Home ನಮ್ಮ ಜಿಲ್ಲೆ ಬೆಂಗಳೂರು ವಿವಾದಗಳನ್ನು ದಾಟಿದ ರಾಷ್ಟ್ರಭಕ್ತಿಯ ಸಂಕೇತ: ‘ವಂದೇ ಮಾತರಂ’ನ 150 ವರ್ಷಗಳ ಅಜರಾಮರ ಪಯಣ

ವಿವಾದಗಳನ್ನು ದಾಟಿದ ರಾಷ್ಟ್ರಭಕ್ತಿಯ ಸಂಕೇತ: ‘ವಂದೇ ಮಾತರಂ’ನ 150 ವರ್ಷಗಳ ಅಜರಾಮರ ಪಯಣ

0

ಬೆಂಗಳೂರು: ಭಾರತೀಯರ ಹೃದಯದಲ್ಲಿ ಅಚ್ಚಳಿಯದೇ ಉಳಿದ ‘ವಂದೇ ಮಾತರಂ’ ಗೀತೆಗೆ 150 ವರ್ಷಗಳ ಪಯಣ. ಗೀತೆಯ ಸ್ಫೂರ್ತಿ ಬಂಕಿಮ ಚಂದ್ರ ಚಟರ್ಜಿಯವರ, ಗಾಯಕಾರರು ರವೀಂದ್ರನಾಥ ಟಾಗೋರ, ಮತ್ತು ವಿವಿಧ ಕಾಲಘಟ್ಟಗಳಲ್ಲಿ ಇದರ ಮಹತ್ವವನ್ನು ತಿಳಿಸುತ್ತದೆ. ಮೊದಮೊದಲಿಗೆ ರೇಡಿಯೋಗಳ ಮೂಲಕ ‘ ವಂದೇ ಮಾತರಂ ‘ ಮತ್ತು ‘ಮಂಗಳಧ್ವನಿ’ಯೊಂದಿಗೆ ನಮ್ಮ ದಿನಚರಿ ಆರಂಭವಾಗುತ್ತಿತ್ತು.

ಈಗ ಉತ್ತರ ಭಾರತಕ್ಕೆ ‘ಷಹನಾಯ್‌’ ನಾದ, ದಕ್ಷಿಣ ಭಾರತಕ್ಕೆ ‘ನಾದಸ್ವರ’ದ ಇಂಪು ಇರುತ್ತಿತ್ತು. ಆದರೆ, ಇಡೀ ಭಾರತಕ್ಕೆ ‘ವಂದೇ ಮಾತರಂ’ ಮಾತ್ರ ಒಂದೇ ಆಗಿದೆ. ಈ ಪದ್ಯದಲ್ಲಿ ಕಷ್ಟಕರವಾದ ಬಂಗಾಳಿ ಮತ್ತು ಸಂಸ್ಕೃತ ಪದಗಳಿದ್ದವು. ಆದರೆ ಇಂದು ರೇಡಿಯೊ ಕೇಳುವವರ ಸಂಖ್ಯೆ ಕಡಿಮೆಯಾಗಿದ್ದರೂ, ಮುಂಜಾನೆ 5.53ಕ್ಕೆ ‘ವಂದೇ ಮಾತರಂ’ ಹಾಡು ಕೋಟ್ಯಂತರ ಭಾರತೀಯರ ಹೃದಯವನ್ನು ತಲುಪುತ್ತದೆ.

ಅಭಿಮಾನದಿಂದ ‘ವಂದೇ ಮಾತರಂ’ ಹಾಡಬೇಕೆಂಬುದು ಎಲ್ಲರ ಕನಸಾಗಿತ್ತು.ಕೆಲವು ಕಾರ್ಯಕ್ರಮದಲ್ಲಿ ʻವಂದೇ ಮಾತ್ರರಂʼ ಎನ್ನುವು ಗಂಟಾ ಘೋಷವಾಗಿತ್ತು. ಇಂತಹ ಗೀತೆ ಹರಿದು, ನಮ್ಮೊಳಗಿನ ರಕ್ತದ ಕಣ ಕಣದಲ್ಲಿಯೂ ಕಂಪಿಸುತ್ತದೆ.

ಹಾಗೇ ‘ರಾಷ್ಟ್ರಗೀತೆ ವಂದೇ ಮಾತರಂ ಅನ್ನು ಎಲ್ಲರೂ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ವಂದೇ ಮಾತರಂ ಗೀತೆ ರಚನೆಯ 150ನೇ ವರ್ಷಗಳ ಆಚರಣೆಯ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಗಾಯನ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

ಅಧ್ಯಕ್ಷ ಬಿ.ವೈ.ವಿಜಯೇಂದ್ರ ‘ರಾಷ್ಟ್ರಗೀತೆ ವಂದೇ ಮಾತರಂ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚುತದೆ ಎಂದಿದ್ದಾರೆ. ನಾವು ಸ್ವಾಭಿಮಾನಿ ದೇಶಭಕ್ತರೂ ವಂದೇ ಮಾತರಂ ಅನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ನಂತರ 2047ರ ವೇಳೆಗೆ ಶಕ್ತಿಯುತ ಭಾರತವನ್ನು ನಿರ್ಮಿಸಲು ಈ ರಾಷ್ಟ್ರಗೀತೆ ʻವಂದೇ ಮಾತರಂʼ ಅನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಇನ್ನಷ್ಟು ಈ ಗೀತೆಯನ್ನು ಮೆರೆಯುವಂತೆ ಮಾಡಬೇಕು ಎಂದರು.

ಮೊದಲು ನಡೆದಿದ್ದ ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕ ಸಿ.ಎನ್.ಅಶ್ವತ್ಥನಾರಾಯಣ್ ಅವರು ಸಹ ʻವಂದೇ ಮಾತರಂʼ ಸಾಮೂಹಿಕ ಗಾಯನದಲ್ಲಿ ಧ್ವನಿಗೂಡಿಸಿ ಗೀತೆಯನ್ನ ಹಾಡಿದ್ದರು. ಇದೀಗ ʻವಂದೇ ಮಾತರಂʼ 150 ವರ್ಷ ಶತಕ ಬಾರಿಸಿದ.

NO COMMENTS

LEAVE A REPLY

Please enter your comment!
Please enter your name here

Exit mobile version