ಹುಬ್ಬಳ್ಳಿ:ತಾರಿಹಾಳ ಗ್ರಾಮದ ವ್ಯಾಪ್ತಿಯಲ್ಲಿ ನಾಲ್ಕು ಇಂಡಸ್ಟ್ರೀಯಲ್ ಗ್ಯಾರೇಜಗಳಿಂದ ಕಬ್ಬಿಣದ ಸಾಮಾನು ಕಳ್ಳತನ ಪ್ರಕರಣದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮೂವರನ್ನು ಬಂಧಿಸಿ, ೪.೩೯ ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆಈ ಹಿಂದೆ 139000 ಕಿಮ್ಮತ್ತಿನ ಕಬ್ಬಿಣದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋದ ಕುರಿತು ಪ್ರಕರಣ ದಾಖಲಾಗಿತ್ತು.ಪಿಐ ಎಮ್. ಆರ್. ಚನ್ನಣ್ಣವರ ಪಿಐ ನೇತೃತ್ವದಲ್ಲಿ ದಾಳಿ ನಡೆಸಿ , ಆರೋಪಿತರಾದ ಕರಿಯಪ್ಪ ಚಿನ್ನಪ್ಪ ತಳವಾರ, ಸುನೀಲ ಜಂಬಣ್ಣ ಕಟ್ಟಿಮನಿ, ಸಂಗಮೇಶ ಕರಿಗೌಡ ಬಬಲೇಶ್ವರ ಎಂಬುವರನ್ನು ಬಂಧಿಸಲಾಗಿದೆ.