂತೆ ಕಾಣುತ್ತಿರುವ ‘ಹೈವಾನ್’ ಚಿತ್ರವು 2026ರ ಸೆಪ್ಟೆಂಬರ್ 11ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.</p>



<p class="wp-block-paragraph">ಅಕ್ಷಯ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಚಿತ್ರದ ಟೀಸರ್ ಹಂಚಿಕೊಂಡಿದ್ದು, ‘ಹೈವಾನ್’ ಜಗತ್ತಿಗೆ ಪ್ರೇಕ್ಷಕರನ್ನು ಆಹ್ವಾನಿಸಿದ್ದಾರೆ. ಟೀಸರ್‌ನಲ್ಲಿರುವ ನಿಗೂಢ ವಾತಾವರಣ ಮತ್ತು ಆತಂಕಕಾರಿ ದೃಶ್ಯಗಳು ಸಿನಿಮಾ ಯಾವ ರೀತಿಯ ಕಥೆಯನ್ನು ಹೇಳಲಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.</p>



<p class="wp-block-paragraph"><strong>18 ವರ್ಷಗಳ ಬಳಿಕ ಮತ್ತೆ ಒಂದಾದ ಅಕ್ಷಯ್–ಸೈಫ್: </strong>ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಈ ಹಿಂದೆ ತಶನ್ (2008) ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಸುಮಾರು 18 ವರ್ಷಗಳ ಬಳಿಕ ಇಬ್ಬರೂ ಮತ್ತೆ ಒಂದೇ ಚಿತ್ರದಲ್ಲಿ ನಟಿಸಿರುವುದು ‘ಹೈವಾನ್’ನ ಪ್ರಮುಖ ಆಕರ್ಷಣೆಯಾಗಿದೆ.</p>



<p class="wp-block-paragraph">ಇಬ್ಬರು ನಟರ ವಿಭಿನ್ನ ಅಭಿನಯ ಶೈಲಿ ಹಾಗೂ ಪ್ರಿಯದರ್ಶನ್ ಅವರ ನಿರ್ದೇಶನ ಒಂದಾಗಿರುವುದರಿಂದ ಚಿತ್ರದ ಮೇಲೆ ಬಾಲಿವುಡ್ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ.</p>



<p class="wp-block-paragraph"><strong>ಪ್ರಿಯದರ್ಶನ್ ನಿರ್ದೇಶನ : </strong>‘ಹೈವಾನ್’ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ವಿಭಿನ್ನ ಕಥಾಹಂದರ ಮತ್ತು ಮನರಂಜನಾತ್ಮಕ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಿಯದರ್ಶನ್, ಈ ಬಾರಿ ಮಿಸ್ಟರಿ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಕಥೆಯನ್ನು ತೆರೆಗೆ ತರುತ್ತಿದ್ದಾರೆ.</p>



<figure class="wp-block-embed alignleft is-type-rich is-provider-x wp-block-embed-x"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ನಟ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಸುಮಾರು 18 ವರ್ಷಗಳ ಬಳಿಕ ಮತ್ತೆ ದೊಡ್ಡ ಪರದೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ  ‘ಹೈವಾನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.<a href="https://t.co/HftHMUo1J0">https://t.co/HftHMUo1J0</a><a href="https://t.co/TQ7XuTJVFO">pic.twitter.com/TQ7XuTJVFO</a></p>&mdash; Samyukta Karnataka (@SamyuktaKarnatk) <a href="https://x.com/SamyuktaKarnatk/status/2087455960986255533?ref_src=twsrc%5Etfw">August 12, 2026</a></blockquote><script async src="https://platform.x.com/widgets.js" charset="utf-8"></script>
</div></figure>



<p class="wp-block-paragraph">ಟೀಸರ್‌ನಿಂದ ಚಿತ್ರದ ಸಂಪೂರ್ಣ ಕಥೆಯನ್ನು ಬಹಿರಂಗಪಡಿಸದೆ, ಪ್ರೇಕ್ಷಕರಲ್ಲಿ ಕುತೂಹಲ ಉಳಿಸುವ ಪ್ರಯತ್ನ ಮಾಡಲಾಗಿದೆ.</p>



<p class="wp-block-paragraph">ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅವರ ಜತೆಗೆ ಬೊಮನ್ ಇರಾನಿ, ಸಯಾಮಿ ಖೇರ್ ಹಾಗೂ ಶ್ರಿಯಾ ಪಿಲ್ಗಾಂವ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳು ಯಾವ ರೀತಿಯಲ್ಲಿ ಪರಸ್ಪರ ಸಂಬಂಧ ಹೊಂದಿವೆ ಎಂಬುದು ಸದ್ಯ ಬಹಿರಂಗವಾಗಿಲ್ಲ. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಕೆಲ ದೃಶ್ಯಗಳು ಚಿತ್ರದ ಕಥೆಯಲ್ಲಿ ರಹಸ್ಯ ಹಾಗೂ ಸಂಘರ್ಷದ ಅಂಶಗಳು ಪ್ರಮುಖವಾಗಿರಬಹುದು ಎಂಬ ಕುತೂಹಲ ಮೂಡಿಸಿವೆ.</p>



<p class="wp-block-paragraph"><strong>KVN ಪ್ರೊಡಕ್ಷನ್ಸ್ ಮತ್ತು ಥೆಸ್ಪಿಯನ್ ಫಿಲ್ಮ್ಸ್ ನಿರ್ಮಾಣ :</strong> ‘ಹೈವಾನ್’ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಥೆಸ್ಪಿಯನ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ವೆಂಕಟ್ ಕೆ. ನಾರಾಯಣ ಮತ್ತು ಶೈಲಜಾ ದೇಸಾಯಿ ಫೆನ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಬಾಲಿವುಡ್‌ನ ಇಬ್ಬರು ಪ್ರಮುಖ ನಟರು, ಜನಪ್ರಿಯ ನಿರ್ದೇಶಕ ಮತ್ತು ವಿಭಿನ್ನ ಕಥಾಹಂದರದ ಸಂಯೋಜನೆಯಿಂದಾಗಿ ಈ ಸಿನಿಮಾ ಹಿಂದಿ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದೆ.</p>



<p class="wp-block-paragraph"><strong>ಸೆಪ್ಟೆಂಬರ್ 11ರಂದು ವಿಶ್ವಾದ್ಯಂತ ಬಿಡುಗಡೆ : </strong>ಟೀಸರ್ ಬಿಡುಗಡೆಯೊಂದಿಗೆ ಚಿತ್ರತಂಡ ಸೆಪ್ಟೆಂಬರ್ 11, 2026ರಂದು ‘ಹೈವಾನ್’ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ.</p>



<p class="wp-block-paragraph">18 ವರ್ಷಗಳ ಬಳಿಕ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅವರನ್ನು ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದು, ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಚರ್ಚೆ ಆರಂಭವಾಗಿದೆ.</p>



<p class="wp-block-paragraph">‘ಹೈವಾನ್’ ಟೀಸರ್‌ನಲ್ಲಿರುವ ನಿಗೂಢತೆ, ಆತಂಕಕಾರಿ ವಾತಾವರಣ ಮತ್ತು ಪ್ರಮುಖ ನಟರ ಅಭಿನಯದ ಝಲಕ್ ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಮೂಡಿಸಿದೆ. ಸೆಪ್ಟೆಂಬರ್ 11ರಂದು ಚಿತ್ರಮಂದಿರಕ್ಕೆ ಬಂದ ಬಳಿಕ ಈ ಕುತೂಹಲಗಳಿಗೆ ಉತ್ತರ ಸಿಗಲಿದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="hlfz1ep8IL4"><iframe title="Haiwaan Official Teaser | Akshay Kumar, Saif Ali Khan | Priyadarshan | KVN Productions" width="696" height="392" src="https://www.youtube.com/embed/hlfz1ep8IL4?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>
<p>The post <a href="https://samyuktakarnataka.in/entertainment/haiwaan-teaser-akshay-kumar-saif-ali-khan/">ಅಕ್ಷಯ್–ಸೈಫ್ &#8211; ‘ಹೈವಾನ್’ ಚಿತ್ರದ ಟೀಸರ್ ಸೃಷ್ಟಿಸಿದ ಕುತೂಹಲ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಕಮಲ್ ಹಾಸನ್ ಸಿನಿಪಯಣಕ್ಕೆ 67ರ ಸಂಭ್ರಮ: ವಿಶಿಷ್ಟ ಪ್ರೋಮೋ ಬಿಡುಗಡೆ!</title>
		<link>https://samyuktakarnataka.in/entertainment/67-years-of-kamalism-kamal-haasan-cinema-journey/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 12 Aug 2026 07:19:39 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<category><![CDATA[#KannadaCinema]]></category>
		<category><![CDATA[#sandalwood]]></category>
		<guid isPermaLink="false">https://samyuktakarnataka.in/?p=104680</guid>

