Home ನಮ್ಮ ಜಿಲ್ಲೆ ಎಣ್ಣೆ ಲಾರಿ ಪಲ್ಟಿ: ಮುಗಿಬಿದ್ದ ಜನ

ಎಣ್ಣೆ ಲಾರಿ ಪಲ್ಟಿ: ಮುಗಿಬಿದ್ದ ಜನ

0

ವಿಜಯನಗರ: ಎಣ್ಣೆ ತುಂಬಿದ್ದ ಲಾರಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
ಅಡುಗೆ ಎಣ್ಣೆ ತುಂಬಿದ್ದ ಲಾರಿ ಕೂಡ್ಲಿಗಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಣವಿಕಲ್ಲು ಗ್ರಾಮದ ಹೆದ್ದಾರಿ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜನ ಲಾರಿಯಲ್ಲಿದ್ದ ಎಣ್ಣೆ ತುಂಬಲು ಕೊಡ, ಕ್ಯಾನ್‌ ಹಿಡಿದು ಮುಗಿಬಿದ್ದಿದ್ದಾರೆ. ಲಾರಿ ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾನಾಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

https://samyuktakarnataka.in/tv-%e0%b2%b0%e0%b2%bf%e0%b2%ae%e0%b3%8b%e0%b2%9f%e0%b3%8d-%e0%b2%97%e0%b2%be%e0%b2%97%e0%b2%bf-%e0%b2%9c%e0%b2%97%e0%b2%b3-%e0%b2%a4%e0%b2%82%e0%b2%a6%e0%b3%86%e0%b2%af%e0%b2%bf%e0%b2%82%e0%b2%a6/

Exit mobile version