Home ತಾಜಾ ಸುದ್ದಿ ಮಕ್ಕಳ ಅನ್ನಭಾಗ್ಯವನ್ನೇ ಕಿತ್ತುಕೊಂಡ ಶಾಪ…

ಮಕ್ಕಳ ಅನ್ನಭಾಗ್ಯವನ್ನೇ ಕಿತ್ತುಕೊಂಡ ಶಾಪ…

0

ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು

ಬೆಂಗಳೂರು: ಮಕ್ಕಳಿಗೆ ಆಸರೆಯಾಗಿದ್ದ ಬಿಸಿಯೂಟ ಯೋಜನೆಯ ಮಕ್ಕಳ ಅನ್ನಭಾಗ್ಯವನ್ನೇ ಕಿತ್ತುಕೊಂಡ ಶಾಪಕ್ಕೆ ಸರ್ಕಾರ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ದುರಾಡಳಿತದಿಂದ ಜನಸಾಮಾನ್ಯರು ನಿತ್ಯವೂ ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಬಡ ಹಾಗೂ ಗ್ರಾಮೀಣ ಪ್ರೌಢಶಾಲೆಯ ಮಕ್ಕಳಿಗೆ ಆಸರೆಯಾಗಿದ್ದ ಬಿಸಿಯೂಟ ಯೋಜನೆಗೆ ಕಳೆದ 5 ತಿಂಗಳಿಂದ ಅಕ್ಕಿ ಪೂರೈಕೆಯಾಗದೆ ಮಕ್ಕಳ ಅನ್ನಭಾಗ್ಯವನ್ನೇ ಕಿತ್ತುಕೊಂಡ ಶಾಪಕ್ಕೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಗುರಿಯಾಗಿದೆ.

ಅನ್ನಭಾಗ್ಯ ಯೋಜನೆಗೆ ಮೋದಿಜೀ ಅವರ ಸರ್ಕಾರ ನೀಡುತ್ತಿರುವ 5 ಕೆ.ಜಿ ಅಕ್ಕಿಯ ಹೊರತಾಗಿ ತಾವೂ 10 ಕೆ.ಜಿ ಅಕ್ಕಿ ನೀಡುವ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅಕ್ಕಿಯನ್ನೂ ಕೊಡುತ್ತಿಲ್ಲ , ಹಣವನ್ನು ಹಾಕುತ್ತಿಲ್ಲ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವ ಈ ಸರ್ಕಾರ ಬಡ ಶಾಲಾ ಮಕ್ಕಳ ಬಿಸಿಯೂಟಕ್ಕೆ ಪರಿಕರ ಪೂರೈಸದಿರುವುದು ಸರ್ಕಾರದ ಆರ್ಥಿಕತೆ ದಿವಾಳಿಯಂಚಿಗೆ ತಲುಪಿತೇ ಎಂಬ ಅನುಮಾನ ಹುಟ್ಟುಹಾಕಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶಾಲಾ ಮಕ್ಕಳ ಬಿಸಿಯೂಟದ ಅಕ್ಕಿ ಹಾಗೂ ಪರಿಕರ ವಿತರಿಸುವಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಲಿ ಎಂದು ಒತ್ತಾಯಿದ್ದಾರೆ.

Exit mobile version