					<description><![CDATA[<p>67 ವರ್ಷಗಳ ಕಮಲ್ ಹಾಸನ್ ಸಿನಿಮಾ ಜರ್ನಿ : ಬಾಲನಟನಿಂದ ದಿಗ್ಗಜ ನಾಯಕತ್ವದವರೆಗೆ &#8211; ಕಮಲ್ ಸಿನಿಪಯಣದ ಸೆಲಬ್ರೇಷನ್ ಚೆನ್ನೈ: ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆ, ನಟ ಹಾಗೂ ನಿರ್ಮಾಪಕ ಕಮಲ್ ಹಾಸನ್ ಅವರ ಸುದೀರ್ಘ ಸಿನಿಪಯಣಕ್ಕೆ 67ನೇ ವರ್ಷದ ಸಂಭ್ರಮದ ಗೌರವ ಸಲ್ಲಿಸಲಾಗುತ್ತಿದೆ. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ (RKFI) ವಿಶೇಷ ಪ್ರೋಮೋ ಮೂಲಕ ಈ ಆಚರಣೆಗೆ ಚಾಲನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. [&#8230;]</p>
<p>The post <a href="https://samyuktakarnataka.in/entertainment/67-years-of-kamalism-kamal-haasan-cinema-journey/">ಕಮಲ್ ಹಾಸನ್ ಸಿನಿಪಯಣಕ್ಕೆ 67ರ ಸಂಭ್ರಮ: ವಿಶಿಷ್ಟ ಪ್ರೋಮೋ ಬಿಡುಗಡೆ!</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>67 ವರ್ಷಗಳ ಕಮಲ್ ಹಾಸನ್ ಸಿನಿಮಾ ಜರ್ನಿ : ಬಾಲನಟನಿಂದ ದಿಗ್ಗಜ ನಾಯಕತ್ವದವರೆಗೆ &#8211; ಕಮಲ್ ಸಿನಿಪಯಣದ ಸೆಲಬ್ರೇಷನ್</strong></p>



<p class="wp-block-paragraph">ಚೆನ್ನೈ: ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆ, ನಟ ಹಾಗೂ ನಿರ್ಮಾಪಕ ಕಮಲ್ ಹಾಸನ್ ಅವರ ಸುದೀರ್ಘ ಸಿನಿಪಯಣಕ್ಕೆ 67ನೇ ವರ್ಷದ ಸಂಭ್ರಮದ ಗೌರವ ಸಲ್ಲಿಸಲಾಗುತ್ತಿದೆ. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ (RKFI) ವಿಶೇಷ ಪ್ರೋಮೋ ಮೂಲಕ ಈ ಆಚರಣೆಗೆ ಚಾಲನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.</p>



<p class="wp-block-paragraph">RKFI ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ #67YearsOfKamalism ಅಭಿಯಾನವನ್ನು ಮುನ್ನಡೆಸಿದೆ. ‘ಒನ್ ಚೈಲ್ಡ್, ಒನ್ ಬಿಗಿನಿಂಗ್, ಒನ್ ಫಿನೋಮ್ – ಹಿಸ್ ಎರಾ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಆಕರ್ಷಕ ಮೋಟಾರ್ ಸೈಕಲ್ ದೃಶ್ಯಗಳ ಮೂಲಕ ಕಮಲ್ ಹಾಸನ್ ಅವರ ವಿಶಿಷ್ಟ ಸಿನಿ ಪಯಣವನ್ನು ಬಿಂಬಿಸಲಾಗಿದೆ.</p>



<p class="wp-block-paragraph"><strong>ಬಾಲನಟನಿಂದ ಭಾರತೀಯ ಚಿತ್ರರಂಗದ ದಿಗ್ಗಜದತ್ತ :</strong> ಕಮಲ್ ಹಾಸನ್ ಅವರ ಸಿನಿಪಯಣ ಬಾಲನಟನಾಗಿ ಆರಂಭವಾಗಿ ಹಲವು ದಶಕಗಳನ್ನು ದಾಟಿದೆ. ಅಭಿನಯ ಮಾತ್ರವಲ್ಲದೆ ನಿರ್ದೇಶನ, ಚಿತ್ರಕಥೆ, ನೃತ್ಯ, ಗೀತರಚನೆ, ಗಾಯನ ಹಾಗೂ ನಿರ್ಮಾಣ ಸೇರಿದಂತೆ ಚಿತ್ರರಂಗದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು, ಭಾರತೀಯ ಸಿನಿಮಾದ ಅತ್ಯಂತ ಪ್ರಯೋಗಶೀಲ ಕಲಾವಿದರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.</p>



<p class="wp-block-paragraph">ವಿಭಿನ್ನ ಭಾಷೆಗಳ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ಕಮಲ್ ಹಾಸನ್ ತಮ್ಮದೇ ಆದ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದಲ್ಲಿ ಹಲವು ಪ್ರಮುಖ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ.</p>



<p class="wp-block-paragraph"><strong>ಸಾಮಾಜಿಕ ಜಾಲತಾಣದಲ್ಲಿ ‘ಕಮಲಿಸಂ’ ಹವಾ :</strong> ‘67 Years of Kamalism’ ಅಭಿಯಾನ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಮಲ್ ಹಾಸನ್ ಅವರ ಹಳೆಯ ಹಾಗೂ ಹೊಸ ಸಿನಿಮಾಗಳ ದೃಶ್ಯಗಳು, ಪೋಸ್ಟರ್‌ಗಳು, ಫ್ಯಾನ್ ಆರ್ಟ್ ಮತ್ತು ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.</p>



<p class="wp-block-paragraph">ಕಮಲ್ ಹಾಸನ್ ಅವರ ವಿಭಿನ್ನ ಪಾತ್ರಗಳ ಫೋಟೋಗಳು ಮತ್ತು ಅವರ ವೃತ್ತಿಜೀವನದ ಪ್ರಮುಖ ಘಟ್ಟಗಳನ್ನು ಒಳಗೊಂಡಿರುವ ಪೋಸ್ಟರ್‌ಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಹಲವು ತಲೆಮಾರುಗಳ ಪ್ರೇಕ್ಷಕರನ್ನು ತಮ್ಮ ಅಭಿನಯದ ಮೂಲಕ ಸೆಳೆದಿರುವ ನಟನಿಗೆ ಈ ಅಭಿಯಾನದ ಮೂಲಕ ಅಭಿಮಾನಿಗಳು ಗೌರವ ಸಲ್ಲಿಸುತ್ತಿದ್ದಾರೆ.</p>



<p class="wp-block-paragraph"><strong>ಕನ್ನಡ ಚಿತ್ರರಂಗದಲ್ಲಿ ಕಮಲ್‌ ಕಮಾಲ್‌: </strong>ಕಮಲ್ ಹಾಸನ್ ಅವರಿಗೆ ಕನ್ನಡ ಚಿತ್ರರಂಗದೊಂದಿಗೂ ಅಪಾರ ನಂಟಿದೆ. ಇವರು ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ಕೋಕಿಲ, ಬೆಂಕಿಯಲ್ಲೆ ಅರಳಿದ ಹೂವು, ತಪ್ಪಿದ ತಾಳ, ಮರಿಯಾ ಮೈ ಡಾರ್ಲಿಂಗ್ ಮತ್ತು ಮೂಕಿ ಚಿತ್ರವಾದ ಪುಷ್ಪಕ ವಿಮಾನದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸುಮಾರು 22 ವರ್ಷಗಳ ನಂತರ ಕಮಲ್ ಅವರು ರಾಮ ಶಾಮ ಭಾಮ ಚಿತ್ರದಲ್ಲಿ ಹುಬ್ಬಳ್ಳಿ-ಧಾರವಾಡ ಶೈಲಿಯ ಕನ್ನಡ ಭಾಷೆಯನ್ನು ಅದ್ಭುತವಾಗಿ ಮಾತನಾಡಿ ಕನ್ನಡಿಗರ ಮನಗೆದ್ದಿದ್ದರು</p>



<figure class="wp-block-embed alignleft is-type-rich is-provider-x wp-block-embed-x"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಕಮಲ್ ಹಾಸನ್ ಅವರ 67ನೇ ವರ್ಷದ ಸಿನಿಪಯಣದ ಸಂಭ್ರಮಕ್ಕೆ ‘67 Years of Kamalism’ ಅಭಿಯಾನ ಆರಂಭವಾಗಿದೆ. RKFI ವಿಶೇಷ ಪ್ರೋಮೋ ಮೂಲಕ ಉಲಗನಾಯಗನ್‌ಗೆ ಗೌರವ ಸಲ್ಲಿಸಿದೆ.<a href="https://t.co/1B4Q3SsC2e">https://t.co/1B4Q3SsC2e</a><a href="https://t.co/uamDJ7yiLc">pic.twitter.com/uamDJ7yiLc</a></p>&mdash; Samyukta Karnataka (@SamyuktaKarnatk) <a href="https://x.com/SamyuktaKarnatk/status/2087438902290432424?ref_src=twsrc%5Etfw">August 12, 2026</a></blockquote><script async src="https://platform.x.com/widgets.js" charset="utf-8"></script>
</div></figure>



