Home ತಾಜಾ ಸುದ್ದಿ ಮಂತ್ರಾಲಯಕ್ಕೆ ಭೇಟಿ ನೀಡಿದ ಅಣ್ಣಾಮಲೈ

ಮಂತ್ರಾಲಯಕ್ಕೆ ಭೇಟಿ ನೀಡಿದ ಅಣ್ಣಾಮಲೈ

0

ರಾಯಚೂರು: ಮಂತ್ರಾಲಯಕ್ಕೆ ಶನಿವಾರ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಭೇಟಿ ನೀಡಿ ಶ್ರೀರಾಘವೇಂದ್ರ, ಸ್ವಾಮಿಗಳ ಬೃಂದಾವನದ ದರ್ಶನ ಪಡೆದರು.
ಮೊದಲಿಗೆ ಮಂಚಾಲಮ್ಮದೇವಿಯ ದರ್ಶನ ಪಡೆದರು.
ನಂತರ ಇತರ ಪವಿತ್ರ ಬೃಂದಾವನಗಳ ದರ್ಶನ ಪಡೆದುಕೊಂಡರು.ದರ್ಶನದ ಬಳಿಕ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದಂಗಳವರು ಕೆ.ಅಣ್ಣಾಮಲೈ ಅವರಿಗೆ ಮಂತ್ರಾಲಯಕ್ಕೆ ಅನುಗ್ರಹ ಫಲಮಂತ್ರಾಕ್ಷತೆ, ಶೇಷವಸ್ತ್ರ, ಸ್ಮರಣಿಕೆ ನೀಡಿ ಆಶಿರ್ವದಿಸಿದರು

Exit mobile version