ಬೆಂಗಳೂರು: ವಾಸ್ತು ಸರಿ ಇಲ್ಲ ಎಂದು ಬಂದ್ ಮಾಡಲಾಗಿದ್ದ ವಿಧಾನಸೌಧದ ಸಿಎಂ ಕಚೇರಿಯ ದಕ್ಷಿಣ ದ್ವಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆಸಿದ್ದಾರೆ.
ಇಂದು ಅನ್ನಭಾಗ್ಯ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ದಕ್ಷಿಣ ದ್ವಾರ ಬಂದ್ ಆಗಿರುವುದನ್ನು ಗಮನಿಸಿದ ಸಿಎಂ, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದರು. ಸಿಎಂ ಪ್ರಶ್ನೆಗೆ ಅಧಿಕಾರಿಗಳು ವಾಸ್ತು ಕಾರಣದಿಂದ ಬಂದ್ ಮಾಡಿದ್ದೇವೆ ಎಂದರು. ಈ ಕೂಡಲೇ ಯಾವ ವಾಸ್ತು ಇಲ್ಲ ದಕ್ಷಿಣ ದ್ವಾರ ತೆರೆಯಿರಿ ಎಂದು ಆದೇಶಿಸಿದರು. ಬಳಿಕ ಸಿದ್ದರಾಮಯ್ಯ ದಕ್ಷಿಣ ದ್ವಾರದ ಮೂಲಕವೇ ತಮ್ಮ ಕಚೇರಿ ಪ್ರವೇಶಿಸಿದರು. ಆರೋಗ್ಯಕರ ಮನಸ್ಸು, ಸ್ವಚ್ಛ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ-ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಎಂದರು.