<p class="wp-block-paragraph"><strong>ನಿರ್ಮಾಪಕರಾಗಿಯೂ ಮಹತ್ವದ ಕೊಡುಗೆ : </strong>ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಹಲವು ಗಮನಾರ್ಹ ಚಿತ್ರಗಳನ್ನು ನಿರ್ಮಿಸಿದೆ. ‘ವಿಕ್ರಮ್’, ‘ಅಮರನ್’ ಸೇರಿದಂತೆ ಇತ್ತೀಚಿನ ವರ್ಷಗಳ ಪ್ರಮುಖ ಸಿನಿಮಾಗಳಲ್ಲೂ ಸಂಸ್ಥೆಯ ನಿರ್ಮಾಣದ ಛಾಪು ಕಾಣಿಸಿಕೊಂಡಿದೆ.</p>



<p class="wp-block-paragraph"><strong>ಕಮಲ್ ಮಣಿರತ್ನಂ ಜೋಡಿ :</strong> ಇತ್ತೀಚಿನ ‘ಥಗ್ ಲೈಫ್’ ಚಿತ್ರದಲ್ಲಿ ಕಮಲ್ ಹಾಸನ್ ಅವರು ನಟಿಸುವುದರ ಜತೆಗೆ ನಿರ್ಮಾಪಕರಾಗಿಯೂ ಭಾಗಿಯಾಗಿದ್ದರು. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ನೀಡಿದ್ದು, ಕಮಲ್ ಹಾಸನ್ ಮತ್ತು ಮಣಿರತ್ನಂ ಹಲವು ವರ್ಷಗಳ ಬಳಿಕ ಮತ್ತೆ ಒಂದಾಗಿದ್ದರು.</p>



<p class="wp-block-paragraph">ಮುಂದಿನ ದಿನಗಳಲ್ಲಿಯೂ RKFI ಹಲವು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ರಜನಿಕಾಂತ್ ಅಭಿನಯದ ಮುಂದಿನ ಚಿತ್ರವೊಂದನ್ನೂ ಸಂಸ್ಥೆ ನಿರ್ಮಿಸುತ್ತಿದ್ದು, ಈ ಯೋಜನೆಗೆ ಸಿಬಿ ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದಾರೆ.</p>



<p class="wp-block-paragraph"><strong>ಸಿನಿಮಾ ಮಾತ್ರವಲ್ಲ, ರಾಜಕೀಯದಲ್ಲೂ ಸಕ್ರಿಯ :</strong> ಕಮಲ್ ಹಾಸನ್ ಅವರ ಸಿನಿಪಯಣದ ಸಂಭ್ರಮದ ನಡುವೆ ಅವರ ಇತ್ತೀಚಿನ ಸಾರ್ವಜನಿಕ ಹಾಗೂ ರಾಜಕೀಯ ಚಟುವಟಿಕೆಗಳೂ ಅಭಿಮಾನಿಗಳ ಚರ್ಚೆಯ ಭಾಗವಾಗಿವೆ. ಮಕ್ಕಳ್ ನೀಧಿ ಮೈಯಂ (MNM) ಮೂಲಕ ರಾಜಕೀಯ ಕ್ಷೇತ್ರದಲ್ಲೂ ತಮ್ಮದೇ ಆದ ಗುರುತನ್ನು ಮೂಡಿಸಿರುವ ಕಮಲ್ ಹಾಸನ್, ಸಿನಿಮಾ ಮತ್ತು ಸಾರ್ವಜನಿಕ ಜೀವನ ಎರಡರಲ್ಲೂ ಸಕ್ರಿಯರಾಗಿದ್ದಾರೆ.</p>



<p class="wp-block-paragraph">ಇತ್ತೀಚಿನ ಅಮೆರಿಕ ಪ್ರವಾಸ ಹಾಗೂ ಸಾರ್ವಜನಿಕ ಚಟುವಟಿಕೆಗಳ ಕುರಿತ ಅಪ್‌ಡೇಟ್‌ಗಳ ನಡುವೆಯೇ ‘67 Years of Kamalism’ ಅಭಿಯಾನ ಆರಂಭವಾಗಿರುವುದು ಅವರ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.</p>



<p class="wp-block-paragraph"><strong>ತಲೆಮಾರುಗಳನ್ನು ದಾಟಿದ ‘ಕಮಲಿಸಂ’ : </strong>ಕಮಲ್ ಹಾಸನ್ ಅವರ ವಿಶೇಷತೆ ಕೇವಲ ಅವರು ನಟಿಸಿರುವ ಸಿನಿಮಾಗಳ ಸಂಖ್ಯೆಯಲ್ಲಿ ಮಾತ್ರವಲ್ಲ. ಪ್ರತಿ ಹಂತದಲ್ಲೂ ಹೊಸ ರೀತಿಯ ಪಾತ್ರಗಳು, ವಿಭಿನ್ನ ಕಥಾಹಂದರಗಳು ಮತ್ತು ತಾಂತ್ರಿಕ ಪ್ರಯೋಗಗಳ ಮೂಲಕ ತಮ್ಮನ್ನು ತಾವು ಮರುರೂಪಿಸಿಕೊಂಡಿರುವುದು ಅವರ ಸಿನಿಪಯಣದ ಪ್ರಮುಖ ಅಂಶವಾಗಿದೆ.</p>



<p class="wp-block-paragraph">ಹೀಗಾಗಿ ‘67 Years of Kamalism’ ಎಂಬ ಆಚರಣೆ ಕೇವಲ ಒಂದು ನಟನ ವೃತ್ತಿಜೀವನದ ಮೈಲಿಗಲ್ಲಿನ ಸಂಭ್ರಮವಾಗದೆ, ಭಾರತೀಯ ಸಿನಿಮಾದಲ್ಲಿ ಕಮಲ್ ಹಾಸನ್ ಬೀರಿದ ದೀರ್ಘಕಾಲದ ಪ್ರಭಾವವನ್ನು ನೆನಪಿಸುವ ಸಂದರ್ಭವಾಗಿಯೂ ಕಾಣಿಸಿಕೊಂಡಿದೆ.</p>



<p class="wp-block-paragraph">ಸದ್ಯ #67YearsOfKamalism ಹ್ಯಾಶ್‌ಟ್ಯಾಗ್ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವಿವಿಧ ಪಾತ್ರಗಳು ಮತ್ತು ಸಿನಿಮಾಗಳ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಮಲ್ ಹಾಸನ್ ಅವರ ಸಿನಿಪಯಣ ಮತ್ತೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/67-years-of-kamalism-kamal-haasan-cinema-journey/">ಕಮಲ್ ಹಾಸನ್ ಸಿನಿಪಯಣಕ್ಕೆ 67ರ ಸಂಭ್ರಮ: ವಿಶಿಷ್ಟ ಪ್ರೋಮೋ ಬಿಡುಗಡೆ!</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ವಿಶ್ವ ಆನೆಗಳ ದಿನದಂದು ‘ಕ್ರಾಸಿಂಗ್ ಪಾತ್ಸ್’: ನಿರ್ದೇಶಕಿಯಾಗಿ ಸಂಯುಕ್ತಾ ಹೊರನಾಡು</title>
		<link>https://samyuktakarnataka.in/entertainment/samykutha-horanadu-crossing-paths-documentary/</link>
		
		<dc:creator><![CDATA[Samyukta Karnataka]]></dc:creator>
		<pubDate>Wed, 12 Aug 2026 05:37:08 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<category><![CDATA[#KannadaCinema]]></category>
		<category><![CDATA[#sandalwood]]></category>
		<guid isPermaLink="false">https://samyuktakarnataka.in/?p=104664</guid>

