ಧಾರವಾಡ: ವಿದ್ಯಾ ಹಂಚಿನಮನಿ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಥಮ ವಾರ್ಷಿಕೋತ್ಸವ “ಕಲಾಕೌಸ್ತುಭ” ಕ್ಕೆ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ ಕರಜಗಿ ಚಾಲನೆ ನೀಡಿದರು. ಶಾಂತೇಶ ಎಜುಕೇಶನ್ ಸೊಸೈಟಿ ಚೇರಮನ್ ಪ್ರಹ್ಲಾದ ಹಂಚಿನಮನಿ, ಮನೋಜ ಹಂಚಿನಮನಿ, ವರ್ಷಾ ಹಂಚಿನಮನಿ, ಶಾಲಾ ಪ್ರಾಂಶುಪಾಲ ವಿದ್ವಾನ್ ನವೀನ್ ಭಟ್ ಇದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.