ಇ-ಪ್ರಸಾದ ಸೇವೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಪ್ರಮುಖ 14 ದೇವಸ್ಥಾನಗಳ ಪ್ರಸಾದವನ್ನು ‘ಇ-ಪ್ರಸಾದ ಸೇವೆ’ ಮೂಲಕ ಭಕ್ತರ ಮನೆಗಳಿಗೆ ತಲುಪಿಸುವ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಗುರುವಾರ ಚಾಲನೆ ನೀಡಿದರು.
ದೇವಾಲಯಗಳ ಪ್ರಸಾದವನ್ನು ಮನೆಬಾಗಿಲಿಗೆ ತಲುಪಿಸುವ ಇ-ಪ್ರಸಾದ ಕಾರ್ಯಕ್ರಮ ಬೆಂಗಳೂರಿನ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ 14 ದೇವಾಲಯಗಳನ್ನು ಆಯ್ಕೆ ಮಾಡಿ ಪ್ರಾಯೋಗಿಕ ಪ್ರಸಾದ ಸೇವೆಗೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ‘ಇ ಪ್ರಸಾದ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 35 ಸಾವಿರ ದೇವಾಲಯಗಳಿವೆ. ಈ ಪೈಕಿ ‘ಎ’ ಮತ್ತು ‘ಬಿ’ ದರ್ಜೆ ದೇವಾಲಯಗಳ ಸಂಖ್ಯೆ 398. ನಾನಾ ಕಾರಣಗಳಿಂದ ಭಕ್ತರಿಗೆ ದೇವಾಲಯಗಳಿಗೆ ತೆರಳಲು ಆಗುವುದಿಲ್ಲ. ಅಂತಹವರು ಬಯಸಿದರೆ ಆನ್ಲೈನ್ ಮೂಲಕ ದೇವಾಲಯಗಳ ಪ್ರಸಾದ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ’ ಎಂದರು. ಇನ್ನು ಮೊದಲ ಹಂತದಲ್ಲಿ 14 ದೇವಾಲಯಗಳ ಪ್ರಸಾದವನ್ನು 3-4 ದಿನದಲ್ಲಿ ಭಕ್ತರಿಗೆ ಅಂಚೆ ಮೂಲಕ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಬೇಡಿಕೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ದೇವಾಲಯಗಳ ಪ್ರಸಾದ ತಲುಪಿಸಲಾಗುವುದು. ಹೊರ ರಾಜ್ಯದ ದೇವಾಲಯಗಳ ಪ್ರಸಾದಕ್ಕೆ ಅನುಮತಿ ದೊರೆತಿಲ್ಲ. ಆದರೆ, ಅನ್ಯ ರಾಜ್ಯದವರಿಗೆ ಕರ್ನಾಟಕ ದೇವಾಲಯಗಳ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು, ಇ-ಪ್ರಸಾದ ಸೇವೆ ಮೂಲಕ ಆರ್ಡರ್ ಮಾಡಿ ಮನೆಗೆ ಪ್ರಸಾದ ತರಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸ ಲಾಗಿದೆ. ನೋ ಲಾಸ್, ನೋ ಪ್ರಾಫಿಟ್ ಅಡಿಯಲ್ಲಿ ಭಕ್ತರಿಗೆ ಸೇವೆ ನೀಡಲಾಗುವುದು. 100 ರಿಂದ 200 ರೂಪಾಯಿಗಳಲ್ಲಿ ಮನೆ ಬಾಗಿಲಿಗೆ ಪ್ರಸಾದ ಸೇವೆ ನೀಡಲಾಗುವುದು ವಿನಾಯಕ ಸ್ವಾಮಿ ದೇವಾಲಯ ಜಯನಗರ ಬೆಂಗಳೂರು ಚೆಲುವನಾರಾಯಣಸ್ವಾಮಿ ದೇವಾಲಯ ಮಂಡ್ಯ ಜಿಲ್ಲೆ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ನಂಜನಗೂಡು ಮೈಸೂರು ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಮಾಲೂರು ಕೋಲಾರ ಜಿಲ್ಲೆ ಸೋಮೇಶ್ವರ ಸ್ವಾಮಿ ದೇವಾಲಯ ಹಲಸೂರು ಬೆಂಗಳೂರು ಮೂಕಾಂಬಿಕಾ ದೇವಾಲಯ ಕೊಲ್ಲೂರು ಉಡುಪಿ ಜಿಲ್ಲೆ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ ಗವೀಪುರ ಬೆಂಗಳೂರು ಝರಣಿ ನರಸಿಂಹ ದೇವಸ್ಥಾನ ಬೀದರ್ ರೇಣುಕಾ ಯಲ್ಲಮ್ಮ ದೇವಸ್ಥಾನ ಯಲ್ಲಮ್ಮನಗುಡ್ಡ ಬೆಳಗಾವಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಸುಳ್ಯ ತಾಲ್ಲೂಕು ದಕ್ಷಿಣ ಕನ್ನಡ ಕನಕದುರ್ಗಮ್ಮ ದೇವಾಲಯ ಬಳ್ಳಾರಿ ಮೈಲಾರಲಿಂಗೇಶ್ವರ ದೇವಸ್ಥಾನ ಹೂವಿನಹಡಗಲಿ ವಿಜಯನಗರ ಜಿಲ್ಲೆ ಹುಲಿಗಮ್ಮ ದೇವಾಲಯ ಹುಲಿಗಿ ಕೊಪ್ಪಳ ಜಿಲ್ಲೆ ಗುರುದತ್ತಾತ್ರೇಯ ಸ್ವಾಮಿ ದೇವಾಲಯ ಗಾಣಗಾಪುರ ಕಲುಬರಗಿ ಜಿಲ್ಲೆ, ಭಕ್ತರು ಜಾಲತಾಣ: https://csc.devalayas.com/ ಮೂಲಕ ಇ-ಪ್ರಸಾದ ತರಿಸಿಕೊಳ್ಳಬಹುದು.