					<description><![CDATA[<p>ನಟನೆ ಬಳಿಕ ನಿರ್ದೇಶನದತ್ತ ಸಂಯುಕ್ತಾ ಹೊರನಾಡು: ವಿಶ್ವ ಆನೆಗಳ ದಿನದಂದು ವನ್ಯಜೀವಿ-ಮಾನವ ಸಂಘರ್ಷದ ಬಗ್ಗೆ ಜಾಗೃತಿ ಮೂಡಿಸಲು ‘ಕ್ರಾಸಿಂಗ್ ಪಾತ್ಸ್’; ನಿರ್ದೇಶನದ ಹೊಣೆ ಹೊತ್ತ ಸಂಯುಕ್ತಾ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಸಂಯುಕ್ತಾ ಹೊರನಾಡು ಇದೀಗ ನಿರ್ದೇಶನದತ್ತ ಹೆಜ್ಜೆ ಇಟ್ಟಿದ್ದಾರೆ. ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ತಮ್ಮ ಕುಟುಂಬದ ಚಿತ್ರರಂಗದ ಹಿನ್ನೆಲೆಯೊಂದಿಗೆ ಈಗ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ‘ಕ್ರಾಸಿಂಗ್ ಪಾತ್ಸ್’ ಎಂಬ ಸಾಕ್ಷ್ಯಚಿತ್ರದ ಮೂಲಕ ಸಂಯುಕ್ತಾ ಹೊರನಾಡು ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದಾರೆ. ವಿಶ್ವ ಆನೆಗಳ ದಿನದ [&#8230;]</p>
<p>The post <a href="https://samyuktakarnataka.in/entertainment/samykutha-horanadu-crossing-paths-documentary/">ವಿಶ್ವ ಆನೆಗಳ ದಿನದಂದು ‘ಕ್ರಾಸಿಂಗ್ ಪಾತ್ಸ್’: ನಿರ್ದೇಶಕಿಯಾಗಿ ಸಂಯುಕ್ತಾ ಹೊರನಾಡು</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ನಟನೆ ಬಳಿಕ ನಿರ್ದೇಶನದತ್ತ ಸಂಯುಕ್ತಾ ಹೊರನಾಡು: ವಿಶ್ವ ಆನೆಗಳ ದಿನದಂದು ವನ್ಯಜೀವಿ-ಮಾನವ ಸಂಘರ್ಷದ ಬಗ್ಗೆ ಜಾಗೃತಿ ಮೂಡಿಸಲು ‘ಕ್ರಾಸಿಂಗ್ ಪಾತ್ಸ್’; ನಿರ್ದೇಶನದ ಹೊಣೆ ಹೊತ್ತ ಸಂಯುಕ್ತಾ</strong></p>



<p class="wp-block-paragraph">ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಸಂಯುಕ್ತಾ ಹೊರನಾಡು ಇದೀಗ ನಿರ್ದೇಶನದತ್ತ ಹೆಜ್ಜೆ ಇಟ್ಟಿದ್ದಾರೆ. ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ತಮ್ಮ ಕುಟುಂಬದ ಚಿತ್ರರಂಗದ ಹಿನ್ನೆಲೆಯೊಂದಿಗೆ ಈಗ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ‘ಕ್ರಾಸಿಂಗ್ ಪಾತ್ಸ್’ ಎಂಬ ಸಾಕ್ಷ್ಯಚಿತ್ರದ ಮೂಲಕ ಸಂಯುಕ್ತಾ ಹೊರನಾಡು ನಿರ್ದೇಶಕಿಯಾಗಿ ಪರಿಚಯವಾಗುತ್ತಿದ್ದಾರೆ.</p>



<p class="wp-block-paragraph">ವಿಶ್ವ ಆನೆಗಳ ದಿನದ ಅಂಗವಾಗಿ ಅನಾವರಣಗೊಳ್ಳುತ್ತಿರುವ ‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರವು ಮಾನವ-ಆನೆ ಸಂಘರ್ಷದ ಗಂಭೀರ ಸಮಸ್ಯೆಯ ಮೇಲೆ ಬೆಳಕು ಚೆಲ್ಲಲಿದೆ. ಕಾಡುಗಳ ವ್ಯಾಪ್ತಿ ಕಡಿಮೆಯಾಗುತ್ತಿರುವುದು, ಮಾನವ ಚಟುವಟಿಕೆಗಳ ವಿಸ್ತರಣೆ ಹಾಗೂ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳ ನಾಶದಿಂದ ಆನೆಗಳು ಮಾನವ ವಸತಿ ಪ್ರದೇಶಗಳಿಗೆ ಪ್ರವೇಶಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದರಿಂದ ಮನುಷ್ಯರು ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಹೆಚ್ಚುತ್ತಿರುವುದನ್ನು ಸಾಕ್ಷ್ಯಚಿತ್ರ ದಾಖಲಿಸಲಿದೆ.</p>



<p class="wp-block-paragraph"><strong>ಮಾನವ-ಆನೆ ಸಂಘರ್ಷದ ಕಥೆ : </strong>ಅರಣ್ಯ ಪ್ರದೇಶಗಳು ನಿಧಾನವಾಗಿ ಕುಗ್ಗುತ್ತಿರುವ ಸಂದರ್ಭದಲ್ಲಿ ಆನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳ ಮೇಲೂ ಮಾನವ ಚಟುವಟಿಕೆಗಳ ಒತ್ತಡ ಹೆಚ್ಚುತ್ತಿದೆ. ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಆನೆಗಳು ಕಾಡಿನಿಂದ ಹೊರಬಂದು ಗ್ರಾಮಗಳು ಹಾಗೂ ಕೃಷಿ ಪ್ರದೇಶಗಳಿಗೆ ಪ್ರವೇಶಿಸುವ ಘಟನೆಗಳು ಹಲವು ಕಡೆಗಳಲ್ಲಿ ಆತಂಕಕ್ಕೆ ಕಾರಣವಾಗುತ್ತಿವೆ.</p>



<p class="wp-block-paragraph">ಇಂತಹ ಸಂದರ್ಭದಲ್ಲಿ ಮನುಷ್ಯರು ಮತ್ತು ಆನೆಗಳು ಪರಸ್ಪರ ಸಂಘರ್ಷವಿಲ್ಲದೆ ಸಹಬಾಳ್ವೆ ನಡೆಸಲು ಸಾಧ್ಯವಾಗುವ ಸುಸ್ಥಿರ ಮಾರ್ಗಗಳ ಅಗತ್ಯವನ್ನು ‘ಕ್ರಾಸಿಂಗ್ ಪಾತ್ಸ್’ ಮುಂದಿಡಲಿದೆ.</p>



<figure class="wp-block-embed alignleft is-type-rich is-provider-x wp-block-embed-x"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ವಿಶ್ವ ಆನೆಗಳ ದಿನದ ಅಂಗವಾಗಿ ಅನಾವರಣಗೊಳ್ಳುತ್ತಿರುವ ‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು  ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಮಾನವ-ಆನೆ ಸಂಘರ್ಷದ ಕುರಿತು ಸಾಕ್ಷ್ಯಚಿತ್ರ ಬೆಳಕು ಚೆಲ್ಲಲಿದೆ.<a href="https://x.com/samyuktahornad?ref_src=twsrc%5Etfw">@samyuktahornad</a> <a href="https://x.com/goldenganii?ref_src=twsrc%5Etfw">@goldenganii</a> <a href="https://x.com/hashtag/samyuktakarnataka?src=hash&amp;ref_src=twsrc%5Etfw">#samyuktakarnataka</a><a href="https://t.co/yRicl52A9F">https://t.co/yRicl52A9F</a> <a href="https://t.co/TeXyy3XswF">pic.twitter.com/TeXyy3XswF</a></p>&mdash; Samyukta Karnataka (@SamyuktaKarnatk) <a href="https://x.com/SamyuktaKarnatk/status/2087413368818913529?ref_src=twsrc%5Etfw">August 12, 2026</a></blockquote><script async src="https://platform.x.com/widgets.js" charset="utf-8"></script>
</div></figure>



<p class="wp-block-paragraph">ಈ ಕುರಿತು ಮಾತನಾಡಿರುವ ಸಂಯುಕ್ತಾ ಹೊರನಾಡು, ಕಾಡುಗಳು ಕಿರಿದಾಗುತ್ತಾ ಮಾನವನ ಚಟುವಟಿಕೆಗಳಿಂದ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗುತ್ತಿರುವುದರಿಂದ ಆನೆಗಳು ಅನಿವಾರ್ಯವಾಗಿ ಮಾನವ ವಸತಿ ಪ್ರದೇಶಗಳಿಗೆ ಬರುತ್ತಿವೆ ಎಂದು ಹೇಳಿದ್ದಾರೆ.</p>



<p class="wp-block-paragraph">ಇದು ಸ್ಥಳೀಯ ಸಮುದಾಯಗಳು ಮತ್ತು ವನ್ಯಜೀವಿಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಮಾನವ ಮತ್ತು ಪ್ರಾಣಿಗಳು ಸಹಬಾಳ್ವೆ ನಡೆಸಲು ಕಂಡುಕೊಳ್ಳಬೇಕಾದ ಸುಸ್ಥಿರ ಮಾರ್ಗಗಳ ತುರ್ತು ಅಗತ್ಯವನ್ನು ‘ಕ್ರಾಸಿಂಗ್ ಪಾತ್ಸ್’ ತೋರಿಸುತ್ತದೆ ಎಂಬುದು ಅವರ ಅಭಿಪ್ರಾಯ.</p>



