Home ಅಪರಾಧ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರ ಕಣ್ಮರೆ

ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರ ಕಣ್ಮರೆ

0

ಸಾಗರ: ಹೊಳೆಬದಿ ಊಟಕ್ಕೆಂದು ತೆರಳಿದ್ದ ಮೂವರು ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತುಮರಿ ಸಮೀಪದ ಕಳಸವಳ್ಳಿಯಲ್ಲಿ ನಡೆದಿದೆ.
ಹುಲಿದೇವರ ಬನ ಮತ್ತು ಗಿಣಿವಾರದವರಾದ ಚೇತನ್‌, ಸಂದೀಪ್‌ ಮತ್ತು ರಾಜು ಎಂಬುವವರು ನೀರಿನಲ್ಲಿ ಮುಳುಗಿದ್ದಾರೆ. ಮುಳುಗಿದವರಿಗಾಗಿ ಹುಡಕಾಟ ಆರಂಭವಾಗಿದ್ದು, ಕಾರ್ಯಾಚರಣೆಗೆ ಕತ್ತಲೆ ಅಡ್ಡಿಯಾಗಿದೆ.

Exit mobile version