<p class="wp-block-paragraph"><strong>ಹಲವು ಸಂಸ್ಥೆಗಳ ಸಹಭಾಗಿತ್ವ : </strong>‘ಕ್ರಾಸಿಂಗ್ ಪಾತ್ಸ್’ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಟೆಕಿಯಾನ್ ಸಂಸ್ಥೆಯ ಸಿಎಸ್‌ಆರ್ ಇನಿಶಿಯೇಟಿವ್, ಕರ್ನಾಟಕ ಅರಣ್ಯ ಇಲಾಖೆ, ಆರೋಚಾ ಇಂಡಿಯಾ ಹಾಗೂ ಸಂಪಿಗೆ ಫಿಲಂಸ್ ಪ್ರೊಡಕ್ಷನ್ ಕೈಜೋಡಿಸಿವೆ. ಈ ಸಹಭಾಗಿತ್ವದ ಮೂಲಕ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜತೆಗೆ, ಪರಿಸರ ಸಂರಕ್ಷಣೆ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರುವ ಉದ್ದೇಶವನ್ನು ಸಾಕ್ಷ್ಯಚಿತ್ರ ಹೊಂದಿದೆ.</p>



<p class="wp-block-paragraph"><strong>‘ಗಂಧದ ಗುಡಿ’, ‘777 ಚಾರ್ಲಿ’ ಛಾಯಾಗ್ರಾಹಕರ ಕ್ಯಾಮೆರಾ :</strong> ಸಾಕ್ಷ್ಯಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಇದರ ಛಾಯಾಗ್ರಹಣ. ಕನ್ನಡದ ಗಮನಾರ್ಹ ಚಿತ್ರಗಳಾದ ‘ಗಂಧದ ಗುಡಿ’ ಮತ್ತು ‘777 ಚಾರ್ಲಿ’ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪ್ರತೀಕ್ ಶೆಟ್ಟಿ ಅವರು ‘ಕ್ರಾಸಿಂಗ್ ಪಾತ್ಸ್’ಗೆ ಕ್ಯಾಮೆರಾ ಹಿಡಿದಿದ್ದಾರೆ.</p>



<p class="wp-block-paragraph">ವನ್ಯಜೀವಿಗಳು, ಅರಣ್ಯ ಪ್ರದೇಶಗಳು ಹಾಗೂ ಮಾನವ-ಆನೆ ಸಂಘರ್ಷದ ಸೂಕ್ಷ್ಮ ಆಯಾಮಗಳನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವಲ್ಲಿ ಪ್ರತೀಕ್ ಶೆಟ್ಟಿ ಅವರ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.</p>



<p class="wp-block-paragraph"><strong>ನಟಿಯಿಂದ ನಿರ್ದೇಶಕಿಯವರೆಗೆ ಹೊಸ ಪಯಣ : </strong>ಇದುವರೆಗೆ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸಂಯುಕ್ತಾ ಹೊರನಾಡು, ಇದೀಗ ನಿರ್ದೇಶನದ ಮೂಲಕ ತಮ್ಮ ಸೃಜನಶೀಲತೆಯ ಮತ್ತೊಂದು ಮುಖವನ್ನು ಪರಿಚಯಿಸುತ್ತಿದ್ದಾರೆ. ಮನರಂಜನೆಯಾಚೆಗೆ ಸಾಮಾಜಿಕ ಮತ್ತು ಪರಿಸರದ ಮಹತ್ವದ ವಿಷಯವೊಂದನ್ನು ಆಯ್ಕೆ ಮಾಡಿಕೊಂಡಿರುವುದು ‘ಕ್ರಾಸಿಂಗ್ ಪಾತ್ಸ್’ನ ವಿಶೇಷತೆಯಾಗಿದೆ.</p>



<p class="wp-block-paragraph">ವಿಶ್ವ ಆನೆಗಳ ದಿನದ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಅನಾವರಣಗೊಳ್ಳುತ್ತಿರುವುದರಿಂದ, ಮಾನವ-ಆನೆ ಸಂಘರ್ಷ, ವನ್ಯಜೀವಿ ಸಂರಕ್ಷಣೆ ಮತ್ತು ಸಹಬಾಳ್ವೆಯ ಅಗತ್ಯದ ಕುರಿತು ಚರ್ಚೆಗೆ ಇದು ವೇದಿಕೆಯಾಗುವ ನಿರೀಕ್ಷೆಯಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/samykutha-horanadu-crossing-paths-documentary/">ವಿಶ್ವ ಆನೆಗಳ ದಿನದಂದು ‘ಕ್ರಾಸಿಂಗ್ ಪಾತ್ಸ್’: ನಿರ್ದೇಶಕಿಯಾಗಿ ಸಂಯುಕ್ತಾ ಹೊರನಾಡು</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>‘D Company’ಗಿಂತ ಡೇಂಜರಸ್! RGV ಹೊಸ ಚಿತ್ರದಲ್ಲಿ ಹರ್ಷವರ್ಧನ್</title>
		<link>https://samyuktakarnataka.in/entertainment/ram-gopal-varma-police-company-harshvardhan-rane-daya-nayak/</link>
		
		<dc:creator><![CDATA[Samyukta Karnataka]]></dc:creator>
		<pubDate>Tue, 11 Aug 2026 13:38:23 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<guid isPermaLink="false">https://samyuktakarnataka.in/?p=104657</guid>

					<description><![CDATA[<p>ದಯಾ ನಾಯಕ್ ಕಥೆಗೆ ಸಿನಿಮಾ ರೂಪ : ‘ಪೊಲೀಸ್ ಕಂಪನಿ’ಯಲ್ಲಿ ದಯಾ ನಾಯಕ್‌ ಆಗಿ ಹರ್ಷವರ್ಧನ್ ರಾಣೆ &#8211; ಅಂಡರ್‌ವಲ್ಡ್ ಕಥೆಗೆ RGV ಕಂಬ್ಯಾಕ್ ಮುಂಬೈ: ಮುಂಬೈನ ಭೂಗತ ಲೋಕದ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ ತೆರೆಗೆ ತಂದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಂದು ಕ್ರೈಂ ಥ್ರಿಲ್ಲರ್ ಚಿತ್ರದೊಂದಿಗೆ ಮರಳುತ್ತಿದ್ದಾರೆ. ‘ಪೊಲೀಸ್ ಕಂಪನಿ’ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ನಟ ಹರ್ಷವರ್ಧನ್ ರಾಣೆ ಅವರು ನೈಜ ಜೀವನದ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರಿಂದ ಪ್ರೇರಿತ [&#8230;]</p>
<p>The post <a href="https://samyuktakarnataka.in/entertainment/ram-gopal-varma-police-company-harshvardhan-rane-daya-nayak/">‘D Company’ಗಿಂತ ಡೇಂಜರಸ್! RGV ಹೊಸ ಚಿತ್ರದಲ್ಲಿ ಹರ್ಷವರ್ಧನ್</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ದಯಾ ನಾಯಕ್ ಕಥೆಗೆ ಸಿನಿಮಾ ರೂಪ : ‘ಪೊಲೀಸ್ ಕಂಪನಿ’ಯಲ್ಲಿ ದಯಾ ನಾಯಕ್‌ ಆಗಿ ಹರ್ಷವರ್ಧನ್ ರಾಣೆ &#8211; ಅಂಡರ್‌ವಲ್ಡ್ ಕಥೆಗೆ RGV ಕಂಬ್ಯಾಕ್</strong></p>



<p class="wp-block-paragraph">ಮುಂಬೈ: ಮುಂಬೈನ ಭೂಗತ ಲೋಕದ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ ತೆರೆಗೆ ತಂದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಮತ್ತೊಂದು ಕ್ರೈಂ ಥ್ರಿಲ್ಲರ್ ಚಿತ್ರದೊಂದಿಗೆ ಮರಳುತ್ತಿದ್ದಾರೆ. ‘ಪೊಲೀಸ್ ಕಂಪನಿ’ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ನಟ ಹರ್ಷವರ್ಧನ್ ರಾಣೆ ಅವರು ನೈಜ ಜೀವನದ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರಿಂದ ಪ್ರೇರಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಟಿ-ಸೀರೀಸ್ ನಿರ್ಮಿಸುತ್ತಿದ್ದು, ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ.</p>



<p class="wp-block-paragraph">ವರ್ಮಾ ಅವರು ಆಗಸ್ಟ್ 10ರಂದು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಘೋಷಣೆ ಮಾಡಿದ್ದು, “It Is More Dangerous Than D Company” ಎಂಬ ಟ್ಯಾಗ್‌ಲೈನ್‌ ಮೂಲಕ ಚಿತ್ರದ ಕಥಾವಸ್ತುವಿನ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಮುಂಬೈನ ಸಂಘಟಿತ ಅಪರಾಧದ ವಿರುದ್ಧ ಪೊಲೀಸರು ನಡೆಸಿದ ಹೋರಾಟ ಚಿತ್ರದ ಪ್ರಮುಖ ಹಿನ್ನೆಲೆಯಾಗಿರಲಿದೆ.</p>



<p class="wp-block-paragraph"><strong>ದಯಾ ನಾಯಕ್ ಪಾತ್ರದಲ್ಲಿ ಹರ್ಷವರ್ಧನ್ ರಾಣೆ </strong>: ‘ಪೊಲೀಸ್ ಕಂಪನಿ’ಯ ಕೇಂದ್ರ ಪಾತ್ರವಾಗಿ ಹರ್ಷವರ್ಧನ್ ರಾಣೆ ಕಾಣಿಸಿಕೊಳ್ಳಲಿದ್ದಾರೆ. ಅವರು ಮುಂಬೈ ಪೊಲೀಸ್ ಇಲಾಖೆಯ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಅವರಿಂದ ಪ್ರೇರಿತ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ರಾಮ್ ಗೋಪಾಲ್ ವರ್ಮಾ ತಿಳಿಸಿದ್ದಾರೆ.</p>



<p class="wp-block-paragraph">ಚಿತ್ರದ ಘೋಷಣೆಯೊಂದಿಗೆ ಹರ್ಷವರ್ಧನ್ ರಾಣೆ ಅವರ ದಯಾ ನಾಯಕ್ ಪಾತ್ರದ ಲುಕ್‌ನ್ನೂ ವರ್ಮಾ ಹಂಚಿಕೊಂಡಿದ್ದಾರೆ. ಇದರಿಂದ ಚಿತ್ರದಲ್ಲಿ ರಾಣೆ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಬಾಲಿವುಡ್ ವಲಯದಲ್ಲಿ ಹೆಚ್ಚಾಗಿದೆ.</p>



<p class="wp-block-paragraph"><strong>1997-2004ರ ಮುಂಬೈ ಅಂಡರ್‌ವಲ್ಡ್ ಹಿನ್ನೆಲೆ : </strong>ರಾಮ್ ಗೋಪಾಲ್ ವರ್ಮಾ ಅವರ ವಿವರಣೆಯ ಪ್ರಕಾರ, 1990ರ ದಶಕದ ಕೊನೆಯಲ್ಲಿ ಮುಂಬೈನ ಭೂಗತ ಲೋಕದಲ್ಲಿ ಗ್ಯಾಂಗ್‌ಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದ ಸಂದರ್ಭದಲ್ಲಿ ವಿಶೇಷ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡದ ಕಾರ್ಯಾಚರಣೆಗಳು ಮತ್ತು ಅದರ ಸದಸ್ಯ ದಯಾ ನಾಯಕ್ ಅವರಿಂದ ಪ್ರೇರಣೆ ಪಡೆದು ‘ಪೊಲೀಸ್ ಕಂಪನಿ’ ರೂಪಿಸಲಾಗುತ್ತಿದೆ.</p>



<p class="wp-block-paragraph">1997ರಿಂದ 2004ರ ಅವಧಿಯ ಮುಂಬೈ ಅಂಡರ್‌ವಲ್ಡ್‌ ಬೆಳವಣಿಗೆಗಳು ಚಿತ್ರದ ಕಥೆಗೆ ಪ್ರಮುಖ ಹಿನ್ನೆಲೆಯಾಗಲಿವೆ. ವರ್ಮಾ ತಮ್ಮ ಘೋಷಣೆಯಲ್ಲಿ ಆ ಅವಧಿಯ ವಿಶೇಷ ಪೊಲೀಸ್ ದಳದ ಕಾರ್ಯಾಚರಣೆಗಳನ್ನು ಚಿತ್ರದ ಕಥೆಯ ಮೂಲ ಪ್ರೇರಣೆಯಾಗಿ ವಿವರಿಸಿದ್ದಾರೆ.</p>



<p class="wp-block-paragraph"><strong>‘ಸತ್ಯ’ ತಂಡದ ಕಲಾವಿದರಿಗೂ ಮರುಸೇರ್ಪಡೆ : </strong>ಚಿತ್ರದ ಮತ್ತೊಂದು ವಿಶೇಷತೆ ಎಂದರೆ ರಾಮ್ ಗೋಪಾಲ್ ವರ್ಮಾ ಅವರ ಜನಪ್ರಿಯ ಕ್ರೈಂ ಚಿತ್ರ <strong>‘ಸತ್ಯ’</strong>ದೊಂದಿಗೆ ಗುರುತಿಸಿಕೊಂಡಿದ್ದ ಕೆಲವು ಪ್ರಮುಖ ಕಲಾವಿದರು ಮತ್ತೆ ವರ್ಮಾ ಅವರೊಂದಿಗೆ ಕೈಜೋಡಿಸುತ್ತಿದ್ದಾರೆ.</p>



<p class="wp-block-paragraph">ನೀಡಿರುವ ಮಾಹಿತಿಯ ಪ್ರಕಾರ ಪರೇಶ್ ರಾವಲ್, ಸೌರಭ್ ಶುಕ್ಲಾ ಮತ್ತು ಮಕರಂದ್ ದೇಶಪಾಂಡೆ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಫರ್ದೀನ್ ಖಾನ್ ಹಾಗೂ ಸೌಂದರ್ಯ ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.</p>



<p class="wp-block-paragraph">‘ಸತ್ಯ’ ಮೂಲಕ ಮುಂಬೈನ ಅಂಡರ್‌ವಲ್ಡ್‌ ಜಗತ್ತನ್ನು ವಿಭಿನ್ನ ರೀತಿಯಲ್ಲಿ ತೆರೆಗೆ ತಂದಿದ್ದ ವರ್ಮಾ, ಇದೀಗ ‘ಪೊಲೀಸ್ ಕಂಪನಿ’ ಮೂಲಕ ಅದೇ ಕಾಲಘಟ್ಟದ ಮತ್ತೊಂದು ಮುಖವಾದ ಪೊಲೀಸ್ ವ್ಯವಸ್ಥೆ ಮತ್ತು ಅಪರಾಧ ಜಗತ್ತಿನ ನಡುವಿನ ಸಂಘರ್ಷವನ್ನು ಕೇಂದ್ರೀಕರಿಸುತ್ತಿದ್ದಾರೆ.</p>



<p class="wp-block-paragraph"><strong>‘D Company’ಗಿಂತ ಅಪಾಯಕಾರಿ? : </strong>ಚಿತ್ರದ “It Is More Dangerous Than D Company” ಎಂಬ ಟ್ಯಾಗ್‌ಲೈನ್ ಈಗಾಗಲೇ ಗಮನ ಸೆಳೆದಿದೆ. ಪೊಲೀಸ್ ಸಂಸ್ಥೆಗೆ ವಿಶೇಷ ಅಧಿಕಾರಗಳು ದೊರೆತಾಗ ಅದು ಸಂಘಟಿತ ಅಪರಾಧ ಜಗತ್ತಿನ ವಿರುದ್ಧ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಪ್ರಶ್ನೆಯ ಸುತ್ತ ಚಿತ್ರದ ಕಥೆ ಸಾಗುವ ಸುಳಿವನ್ನು ವರ್ಮಾ ನೀಡಿದ್ದಾರೆ.</p>



<p class="wp-block-paragraph">ಇದರಿಂದ ‘ಪೊಲೀಸ್ ಕಂಪನಿ’ಯನ್ನು ಕೇವಲ ಪೊಲೀಸ್ ಎನ್‌ಕೌಂಟರ್ ಕಥೆಯಾಗಿ ಮಾತ್ರವಲ್ಲದೆ, ಮುಂಬೈನ ಅಂಡರ್‌ವಲ್ಡ್ ಮತ್ತು ಪೊಲೀಸ್ ವ್ಯವಸ್ಥೆಯ ನಡುವಿನ ಶಕ್ತಿಯ ಸಂಘರ್ಷದ ಹಿನ್ನೆಲೆಯ ಕ್ರೈಂ ಥ್ರಿಲ್ಲರ್ ಆಗಿ ಕಟ್ಟಿಕೊಡುವ ಸಾಧ್ಯತೆ ಇದೆ.</p>



<p class="wp-block-paragraph"><strong>ಮುಂದಿನ ವಾರದಿಂದ ಚಿತ್ರೀಕರಣ? : </strong>ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ. ನಿಮ್ಮ ನೀಡಿರುವ ಮಾಹಿತಿಯ ಪ್ರಕಾರ, ಚಿತ್ರೀಕರಣವನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ ಮುಂದಿನ ವರ್ಷ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.</p>



<p class="wp-block-paragraph">ರಾಮ್ ಗೋಪಾಲ್ ವರ್ಮಾ ಈಗಾಗಲೇ ‘Company’, ‘Satya’ ಮತ್ತು ‘Ab Tak Chhappan’ ಸೇರಿದಂತೆ ಮುಂಬೈನ ಅಪರಾಧ ಜಗತ್ತು ಮತ್ತು ಪೊಲೀಸ್ ವ್ಯವಸ್ಥೆಯನ್ನು ಆಧರಿಸಿದ ಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಪೊಲೀಸ್ ಕಂಪನಿ’ ಮೂಲಕ ಅವರು ಮತ್ತೆ ತಮ್ಮ ಪರಿಚಿತ ಕ್ರೈಂ-ಥ್ರಿಲ್ಲರ್ ವಲಯಕ್ಕೆ ಮರಳುತ್ತಿರುವುದು ವಿಶೇಷವಾಗಿದೆ.</p>



<p class="wp-block-paragraph">ಹರ್ಷವರ್ಧನ್ ರಾಣೆ ಅವರು ದಯಾ ನಾಯಕ್‌ನಿಂದ ಪ್ರೇರಿತ ಪಾತ್ರವನ್ನು ಹೇಗೆ ನಿರ್ವಹಿಸಲಿದ್ದಾರೆ, 1990ರ ದಶಕದ ಮುಂಬೈ ಅಂಡರ್‌ವಲ್ಡ್‌ ಅನ್ನು ವರ್ಮಾ ಯಾವ ರೀತಿಯಲ್ಲಿ ಮರುಸೃಷ್ಟಿಸಲಿದ್ದಾರೆ ಹಾಗೂ ‘ಸತ್ಯ’ದ ಕಲಾವಿದರ ಮರುಸೇರ್ಪಡೆ ಚಿತ್ರಕ್ಕೆ ಯಾವ ರೀತಿಯ ಬಲ ನೀಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/ram-gopal-varma-police-company-harshvardhan-rane-daya-nayak/">‘D Company’ಗಿಂತ ಡೇಂಜರಸ್! RGV ಹೊಸ ಚಿತ್ರದಲ್ಲಿ ಹರ್ಷವರ್ಧನ್</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
		<item>
		<title>ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ರಿಲೀಸ್ ಡೇಟ್ ಘೋಷಣೆ</title>
		<link>https://samyuktakarnataka.in/entertainment/7-dogs-salman-khan-sanjay-dutt-india-release-august-21-2026/</link>
		
		<dc:creator><![CDATA[Samyukta Karnataka]]></dc:creator>
		<pubDate>Mon, 10 Aug 2026 13:19:00 +0000</pubDate>
				<category><![CDATA[ಸಿನಿ ಮಿಲ್ಸ್]]></category>
		<category><![CDATA[#EntertainmentNews]]></category>
		<guid isPermaLink="false">https://samyuktakarnataka.in/?p=104587</guid>

					<description><![CDATA[<p>ಹಾಲಿವುಡ್-ಬಾಲಿವುಡ್-ಈಜಿಪ್ಟ್ ತಾರೆಯರ ಸಂಗಮ: ಸಲ್ಮಾನ್ ಖಾನ್-ಸಂಜಯ್ ದತ್ ಕಾಂಬಿನೇಷನ್‌ಗೆ ಮೋನಿಕಾ ಬೆಲ್ಲುಸಿ ಸಾಥ್ ಮುಂಬೈ: ಬಾಲಿವುಡ್‌ನ ಜನಪ್ರಿಯ ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಇದೀಗ ಮಹತ್ವಾಕಾಂಕ್ಷೆಯ ಅಂತರರಾಷ್ಟ್ರೀಯ ಆಕ್ಷನ್ ಚಿತ್ರ ‘7 ಡಾಗ್ಸ್’ ಮೂಲಕ ಮತ್ತೊಂದು ವಿಶೇಷ ಸಿನಿಮೀಯ ಅನುಭವ ನೀಡಲು ಸಜ್ಜಾಗಿದ್ದಾರೆ. ಭಾರತ, ಈಜಿಪ್ಟ್, ಯುರೋಪ್, ಹಾಲಿವುಡ್ ಹಾಗೂ ಮಧ್ಯಪ್ರಾಚ್ಯದ ಪ್ರತಿಭೆಗಳನ್ನು ಒಂದೇ ಚಿತ್ರದಲ್ಲಿ ಒಗ್ಗೂಡಿಸಿರುವ ಈ ಆಕ್ಷನ್ ಸ್ಪೆಕ್ಟಕಲ್, ಆಗಸ್ಟ್ 21, 2026ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ‘7 ಡಾಗ್ಸ್’ ಚಿತ್ರದಲ್ಲಿ ಸಲ್ಮಾನ್ [&#8230;]</p>
<p>The post <a href="https://samyuktakarnataka.in/entertainment/7-dogs-salman-khan-sanjay-dutt-india-release-august-21-2026/">ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ರಿಲೀಸ್ ಡೇಟ್ ಘೋಷಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></description>
										<content:encoded><![CDATA[
<p class="wp-block-paragraph"><strong>ಹಾಲಿವುಡ್-ಬಾಲಿವುಡ್-ಈಜಿಪ್ಟ್ ತಾರೆಯರ ಸಂಗಮ: ಸಲ್ಮಾನ್ ಖಾನ್-ಸಂಜಯ್ ದತ್ ಕಾಂಬಿನೇಷನ್‌ಗೆ ಮೋನಿಕಾ ಬೆಲ್ಲುಸಿ ಸಾಥ್</strong></p>



<p class="wp-block-paragraph">ಮುಂಬೈ: ಬಾಲಿವುಡ್‌ನ ಜನಪ್ರಿಯ ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಇದೀಗ ಮಹತ್ವಾಕಾಂಕ್ಷೆಯ ಅಂತರರಾಷ್ಟ್ರೀಯ ಆಕ್ಷನ್ ಚಿತ್ರ ‘7 ಡಾಗ್ಸ್’ ಮೂಲಕ ಮತ್ತೊಂದು ವಿಶೇಷ ಸಿನಿಮೀಯ ಅನುಭವ ನೀಡಲು ಸಜ್ಜಾಗಿದ್ದಾರೆ. ಭಾರತ, ಈಜಿಪ್ಟ್, ಯುರೋಪ್, ಹಾಲಿವುಡ್ ಹಾಗೂ ಮಧ್ಯಪ್ರಾಚ್ಯದ ಪ್ರತಿಭೆಗಳನ್ನು ಒಂದೇ ಚಿತ್ರದಲ್ಲಿ ಒಗ್ಗೂಡಿಸಿರುವ ಈ ಆಕ್ಷನ್ ಸ್ಪೆಕ್ಟಕಲ್, ಆಗಸ್ಟ್ 21, 2026ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.</p>



<p class="wp-block-paragraph">‘7 ಡಾಗ್ಸ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಪ್ರಮುಖ ಆಕರ್ಷಣೆಯಾಗಿದ್ದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಮೋನಿಕಾ ಬೆಲ್ಲುಸಿ ಮತ್ತು ಜಿಯಾನ್ಕಾರ್ಲೊ ಎಸ್ಪೊಸಿಟೊ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಚಿತ್ರವು ಭಾರತೀಯ ಪ್ರೇಕ್ಷಕರಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಕುತೂಹಲ ಮೂಡಿಸಿದೆ.</p>



<p class="wp-block-paragraph">ಈಜಿಪ್ಟಿನ ಸೂಪರ್‌ಸ್ಟಾರ್‌ಗಳಾದ ಅಹ್ಮದ್ ಎಝ್ ಮತ್ತು ಕರೀಮ್ ಅಬ್ದೆಲ್ ಅಜೀಜ್ ಅವರ ಉಪಸ್ಥಿತಿಯೂ ಚಿತ್ರಕ್ಕೆ ಮತ್ತಷ್ಟು ವಿಶೇಷತೆ ತಂದಿದೆ. ವಿಭಿನ್ನ ದೇಶಗಳ ಚಿತ್ರರಂಗದ ಪ್ರಮುಖ ಕಲಾವಿದರನ್ನು ಒಂದೇ ಆಕ್ಷನ್ ಕಥಾಹಂದರದಲ್ಲಿ ಸೇರಿಸಿರುವುದು ‘7 ಡಾಗ್ಸ್’ನ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ.</p>



<p class="wp-block-paragraph">ಚಿತ್ರವನ್ನು ಆದಿಲ್ ಎಲ್ ಅರ್ಬಿ ಮತ್ತು ಬಿಲಾಲ್ ಫಲ್ಲಾ ನಿರ್ದೇಶಿಸಿದ್ದಾರೆ. ‘Bad Boys for Life’ ಮತ್ತು ‘Bad Boys: Ride or Die’ ಸೇರಿದಂತೆ ಆಕ್ಷನ್ ಪ್ರಧಾನ ಚಿತ್ರಗಳ ಮೂಲಕ ಗಮನ ಸೆಳೆದಿರುವ ಈ ನಿರ್ದೇಶಕ ಜೋಡಿಯಿಂದ ‘7 ಡಾಗ್ಸ್’ ಕೂಡ ಅದ್ಧೂರಿ ಆಕ್ಷನ್ ದೃಶ್ಯಗಳು, ವೇಗದ ಕಥನ ಮತ್ತು ಅಂತರರಾಷ್ಟ್ರೀಯ ಮಟ್ಟದ ನಿರ್ಮಾಣ ಮೌಲ್ಯಗಳನ್ನು ಒಳಗೊಂಡಿರಲಿದೆ ಎಂಬ ನಿರೀಕ್ಷೆ ಮೂಡಿದೆ.</p>



<figure class="wp-block-embed alignleft is-type-rich is-provider-x wp-block-embed-x"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಸಲ್ಮಾನ್ ಖಾನ್, ಸಂಜಯ್ ದತ್, ಮೋನಿಕಾ ಬೆಲ್ಲುಸಿ, ಜಿಯಾನ್ಕಾರ್ಲೊ ಎಸ್ಪೊಸಿಟೊ ನಟಿಸಿರುವ ಅಂತರರಾಷ್ಟ್ರೀಯ ಆಕ್ಷನ್ ಚಿತ್ರ ‘7 ಡಾಗ್ಸ್’ ಆಗಸ್ಟ್ 21, 2026ರಂದು ಭಾರತದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬಿಡುಗಡೆಯಾಗಲಿದೆ.<a href="https://t.co/0lCZFlt4rY">https://t.co/0lCZFlt4rY</a> <a href="https://t.co/RI1P4Y3DYO">pic.twitter.com/RI1P4Y3DYO</a></p>&mdash; Samyukta Karnataka (@SamyuktaKarnatk) <a href="https://x.com/SamyuktaKarnatk/status/2086805105148592176?ref_src=twsrc%5Etfw">August 10, 2026</a></blockquote><script async src="https://platform.x.com/widgets.js" charset="utf-8"></script>
</div></figure>



<p class="wp-block-paragraph">ಜನರಲ್ ಎಂಟರ್‌ಟೈನ್‌ಮೆಂಟ್ ಅಥಾರಿಟಿ (GEA) ಮತ್ತು ರಿಯಾದ್ ಸೀಸನ್ ಬೆಂಬಲದೊಂದಿಗೆ SELA Studios ಚಿತ್ರವನ್ನು ನಿರ್ಮಿಸಿದೆ. ಇದರಿಂದ ಚಿತ್ರಕ್ಕೆ ಸೌದಿ ಅರೇಬಿಯಾ ಮತ್ತು ಮಧ್ಯಪ್ರಾಚ್ಯದ ದೊಡ್ಡ ಮಟ್ಟದ ನಿರ್ಮಾಣ ಬೆಂಬಲವೂ ದೊರೆತಿದೆ.</p>



<p class="wp-block-paragraph">‘7 ಡಾಗ್ಸ್’ನ ಮತ್ತೊಂದು ವಿಶೇಷತೆ ಎಂದರೆ ಇದು ಒಂದೇ ಚಿತ್ರದಲ್ಲಿ ಹಲವು ಚಿತ್ರರಂಗಗಳ ಪ್ರತಿಭೆಗಳನ್ನು ಒಗ್ಗೂಡಿಸಿರುವ ಅಪರೂಪದ ಅಂತರರಾಷ್ಟ್ರೀಯ ಸಹಯೋಗವಾಗಿದೆ. ಭಾರತೀಯ ಸಿನಿರಂಗದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್, ಈಜಿಪ್ಟಿನ ಪ್ರಮುಖ ನಟರು, ಯುರೋಪಿಯನ್ ಹಾಗೂ ಹಾಲಿವುಡ್ ಕಲಾವಿದರು ಒಂದೇ ಆಕ್ಷನ್ ಪ್ರಪಂಚದಲ್ಲಿ ಕಾಣಿಸಿಕೊಳ್ಳಲಿದ್ದಾರೆ.</p>



<p class="wp-block-paragraph">ಭಾರತದಲ್ಲಿ ಚಿತ್ರವು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಗಸ್ಟ್ 21ರಂದು ಬಿಡುಗಡೆಯಾಗಲಿದೆ. ಹೀಗಾಗಿ ಬಾಲಿವುಡ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಆಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೂ ‘7 ಡಾಗ್ಸ್’ ವಿಶೇಷ ಅನುಭವ ನೀಡುವ ನಿರೀಕ್ಷೆಯಿದೆ.</p>



<p class="wp-block-paragraph">ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಇಬ್ಬರೂ ಆಕ್ಷನ್ ಚಿತ್ರಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಇವರಿಬ್ಬರ ಜೊತೆಗೆ ಮೋನಿಕಾ ಬೆಲ್ಲುಸಿ ಹಾಗೂ ಜಿಯಾನ್ಕಾರ್ಲೊ ಎಸ್ಪೊಸಿಟೊ ಅವರಂತಹ ಅಂತರರಾಷ್ಟ್ರೀಯ ಕಲಾವಿದರು ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.</p>



<p class="wp-block-paragraph">ವಿಭಿನ್ನ ದೇಶಗಳ ಕಲಾವಿದರು ಮತ್ತು ತಂತ್ರಜ್ಞರನ್ನು ಒಗ್ಗೂಡಿಸಿರುವ ‘7 ಡಾಗ್ಸ್’ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಪ್ರೇಕ್ಷಕರಿಗೂ ದೊಡ್ಡ ಮಟ್ಟದ ಆಕ್ಷನ್ ಅನುಭವ ನೀಡಲು ಚಿತ್ರತಂಡ ಮುಂದಾಗಿದೆ. ಇದೀಗ ಆಗಸ್ಟ್ 21ರ ಬಿಡುಗಡೆ ದಿನಾಂಕದತ್ತ ಸಿನಿಪ್ರಿಯರ ಗಮನ ನೆಟ್ಟಿದೆ.</p>



<p class="wp-block-paragraph">ಒಟ್ಟಿನಲ್ಲಿ, ಸಲ್ಮಾನ್ ಖಾನ್, ಸಂಜಯ್ ದತ್, ಮೋನಿಕಾ ಬೆಲ್ಲುಸಿ, ಜಿಯಾನ್ಕಾರ್ಲೊ ಎಸ್ಪೊಸಿಟೊ ಸೇರಿದಂತೆ ಹಲವು ದೇಶಗಳ ತಾರೆಯರ ಸಂಗಮವಾಗಿರುವ ‘7 ಡಾಗ್ಸ್’ 2026ರ ಬಹುನಿರೀಕ್ಷಿತ ಅಂತರರಾಷ್ಟ್ರೀಯ ಆಕ್ಷನ್ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ.</p>


<ul class="wp-block-latest-posts__list wp-block-latest-posts"><li><a class="wp-block-latest-posts__post-title" href="https://samyuktakarnataka.in/news/india/stopping-the-flow-of-indus-water-to-pakistan-was-a-decisive-move/">ಪಾಕಿಸ್ತಾನಕ್ಕೆ ಸಿಂಧು ನೀರು ನಿಲ್ಲಿಸಿದ್ದು ನಿರ್ಣಾಯಕ ಕ್ರಮ</a></li>
<li><a class="wp-block-latest-posts__post-title" href="https://samyuktakarnataka.in/districts/chitradurga/pile-up-two-dead/">ಸರಣಿ ಅಪಘಾತ: ಇಬ್ಬರು ಸಾವು</a></li>
<li><a class="wp-block-latest-posts__post-title" href="https://samyuktakarnataka.in/news/applications-invited-for-reliance-foundation-scholarships/">ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ</a></li>
<li><a class="wp-block-latest-posts__post-title" href="https://samyuktakarnataka.in/districts/dakshina-kannada/fraud-against-investors-shivananda-neelannavar-taken-into-ed-custody/">ಹೂಡಿಕೆದಾರರಿಗೆ ವಂಚನೆ: ಶಿವಾನಂದ ನೀಲಣ್ಣವರ್‌ ಇಡಿ ವಶಕ್ಕೆ</a></li>
<li><a class="wp-block-latest-posts__post-title" href="https://samyuktakarnataka.in/districts/dharwad/change-in-hubballi-sindhanur-train-schedule/">ಹುಬ್ಬಳ್ಳಿ-ಸಿಂಧನೂರು ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ</a></li>
</ul><p>The post <a href="https://samyuktakarnataka.in/entertainment/7-dogs-salman-khan-sanjay-dutt-india-release-august-21-2026/">ಸಲ್ಮಾನ್ ಖಾನ್-ಸಂಜಯ್ ದತ್ ‘7 ಡಾಗ್ಸ್’ ರಿಲೀಸ್ ಡೇಟ್ ಘೋಷಣೆ</a> appeared first on <a href="https://samyuktakarnataka.in">Samyukta Karnataka</a>.</p>
]]></content:encoded>
					
		
		
			</item>
	</channel>
</rss>
